ಮಂಗಳೂರು: ಫೇಸ್ಬುಕ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಹೂಡಿಕೆ ಬಗ್ಗೆ ಪ್ರಚಾರ ಮಾಡುವ ನಕಲಿ ವಿಡಿಯೋ ನಿಜವೆಂದು ನಂಬಿ ಮಹಿಳೆಯೊಬ್ಬರು 9.10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ಹೂಡಿಕೆ ಬಗ್ಗೆ ವಿಡಿಯೋ ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿದ್ದಾರೆ. ಮೊಬೈಲ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ₹20,664 ಹೂಡಿಕೆ ಮಾಡಿದ್ದಾರೆ. ನಂತರ ₹8.90 ಲಕ್ಷ ಸೇರಿ ಒಟ್ಟು ₹9.1 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

11:48 PM (IST) Oct 01
Actress Dimple Hayathi ನಟಿ ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ವಿರುದ್ಧ ಅವರ ಮನೆ ಕೆಲಸದಾಕೆ ಪ್ರಿಯಾಂಕಾ ಬೀಬರ್ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ನಾಯಿ ಬೊಗಳಿದ್ದಕ್ಕೆ ವಿವಸ್ತ್ರಗೊಳಿಸಿದ ಆರೋಪ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
11:20 PM (IST) Oct 01
11:20 PM (IST) Oct 01
How to Identify Real vs Fake Khadi: ಶುದ್ಧ ಖಾದಿ ಬಟ್ಟೆಯನ್ನು ಗುರುತಿಸುವುದು ಹೇಗೆ: ನೀವು ಅಸಲಿ ಖಾದಿ ಖರೀದಿಸಲು ಬಯಸಿದರೆ, ಈ ವಿಷಯಗಳನ್ನು ಗಮನದಲ್ಲಿಡಿ. ಅಸಲಿ ಖಾದಿ ನಿಮಗೆ ಸ್ಟೈಲಿಶ್ ಮತ್ತು ಆರಾಮದಾಯಕ ಲುಕ್ ನೀಡುವುದಲ್ಲದೆ, ಸ್ವದೇಶಿ ಮತ್ತು ಸುಸ್ಥಿರ ಫ್ಯಾಷನ್ಗೂ ಬೆಂಬಲ ನೀಡುತ್ತದೆ.
11:19 PM (IST) Oct 01
Kantara 1 Movie Review: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ನೋಡಿ ವಾವ್ ಎಂದ ಜನರು ‘ಕಾಂತಾರ ಚಾಪ್ಟರ್ 1’ ನೋಡಲು ಕಾತುರದಿಂದ ಕಾದಿದ್ದರು. ಈಗ ಸಿನಿಮಾ ರಿಲೀಸ್ ಆಗಿದ್ದು, ಹೇಗಿದೆ?
11:03 PM (IST) Oct 01
ಕೋಪನ್ಹೇಗನ್ನಲ್ಲಿ ವಾಸಿಸುವ ದೆಹಲಿ ಮೂಲದ ಯುವತಿ, ಡೆನ್ಮಾರ್ಕ್ನಲ್ಲಿರುವ ನಾಲ್ಕು ಸೌಲಭ್ಯಗಳು ಭಾರತದಲ್ಲೂ ಇರಬೇಕೆಂದು ಆಶಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಆಸೆಗಳುಳ್ಳ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
10:58 PM (IST) Oct 01
Bilaspur Engineer Ends Life After Girlfriend Files Rpe Case: ನೋಯ್ಡಾದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಗೆಳತಿಯ ದೂರಿನ ಮೇರೆಗೆ ಗೌರವ್ ಅತ್ಯಾ೧ಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಪ್ರೀತಿಯಲ್ಲಿ ಮೋಸವಾಗಿದೆ ಎಂದು ಬರೆದಿದ್ದ ಯುವಕನ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
10:32 PM (IST) Oct 01
festive season hair care tips: ಹಬ್ಬದ ಸೀಸನ್ನಲ್ಲಿ ಹೇರ್ ಸ್ಟೈಲಿಂಗ್ ಉಪಕರಣ, ರಾಸಾಯನಿಕ ಕೂದಲಿಗೆ ಹಾನಿ.ನೈಸರ್ಗಿಕ ಶ್ಯಾಂಪೂ, ಡೀಪ್ ಕಂಡೀಷನಿಂಗ್ ಮಾಸ್ಕ್, ಎಣ್ಣೆ ಮಸಾಜ್, ಮರದ ಬಾಚಣಿಗೆ ಬಳಕೆ ಸರಳ ಸಲಹೆ ಅನುಸರಿಸುವ ಮೂಲಕ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರಿಸಿಕೊಳ್ಳಬಹುದು.
