LIVE NOW
Published : Dec 20, 2025, 06:58 AM ISTUpdated : Dec 20, 2025, 11:27 PM IST

Karnataka News Live: ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ - ನಿಮ್ಮ ಉತ್ತರವೇನು?

ಸಾರಾಂಶ

ಬೆಳಗಾವಿ: ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹಠಯೋಗಿ ಲೋಕೇಶ್ವರ ಸ್ವಾಮೀಜಿಯು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪ ಸಾಬೀತಾಗಿದೆ. ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದ್ದು, ಅಪರಾಧಿಗೆ ಶಿಕ್ಷೆಯನ್ನು ಶನಿವಾರ ನೀಡಲಿದೆ. ಹಠಯೋಗಿ ಲೋಕೇಶ್ವರ ಸ್ವಾಮೀಜಿ ಉರೂಫ್‌ ಲೋಕೇಶ್ವರ ಸಾಬಣ್ಣ ಜಂಬಗಿ (30) ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಅಪರಾಧಿ. ಮೇ 13ರಂದು ನಿಮ್ಮ ಮನೆಗೆ ಬಿಡುತ್ತೇನೆಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿ ಲಾಡ್ಜ್‌ವೊಂದರಲ್ಲಿ ಬಾಲಕಿ ಮೇಲೆ ಒತ್ತಾಯ ಪೂರ್ವಕವಾಗಿ ಅತ್ಯಾ*ಚಾರ ಎಸಗಿದ್ದ.

Bigg Boss 12

11:27 PM (IST) Dec 20

ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ - ನಿಮ್ಮ ಉತ್ತರವೇನು?

ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ನೀಡಿದ ಟಾಸ್ಕ್ ಒಂದರಲ್ಲಿ ರಕ್ಷಿತಾ ನಡೆದುಕೊಂಡ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿವಾದದ ನಡುವೆಯೇ, ಇವರಿಬ್ಬರು ಮನೆಗೆ ಮರಳುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
Read Full Story

10:50 PM (IST) Dec 20

ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್​ಲೆಸ್​ ಡ್ರೆಸ್​, ಹರಿದ ಜೀನ್ಸ್​ ನಿಷೇಧ - ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?

ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಹೊಸ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದ್ದು, ಅಸಭ್ಯ ಉಡುಪುಗಳನ್ನು ನಿಷೇಧಿಸಿದೆ. ಇದರೊಂದಿಗೆ, ನೌಕರರ ಹಾಜರಾತಿ ಮತ್ತು ಚಲನವಲನಗಳನ್ನು ಪತ್ತೆಹಚ್ಚಲು ಚಲನವಲನ ರಿಜಿಸ್ಟರ್ ಮತ್ತು ನಗದು ಘೋಷಣೆ ರಿಜಿಸ್ಟರ್ ಅನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.
Read Full Story

10:10 PM (IST) Dec 20

ನನ್ನ ಕೆಲಸ ಸಹಿಸದೆ ಭೂಕಬಳಿಕೆ ಆರೋಪ, ಯಾವುದೇ ತನಿಖೆಗೂ ಸಿದ್ಧ - ಸಚಿವ ಕೃಷ್ಣ ಬೈರೇಗೌಡ

ಕೋಲಾರದ ಗರುಡನಪಾಳ್ಯ ಗ್ರಾಮದ 256 ಎಕರೆ ಜಮೀನು 1953ರಿಂದಲೂ ನಮ್ಮ ಕುಟುಂಬದ ಸುಪರ್ದಿಯಲ್ಲಿದೆ. ಈ ಜಮೀನು ನಾನು ಹುಟ್ಟುವ ಮೊದಲು ಮೈಸೂರು ರಾಜರಿಂದ ನಮ್ಮ ತಾತ ಚೌಡೇಗೌಡರು ಖರೀದಿಸಿದ್ದರು.

Read Full Story

09:42 PM (IST) Dec 20

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ - ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!

ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದಾದರೆ, ನೀವು ಏಕಿರಬೇಕು? ರಾಜೀನಾಮೆ ಕೊಟ್ಟು ಹೊರಡಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

Read Full Story

09:41 PM (IST) Dec 20

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!

