- Home
- Entertainment
- Cine World
- ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದಿಲ್ಲ: ಹೈದರಾಬಾದ್ ಈವೆಂಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದಿಲ್ಲ: ಹೈದರಾಬಾದ್ ಈವೆಂಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಹೈದರಾಬಾದ್ನಲ್ಲಿ ನಡೆದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಈವೆಂಟ್ನಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದು ವಿವಾದವಾಗಿತ್ತು. ಇದೀಗ ಆ ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಇರುತ್ತದೆ
ಈ ಕುರಿತು ರಿಷಬ್, ನಾನು ಹೆಮ್ಮೆಯ ಕನ್ನಡಿಗ. ನನ್ನ ಯೋಚನೆ, ಮಾತು, ಕೃತಿ ಎಲ್ಲಾ ಕನ್ನಡದಲ್ಲೇ ನಡೆಯುತ್ತದೆ. ಇತರ ಭಾಷೆಯವರಿಗೂ ತಮ್ಮ ಭಾಷೆಯ ಬಗ್ಗೆ ಇದೇ ರೀತಿಯ ಪ್ರೀತಿ, ಅಭಿಮಾನ ಇರುತ್ತದೆ.
ಭಾಷೆಗೆ ಅಗೌರವ ಆಗಬಾರದು
ಬೇರೆ ಭಾಷೆಗಳನ್ನು ಕಲಿತು ಮಾತಾಡೋದು ನನಗೆ ಖುಷಿ ನೀಡುತ್ತದೆ. ಆದರೆ ಇನ್ನೊಂದು ಜಾಗಕ್ಕೆ ಹೋಗಿ ಮಾತಾಡುವಾಗ ಆ ಸ್ಥಳೀಯ ಭಾಷೆಗೆ ಅಗೌರವ ಆಗಬಾರದು ಎಂಬ ಕಾಳಜಿ ನನ್ನದು.
ನನಗೆ ತಿರುಗುಬಾಣವಾಯಿತು
ಇದನ್ನು ಮನಸ್ಸಲ್ಲಿಟ್ಟುಕೊಂಡು ನಾನು ಇತ್ತೀಚೆಗೆ ಬೇರೆ ರಾಜ್ಯದಲ್ಲಿ ನನಗೆ ಗೊತ್ತಿರುವ ಕನ್ನಡದಲ್ಲೇ ಮಾತಾಡಿದೆ. ಅದು ನನಗೆ ತಿರುಗುಬಾಣವಾಯಿತು ಎಂದಿದ್ದಾರೆ.
ಅಗೌರವ ತೋರಿಸಿದಂತಾಗುತ್ತದೆ
ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ.
ಅದು ಸರಿಯಲ್ಲ
ಇಲ್ಲಿ ಈ ಭಾಷೆ ಮಾತಾಡಿಲ್ಲ ಎಂದೆಲ್ಲ ಆರೋಪಿಸುತ್ತಿದ್ದಾರೆ, ಅದು ಸರಿಯಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಇನ್ನು ‘ಕಾಂತಾರ ಚಾಪ್ಟರ್ 1’ ನಾಳೆ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