10:28 PM (IST) Oct 01
'ಕಾಂತಾರ ಚಾಪ್ಟರ್ 1' ಪ್ರಿವ್ಯೂ ಶೋಗೆ ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾವೆಂಬ ವಿಮರ್ಶೆಗಳು ವ್ಯಕ್ತವಾಗಿವೆ. ರಿಷಬ್ ಶೆಟ್ಟಿ ನಟನೆ, ಚಿತ್ರದ ದೃಶ್ಯ ವೈಭವ ಮತ್ತು ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದು, ಸಿನಿಮಾ ಬ್ಲಾಕ್ಬಸ್ಟರ್ ಆಗುವ ಸೂಚನೆ ನೀಡಿದ್ದಾರೆ.
09:54 PM (IST) Oct 01
Diet during fever: ಸೋಂಕಿನಿಂದ ಎಷ್ಟು ದೂರ ಇರಲು ಸಾಧ್ಯವೋ ಅಷ್ಟು ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಜ್ವರ ಕಡಿಮೆಯಾಗಲು ಹಲವು ದಿನಗಳು ಬೇಕಾಗಬಹುದು. ಗಮನಿಸಬೇಕಾದ ವಿಷಯಗಳು ಇಲ್ಲಿವೆ.
09:41 PM (IST) Oct 01
Okinotori Shima: ಈ ಬಂಡೆಯ ಗಾತ್ರ ಕೇವಲ 60 ಚದರ ಮೀಟರ್ ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಆದರೆ ಈ ಚಿಕ್ಕ ಕಲ್ಲಿಗೆ ಜಪಾನ್ ಏಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಒಂದು ವೇಳೆ ಇದು ಸಮುದ್ರದಲ್ಲಿ ಮುಳುಗಿದರೆ ಏನಾಗುತ್ತದೆ? ಈ ಕುತೂಹಲಕಾರಿ ಕಥೆಯ ಹಿಂದಿನ ರಹಸ್ಯವನ್ನು ತಿಳಿಯೋಣ.
08:40 PM (IST) Oct 01
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರವು ಬೆಂಗಳೂರಿನಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಮುಂಗಡ ಬುಕ್ಕಿಂಗ್ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ, 'ವಿಕ್ರಾಂತ್ ರೋಣ' ನಂತರ ಈ ಸಾಧನೆ ಮಾಡಿದೆ.
08:37 PM (IST) Oct 01
Davanagere Vijayadashami procession: ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್ನಿಂದ ವಿಜಯದಶಮಿ ಶೋಭಾಯಾತ್ರೆಗೆ ಬೃಹತ್ ಸಿದ್ಧತೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ., ಶೋಭಾಯಾತ್ರೆ ಮಾರ್ಗದುದ್ದಕ್ಕೂ ಆಕರ್ಷಕ ಟ್ಯಾಬ್ಲೋಗಳು ಕೇಸರಿಮಯವಾಗಿದೆ. ಪೊಲೀಸರ ಸರ್ಪಗಾವಲು.
08:10 PM (IST) Oct 01
Pawan Kalyan on Kantara movie: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಆಪ್ರ ಟಿಕೆಟ್ ದರ ಏರಿಕೆಗೆ ಅನುಮತಿ, ಈ ನಿರ್ಧಾರ ಪ್ರೇಕ್ಷರಿಂದ ಟೀಕೆಗೆ ಗುರಿಯಾಗಿ ಬಹಿಷ್ಕಾರದ ಕರೆಗೂ ಕಾರಣವಾಗಿದೆ. ಈ ಬಗ್ಗೆ ಪವನ್, ಎರಡೂ ಚಿತ್ರರಂಗ ಸಮಸ್ಯೆ ಬಗೆಹರಿಸಿಕೊಳ್ಳುವಂಟೆ ಸಲಹೆ.
07:28 PM (IST) Oct 01
Mallikarjun Kharge health update: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ. ಹೃದಯ ಬಡಿತದ ವ್ಯತ್ಯಾಸದ ಕಾರಣ, ಜಯದೇವ ಆಸ್ಪತ್ರೆಯ ವೈದ್ಯರು ಪರ್ಮನೆಂಟ್ ಫೇಸ್ಮೇಕರ್ ಅಳವಡಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
07:14 PM (IST) Oct 01
ಸಚಿವ ಪ್ರಿಯಾಂಕ್ ಖರ್ಗೆಯವರು, ಧರ್ಮ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಲು ಹೇಳುವ ಆರ್ಎಸ್ಎಸ್ ನಾಯಕರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರಿಗಾಗಿಯೇ 'ಆರ್ಎಸ್ಎಸ್ ಮ್ಯಾಟ್ರಿಮೊನಿ' ಆರಂಭಿಸಲು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.
06:51 PM (IST) Oct 01
Pakistan U-turn on Gaza plan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಇದೀಗ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಯು-ಟರ್ನ್ ಹೊಡೆದಿದೆ. ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.
06:38 PM (IST) Oct 01
ಹಾವೇರಿಯ ದೇವರಗುಡ್ಡದಲ್ಲಿ ನಡೆದ ಪ್ರಸಿದ್ಧ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ, ಗೊರವಯ್ಯನವರು 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!' ಎಂದು ಈ ವರ್ಷದ ಭವಿಷ್ಯ ನುಡಿದಿದ್ದಾರೆ. ಈ ದೈವವಾಣಿಯು ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
06:16 PM (IST) Oct 01
Kodimath Swamiji latest predictions: ಕೋಡಿಮಠದ ಶ್ರೀಗಳು ಮಲೆನಾಡು ಬಯಲುಸೀಮೆಯಾಗುವ, ಬಯಲುಸೀಮೆ ಮಲೆನಾಡಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿವರೆಗೆ ಯಾವುದೇ ತೊಂದರೆಯಿಲ್ಲ ಎಂದಿರುವ ಅವರು, ಜಾತಿ ಸಮೀಕ್ಷೆಯ ಬಗ್ಗೆ ಜನರು ತಾವೇ ನಿರ್ಧರಿಸುತ್ತಾರೆ ಎಂದಿದ್ದಾರೆ
06:11 PM (IST) Oct 01
ಕೇಂದ್ರದೊಂದಿಗೆ ಘರ್ಷಣೆ ಬೇಡವೆಂದ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯದ ಪಾಲಿನ ಅನುದಾನ ಕೇಳುವುದು ಭಿಕ್ಷೆಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಸಂಸದರು ಅನುದಾನ ಕೇಳದೇ, ಮೋದಿ ಮನ್ಕಿ ಬಾತ್ ಮಾಡೋದನ್ನ ಕನ್ನಡದಲ್ಲಿ ಪೋಸ್ಟ್ ಮಾಡಿಕೊಳ್ಳೋದೇ ಇವರ ಕೆಲಸವಾಗಿದೆ ಎಂದರು.
05:43 PM (IST) Oct 01
ಯುಟ್ಯೂಬರ್ ಡಾ.ಬ್ರೋ ಖ್ಯಾತಿಯ ಗಗನ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ತಾವೇಕೆ ಈ ಶೋಗೆ ಹೋಗುವುದಿಲ್ಲ ಎಂಬುದನ್ನು ಸ್ವತಃ ಗಗನ್ ಅವರೇ ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಬ್ರೋ ಹೇಳಿದ್ದೇನು?
05:41 PM (IST) Oct 01
Nadahabba Dasara Celebration in Kempegowda international airport: ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರು ಒಂದು ವಾರ ಕಾಲ ‘ನಾಡಹಬ್ಬ ದಸರಾ’ವನ್ನು ಅದ್ದೂರಿಯಾಗಿ ಆಚರಿಸಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಿತು.
05:32 PM (IST) Oct 01
ಬಾಲಿವುಡ್ ಸ್ಟಾರ್ ವರುಣ್ ಧವನ್, ಕನ್ಯಾ ಪೂಜೆ ಮಾಡಿದ್ದಾರೆ. ಕನ್ಯಾ ಪೂಜೆ ವೇಳೆ ಅವರು ಮಕ್ಕಳಿಗೆ ಊಟ ಬಡಿಸಿದ್ದಾರೆ. ಆದ್ರೆ ಊಟದ ಪ್ಲೇಟ್ ಈಗ ವೈರಲ್ ಆಗಿದೆ. ಜನ, ಹಣ ಇಲ್ವಾ ಕೇಳ್ತಿದ್ದಾರೆ?
05:18 PM (IST) Oct 01
05:14 PM (IST) Oct 01
Mysuru dasara 2025: ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿದರು. ನಾಳೆ ನಡೆಯಲಿರುವ ವಿಶ್ವವಿಖ್ಯಾತ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಕಲ ರೀತಿ ಸಜ್ಜಾಗಿದ್ದು, 6ನೇ ಬಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು
04:58 PM (IST) Oct 01
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಸರ್ಜರಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವಯೋಸಹಜ ಕಾರಣಗಳಿಂದ ವೈದ್ಯರು ಪೇಸ್ಮೇಕರ್ ಅಳವಡಿಕೆಗೆ ಸಲಹೆ ನೀಡಿದ್ದಾರೆ ಎಂದು ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
04:44 PM (IST) Oct 01
04:21 PM (IST) Oct 01
ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್ ಭಾರತ್ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ವಿಶೇಷ ಚೇತನ ಮಕ್ಕಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ್ದ 8 ಕ್ರೀಡಾಪಟುಗಳು 2 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 6 ಪದಕ ಗೆದ್ದು ಬೀಗಿದ್ದಾರೆ.
04:17 PM (IST) Oct 01
ಫೈನಲಿಸ್ಟ್ ಕಂಟೆಂಡರ್ ಆಗಲು ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಸ್ವತಃ ತಮ್ಮದೇ ಜಂಟಿಗಳ ತಂಡಕ್ಕೆ ಚಂದ್ರಪ್ರಭ ಮತ್ತು ಡಾಗ್ ಸತೀಶ್ ಮೋಸ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ಟಾಸ್ಕ್ನಲ್ಲಿ ಉದ್ದೇಶಪೂರ್ವಕವಾಗಿ ಸೋತು, ತಮ್ಮ ತಂಡದ ಸೋಲಿಗೆ ಕಾರಣರಾಗುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ.
03:50 PM (IST) Oct 01
Crimes Against Women in Karnataka Rise by 40% ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ, ವರದಕ್ಷಿಣೆ ಪ್ರಕರಣಗಳು, ಪತಿ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿರುವ ಪ್ರಮುಖ ಪ್ರಕರಣಗಳಲ್ಲಿ ಸೇರಿವೆ.
03:48 PM (IST) Oct 01
ರಿಷಭ್ ಶೆಟ್ಟಿ ಅವರ 'ಕಾಂತಾರ' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗ 'ಕಾಂತಾರ: ಅಧ್ಯಾಯ 1' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ನಲ್ಲಿ ಕೋಟಿಗಟ್ಟಲೆ ಗಳಿಸಿ, ದೇಶಾದ್ಯಂತ ಸಾವಿರಾರು ಪರದೆಗಳಲ್ಲಿ ತೆರೆಕಾಣುವ ಮೂಲಕ ಹೊಸ ದಾಖಲೆ ಬರೆಯುತ್ತಿದೆ.
02:53 PM (IST) Oct 01
Sudeep Prediction: ವೇದಿಕೆಯಲ್ಲಿ ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತುಗಳು ಕೇವಲ ಎರಡೇ ದಿನಗಳಲ್ಲಿ ಸತ್ಯವಾಗಿದ್ದು, ಮಲ್ಲಮ್ಮ ಮತ್ತು ಬಿಗ್ಬಾಸ್ ನಡುವಿನ ಸಂಭಾಷಣೆ ವೀಕ್ಷಕರ ಗಮನ ಸೆಳೆಯುತ್ತಿದೆ.
