ನವದೆಹಲಿ: ಮತದಾರರಪಟ್ಟಿ ಪರಿಷ್ಕರಣೆ (ಎಸ್ಐಆರ್) ನಡೆಸುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ನ್ಯಾಯಸಮ್ಮತ ಚುನಾವಣೆ ನಡೆಸುವ ಸಂವಿಧಾನದ ಆಶಯಕ್ಕೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜೀವಸೆಲೆ ಎಂದು ಬಣ್ಣಿಸಿದೆ. ಈ ಮೂಲಕ ಚುನಾವಣಾ ಆಯೋಗದ ಹಕ್ಕನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕೂಡಲೇ ಅದು ಅವರ ಕಾನೂನಾತ್ಮಕವಾಗಿ ಪೌರತ್ವವನ್ನೇನು ರದ್ದುಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

11:43 PM (IST) May 28
ಆಂಕರ್ ಸೌಮ್ಯ ರಾವ್ ಅವರು ಟಾಲಿವುಡ್ನಲ್ಲಿರುವ ಸಿಂಡಿಕೇಟ್ ಮತ್ತು ತಾರತಮ್ಯದ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ, ಟಾಲಿವುಡ್ನ ದೊಡ್ಡ ಹೀರೋ ಒಬ್ಬರ ಬಗ್ಗೆಯೂ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
11:11 PM (IST) May 28
ಕಂಗನಾ ರಣಾವತ್ ಅವರ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. 'ದಿ ಅನ್ಸೀನ್ ಹೀರೋಸ್' ಅನ್ನೋ ಟೈಟಲ್ನಡಿ, ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜವಾಬ್ದಾರಿ ಮೆರೆದ ಆಸ್ಪತ್ರೆ ಸಿಬ್ಬಂದಿಯಂತಹ ಸಾಮಾನ್ಯ ಜನರಿಗೆ ಈ ಚಿತ್ರ ಗೌರವ ಸಲ್ಲಿಸುತ್ತಿದೆ.
10:51 PM (IST) May 28
ಐಪಿಎಲ್ 2026 ಫೈನಲ್ ತಲುಪಿರುವ ಆರ್ಸಿಬಿ ತಂಡದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ, ತಂಡದ ವೇಗಿ ಭುವನೇಶ್ವರ್ ಕುಮಾರ್, ಸಂದರ್ಶನವೊಂದರಲ್ಲಿ ತಮಾಷೆಯಾಗಿ ವಿರಾಟ್ ಕೊಹ್ಲಿಯನ್ನು 'ಮುದುಕ' ಎಂದು ಕರೆದಿರುವುದು ವೈರಲ್ ಆಗಿದೆ.
10:19 PM (IST) May 28
ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ರಾಜ್ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.
10:08 PM (IST) May 28
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು..
09:44 PM (IST) May 28
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಆರನೇ ವರ್ಷವೂ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ನಿರ್ಧಾರ ಮುಂದುವರೆಸಿದ್ದು, ಅವರ ಆದಾಯದ ಪ್ರಮುಖ ಮೂಲ ಈಗ ಕಂಪನಿಯಿಂದ ಬರುವ ಲಾಭಾಂಶವಾಗಿದೆ.
09:16 PM (IST) May 28
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರ್ 'ಟಾಟಾ ಟಿಯಾಗೊ ಇವಿ'ಯನ್ನು ಹೊಸ, ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಈ ಕಾರು, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಇನ್ನಷ್ಟು ಅಗ್ಗವಾಗಲಿದೆ.
09:13 PM (IST) May 28
ಇತ್ತೀಚೆಗೆ ಬಿಡುಗಡೆಯಾದ ವೆಬ್ ಸಿರೀಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜೆನ್ ಜಿ ಯುವಜನತೆಯನ್ನು ಆಕರ್ಷಿಸುವಂತಹ ಅಡಲ್ಟ್ ಕಂಟೆಂಟ್ ಹೊಂದಿರುವ ಈ ವೆಬ್ ಸಿರೀಸ್ ಬಗ್ಗೆಯೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
08:50 PM (IST) May 28
ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್, ಮುಂಬೈ ಇಂಡಿಯನ್ಸ್ನ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್ಗೆ ನೀಡಿ, ಪ್ರತಿಯಾಗಿ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ಮುಂಬೈಗೆ ಸೇರಿಸಿಕೊಳ್ಳುವ ಮೆಗಾ ಟ್ರೇಡ್ ಸಲಹೆಯನ್ನು ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾರ್ದಿಕ್ CSKಗೆ ಬಂದರೆ ಅವರನ್ನೇ ನಾಯಕನನ್ನಾಗಿ ಮಾಡಬೇಕು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
08:25 PM (IST) May 28
08:21 PM (IST) May 28
ಸ್ಲೀಪರ್ ಟಿಕೆಟ್ ಇಟ್ಕೊಂಡು AC ಕೋಚ್ನಲ್ಲಿ ಪ್ರಯಾಣ ಮಾಡಬಹುದಾ? ಯಾವ ನಿಯಮಗಳ ಅಡಿಯಲ್ಲಿ TTE ನಿಮಗೆ AC ಸೀಟ್ ಕೊಡಬಹುದು? ರೈಲ್ವೆಯ ಈ ವಿಶೇಷ ನಿಯಮ ಮತ್ತು ದರ ಅಪ್ಗ್ರೇಡ್ ಮಾಡುವ ಸಂಪೂರ್ಣ ವಿಧಾನ ಇಲ್ಲಿದೆ.
08:06 PM (IST) May 28
07:40 PM (IST) May 28
ದುಬೈ ಸೆನ್ಸಾರ್ ವರದಿಯ ಪ್ರಕಾರ, 'ಪೆದ್ದಿ' ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್ಬಸ್ಟರ್ ಹಿಟ್ ಆಗಲಿದೆ.
07:37 PM (IST) May 28
ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಕೇವಲ 200 ರೂಪಾಯಿಗೆ 'ಜಿಯೋ ಒಟಿಟಿ ಪಾಸ್' ಎಂಬ ಹೊಸ ಆಡ್-ಆನ್ ಯೋಜನೆಯನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್ನಲ್ಲಿ 15 ಪ್ರಮುಖ ಒಟಿಟಿಗಳ ಚಂದಾದಾರಿಕೆ, 30GB ಡೇಟಾ ಹಾಗೂ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯವಿದೆ.
07:34 PM (IST) May 28
06:58 PM (IST) May 28
ಮೊಮ್ಮಗಳು ತಂದುಕೊಟ್ಟ ಪಿಜ್ಜಾವನ್ನು 92 ವರ್ಷದ ಅಜ್ಜಿಯೊಬ್ಬರು ಖುಷಿಯಿಂದ ತಿನ್ನುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಜೊತೆಗೆ ತಂಪು ಪಾನೀಯವನ್ನೂ ಕೇಳಿ ಪಡೆದ ಈ ಅಜ್ಜಿಯ ಮುದ್ದುತನಕ್ಕೆ ನೆಟ್ಟಿಗರು ಮನಸೋತಿದ್ದಾರೆ.
06:36 PM (IST) May 28
06:32 PM (IST) May 28
ಭೋಪಾಲ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಾಡೆಲ್ ತ್ವಿಶಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಆಕೆಯ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
06:14 PM (IST) May 28
ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.
05:43 PM (IST) May 28
ಬಕ್ರೀದ್ ಹಬ್ಬ ಹತ್ರ ಬಂತು ಅಂದ್ರೆ ಸಾಕು, ಮಾರುಕಟ್ಟೆಗಳಲ್ಲಿ ಸಂಭ್ರಮ ಜೋರಾಗಿರುತ್ತೆ. ಗೋಹತ್ಯೆ ನಿಷೇಧ ಮತ್ತು ಗೋರಕ್ಷಕರ ಕಣ್ಗಾವಲಿನಿಂದಾಗಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.
05:30 PM (IST) May 28
05:20 PM (IST) May 28
ಮಾಹಿತಿ ಮುಚ್ಚಿಟ್ಟ ಆರೋಪದ ಮೇಲೆ ಸಿಂಗಾಪುರ ನ್ಯಾಯಾಲಯವು ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಒಂದು ಕಾಲದಲ್ಲಿ ಭಾರತದ ನಂ.1 ಸ್ಟಾರ್ಟಪ್ ಆಗಿದ್ದ ಬೈಜೂಸ್ನ ಉತ್ತುಂಗದ ಏರಿಕೆ, ಪತನ, ಬಿಸಿಸಿಐ ಜೊತೆಗಿನ ವಿವಾದ ಮತ್ತು ದಿವಾಳಿತನದ ಹಾದಿಯನ್ನು ವಿವರಿಸುತ್ತದೆ.
05:00 PM (IST) May 28
IPL 2026 Qualifier 2 Rain Rules: 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದ್ರೆ ಫೈನಲ್ಗೇರೋದು ಯಾರು? ಮೀಸಲು ದಿನ ಇದೆಯಾ? ನೋಡೋಣ ಬನ್ನಿ.
04:59 PM (IST) May 28
04:57 PM (IST) May 28
ಸೌತ್ ಸೂಪರ್ಸ್ಟಾರ್ ರಜನಿಕಾಂತ್ ಅವರ ಮೋಸ್ಟ್ ಅವೇಟೆಡ್ ಸಿನಿಮಾ 'ಜೈಲರ್ 2' ಬಗ್ಗೆ ಒಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಒಂದು ಪವರ್ಫುಲ್ ಅತಿಥಿ ಪಾತ್ರಕ್ಕಾಗಿ ಚಿತ್ರತಂಡ ಬಾಲಿವುಡ್ ಸ್ಟಾರ್..