ಬಹುನಿರೀಕ್ಷಿತ '45' ಚಿತ್ರದ ಪ್ರಚಾರದ ವೇಳೆ ನಟ ಉಪೇಂದ್ರ ಅವರು ಡ್ಯಾನ್ಸ್ ಶೋ ವೇದಿಕೆಯಲ್ಲಿ  'ಕಚಡಾ ನನ್ ಮಗನೆ' ಎಂದು ಬೈದಿದ್ದಾರೆ. ನಾನು ಎನ್ನುವ ಅಹಂಕಾರವನ್ನು ಬಿಡಬೇಕು ಎನ್ನುವ ಸಂದೇಶವನ್ನು ಈ ಮೂಲಕ ಸೂಚ್ಯವಾಗಿ ನೀಡಿದ್ದಾರೆ.

Read Full Story

09:27 PM (IST) Dec 20

ಶಾರುಖ್ ಖಾನ್ ಜೊತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಜೂ.ಎನ್‌ಟಿಆರ್‌ - 'ವಾರ್ 2' ಸೋತರೂ ಜಗ್ಗದ ಯಂಗ್ ಟೈಗರ್!

ಜೂ.ಎನ್‌ಟಿಆರ್‌ ಬಾಲಿವುಡ್‌ಗೆ ಎಂಟ್ರಿ ಕೊಟ್ಟು 'ವಾರ್ 2' ನಲ್ಲಿ ನಟಿಸಿದ್ದರು. ಈ ಸಿನಿಮಾ ಓಡಲಿಲ್ಲ. ಆದರೆ ಈಗ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಶಾರುಖ್ ಖಾನ್ ಜೊತೆ ಮತ್ತೊಂದು ಮಲ್ಟಿಸ್ಟಾರರ್ ಮಾಡಲು ರೆಡಿಯಾಗಿದ್ದಾರಂತೆ.

Read Full Story

09:15 PM (IST) Dec 20

ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?

ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಅಮೂಲ್ಯ ಅಭಿನಯದ ಬ್ಲಾಕ್‌ಬಸ್ಟರ್‌ ಸಿನಿಮಾ 'ಚೆಲುವಿನ ಚಿತ್ತಾರ' ಬಿಡುಗಡೆಯಾಗಿ 17 ವರ್ಷಗಳು ಕಳೆದಿವೆ. ಸಿನಿಮಾದ ದುರಂತ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ದೊಡ್ಡವನಾಗಿದ್ದು, ನಟಿ ಆತನೊಂದಿಗಿನ ಇತ್ತೀಚಿನ ಫೋಟೋವನ್ನು ಹಂಚಿಕೊಂಡಿದ್ದಾರೆ. 

Read Full Story

09:08 PM (IST) Dec 20

Bigg Boss ನೀವಂದುಕೊಂಡಂತಲ್ಲ ಎನ್ನುತ್ತಲೇ ಬಹು ದೊಡ್ಡ ಸತ್ಯ ತೆರೆದಿಟ್ಟ ನಟ ವಿಜಯ ರಾಘವೇಂದ್ರ!

ಬಿಗ್​ಬಾಸ್​ಗೆ ಹೋದರೆ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ಮೊದಲ ಸೀಸನ್ ವಿನ್ನರ್ ವಿಜಯ ರಾಘವೇಂದ್ರ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬಿಗ್​ಬಾಸ್​ನಿಂದ ಬಂದ ತಕ್ಷಣ ತಮಗೆ ಯಾವುದೇ ಆಫರ್‌ಗಳು ಬರಲಿಲ್ಲ, ಅದು ಸ್ಟಾರ್‌ಡಮ್ ತಂದುಕೊಡಲಿಲ್ಲ ಎಂದಿದ್ದಾರೆ.

Read Full Story

08:48 PM (IST) Dec 20

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ - ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!

ಹೈಕಮಾಂಡ್ ಅವರ ಪರ ಇಲ್ಲ ಎಂದೂ ಹೇಳಿಲ್ಲ. ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಆ ಒಪ್ಪಂದದ ಪ್ರಕಾರ ನಾನು ನಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Read Full Story

08:35 PM (IST) Dec 20

ಜೈಲಿಂದ ಹೊರಬಂದ ಬೆನ್ನಲ್ಲೇ ಬುರುಡೆ ಗ್ಯಾಂಗ್‌ನ ಸಮೀರ್‌, ತಿಮರೋಡಿ,ಮಟ್ಟೆನ್ನವರ್‌ ವಿರುದ್ಧ ತಿರುಗಿಬಿದ್ದ ಮಾಸ್ಕ್‌ಮ್ಯಾನ್‌!

ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪದ ಮೇಲೆ ಬಂಧಿತನಾಗಿದ್ದ ಬುರುಡೆ ಗ್ಯಾಂಗ್‌ನ ಚಿನ್ನಯ್ಯ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ತನ್ನದೇ ಹೋರಾಟಗಾರರ ತಂಡದ ಐವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

Read Full Story

08:27 PM (IST) Dec 20

ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ - ಯಾರೀಕೆ?

ನಮ್ಮ ದೇಶದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ? ಹದಿನೈದು ವರ್ಷಗಳಿಂದ ಸಿನಿಮಾದಿಂದ ದೂರವಿರುವ ಜೂಹಿ ಚಾವ್ಲಾ. ಇವರ ಆಸ್ತಿ ಮೌಲ್ಯ ತಿಳಿದರೆ ಅಚ್ಚರಿ ಪಡ್ತೀರಾ. ಒಂದು ಕಾಲದಲ್ಲಿ ಬೆಳ್ಳಿತೆರೆ ಆಳಿದ ಈಕೆ ಈಗ ಉದ್ಯಮದಲ್ಲೂ ಯಶಸ್ಸು ಕಂಡಿದ್ದಾರೆ.

Read Full Story

08:11 PM (IST) Dec 20

ಶಕ್ತಿ ಯೋಜನೆ ಇದ್ದರೂ, ರಾಜ್ಯದ 1800 ಹಳ್ಳಿಗಳಿಗೆ ಇನ್ನೂ ಬಸ್ ಸಂಪರ್ಕವೇ ಇಲ್ಲ!

Karnataka: 1800 Villages Still Lack Bus Service Despite Shakti Scheme ಶಕ್ತಿ ಯೋಜನೆಯ ಯಶಸ್ಸು ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಬಸ್‌ಗಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read Full Story

07:58 PM (IST) Dec 20

ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, ಎಣ್ಣೆ ಏಟಲ್ಲಿ ರಸ್ತೆಗಿಳಿದ್ರೆ ಶಾಕ್!

ಹೊಸ ವರ್ಷದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಪೊಲೀಸರು ಡಿಸೆಂಬರ್ 24 ರಿಂದ 31 ರವರೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸ್ಪೇಷಲ್ ಡ್ರೈವ್‌ನ ಮುಖ್ಯ ಉದ್ದೇಶ ಡ್ರಿಂಕ್ ಅಂಡ್ ಡ್ರೈವ್ , ಅತಿವೇಗ ಮತ್ತು ವಿಲ್ಹಿಂಗ್ ತಡೆಯುವುದಾಗಿದೆ. 

Read Full Story

07:48 PM (IST) Dec 20

ಬುದ್ಧಿಮಾಂದ್ಯ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿ ಅಮಾನುಷ ಹಲ್ಲೆ, ರಾಕ್ಷಸ ದಂಪತಿ ಅರೆಸ್ಟ್‌!

ಬಾಗಲಕೋಟೆಯ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ, ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಬೆಲ್ಟ್‌ನಿಂದ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಈ ರಾಕ್ಷಸಿ ಕೃತ್ಯ ನಡೆಸಿದ, ಪರವಾನಗಿ ಇಲ್ಲದೆ ಶಾಲೆ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

07:46 PM (IST) Dec 20

ಬೆಂಗಳೂರು ಮಕ್ಕಳ ಪಾಲಿನ ರಾಕ್ಷಸ ರಂಜನ್ ಲಾಕ್; ಗುದ್ದೋದು, ಒದೆಯೋದರ ಹಿಂದಿನ ಸತ್ಯ ಕಕ್ಕಿದ ಜಿಮ್ ಟ್ರೇನರ್!

ಬೆಂಗಳೂರಿನ ಜಿಮ್ ಟ್ರೈನರ್ ರಂಜನ್, ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನು. ಪೊಲೀಸರು ಆತನನ್ನು ಬಂಧಿಸಿ, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು. ಇದೀಗ ಮತ್ತಷ್ಟು ವಿಡಿಯೋ ವೈರಲ್ ಬೆನ್ನಲ್ಲಿಯೇ ಆತನನ್ನು ಲಾಕ್ ಮಾಡಿ, ಸತ್ಯ ಬಾಯ್ಬಿಡಿಸಿದ್ದಾರೆ.

