Published : Jul 06, 2026, 04:57 AM ISTUpdated : Jul 06, 2026, 11:08 PM IST

India Latest News Live: ರಜನಿಕಾಂತ್-ಚಿರಂಜೀವಿ ಮಧ್ಯೆ 'ನಾನಾ ನೀನಾ' ಮಹಾ ಫೈಟ್.. ದಸರಾ ವೇಳೆ 'ಬೆಳ್ಳಿತೆರೆ ಕಾಳಗ'ಕ್ಕೆ ಸಿದ್ಧತೆ!

ಸಾರಾಂಶ

 

ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಮಂದಿರದಲ್ಲಿ ಪ್ರತಿ ದಿನ 6- 8 ಲಕ್ಷ ರು. ಹಣವನ್ನು ಆರೋಪಿಗಳು ವಂಚಿಸುತ್ತಿದ್ದರು ಎಂಬ ಸಂಶಯ ವ್ಯಕ್ತವಾಗಿದೆ. ಕಾರಣ ಹಗರಣ ತನಿಖೆ ಬರುವ ಮುನ್ನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಾತೆಗೆ ಅಂದಾಜು ಸರಾಸರಿ 16 ರಿಂದ 18 ಲಕ್ಷ ರು. ಜಮೆಯಾಗುತ್ತಿತ್ತು. ಆದರೆ ಇದೀಗ ಅಕ್ರಮ ಬಯಲಾಗಿ, ಆರೋಪಿಗಳ ಬಂಧನ ಬಳಿಕ ಆ ಪ್ರಮಾಣ 24- 26 ಲಕ್ಷ ರು.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ನಿತ್ಯ 6 ರಿಂದ 8 ಲಕ್ಷ ರು. ವಂಚನೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾದ ಕಾರಣವೂ ದೇಣಿಗೆ ಹಣ ಏರಿಕೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

11:08 PM (IST) Jul 06

ರಜನಿಕಾಂತ್-ಚಿರಂಜೀವಿ ಮಧ್ಯೆ 'ನಾನಾ ನೀನಾ' ಮಹಾ ಫೈಟ್.. ದಸರಾ ವೇಳೆ 'ಬೆಳ್ಳಿತೆರೆ ಕಾಳಗ'ಕ್ಕೆ ಸಿದ್ಧತೆ!

ನಟ ಚಿರಂಜೀವಿ ಹಾಗು ರಜಿನಿಕಾಂತ್ ಈ ಇಬ್ಬರ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲಾಶ್ ಆಗಿರೋ ಉದಾಹರಣೆಯೇ ಇಲ್ಲ. ಆದ್ರೆ ಈ ಭಾರಿ ಅಂತದ್ದೊಂದು ಕದನ ಕಣ ಏರ್ಪಡುತ್ತಿದೆ. ಚಿರಂಜೀವಿಯ ವಿಶ್ವಂಭರ ಹಾಗು ರಜನಿಕಾಂತ್​ರ ಜೈಲರ್​-2 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.

Read Full Story

10:44 PM (IST) Jul 06

'ಥ್ಯಾಂಕ್ಯೂ ಟೈಗರ್.. ನೀವು ಕೊಟ್ಟ ಗರ್ಜನೆಗೆ ಧನ್ಯವಾದಗಳು' - ಅಖಿಲ್ ಭಾವುಕ ಪೋಸ್ಟ್

ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಜೂ.ಎನ್‌ಟಿಆರ್ ಮತ್ತು ಅಖಿಲ್ ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.

Read Full Story

09:28 PM (IST) Jul 06

Saumya Tandon - ಸ್ಕರ್ಟ್-ಟಾಪ್‌ನಲ್ಲಿ ರೆಹಮಾನ್ ಡಕಾಯಿತ್ ಪತ್ನಿ - ಫೋಟೋಸ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

'ಧುರಂಧರ್' ಮತ್ತು 'ಭಾಭಿ ಜಿ ಘರ್ ಪರ್ ಹೈ' ಧಾರಾವಾಹಿಯಲ್ಲಿನ ಪಾತ್ರಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿರುವ ನಟಿ ಸೌಮ್ಯ ಟಂಡನ್, ಇತ್ತೀಚೆಗೆ ಸ್ಕರ್ಟ್-ಟಾಪ್‌ನಲ್ಲಿ ತಮ್ಮ ಯಂಗ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story

08:38 PM (IST) Jul 06

ಎಂ.ಎಸ್​.ಧೋನಿ ಹುಟ್ಟುಹಬ್ಬ ನಾಳೆ - ಎಂದಿಗೂ ಮುರಿಯಲಾಗದ IPL ದಾಖಲೆಗಳ ಸರದಾರ- ಲಿಸ್ಟ್​ ಇಲ್ಲಿದೆ

ಜುಲೈ 7 ರಂದು ಎಂ.ಎಸ್ ಧೋನಿ ಅವರ ಹುಟ್ಟುಹಬ್ಬದ ಸಂಭ್ರಮ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮತ್ತು ವಿಕೆಟ್ ಕೀಪರ್ ಆಗಿ ಅವರು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.  ವಯಸ್ಸಿನ ಕಾರಣದಿಂದ ಮುಂಬರುವ ಐಪಿಎಲ್ 2024 ಅವರ ಕೊನೆಯ ಸೀಸನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

Read Full Story

08:22 PM (IST) Jul 06

ಮದ್ಯ ಸೇವಿಸಿ ಕಾರು ಚಾಲನೆ - 17 ಕಿ.ಮೀ ಅಟ್ಟಿಸಿಕೊಂಡು ಖ್ಯಾತ ಯುಟ್ಯೂಬರ್​ ಧನ್ಯಾಳ ಹಿಡಿದ ಪೊಲೀಸರು

'ಸ್ಪಾರ್ಟಾದ ಹೆಲೆನ್' ಖ್ಯಾತಿಯ ಯುಟ್ಯೂಬರ್ ಧನ್ಯಾ ಎಸ್‌.ಆರ್ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಪೊಲೀಸರ ವಶವಾಗಿದ್ದಾರೆ. 17 ಕಿಲೋಮೀಟರ್‌ಗಳ ಚೇಸ್ ನಂತರ ಅವರನ್ನು ತಡೆದಾಗ, ಅವರ ಆಲ್ಕೋಹಾಲ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿತ್ತು.

Read Full Story

07:46 PM (IST) Jul 06

ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಆದಿತ್ಯ ಧರ್ ಭಾವುಕ ಪತ್ರ - 'ಧುರಂಧರ್' ನಟನೆಯನ್ನು ಆಕಾಶಕ್ಕೇರಿಸಿದ ನಿರ್ದೇಶಕ

Ranveer Singh Performance: ನಟ ರಣವೀರ್ ಸಿಂಗ್ ಅವರ ಹುಟ್ಟುಹಬ್ಬದ ದಿನ, 'ಧುರಂಧರ್' ಚಿತ್ರದ ನಿರ್ದೇಶಕ ಆದಿತ್ಯ ಧರ್ ಒಂದು ಭಾವುಕ ಸೋಶಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ.

Read Full Story

06:41 PM (IST) Jul 06

ಪೆಹಲ್ಗಾಂ ಸಂತ್ರಸ್ತನ ಪುತ್ರಿ ಹಾಕಿದ ವಿಡಿಯೋಗೆ ಕೆಟ್ಟ ಕಮೆಂಟ್, UAPA ಅಡಿಯಲ್ಲಿ ಯುವಕನ ಬಂಧನ

ಪೆಹಲ್ಗಾಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಯೊಬ್ಬರ ಪುತ್ರಿ ಇತ್ತೀಚೆಗೆ ದುರಂತ ನೆನೆದು ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಉಗ್ರರ ದಾಳಿ ಸಮರ್ಥಿಸಿ ಕಮೆಂಟ್ ಮಾಡಿದ್ದ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ.

 

Read Full Story

06:15 PM (IST) Jul 06

ಇಂಗ್ಲೆಂಡ್ ಎದುರು ಈ ಆಟಗಾರನನ್ನು ಕೈಬಿಟ್ಟಿದ್ದು 'ಹಿಮಾಲಯನ್ ಬ್ಲಂಡರ್'..! ಕೋಚ್ ಗೌತಮ್ ಗಂಭೀರ್ ವಿರುದ್ಧ ಕೈಫ್ ಕಿಡಿ!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಕಳುಹಿಸಿದ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನು ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು 'ಹಿಮಾಲಯದಷ್ಟು ದೊಡ್ಡ ಪ್ರಮಾದ' ಎಂದಿರುವ ಅವರು, ಬಲಗೈ-ಎಡಗೈ ಆರಂಭಿಕ ಜೋಡಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.

