MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?

ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ-ಸಿದ್ದೇಗೌಡರ ಗೃಹಪ್ರವೇಶದ ದೃಶ್ಯವು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಅರಿಶಿನ-ಕುಂಕುಮವಿಲ್ಲದೆ ಪೂಜೆ ಮಾಡಿರುವುದು ಮತ್ತು ಲಕ್ಷ್ಮೀ-ಶ್ರೀನಿವಾಸ್ ಸ್ವಂತ ಮನೆ ಇಲ್ಲದಿರುವಾಗ ಮಕ್ಕಳು ಪ್ರತ್ಯೇಕವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ.

1 Min read
Mahmad Rafik
Published : Dec 20 2025, 02:05 PM IST
Share this Photo Gallery
  • FB
  • TW
  • Linkdin
  • Whatsapp
15
ಸಿದ್ದೇಗೌಡ ಭಾವನಾ ಗೃಹಪ್ರವೇಶ
Image Credit : zee kannada

ಸಿದ್ದೇಗೌಡ-ಭಾವನಾ ಗೃಹಪ್ರವೇಶ

ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯ ಶುಕ್ರವಾರದ ಸಂಚಿಕೆ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಭಾವನಾ ಮತ್ತು ಸಿದ್ದೇಗೌಡ ಜೊತೆಯಾಗಿ ಹೊಸ ಮನೆ ಮಾಡಿಕೊಂಡಿದ್ದು, ಶ್ರೀನಿವಾಸ್-ಲಕ್ಷ್ಮೀ ಸಮ್ಮುಖದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ಮಾಡಿದ್ದಾರೆ.

25
ಅರಿಶಿನ ಕುಂಕುಮ ಇಲ್ಲದೇ ಪೂಜೆ
Image Credit : zee kannada

ಅರಿಶಿನ ಕುಂಕುಮ ಇಲ್ಲದೇ ಪೂಜೆ

ಮಗಳು-ಅಳಿಯನ ಮುಂದಿನ ಜೀವನಕ್ಕೆ ಶುಭ ಹಾರೈಸಿ ಹೊರಡುತ್ತಿರುತ್ತಾರೆ. ಈ ವೇಳೆ ಹೊಸ ಮನೆಯಾಗಿದ್ದರಿಂದ ಅರಿಶಿನ-ಕುಂಕುಮ ತಂದಿಲ್ಲ. ಇನ್ನೊಮ್ಮೆ ಬಂದಾಗ ಕೊಡುವೆ ಎಂದು ತಾಯಿಗೆ ಭಾವನಾ ಹೇಳುತ್ತಾಳೆ. ಇದಕ್ಕೆ ನಾವೇನು ನೆಂಟರೇನು ಎಂದು ಮಗಳಿಗೆ ತಾಯಿ ಸಮಾಧಾನ ಮಾಡ್ತಾರೆ. ಸೀರಿಯಲ್‌ನ ಈ ಭಾಗ ನೋಡಿದ ವೀಕ್ಷಕರು, ಈ ದೃಶ್ಯದಲ್ಲಾದ ತಪ್ಪುಗಳನ್ನು ಕಂಡು ಹಿಡಿದಿದ್ದಾರೆ.

Related Articles

Related image1
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
Related image2
ಲಕ್ಷ್ಮೀ ನಿವಾಸದಲ್ಲಿ ಅಪ್ಪ ಮಗ... ಗಂಧದಗುಡಿಯಲ್ಲಿ ಮಾವ- ಅಳಿಯ...ಯಾವ ಪಾತ್ರ ನಿಮ್ಮ ಫೇವರಿಟ್?
35
ಸಂಭಾಷಣೆ ಬೇಕಿರಲಿಲ್ಲ
Image Credit : zee kannada

ಸಂಭಾಷಣೆ ಬೇಕಿರಲಿಲ್ಲ

ತಾಯಿಗೆ ಕೊಡಲು ಅರಿಶಿನ-ಕುಂಕುಮ ಇಲ್ಲ ಅಂದ್ರೆ ಹೇಗೆ ಹಾಲು ಉಕ್ಕಿಸುವ ಪೂಜೆ ಮಾಡಿದ್ರಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಒಲೆಗೆ ಅರಿಶಿನ-ಕುಂಕುಮ ಹಚ್ಚದೆಯೇ ಹೇಗೆ ಪೂಜೆ ಮಾಡಿದ್ರಿ ಎಂದು ಕೇಳಿದ್ದಾರೆ. ಲಕ್ಷ್ಮೀ ಮತ್ತು ಭಾವನಾ ನಡುವಿನ ಸಂಭಾಷಣೆಯ ಅವಶ್ಯಕತೆ ಇರಲಿಲ್ಲ ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

45
ಎಲ್ಲಿಯ ಲಕ್ಷ್ಮೀ ನಿವಾಸ?
Image Credit : zee kannada

ಎಲ್ಲಿಯ ಲಕ್ಷ್ಮೀ ನಿವಾಸ?