Read Full Story

07:40 PM (IST) Dec 20

Bigg Boss - ಮೊಟ್ಟೆಗಾಗಿ ನಿದ್ದೆಗೆಟ್ಟ ಕಾವ್ಯಾ- ಕಾವ್ಯಾರ ಮೊಟ್ಟೆ ಬಾತ್​ರೂಮ್​ ಕೊಂಡೊಯ್ದ ರಜತ್​ ಹೀಗೇ ಮಾಡೋದಾ?

ಬಿಗ್‌ಬಾಸ್ ಮನೆಯಲ್ಲಿ ರಜತ್, ಕಾವ್ಯಾ ಶೈವ ಅವರ ಹೆಸರಿದ್ದ ಮೊಟ್ಟೆಯನ್ನು ಬಚ್ಚಿಟ್ಟಿದ್ದಾರೆ. ಸಿಕ್ಕಿಬೀಳುವ ಭಯದಿಂದ, ಮೊಟ್ಟೆಯ ಮೇಲಿದ್ದ ಅಕ್ಷರವನ್ನು ಅಳಿಸಲು ಎಂಜಲು ಬಳಸಿ, ಉಗುರಿನಿಂದ ಕೆರೆದಿದ್ದಾರೆ. ಈ ವಿಚಾರ ತಿಳಿದ ಕಾವ್ಯಾ, ಅಸಹ್ಯಪಟ್ಟು ಆ ಮೊಟ್ಟೆ ಬೇಡವೆಂದಿದ್ದಾರೆ.
Read Full Story

07:28 PM (IST) Dec 20

ಆರೆಂಜ್ ಲೈನ್ ಮೆಟ್ರೋ ಬರುವ ಮುನ್ನವೇ ಯಶವಂತಪುರದಲ್ಲಿ 430 ಕೋಟಿ ಭರ್ಜರಿ ಹೂಡಿಕೆ ಮಾಡಿದ ಫೋರ್ಟಿಸ್ ಹೆಲ್ತ್‌ಕೇರ್!

ಫೋರ್ಟಿಸ್ ಹೆಲ್ತ್‌ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು ₹430 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈ ಸ್ವಾಧೀನದ ಜೊತೆಗೆ, ಆಸ್ಪತ್ರೆಯ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ ₹410 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ .

Read Full Story

06:49 PM (IST) Dec 20

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!

ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗದ (ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ) ಪ್ರಯಾಣಿಕರಿಗೆ ಸುಗಮ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಕಾರ್ಯನಿರ್ವಹಿಸಿವೆ. ಮೆಟ್ರೋ ನಿಲ್ದಾಣಗಳ ಬಳಿ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

Read Full Story

06:41 PM (IST) Dec 20

ನಿಷೇಧದ ನಡುವೆಯೂ ಪಾಕಿಸ್ತಾನದಲ್ಲಿ 20 ಲಕ್ಷ ಬಾರಿ ಪೈರಸಿ ಆದ 'ಧುರಂಧರ್‌' - 50 ಕೋಟಿ ನಷ್ಟ

ಅಕ್ಷಯ್ ಖನ್ನಾ, ಸಾರಾ ಅರ್ಜುನ್ ನಟನೆಯ ‘ಧುರಂದರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಸ್ಪೈ ಪಾತ್ರದಲ್ಲಿ ರಣವೀರ್‌ ಸಿಂಗ್‌ ನಟಿಸಿರುವ ‘ಧುರಂದರ್’ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ.

Read Full Story

06:30 PM (IST) Dec 20

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!

ಅದಾನಿ ಗ್ರೂಪ್, ವಿಮಾನ ನಿಲ್ದಾಣ ವ್ಯವಹಾರದಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ. ಇದರ ಭಾಗವಾಗಿ, 60ಕ್ಕೂ ಹೆಚ್ಚು ಹೋಟೆಲ್‌ಗಳನ್ನು ನಿರ್ಮಿಸುವ ಮೂಲಕ ತಾಜ್ ಮತ್ತು ಐಟಿಸಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ.

Read Full Story

06:18 PM (IST) Dec 20

ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!

ಬೆಂಗಳೂರು ಹೊರವಲಯದ ಆನೇಕಲ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ದಂಧೆ ನಡೆದಿದೆ. ಲಕ್ಷಾಂತರ ರೂಪಾಯಿ ಹಣ ಪಡೆದು ಡಿಜಿಟಲ್ ಸಹಿ ತಿರುಚಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.

Read Full Story

05:50 PM (IST) Dec 20

ನೋ ಎಂದ ದಾಸ.. ಪವಿತ್ರಾ ಗೌಡಗೆ ಸಿಗದ ದರ್ಶನ - ಬೇಲ್ ಸಿಕ್ಕು ಹೊರಬಂದಾಗಲೂ ಭೇಟಿ ಇಲ್ಲ!

ರೇಣುಕಾಸ್ವಾಮಿ ಕೇಸ್ ಟ್ರಯಲ್ ಆರಂಭವಾಗಿದ್ದು, ಈ ಕೇಸ್ ವಿಚಾರವಾಗಿ ದರ್ಶನ್​ಗಿಂತ ಹೆಚ್ಚು ಎ-1 ಪವಿತ್ರಾಗೆ ಢವಢವ ಶುರುವಾಗಿದೆ. ಈ ನಡುವೆ ಪವಿತ್ರಾ, ದರ್ಶನ್ ಬೇಟಿ ಮಾಡ್ಲಿಕ್ಕೆ ಪ್ರಯತ್ನ ಪಟ್ಟಿದ್ದು, ಅದಕ್ಕೆ ದಾಸ ಒಪ್ಪಿಲ್ಲ.

Read Full Story

05:42 PM (IST) Dec 20

ಚಾಮರಾಜನಗರದಲ್ಲಿ 5 ಹುಲಿಗಳ ಹಾವಳಿ - ರೈತರ ಆಕ್ರೋಶ, ಡ್ರೋನ್ ಶೋಧಕ್ಕೆ ಅರಣ್ಯ ಇಲಾಖೆ ಸಿದ್ಧ!

ಅಲ್ಲಿ ಒಂದಲ್ಲ ... ಎರಡಲ್ಲ... ಐದು ಹುಲಿಗಳಿವೆ. ಕಳೆದ ಎರಡು ತಿಂಗಳಿಂದ 30ಕ್ಕೂ ಹೆಚ್ಚು ಹಸುಗಳನ್ನು ತಿಂದು ತೇಗಿವೆ. ಗ್ರಾಮಸ್ಥರು ಹೊಲಗದ್ದೆಗಳಿಗೆ ಹೋಗಲು ಭಯಪಡುವಂತಾಗಿವೆ. ಹೌದು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸದ್ದು ಜೋರಾಗಿದೆ.

Read Full Story

05:07 PM (IST) Dec 20

ಅಪ್ಪನಂತೆ ಅದೇ ಹೈಟ್, ಅದೇ ಲುಕ್.. ಡೆವಿಲ್ ಸೆಟ್​​ನಲ್ಲಿ ಗೆಳೆಯರಂತೆ ಕಾಣಿಸಿಕೊಂಡ ದರ್ಶನ್-ವಿನೀಶ್

ದಿ ಡೆವಿಲ್‌ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಅಪ್ಪ- ಮಗ ಸೇಮ್‌ ಟು ಸೇಮ್‌ ಡ್ರೆಸ್‌ ಹಾಕಿ ಫೋಟೋ ತೆಗೆದುಕೊಂಡಿದ್ದಾರೆ. ದಿ ಡೆವಿಲ್‌ ತಂಡ ರಾಜಸ್ಥಾನದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದರು. ಆ ವೇಳೆ ದರ್ಶನ್ ಜೊತೆಗೆ ವಿನೀಶ್‌ ಹೋಗಿದ್ದರು.

Read Full Story

04:45 PM (IST) Dec 20

ಚಿಕ್ಕಮಗಳೂರು ಹೆಚ್.ಡಿ. ತಮ್ಮಯ್ಯ ಚಿನ್ನದ ರಸ್ತೆ; ನಿನ್ನೆ ಡಾಂಬರ್ ಹಾಕಿದ್ರು, ಇವತ್ತು ಕಿತ್ಕೊಂಡು ಬಂತು!

ಚಿಕ್ಕಮಗಳೂರು ನಗರದ ನಾಯ್ಡು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ನಡೆಸಿದ ಕಳಪೆ ಕಾಮಗಾರಿಯಿಂದಾಗಿ, ಹಾಕಿದ 24 ಗಂಟೆಯೊಳಗೆ ಡಾಂಬರ್ ಕಿತ್ತುಬಂದಿದೆ. ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಗುಣಮಟ್ಟದ ರಸ್ತೆ ನಿರ್ಮಿಸಲು ಆಗ್ರಹಿಸಿದ್ದಾರೆ.

Read Full Story

04:45 PM (IST) Dec 20

ಪುನೀತ್ ರಾಜ್‌ಕುಮಾರ್ ಹೇಳಿದ ಆ ಒಂದು ಮಾತಿಗೆ ಕನ್ನಡ ಕಲಿತೆ - ನಟಿ ಪ್ರಿಯಾ ಆನಂದ್‌ ಹೇಳಿದ್ದೇನು?

ನಾನು ಕನ್ನಡ ಕಲಿಯಲು ಪುನೀತ್ ರಾಜ್‌ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು ನಟಿ ಪ್ರಿಯಾ ಆನಂದ್.

Read Full Story

04:41 PM (IST) Dec 20

'ಫುಟ್‌ಬಾಲ್‌ ದಿಗ್ಗಜ ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪ..' ಮಹಾರಾಷ್ಟ್ರ ಸಿಎಂಗೆ ಕುಟುಕಿದ ನಟ ಕಿಶೋರ್‌!

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಮುಂಬೈ ಕಾರ್ಯಕ್ರಮದಲ್ಲಿ 'ಗಣಪತಿ ಬಪ್ಪಾ ಮೋರಿಯಾ' ಎಂದು ಘೋಷಣೆ ಕೂಗಿದ್ದನ್ನು ನಟ ಕಿಶೋರ್ ಪ್ರಶ್ನಿಸಿದ್ದಾರೆ. ಕ್ರೀಡಾ ಕಾರ್ಯಕ್ರಮದಲ್ಲಿ ದೇವರ ಜಪದ ರಾಜಕೀಯ ಬೇಕಿತ್ತೇ ಎಂದು ಟೀಕಿಸಿದ್ದಾರೆ.

Read Full Story

04:22 PM (IST) Dec 20

ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ - ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ

ರವಿಶಂಕರ್ ಅವರು ಪ್ರಧಾನ ಭಾಷಣ ನೀಡಿ, ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಡುವ ಮೂಲಕ, ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ವಿಶ್ವದ ಅತ್ಯಂತ ಮಹತ್ವದ ರಾಜತಾಂತ್ರಿಕ ವೇದಿಕೆಯ ಮೂಲಕ ಮುನ್ನೆಲೆಗೆ ತಂದರು.

Read Full Story

03:33 PM (IST) Dec 20

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನಾನು ಪರಿಣಿತಿ ಬಂದಿದೆ - Actor Vicky Kaushal

ನಟ ವಿಕ್ಕಿ ಕೌಶಲ್‌ ಹಾಗೂ ಕತ್ರಿನಾ ಕೈಫ್ ಗಂಡು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ತಂದೆಯಾಗಿರೋದು ಹೇಗಿದೆ ಎಂದು ವಿಕ್ಕಿ ಕೌಶಲ್‌ ಅವರು ಹೇಳಿದ್ದಾರೆ. ಕೆಲಸದ ಸಲುವಾಗಿ ಊರು ಬಿಟ್ಟು ಹೋಗುವುದು, ಮನೆಗೆ ಬಂದಿರೋ ಮಗುವನ್ನು ಬಿಟ್ಟು ಬರುವುದು ವಿಶೇಷವಾಗಿ ಕಷ್ಟವಾಗಿತ್ತು ಎಂದು ವಿಕ್ಕಿ ಹೇಳಿದ್ದಾರೆ.

Read Full Story

03:21 PM (IST) Dec 20

ಪ್ರಾಜೆಕ್ಟ್ ಖುಷಿ 3 ತಿಂಗಳ ಸ್ವಾಸ್ಥ್ಯ ಅಭಿಯಾನದಲ್ಲಿ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬೆಂಗಳೂರು ಪೊಲೀಸ್!

ಬೆಂಗಳೂರು ಪೊಲೀಸ್ ದಂಪತಿ ಲೋಕೇಶ್ ಮತ್ತು ಆಶಾ ಅವರು 'ಪ್ರಾಜೆಕ್ಟ್ ಖುಷಿ' ಎಂಬ ಆರೋಗ್ಯ ಉಪಕ್ರಮದ ಮೂಲಕ ಗಮನಾರ್ಹವಾಗಿ ತೂಕ ಇಳಿಸಿಕೊಂಡು ಆರೋಗ್ಯ ಸುಧಾರಿಸಿಕೊಂಡಿದ್ದಾರೆ. ಈವರೆಗೆ 30 ಪೊಲೀಸ್ ಸಿಬ್ಬಂದಿಗೆ ಥೈರಾಯ್ಡ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಿದೆ.