02:32 PM (IST) Oct 01
NCRB Report 2023ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ವರದಿಯ ಪ್ರಕಾರ, ದೇಶದಲ್ಲಿ 10,786 ಕೃಷಿ ವಲಯದ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
02:21 PM (IST) Oct 01
'ಹೇಳಿ ಜನರೇ' ಮೂಲಕ ಖ್ಯಾತರಾದ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯತಮ ಮುತ್ತು ವಿರುದ್ಧ ದೂರು ದಾಖಲಿಸಿದ್ದು, ಇದರ ನಡುವೆ ಮದುವೆ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದೇನು?
01:57 PM (IST) Oct 01
ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
01:37 PM (IST) Oct 01
ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಚಿನ್ನಯ್ಯನ ಆರೋಪದ ಮೇಲೆ ನಡೆದ ಎಸ್ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪತ್ತೆಯಾಗಿದ್ದ ಮೂರು ತಲೆಬುರುಡೆಗಳ ಎಫ್ಎಸ್ಎಲ್ ವರದಿ ಲಭ್ಯವಾಗಿದೆ.
01:32 PM (IST) Oct 01
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ನೂತವಾಗಿ ರಚಿಸಲಾದ 5 ನಗರ ಪಾಲಿಕೆಗಳ 368 ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವು, ಆಕ್ಷೇಪಣೆ ಸಲ್ಲಿಸುವುದಕ್ಕೆ ಅ.15ರವರೆಗೆ ಕಾಲಾವಕಾಶ ನೀಡಿದೆ.
01:13 PM (IST) Oct 01
ಸಮಾಜದ ನಿರಂತರ ಬೆಂಬಲದಿಂದಲೇ ಸಂಘಕಾರ್ಯ ಮುಂದೆ ಸಾಗುತ್ತಾ ಹೋಯಿತು. ಸಂಘದ ಕೆಲಸವು ಜನಸಾಮಾನ್ಯರ ಭಾವನೆಗಳಿಗೆ ಅನುರೂಪವಾಗಿರುವ ಕಾರಣದಿಂದ ಸಂಘಕಾರ್ಯಕ್ಕೆ ಸಮಾಜದಲ್ಲಿ ಮತ್ತೆ ಮತ್ತೆ ಸ್ವೀಕೃತಿ ಹೆಚ್ಚುತ್ತಾ ಸಾಗಿತು.
12:34 PM (IST) Oct 01
ಬ್ರಹ್ಮಂಟು ಸೀರಿಯಲ್ನಲ್ಲಿ ಬಾಡಿ ಶೇಮಿಂಗ್ಗೆ ಒಳಗಾಗುವ ದೀಪಾ, ಗುಣವೇ ಮುಖ್ಯ ಎಂದು ಸಾರಲು ದಿಶಾ ಎಂಬ ಮಾಡೆಲ್ ಆಗಿ ರೂಪಾಂತರಗೊಳ್ಳುತ್ತಾಳೆ. ಆದರೆ, ತನ್ನ ಪತಿ ಚಿರು ದಿಶಾಳ ಸೌಂದರ್ಯಕ್ಕೆ ಮಾರುಹೋದಾಗ, ದೀಪಾ ತನ್ನದೇ ಇನ್ನೊಂದು ರೂಪದ ಮೇಲೆ ಅಸೂಯೆ ಪಡುತ್ತಾಳೆ.
12:28 PM (IST) Oct 01
12:12 PM (IST) Oct 01
'ಜಸ್ಟ್ ಮ್ಯಾರೀಡ್' ಚಿತ್ರದ ಖುಷಿಯಲ್ಲಿರುವ ನಟ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ತಮ್ಮ ರಿಯಲ್ ಲೈಫ್ನಲ್ಲಿ ಇನ್ನೂ ಅವಿವಾಹಿತರಾಗಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ತಮ್ಮ ಕನಸಿನ ಕನ್ಯೆ ಬಗ್ಗೆ ಹೇಳಿದ್ದು, ಅವರ ಜೊತೆ ಒಂದು ಚಿತ್ರದಲ್ಲಾದರೂ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.