ಆಧುನಿಕವಾಗಿ, ಕೆಲವು ವಿಷಯಗಳಲ್ಲಿ ಹುಡುಗರಿಗಿಂತ ಹುಡುಗೀರೇ ಫಾಸ್ಟ್ ಅಂತಾರಲ್ಲ? ಅದು ನಿಜ. ಆದರೆ ಹಿಂದಿನ ಕಾಲದಲ್ಲೂ ಅದು ನಿಜವಿತ್ತು. ಹಾಗಂತ ಆಚಾರ್ಯ ಚಾಣಕ್ಯರೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಯಾವುವು ಸಂಗತಿಗಳು? 

ಆಚಾರ್ಯ ಚಾಣಕ್ಯ ಪ್ರಾಚೀನ ಭಾರತದ ಶ್ರೇಷ್ಠ ವಿದ್ವಾಂಸರಾಗಿದ್ದರು. ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞ. ಅವರಿಗೆ ಉತ್ತಮ ರಾಜತಾಂತ್ರಿಕ ಪ್ರಜ್ಞೆಯೂ ಇತ್ತು. ಅವರು ಮಹಾನ್ ವಿದ್ವಾಂಸರಾಗಿದ್ದರಿಂದ, ಅವರ ಸಲಹೆಗಳು ಮಾನವ ಜೀವನದಲ್ಲಿ ಬಹಳ ಮುಖ್ಯ. ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಕೆಲವು ಗುಣಗಳನ್ನು ಹೊಂದಿರುವುದು ಬಹಳ ಮುಖ್ಯ. ಜೀವನದಲ್ಲಿ ಯಶಸ್ವಿಯಾಗಲು ತೀವ್ರತೆ, ತಾಳ್ಮೆ ಮತ್ತು ಕೌಶಲ್ಯದಂತಹ ಗುಣಗಳು ಬೇಕು ಎಂದು ಅವರು ಹೇಳುತ್ತಾರೆ. ಅವರು ರಾಜತಾಂತ್ರಿಕತೆ ಮತ್ತು ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದರು. ಅವರು ಜೀವನದ ಎಲ್ಲಾ ಅಂಶಗಳನ್ನು ತಿಳಿದಿದ್ದರು. ಅವರು ತಮ್ಮ ಅರ್ಥಶಾಸ್ತ್ರದಲ್ಲಿ ಮಾನವ ಜೀವನದ ತಿಳುವಳಿಕೆ ಮತ್ತು ಜ್ಞಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ವ್ಯಕ್ತಿಯ ಯಶಸ್ಸಿನ ಹಾದಿಯನ್ನು ತೋರಿಸುತ್ತದೆ. ಇಂದಿಗೂ ಜನ ತಮ್ಮ ಸಮಸ್ಯೆಗಳಿಂದ ಹೊರಬರಲು ಅರ್ಥಶಾಸ್ತ್ರದ ತತ್ವಗಳನ್ನು ಅನುಸರಿಸಬಹುದು. ಚಾಣಕ್ಯ ನೀತಿ ಶಾಸ್ತ್ರದಲ್ಲಿ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಮಹಿಳೆಯರ ಕುರಿತಾದ ಕೆಲವು ವಿಷಯಗಳನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಚಾಣಕ್ಯನ ಪ್ರಕಾರ ಕೆಲವು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿರುತ್ತಾರೆ. ಅವು ಯಾವುವು ಎಂಬುದನ್ನು ಇಲ್ಲಿ ನೋಡಿ. 

Add Asianetnews Kannada as a Preferred SourcegooglePreferred

ನ್ಯಾಯ (Justice)
ನ್ಯಾಯದ ಕುರಿತ ಪ್ರಜ್ಞೆ ಮಹಿಳೆಯರಿಗೆ ಅಧಿಕ. ತಿಳಿದೂ ತಿಳಿದೂ ಇನ್ನೊಬ್ಬರಿಗೆ ಅನ್ಯಾಯ ಎಸಗುವವರಲ್ಲ. ಪುರುಷ ಸಲೀಸಾಗಿ ಇನ್ನೊಬ್ಬರಿಗೆ ಅನ್ಯಾಯ ಎಸಗಬಲ್ಲ. ಆದರೆ ಮಹಿಳೆ ಹಾಗಲ್ಲ. ಧೋಖಾ ಮಾಡಲಾರಳು. ಮಾಡುವ ಮುನ್ನ ನೂರು ಬಾರಿ ಯೋಚಿಸಬಹುದು.

ಆಹಾರ (Food)
ಚಾಣಕ್ಯನ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಆಹಾರವನ್ನು ಸೇವಿಸುತ್ತಾರೆ. ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹಸಿಯುತ್ತಾರಂತೆ. ಪುರುಷರಿಗಿಂತ ಮಹಿಳೆಯರಿಗೆ ತಮ್ಮ ದೇಹದ ಕಾರ್ಯರಚನೆಗೆ ಹೆಚ್ಚಿನ ಕ್ಯಾಲೋರಿಗಳು ಬೇಕಾಗುತ್ತವೆ. ಆದ್ದರಿಂದ ಅವರು ಯಾವಾಗಲೂ ಚೆನ್ನಾಗಿ ತಿನ್ನಬೇಕು ಎಂದು ಚಾಣಕ್ಯ ಹೇಳುತ್ತಾರೆ. 

ಗುಪ್ತಚಾರಿಕೆ 
ಬುದ್ಧಿವಂತಿಕೆಯಲ್ಲಿ ಮಹಿಳೆಯರು ಪುರುಷರಿಗಿಂತ ಶ್ರೇಷ್ಠರು ಎಂದು ಚಾಣಕ್ಯ ಹೇಳುತ್ತಾರೆ. ಅವರ ಬುದ್ಧಿವಂತಿಕೆಯು ಪುರುಷರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಹಿಳೆಯರು ಯಾವುದೇ ಭಯವಿಲ್ಲದೆ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಕುಟುಂಬವನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ತಾಳ್ಮೆ, ಬುದ್ಧಿವಂತಿಕೆ ಅಗತ್ಯವಿರುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಪುರುಷರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. 

ಈ ಮೂರು ವಿಷ್ಯಗಳಿಗೆ ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡೋ ವ್ಯಕ್ತಿ ಶ್ರೀಮಂತನಾಗ್ತಾನೆ!

ಧೈರ್ಯ (Courage) 
ಮಹಿಳೆಯರು ಪುರುಷರಿಗಿಂತ ಧೈರ್ಯಶಾಲಿಗಳು ಎಂದು ಚಾಣಕ್ಯ ಹೇಳುತ್ತಾರೆ. ಆದಾಗ್ಯೂ, ಅನೇಕ ಪುರುಷರು ಇದನ್ನು ನಿರಾಕರಿಸಬಹುದು. ಆದರೆ ಯಾವುದೇ ಬಿಕ್ಕಟ್ಟಿನಲ್ಲಿ ಪುರುಷರಿಗಿಂತ ಮಹಿಳೆಯರು ಧೈರ್ಯಶಾಲಿಗಳಾಗಿರುವುದು ನಿಜ. ಪುರುಷರು ಹೊರನೋಟಕ್ಕೆ ಧೈರ್ಯಶಾಲಿಗಳಾಗಿ ಕಾಣಿಸಬಹುದು ಆದರೆ ಒಳಗಿನಿಂದ ತುಂಬಾ ದುರ್ಬಲರು. ಚಾಣಕ್ಯ ನೀತಿಯಲ್ಲಿ 'ಸಾಹಸಂ ಷಟ್ಗುಣಂ' ಎಂದು ಬರೆದಿದ್ದಾನೆ. ಅಂದರೆ ಅವರಲ್ಲಿನ ಧೈರ್ಯದ ಶಕ್ತಿ ಪುರುಷರಿಗಿಂತ ಆರು ಪಟ್ಟು ಹೆಚ್ಚು. ಸಹಿಷ್ಣುತೆಯಲ್ಲಿ ಮಹಿಳೆಯರು ಪುರುಷರಿಗಿಂತ ಬಹಳ ಮುಂದಿದ್ದಾರೆ. 

ಲೈಂಗಿಕ ಬಯಕೆ (Sexual Eagerness)
ಚಾಣಕ್ಯ ನೀತಿ ಪ್ರಕಾರ, 'ಕಾಮೋಸ್ತಗುಣ ಉಚ್ಯತೇ'. ಅಂದರೆ ಲೈಂಗಿಕತೆಯ ವಿಷಯದಲ್ಲಿ ಮಹಿಳೆಯರು ಪುರುಷರಿಗಿಂತ ಶ್ರೇಷ್ಠರು. ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಿಗಿಂತ ಎಂಟು ಪಟ್ಟು ಹೆಚ್ಚು ಕಾಮಾಸಕ್ತರು. ಚಾಣಕ್ಯ ಹೇಳುವಂತೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಲೈಂಗಿಕ ಶಕ್ತಿ ಮತ್ತು ಬಯಕೆ ಇರುತ್ತದೆ. ಪ್ರಕೃತಿ ಅವರಿಗೆ ಹೆಚ್ಚಿನ ಲೈಂಗಿಕ ಬಯಕೆ, ಆ ವಿಷಯದಲ್ಲಿ ಹೆಚ್ಚು ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ನೀಡಿದೆ.

ಈ ರಾಶಿಯವರು ದೊಡ್ಡ ಅನುಮಾನಾಸ್ಪದ ಪಿಶಾಚಿಗಳು, ಇವರು ತಮ್ಮ ಸಂಗಾತಿಯನ್ನು ನಂಬಲ್ಲ