ಮತ್ತೊಂದೆಡೆ ಲಕ್ಷ್ಮೀ ಮತ್ತು ಶ್ರೀನಿವಾಸ್‌ಗೆ ಒಂದು ಸೂರು ಕಟ್ಟಿಕೊಳ್ಳಬೇಕು ಅನ್ನೋದು ಆಸೆ. ಅದಕ್ಕಾಗಿಯೇ ಸೀರಿಯಲ್ ಮೊದಲ ಸಂಚಿಕೆಯಿಂದ ಇಬ್ಬರು ಕಷ್ಟಪಡುತ್ತಿದ್ದಾರೆ. ಆದ್ರೆ ಲಕ್ಷ್ಮೀ ಮತ್ತು ಶ್ರೀನಿವಾಸ್‌ ದಂಪತಿ ಮಕ್ಕಳು ಪ್ರತ್ಯೇಕ ಮನೆ ಮಾಡಿಕೊಳ್ಳೋದು ನೋಡಿದ್ರೆ ಎಲ್ಲಿಯ ಲಕ್ಷ್ಮೀ ನಿವಾಸ ಎಂದು ವೀಕ್ಷಕರು ಕೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಮೈಲೇಜ್ ಪಡೆದುಕೊಂಡ ಲಕ್ಷ್ಮೀ ನಿವಾಸ ಸೀರಿಯಲ್; ಅಂತ್ಯವಾಗಲಿದೆ ವೀಕ್ಷಕರ ಕಾಯುವಿಕೆ

55
ದಿಕ್ಕಿಗೊಬ್ಬರಾದ ಮಕ್ಕಳು
Image Credit : zee kannada

ದಿಕ್ಕಿಗೊಬ್ಬರಾದ ಮಕ್ಕಳು

ಜಿಪುಣ ಸಂತೋಷ್ ಸ್ವಂತ ಮನೆ ಕಟ್ಕೊಂಡು ದೂರವಾಗಿದ್ದಾರೆ. ಇತ್ತ ಉಂಡಾಡಿ ಗುಂಡ ಹರೀಶ್ ಪತ್ನಿಯ ತವರು ಸೇರಿಕೊಂಡಿದ್ದಾನೆ. ತುಂಬು ಕುಟುಂಬದಲ್ಲಿದ್ದ ಭಾವನಾ ಇದೀಗ ಹೊಸ ಮನೆ ಮಾಡಿಕೊಂಡಿದ್ದಾಳೆ. ಇನ್ನು ಜಾನು ದಿಕ್ಕು ದೆಸೆ ಇಲ್ಲದಂತೆ ಸೋದರಮಾವನ ಮನೆಯಲ್ಲಿಯೇ ಕೆಲಸದವಳಾಗಿ ಆಶ್ರಯ ಪಡೆದುಕೊಂಡಿದ್ದಾಳೆ. ಲಕ್ಷ್ಮೀ ಮತ್ತು ಶ್ರೀನಿವಾಸ್‌ ದಂಪತಿಯ ಹಿರಿಯ ಮಗಳು ಮಿಸ್ಸಿಂಗ್ ಆದ್ರೆ, ವೆಂಕಿ-ಚೆಲುವಿ ಮಾತ್ರ ಪೋಷಕರ ಜೊತೆಯಲ್ಲಿದ್ದಾರೆ.

ಇದನ್ನೂ ಓದಿ: 2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
BBK 12: ಧ್ರುವಂತ್‌ಗೆ ಸವಾಲು ಹಾಕಿದ ರಕ್ಷಿತಾ ಶೆಟ್ಟಿ; ನಗೋದಲ್ಲ, ಆಕೆ ಮರಿ ರಾಕ್ಷಸಿ ಎಂದ ಫ್ಯಾನ್ಸ್
Recommended image2
ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!
Recommended image3
ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್‌ ಆಯ್ತು! ಕಾವ್ಯ ಶೈವ Age ಎಷ್ಟು?
Related Stories
Recommended image1
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
Recommended image2
ಲಕ್ಷ್ಮೀ ನಿವಾಸದಲ್ಲಿ ಅಪ್ಪ ಮಗ... ಗಂಧದಗುಡಿಯಲ್ಲಿ ಮಾವ- ಅಳಿಯ...ಯಾವ ಪಾತ್ರ ನಿಮ್ಮ ಫೇವರಿಟ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved