MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Cauvery Water Dispute
Bengaluru Illegal Bangladeshi Migrants
BEL Recruitment 2026
Government Schools Karnataka
KPSC Scam
September New Financial Rules
Bengaluru Traffic Rules
Karnataka Arecanut Crisis
Gruha Lakshmi Beneficiaries
Bengaluru Parking Rules
  • Home
  • Karnataka Districts
  • Bengaluru Urban
  • ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!

ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!

ಸರ್ಕಾರದಿಂದ ನಿಷೇಧಿಸಲ್ಪಟ್ಟ, ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ 'ಕಾನೋಕಾರ್ಪೋಸ್' ಗಿಡಗಳನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನರ್ಸರಿಯೊಂದು ಈ ಮಾರಕ ಗಿಡಗಳನ್ನು ಮಾರುತ್ತಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

1 Min read
Author : Sathish Kumar KH
Published : Aug 31 2026, 12:57 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರದಿಂದ ಈಗಾಗಲೇ ಅಧಿಕೃತವಾಗಿ ನಿಷೇಧಿಸಲ್ಪಟ್ಟಿರುವ 'ಕಾನೋಕಾರ್ಪೋಸ್' (Conocarpus) ಗಿಡಗಳನ್ನು ರಾಜಧಾನಿಯ ಪ್ರತಿಷ್ಠಿತ ಲಾಲ್‌ಬಾಗ್‌ನಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರಿಂದ ಹಾಗೂ ಪರಿಸರವಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಲಾಲ್‌ಬಾಗ್‌ನಲ್ಲಿ ₹600ಗೆ ಮಾರಾಟ:

ರಾಜ್ಯದಲ್ಲಿ ನಿಷೇಧವಿದ್ದರೂ ಸಹ, ಅನಧಿಕೃತವಾಗಿ ಗಿಡಗಳನ್ನು ಬೆಳೆಸಿ ಪೋಷಿಸಿರುವ 'ಲಾಲ್ ಬಾಗ್ ದಿ ನರ್ಸರಿ ಮೇನ್ ಕೋ-ಆಪರೇಟಿವ್ ಸೊಸೈಟಿ', ಈ ಮಾರಕ ಗಿಡವೊಂದಕ್ಕೆ ಬರೋಬ್ಬರಿ 600 ರೂಪಾಯಿ ಬೆಲೆ ನಿಗದಿಪಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ.

Related Articles

Related image1
ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ: ಪರಂಪರೆ ಪ್ರೇಮಿಗಳ ಆಕ್ರೋಶ!
Related image2
ಲಾಲ್‌ಬಾಗ್ ಸುರಂಗ ರಸ್ತೆ ಮಾರ್ಗ ಕುರಿತು ಜಿಎಸ್‌ಐ ತಜ್ಞರ ಭೌಗೋಳಿಕ ಮತ್ತು ತಾಂತ್ರಿಕ ಪರಿಶೀಲನೆ
36
Image Credit : Asianet News

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲಾಲ್‌ಬಾಗ್‌ನಂತಹ ಐತಿಹಾಸಿಕ ತಾಣದಲ್ಲೇ ಈ ವ್ಯಾಪಾರ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಇದರ ಹಿಂದೆ ಬೆಂಗಳೂರಿನಲ್ಲಿ ಜನರ ಆರೋಗ್ಯ ಹಾಳು ಮಾಡುವುದೇ ಇವರ ಉದ್ದೇಶ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

46
Image Credit : Asianet News

ಕೇಂದ್ರ ಹಾಗೂ ರಾಜ್ಯಗಳಿಂದಲೂ ನಿಷೇಧ:

ಕಾನೋಕಾರ್ಪೋಸ್ ಮರಗಳು ಅಂತರ್ಜಲವನ್ನು ಬೇಗನೆ ಬತ್ತುವಂತೆ ಮಾಡುವುದು ಮಾತ್ರವಲ್ಲದೆ, ಇದರ ಪರಾಗಸ್ಪರ್ಶದಿಂದ ಜನರಲ್ಲಿ ಉಸಿರಾಟದ ತೊಂದರೆ, ಅಲರ್ಜಿಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

56
Image Credit : Asianet News

ಹೀಗಾಗಿ ಕೇಂದ್ರ ಸರ್ಕಾರದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕರ್ನಾಟಕ ಸೇರಿದಂತೆ ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ಗಿಡವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

66
Image Credit : Asianet News

ಆದರೂ, ನಿಯಮಗಳನ್ನು ಲೆಕ್ಕಿಸದೆ ನರ್ಸರಿಯೊಂದು ಗಿಡಗಳನ್ನು ಮಾರಾಟ ಮಾಡುತ್ತಿರುವುದನ್ನು ಖಂಡಿಸಿರುವ 'ವೃಕ್ಷ ಬಚಾವೋ ಆಂದೋಲನ ಸಮಿತಿ', ತಕ್ಷಣವೇ ಸಂಬಂಧಪಟ್ಟ ನರ್ಸರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಕರಾರುಪೂರ ಆಗ್ರಹಿಸಿದೆ. ಪರಿಸರ ಮಾರಕವಾದ ಈ ಗಿಡಗಳ ಮಾರಾಟಕ್ಕೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಉದ್ಯಾನ
ಸಸ್ಯ
ಕರ್ನಾಟಕ ಸುದ್ದಿ
ಬೆಂಗಳೂರು ನಗರ

Latest Videos
Recommended Stories
Recommended image1
ಇದೊಂದು ದಾಖಲೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಆಗಲಿದೆ ನಿಮ್ಮ ಹೆಸರು!
Recommended image2
ಬೆಂಗಳೂರಿನಿಂದ 31 ಅಕ್ರಮ ಬಾಂಗ್ಲಾ ಪ್ರಜೆಗಳ ಗಡಿಪಾರು: ಎಸ್‌ಎಂವಿಟಿ ರೈಲು ಮೂಲಕ ಪ.ಬಂಗಾಳ ಗಡಿಗೆ ಸ್ಥಳಾಂತರ!
Recommended image3
Bengaluru: 5 ಫ್ಲೈಓವರ್‌ಗಳಿಗೆ ಹೊಸ ನಿಯಮ; ಇನ್ಮುಂದೆ ಈ ವಾಹನಗಳಿಗೆ ಸಂಚಾರ ನಿಷೇಧ!
Related Stories
Recommended image1
ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ: ಪರಂಪರೆ ಪ್ರೇಮಿಗಳ ಆಕ್ರೋಶ!
Recommended image2
ಲಾಲ್‌ಬಾಗ್ ಸುರಂಗ ರಸ್ತೆ ಮಾರ್ಗ ಕುರಿತು ಜಿಎಸ್‌ಐ ತಜ್ಞರ ಭೌಗೋಳಿಕ ಮತ್ತು ತಾಂತ್ರಿಕ ಪರಿಶೀಲನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved