LIVE NOW
Published : Sep 16, 2026, 07:18 AM ISTUpdated : Sep 16, 2026, 08:57 AM IST

Karnataka News Live: Belagavi - ದುರಂತದ ಬೆನ್ನಲ್ಲೇ ಸಚಿವರಿಂದ ಮಹತ್ವದ ಘೋಷಣೆ! 50 ಸಾವಿರ ನಿವೇಶನ ಯೋಜನೆ

ಸಾರಾಂಶ

ಹೊಳೆನರಸೀಪುರ: ‘ನಾನು ಕೆಪಿಎಸ್ಸಿ, ಬಿಡದಿ, ನೈಸ್‌ ವಿಷಯ ಪ್ರಸ್ತಾಪಿಸಿದಾಗ ಪ್ರಜ್ವಲ್‌ ರೇವಣ್ಣನ ಸೆಲ್‌ನಲ್ಲಿ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್‌ ಇದೆ ಎಂದು ಕತೆ ಶುರು ಮಾಡಿದ್ದಾರೆ. ಆ ಹುಡುಗನ ಹೆಸರು ಇಟ್ಕಂಡು ದೇವೇಗೌಡರ ಕುಟುಂಬದ ಬಾಯಿ ಮುಚ್ಚಿಸಲು ನಿಮ್ಮ ಕೈಯಲ್ಲಿ ಆಗುತ್ತಾ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

2 ವರ್ಷಗಳಿಂದ ಆತ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಆದರೆ 2 ವರ್ಷ ಇಲ್ಲದೆ ಇದ್ದಿದ್ದು, ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದ ಜೈಲಲ್ಲಿ ಫೋನ್ ಹಾಗೂ ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ ಎಂದರು.

08:57 AM (IST) Sep 16

Belagavi - ದುರಂತದ ಬೆನ್ನಲ್ಲೇ ಸಚಿವರಿಂದ ಮಹತ್ವದ ಘೋಷಣೆ! 50 ಸಾವಿರ ನಿವೇಶನ ಯೋಜನೆ

ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಜಿಲ್ಲೆಯಲ್ಲಿ ವಸತಿಹೀನರಿಗೆ 50 ಸಾವಿರ ನಿವೇಶನ ನೀಡುವ ಯೋಜನೆಯ ಕುರಿತು ಅವರು ಮಹತ್ವದ ಭರವಸೆ ನೀಡಿದರು.

Read Full Story

08:32 AM (IST) Sep 16

ಬಾಗಿಲಲ್ಲಿ ಯಾರೋ ತಂದಿಟ್ಟ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ

ಮುಸ್ಲಿಂ ಕುಟುಂಬವೊಂದರ ಮನೆ ಬಾಗಿಲಲ್ಲಿ ಅಪರಿಚಿತರು ಗಣೇಶನ ಮೂರ್ತಿಯನ್ನು ಇಟ್ಟು ಹೋಗಿದ್ದರು. ಈ ಮೂರ್ತಿಯನ್ನು ಕುತುಬುದ್ದೀನ್‌ ಬೆಳಗಲಿ ಅವರ ಕುಟುಂಬವು ಹಿಂದೂ ಸಂಪ್ರದಾಯದಂತೆ ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದಿದೆ.

Read Full Story

08:22 AM (IST) Sep 16

Arrogant Zodiac Signs - ಅತಿಯಾದ ಅಹಂಕಾರ ಹೊಂದಿರುವ 6 ರಾಶಿಗಳು, ನಿಮ್ಮದು ಇದೇನಾ?

ಕೆಲವು ರಾಶಿಯಲ್ಲಿ ಹುಟ್ಟಿದ ಪುರುಷರ ಗುಣಗಳೇ ಹಾಗೇ. ಹುಟ್ಟಿನಿಂದಲೇ ನಾಯಕತ್ವದ ಗುಣ, ಅಧಿಕಾರದ ದಾಹ ಮತ್ತು ಅತಿಯಾದ ಆತ್ಮವಿಶ್ವಾಸ. ತಮ್ಮ ನಿರ್ಧಾರವೇ ಅಂತಿಮ ಎನ್ನುವ ಹಠಮಾರಿ ಸ್ವಭಾವ, ಆದರೆ ಅದು ಬೇರೆಯವರಿಗೆ ಅಹಂಕಾರದಂತೆ ಕಾಣ್ತದೆ.

Read Full Story

08:18 AM (IST) Sep 16

ಏರ್‌ಪೋರ್ಟ್‌ ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಅಲಿ ಕುಟುಂಬ

ವಿಮಾನ ನಿಲ್ದಾಣದ ಸಮೀಪವಿರುವ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಜಮೀನನ್ನು ಇನಾಯತ್ ಅಲಿ ಮೂಲ್ಕಿ ಕುಟುಂಬದವರು ಹಜ್ ಭವನ ನಿರ್ಮಾಣಕ್ಕಾಗಿ ದಾನ ಮಾಡಿದ್ದಾರೆ. ಅಗತ್ಯವಿದ್ದರೆ ಇನ್ನಷ್ಟು ಜಾಗ ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.

Read Full Story

08:05 AM (IST) Sep 16

ವಂದೇಮಾತರಂ 2 ಚರಣ - ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್‌ ಅರ್ಜಿ!

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಹೊರತುಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಕಡ್ಡಾಯಗೊಳಿಸಿ 2026ರ ಸೆ.8ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್‌ಗೆ ಅರ್ಜಿ

Read Full Story

07:50 AM (IST) Sep 16

ಬನಶಂಕರಿ ಬಸ್ ನಿಲ್ದಾಣದ ಬಳಿಯ ಟ್ರಾಫಿಕ್‌ಗೆ ಮುಕ್ತಿ - ಅಧಿಕಾರಿಗಳಿಂದ ಹೊಸ ಪ್ಲಾನ್?

ಬೆಂಗಳೂರಿನ ಬನಶಂಕರಿ ಬಸ್ ಟರ್ಮಿನಲ್ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಸರ್ವೇ ನಡೆಸಲು ಸೂಚಿಸಲಾಗಿದೆ.

Read Full Story

More Trending News