ಮದುವೆಯಾದ ಬಳಿಕ ಹೀರೋಯಿನ್‌ಗಳಿಗೆ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಕಾಲ ಬದಲಾಗಿದೆ. ಸಮಂತಾ, ರಶ್ಮಿಕಾ ಮಂದಣ್ಣ, ನಯನತಾರಾ ಇದೀಗ ಕೌಂಟ್‌ಗಿಂತ ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವಂತೆ ಕಾಣುತ್ತಿದೆ.

ಮದುವೆಯಾದ ಬಳಿಕ ಹೀರೋಯಿನ್‌ಗಳಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಕಾಲ ಈಗಿಲ್ಲ. ಬದಲಾಗಿ, ಮದುವೆಯ ನಂತರವೂ ಸ್ಟಾರ್ ನಟಿಯರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಆದರೆ ಇಲ್ಲಿ ಒಂದು ಪ್ರಮುಖ ಬದಲಾವಣೆ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಿಂದೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಒಪ್ಪಿಕೊಳ್ಳುತ್ತಿದ್ದ ಕೆಲ ಸೀನಿಯರ್ ಹೀರೋಯಿನ್‌ಗಳು, ಇದೀಗ ಕಥೆ ಮತ್ತು ತಮ್ಮ ಪಾತ್ರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ.

ಅಂದರೆ, ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದೇವೆ ಎನ್ನುವುದಕ್ಕಿಂತ, ಯಾವ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂಬುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮದುವೆಯಾದ ಬಳಿಕ ತಮ್ಮ ಕರಿಯರ್ ಬಗ್ಗೆ ಇನ್ನಷ್ಟು ಜಾಗರೂಕರಾಗಿರುವ ಸೀನಿಯರ್ ಬ್ಯೂಟೀಸ್, ಕೌಂಟ್‌ಗಿಂತ ಕಂಟೆಂಟ್ ಮುಖ್ಯ ಎಂಬ ಪಾಲಿಸಿಯನ್ನು ಫಾಲೋ ಮಾಡುತ್ತಿರುವಂತೆ ಕಾಣಿಸುತ್ತಿದೆ.

ಎಷ್ಟೇ ಸೀನಿಯರ್ ನಟಿಯರಾಗಿದ್ದರೂ, ಮದುವೆಯಾದ ಬಳಿಕ ಸಿನಿಮಾ ಆಯ್ಕೆ ಮಾಡುವ ವಿಚಾರದಲ್ಲಿ ಕೆಲವು ಬದಲಾವಣೆಗಳು ಸಹಜವಾಗಿಯೇ ಬರುತ್ತವೆ. ಅದರಲ್ಲೂ ಸಿಕ್ಕ ಅವಕಾಶವೆಲ್ಲವನ್ನೂ ಒಪ್ಪಿಕೊಳ್ಳುವ ಬದಲು, ತಮ್ಮ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ? ಕಥೆ ಹೇಗಿದೆ? ಎಂಬುದನ್ನು ನೋಡಿಕೊಂಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ನಮ್ಮ ಸೀನಿಯರ್ ಬ್ಯೂಟೀಸ್ ವಿಚಾರದಲ್ಲೂ ಇದೇ ಬದಲಾವಣೆ ಇದೀಗ ಸ್ಪಷ್ಟವಾಗಿ ಕಾಣಿಸುತ್ತಿದೆ.

ಸಮಂತಾ ಕಮ್‌ಬ್ಯಾಕ್‌ಗೆ ಹೊಸ ಟಚ್!

ಸಮಂತಾ ತಮ್ಮ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’ ಮೂಲಕ ಸ್ಟ್ರಾಂಗ್ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ವಿಭಿನ್ನ ಕಥೆ ಹಾಗೂ ಪಾತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿರುವ ಸಮಂತಾ, ಮದುವೆಯ ನಂತರ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಜಾಗರೂಕತೆ ವಹಿಸುತ್ತಿದ್ದಾರೆ.

ರಶ್ಮಿಕಾ ಕೈಯಲ್ಲಿ ವಿಭಿನ್ನ ಪಾತ್ರಗಳು!

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕೂಡ ಇದೀಗ ಒಂದರ ಹಿಂದೆ ಒಂದರಂತೆ ವಿಭಿನ್ನ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ‘ರಣಬಾಲಿ’ ಸಿನಿಮಾದಲ್ಲಿ 18ನೇ ಶತಮಾನದ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ, ‘ಮೈಸಾ’ದಲ್ಲೂ ಪರ್ಫಾರ್ಮೆನ್ಸ್‌ಗೆ ಹೆಚ್ಚು ಸ್ಕೋಪ್ ಇರುವ ಪಾತ್ರ ಮಾಡುತ್ತಿದ್ದಾರೆ.

