LIVE NOW
Published : Jul 06, 2026, 04:57 AM ISTUpdated : Jul 06, 2026, 06:57 AM IST

India Latest News Live: Mumbai Rain - ಮುಂಬೈನಲ್ಲಿ ಕಟ್ಟಡ ಕುಸಿದು ಐವರು ಮಕ್ಕಳು ಸೇರಿ 6 ಮಂದಿ ದುರ್ಮರಣ

ಸಾರಾಂಶ

 

ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಮಂದಿರದಲ್ಲಿ ಪ್ರತಿ ದಿನ 6- 8 ಲಕ್ಷ ರು. ಹಣವನ್ನು ಆರೋಪಿಗಳು ವಂಚಿಸುತ್ತಿದ್ದರು ಎಂಬ ಸಂಶಯ ವ್ಯಕ್ತವಾಗಿದೆ. ಕಾರಣ ಹಗರಣ ತನಿಖೆ ಬರುವ ಮುನ್ನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಾತೆಗೆ ಅಂದಾಜು ಸರಾಸರಿ 16 ರಿಂದ 18 ಲಕ್ಷ ರು. ಜಮೆಯಾಗುತ್ತಿತ್ತು. ಆದರೆ ಇದೀಗ ಅಕ್ರಮ ಬಯಲಾಗಿ, ಆರೋಪಿಗಳ ಬಂಧನ ಬಳಿಕ ಆ ಪ್ರಮಾಣ 24- 26 ಲಕ್ಷ ರು.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ನಿತ್ಯ 6 ರಿಂದ 8 ಲಕ್ಷ ರು. ವಂಚನೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾದ ಕಾರಣವೂ ದೇಣಿಗೆ ಹಣ ಏರಿಕೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

06:57 AM (IST) Jul 06

Mumbai Rain - ಮುಂಬೈನಲ್ಲಿ ಕಟ್ಟಡ ಕುಸಿದು ಐವರು ಮಕ್ಕಳು ಸೇರಿ 6 ಮಂದಿ ದುರ್ಮರಣ

ದೇಶಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂಬೈನಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಮನೆ ಕುಸಿದು ಮತ್ತು ಮರ ಬಿದ್ದು 7 ಜನರು ಸಾವನ್ನಪ್ಪಿದ್ದಾರೆ. ಈ ಮಳೆಯಿಂದಾಗಿ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆದಿದೆ.
Read Full Story

05:27 AM (IST) Jul 06

West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು

ಪಶ್ಚಿಮ ಬಂಗಾಳ ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಹೊಸ ಕಠಿಣ ಷರತ್ತುಗಳನ್ನು ವಿಧಿಸಿದೆ. ಎರಡಕ್ಕಿಂತ ಹೆಚ್ಚು ಮದುವೆಯಾದವರು, ಮಕ್ಕಳಿಗೆ ಲಸಿಕೆ ಹಾಕಿಸದವರು ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಶಾಲೆ ಬಿಟ್ಟವರು ಇನ್ನು ಮುಂದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಅರ್ಹರಿಗೆ ಮಾತ್ರ ಯೋಜನೆಗಳು ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
Read Full Story

More Trending News