04:38 PM (IST) May 28
ನಟಿ ಶಮಿತಾ ಶೆಟ್ಟಿ ಅವರಿಗೆ 47 ವರ್ಷ. ಮದುವೆ, ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇಷ್ಟೊತ್ತಿಗೆ ಮಕ್ಕಳೇ ದೊಡ್ಡವರಾಗ್ತಿದ್ರು' ಅಂದವನಿಗೆ ಶಮಿತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.
04:29 PM (IST) May 28
04:16 PM (IST) May 28
ರಾಪರ್ ಮತ್ತು ಸಿಂಗರ್ ಯೋ ಯೋ ಹನಿ ಸಿಂಗ್ ತಮ್ಮ ಕೆರಿಯರ್ನ ಅತ್ಯಂತ ಕಷ್ಟದ ದಿನಗಳ ಬಗ್ಗೆ ದೊಡ್ಡ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಯಶಸ್ಸಿನ ಶಿಖರದಲ್ಲಿದ್ದಾಗ ತಾನು ಡ್ರಗ್ಸ್, ಅಹಂಕಾರ ಮತ್ತು ಮಾನಸಿಕ..
04:12 PM (IST) May 28
03:42 PM (IST) May 28
ವಿಪ್ರೋದ ಗಾಜಿಯಾಬಾದ್ ಕಚೇರಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಪಾಲಿಸದ ಆರೋಪದ ಮೇಲೆ ಕಾರ್ಮಿಕ ಇಲಾಖೆ ಸಲ್ಲಿಸಿದ ದೂರಿನಿಂದ ಈ ಪ್ರಕರಣ ದಾಖಲಾಗಿತ್ತು.
02:50 PM (IST) May 28
02:44 PM (IST) May 28
01:22 PM (IST) May 28
12:20 PM (IST) May 28
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೇ.28ರಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರ(ಮೇ.28)ವಾದ ಇಂದಿನ ಗೋಲ್ಡ್ ರೇಟ್ ಎಷ್ಟು ನೋಡೋಣ ಬನ್ನಿ.
12:19 PM (IST) May 28
ಸಿಎ ಆಗಬೇಕಿದ್ದ ಹುಡುಗಿ ಇವತ್ತು ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿರುವುದು ಒಂದು ರೋಚಕ ಸಿನಿಮಾದಂತೆಯೇ ಭಾಸವಾಗುತ್ತದೆ. ಸೋಲು-ಗೆಲುವು, ವಿವಾದಗಳ ನಡುವೆಯೂ ಫೀನಿಕ್ಸ್ನಂತೆ ಎದ್ದು ಬಂದ ಈ ತಾರೆ ಕೋಟ್ಯಂತರ ಯುವತಿಯರಿಗೆ ಸ್ಫೂರ್ತಿ!
12:07 PM (IST) May 28
11:19 AM (IST) May 28
ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿ ಎನಿಸಿಕೊಂಡಿರುವ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಈ ಯೋಜನೆ ಸಾಕಾರಗೊಂಡರೆ ಐದು ಜಿಲ್ಲೆಗಳಿಗೆ ರೈಲ್ವೇ ನೇರ ಸಂಪರ್ಕ ಸಿಗಲಿದೆ. ನೂತನ ರೈಲ್ವೇ ಮಾರ್ಗದ ಬಗ್ಗೆ ಕುತೂಹಲ ಮನೆ ಮಾಡಿದೆ.
10:11 AM (IST) May 28
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸನ್ರೈಸರ್ಸ್ ಹೈದರಾಬಾದ್ ಅಭಿಯಾನ ಎಲಿಮಿನೇಟರ್ ಪಂದ್ಯದಲ್ಲಿಯೇ ಕೊನೆಯಾಗಿದೆ. ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಆರೆಂಜ್ ಆರ್ಮಿಗೆ ಬಿಸಿಸಿಐನಿಂದ ಸಿಗುವ ನಗದು ಬಹುಮಾನ ಎಷ್ಟು ಎಂದು ತಿಳಿಯೋಣ.
08:58 AM (IST) May 28
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎಲಿಮಿನೇಟರ್ ಪಂದ್ಯ ಮುಕ್ತಾಯವಾಗಿದ್ದು, ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಕ್ವಾಲಿಫೈಯರ್-2 ಮ್ಯಾಚ್ ಎಲ್ಲಿ? ಯಾವಾಗ? ನೇರ ಪ್ರಸಾರ ಎಲ್ಲಿ? ಎಷ್ಟು ಗಂಟೆಗೆ ಆರಂಭ ನೋಡೋಣ ಬನ್ನಿ.
08:54 AM (IST) May 28