ಇದಷ್ಟೇ ಅಲ್ಲದೆ, ಇದೀಗ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ಗೂ ರಶ್ಮಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಪಾತ್ರ ಅವರಿಗೆ ವೃತ್ತಿಜೀವನದಲ್ಲಿ ಬಹಳ ವಿಶೇಷವಾಗಲಿದೆ ಎನ್ನಲಾಗುತ್ತಿದೆ. ‘ಮಹಾನಟಿ’ ಸಿನಿಮಾ ಕೀರ್ತಿ ಸುರೇಶ್ ಅವರ ವೃತ್ತಿಜೀವನದಲ್ಲಿ ಹೇಗೆ ವಿಶೇಷ ಸ್ಥಾನ ಪಡೆದಿದೆಯೋ, ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಕೂಡ ರಶ್ಮಿಕಾ ಕರಿಯರ್‌ನಲ್ಲಿ ಅದೇ ರೀತಿಯ ಮೈಲಿಗಲ್ಲಾಗುವ ನಿರೀಕ್ಷೆ ಇದೆ. ಹೀಗಾಗಿ ಈ ಪಾತ್ರಕ್ಕಾಗಿ ತಮ್ಮನ್ನು ತಾವು ಸಾಕಷ್ಟು ಬದಲಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಯನತಾರಾ ಆಯ್ಕೆಯಲ್ಲಿ ನೋ ಕಾಂಪ್ರಮೈಸ್!

ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಎಂದಿನಂತೆ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಸೆಲೆಕ್ಟಿವ್ ಆಗಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳೇ ಆಗಿರಲಿ, ತಮ್ಮ ಪಾತ್ರಕ್ಕೆ ಸೂಕ್ತವಾದ ಪ್ರಾಮುಖ್ಯತೆ ಇಲ್ಲ ಎಂದರೆ ನಯನತಾರಾ ನೋ ಹೇಳಲು ಹಿಂದೆ ಮುಂದೆ ನೋಡುವುದಿಲ್ಲ ಎನ್ನಲಾಗುತ್ತಿದೆ. ಸದ್ಯ ‘ರಕ್ಕಯಿ’ ಜೊತೆಗೆ ‘ಮಹಾಶಕ್ತಿ’ ಸಿನಿಮಾದಲ್ಲೂ ನಯನತಾರಾ ನಟಿಸುತ್ತಿದ್ದಾರೆ. ಮದುವೆಯ ನಂತರವೂ ತಮ್ಮ ಇಮೇಜ್‌ಗೆ ತಕ್ಕಂತಹ ಹಾಗೂ ಪಾತ್ರಕ್ಕೆ ತೂಕವಿರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೀರ್ತಿ ಸುರೇಶ್ ಕೂಡ ಸಖತ್ ಸೆಲೆಕ್ಟಿವ್!

ಇನ್ನು ಕೀರ್ತಿ ಸುರೇಶ್ ಕೂಡ ಮದುವೆಯಾದ ಬಳಿಕ ಸಿನಿಮಾಗಳನ್ನು ತುಂಬಾ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ರೌಡಿ ಜನಾರ್ಧನ್’ ಜೊತೆಗೆ ವೆಂಕಟೇಶ್ ಅಭಿನಯದ ಜನವರಿ 12ರಂದು ಬಿಡುಗಡೆಯಾಗಲಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಸದ್ಯ ಮದುವೆಯ ನಂತರ ಈ ಸೀನಿಯರ್ ಹೀರೋಯಿನ್‌ಗಳ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸುತ್ತಿವೆ. ಕೇವಲ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ, ತಮ್ಮ ಪಾತ್ರ, ಕಥೆ ಹಾಗೂ ಪರ್ಫಾರ್ಮೆನ್ಸ್‌ಗೆ ಪ್ರಾಮುಖ್ಯತೆ ಇರುವ ಪ್ರಾಜೆಕ್ಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಮ್ಯಾರೀಡ್ ಬ್ಯೂಟೀಸ್ ಕರಿಯರ್ ಈಗ ಮತ್ತೊಂದು ಹಂತಕ್ಕೆ ತಿರುಗಿರುವುದು ಮಾತ್ರ ಸ್ಪಷ್ಟ!