Read Full Story

03:02 PM (IST) Dec 20

BBK 12 - ‌ ಈ ಬಾರಿ ಕಡ್ಡಿ ತುಂಡು ಮಾಡಿದಂತೆ ಖಡಕ್‌ ಆಗಿ, ಇದ್ದಿದ್ದನ್ನು ಇದ್ದಹಾಗೆ ಹೇಳಿದ ಕಿಚ್ಚ ಸುದೀಪ್

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚ ಸುದೀಪ್‌ ಅವರು ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಟಾಸ್ಕ್‌ಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಟಾಸ್ಕ್‌ಗಳಲ್ಲಿ ಸಾಕಷ್ಟು ಗೊಂದಲ ಮಾಡಿಕೊಂಡಿದ್ದರು.

 

Read Full Story

03:01 PM (IST) Dec 20

ರೈತರಿಗೆ ಬಂಪರ್ ಲಾಟರಿ; ತೊಗರಿ ಬೆಲೆಗೆ ₹8000 ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರ ಆರಂಭ!

ಕಲಬುರಗಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಪ್ರತಿ ಕ್ವಿಂಟಾಲ್ ತೊಗರಿಗೆ ₹8,000 ದರ ನಿಗದಿಪಡಿಸಲಾಗಿದ್ದು, ರೈತರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಮತ್ತು ಹಣವನ್ನು ನೇರವಾಗಿ ಡಿಬಿಟಿ ಮೂಲಕ ಪಾವತಿಸಲಾಗುತ್ತದೆ.
Read Full Story

02:37 PM (IST) Dec 20

ಬಿಸ್ಲೇರಿ 'ಮಿನರಲ್ ವಾಟರ್' ಅಲ್ಲವೇ ಅಲ್ಲ! ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್-ಮಿನರಲ್ ವಾಟರ್ ನಡುವಿನ ವ್ಯತ್ಯಾಸವೇನು?

ನಾವು ಸಾಮಾನ್ಯವಾಗಿ 'ಮಿನರಲ್ ವಾಟರ್' ಎಂದು ಕರೆಯುವ ಬಿಸ್ಲೇರಿ, ಕಿನ್ಲೆಯಂತಹ ಬ್ರಾಂಡ್‌ಗಳು ವಾಸ್ತವವಾಗಿ 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್' ಆಗಿವೆ. ನೈಸರ್ಗಿಕ ಮಿನರಲ್ ವಾಟರ್ ಅನ್ನು ಬುಗ್ಗೆಗಳಿಂದ ನೇರವಾಗಿ ಪಡೆಯಲಾಗುತ್ತದೆ ಮತ್ತು ಅದಕ್ಕೆ ಯಾವುದೇ ಸಂಸ್ಕರಣೆ ಇರುವುದಿಲ್ಲ.

Read Full Story

02:15 PM (IST) Dec 20

ಹೊರನಾಡು ಅನ್ನಪೂರ್ಣೇಶ್ವರಿಗೆ ಹೋಗಿದ್ದ 48 ಜನರಿದ್ದ ಪ್ರವಾಸಿಗರ ಬಸ್ ಪಲ್ಟಿ!

ಚಿಕ್ಕಮಗಳೂರಿನ ಕಳಸ ತಾಲೂಕಿನ ಬಳಿ ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಪ್ರವಾಸಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 45ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

Read Full Story

02:05 PM (IST) Dec 20

ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ-ಸಿದ್ದೇಗೌಡರ ಗೃಹಪ್ರವೇಶದ ದೃಶ್ಯವು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಅರಿಶಿನ-ಕುಂಕುಮವಿಲ್ಲದೆ ಪೂಜೆ ಮಾಡಿರುವುದು ಮತ್ತು ಲಕ್ಷ್ಮೀ-ಶ್ರೀನಿವಾಸ್ ಸ್ವಂತ ಮನೆ ಇಲ್ಲದಿರುವಾಗ ಮಕ್ಕಳು ಪ್ರತ್ಯೇಕವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ.
Read Full Story

02:02 PM (IST) Dec 20

ಉಡುಪಿ - ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿಯರಿಗೆ ಆಶ್ರಯ; ಪ್ರಕರಣ ದಾಖಲು!

ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಿರ್ವಹಣೆಯ ರೆಸಾರ್ಟ್‌ನಲ್ಲಿ ದಾಖಲೆಗಳಿಲ್ಲದ ನೇಪಾಳಿ ಮೂಲದವರಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿದೆ. ಗರ್ಭಿಣಿಯೊಬ್ಬರ ಆಸ್ಪತ್ರೆ ದಾಖಲಾತಿ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬ್ರಹ್ಮಾವರ ಪೊಲೀಸರಿಂದ ಒಂಬತ್ತು ಮಂದಿ  ವಶಕ್ಕೆ 

Read Full Story

01:43 PM (IST) Dec 20

VB–G RAM G Bill 2025 - ಗಾಂಧೀಜಿ, ಹೋರಾಟಗಾರರಿಗೆ ಅಪಮಾನ - ಕೇಂದ್ರದ ವಿರುದ್ಧ ಉಗ್ರಪ್ಪ ಕೆಂಡಾಮಂಡಲ!

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟು 'ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡಿರುವುದನ್ನು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಖಂಡಿಸಿದ್ದಾರೆ. ಇದು ಗಾಂಧೀಜಿಗೆ ಮಾಡಿದ ಅವಮಾನವಾಗಿದ್ದು, ಕೇಂದ್ರ ಸರ್ಕಾರವು ರಾಜ್ಯಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

Read Full Story

01:23 PM (IST) Dec 20

ಮೈಸೂರು ಕೆನರಾ ಬ್ಯಾಂಕ್ ಚಿನ್ನ ಅಡವಿಟ್ಟ ಗ್ರಾಹಕರಿಗೆ ಪಂಗನಾಮ - ಅಕ್ಕಸಾಲಿಗನ ವಿರುದ್ಧ ಎಫ್‌ಐಆರ್ ದಾಖಲು!

ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ, ಗ್ರಾಹಕರು ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ ಅಶ್ವಿನ್ ಆಚಾರ್ ಅವರೇ ಈ ಕೃತ್ಯ ಎಸಗಿದ್ದು, ಗ್ರಾಹಕರ ದೂರಿನ ಮೇರೆಗೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read Full Story

01:23 PM (IST) Dec 20

Karnataka Hate Speech bill - ಪ್ರಿಯಾಂಕ್ ಖರ್ಗೆ ಅಪ್ಪನ ಹಿಂದೆ ನಿಂತು ಇದೆಲ್ಲ ಮಾಡ್ತಿದ್ದಾರೆ, ರಾಜ್ಯ ಸರ್ಕಾರದ ವಿರುದ್ಧ ಸಚಿವೆ ವಾಗ್ದಾಳಿ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು 'ದ್ವೇಷ ಭಾಷಣ' ತಡೆ ಕಾಯ್ದೆ ಮತ್ತು 'ಫ್ಯಾಕ್ಟ್ ಚೆಕ್ ಎಜೆನ್ಸಿ' ಮೂಲಕ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿ 'ಅಘೋಷಿತ ತುರ್ತು ಪರಿಸ್ಥಿತಿ' ಹೇರುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

Read Full Story

01:09 PM (IST) Dec 20

ಅನ್ನವನ್ನು ತಿಂದು, ಆಯುರ್ವೇದದ ಡಯೆಟ್‌ ಮೂಲಕ ನಟಿ Shubha Poonja ಸಣ್ಣಗಾಗಿದ್ದು ಹೇಗೆ? ಚಾಟ್‌ ಇಲ್ಲಿದೆ

Actress Shubha Poonja Weight Loss: ನಟಿ ಶುಭಾ ಪೂಂಜ ಅವರು ತೂಕ ಇಳಿಸಿಕೊಂಡಿದ್ದಾರೆ. ಆಯುರ್ವೇದಿಕ್‌ ಪದ್ಧತಿ ಮೂಲಕ ಅವರು ತೂಕ ಇಳಿಸಿಕೊಂಡಿದ್ದಾರೆ. ಹಾಗಾದರೆ ಆಯುರ್ವೇದಿಕ್‌ ಡಯೆಟ್‌ ಹೇಗಿರಲಿದೆ? ಸೈಡ್‌ ಎಫೆಕ್ಟ್‌ ಇಲ್ಲದೆ ಸಣ್ಣಗಾಗಬಹುದು ಹೇಗೆ?

Read Full Story

More Trending News