ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಮಂದಿರದಲ್ಲಿ ಪ್ರತಿ ದಿನ 6- 8 ಲಕ್ಷ ರು. ಹಣವನ್ನು ಆರೋಪಿಗಳು ವಂಚಿಸುತ್ತಿದ್ದರು ಎಂಬ ಸಂಶಯ ವ್ಯಕ್ತವಾಗಿದೆ. ಕಾರಣ ಹಗರಣ ತನಿಖೆ ಬರುವ ಮುನ್ನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಾತೆಗೆ ಅಂದಾಜು ಸರಾಸರಿ 16 ರಿಂದ 18 ಲಕ್ಷ ರು. ಜಮೆಯಾಗುತ್ತಿತ್ತು. ಆದರೆ ಇದೀಗ ಅಕ್ರಮ ಬಯಲಾಗಿ, ಆರೋಪಿಗಳ ಬಂಧನ ಬಳಿಕ ಆ ಪ್ರಮಾಣ 24- 26 ಲಕ್ಷ ರು.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ನಿತ್ಯ 6 ರಿಂದ 8 ಲಕ್ಷ ರು. ವಂಚನೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾದ ಕಾರಣವೂ ದೇಣಿಗೆ ಹಣ ಏರಿಕೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
06:57 AM (IST) Jul 06
05:27 AM (IST) Jul 06