Read Full Story

06:10 PM (IST) Jul 06

ಜೈಲು ಶಿಕ್ಷೆಯಿಂದ ಬಚಾವ್‌ ಆಗುವ ಹಾದಿಯಲ್ಲಿ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌!

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು, ಅರಣ್ಯ ಇಲಾಖೆಯ 'ಕ್ಷಮಾದಾನ ಯೋಜನೆ' ಅಡಿಯಲ್ಲಿ ತಮ್ಮ ಬಳಿ 10 ಆನೆ ದಂತಗಳು ಮತ್ತು ದಂತದಿಂದ ಮಾಡಿದ 13 ವಿಗ್ರಹಗಳಿವೆ ಎಂದು ಸ್ವಯಂಪ್ರೇರಿತರಾಗಿ ಘೋಷಿಸಿಕೊಂಡಿದ್ದಾರೆ. 

Read Full Story

06:00 PM (IST) Jul 06

Train Timing - ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್ - ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!

Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.

Read Full Story

05:58 PM (IST) Jul 06

ರಾಮ ಮಂದಿರದಲ್ಲಿ ಕಳ್ಳತನ ಘಟನೆ - ಭಾಗಿಯಾದವರ ಬಗ್ಗೆ ಶಾಕಿಂಗ್​ ಮಾಹಿತಿ ಬಾಯ್ದಿಟ್ಟ ಆರೋಪಿ

ಅಯೋಧ್ಯೆಯ ರಾಮಮಂದಿರ ದರೋಡೆ ಪ್ರಕರಣದಲ್ಲಿ, 15 ಸಾವಿರ ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಈತ, ಗ್ಯಾಂಗ್‌ನ ರಹಸ್ಯ ಸಭೆಗಳು ಮತ್ತು ಹಣದ ಬಳಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪೊಲೀಸರು ಸಂಪೂರ್ಣ ಜಾಲವನ್ನು ಭೇದಿಸುತ್ತಿದ್ದಾರೆ.
Read Full Story

05:28 PM (IST) Jul 06

ಆಸ್ಟ್ರೇಲಿಯಾ ಬಳಿಯಿದೆ 24 ICC ಟ್ರೋಫಿ, ಟೀಂ ಇಂಡಿಯಾ ಎಷ್ಟು ಟ್ರೋಫಿ ಗೆದ್ದಿದೆ? ಅತಿಹೆಚ್ಚು ಐಸಿಸಿ ಟ್ರೋಫಿ ಗೆದ್ದ ಟಾಪ್-5 ದೇಶಗಳಿವು

ಬೆಂಗಳೂರು: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಆಸೀಸ್‌ ಐಸಿಸಿ ಟೂರ್ನಿಯಲ್ಲಿ 24ನೇ ಟ್ರೋಫಿ. ಇನ್ನು ಭಾರತ ಎಷ್ಟು ಐಸಿಸಿ ಟ್ರೋಫಿ ಗೆದ್ದಿದೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

05:28 PM (IST) Jul 06

ಪ್ರೀತಿಗೆ ತಿರುಗಿದ ಸಹೋದರಿಯರ ಸ್ನೇಹ - 8 ಲಕ್ಷ ಸಾಲ ಮಾಡಿ ಲಿಂಗ ಬದಲಿಸಿ ಮದುವೆ

ಬಿಹಾರದ ಜಮುಯಿ ಜಿಲ್ಲೆಯಲ್ಲಿ, ಶಿಕ್ಷಕಿ ನಯನಶ್ರೀ ಮತ್ತು ಆಕೆಯ ಸೋದರಸಂಬಂಧಿ ರಾಖಿ ಪ್ರೀತಿಸುತ್ತಿದ್ದರು. ಸಮಾಜವನ್ನು ಎದುರಿಸಲು, ರಾಖಿ 8 ಲಕ್ಷ ರೂ. ಖರ್ಚು ಮಾಡಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಾಹುಲ್ ಆದರು. ನಂತರ, ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
Read Full Story

04:42 PM (IST) Jul 06

ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಮೇಲ್ಮಧ್ಯಮ ಆದಾಯದ ಗಡಿ ದಾಟಿದ ಭಾರತದ 5 ರಾಜ್ಯಗಳು, ಖುಷಿಪಟ್ಟ ಕರ್ನಾಟಕ

ಭಾರತವು 'ಕೆಳ-ಮಧ್ಯಮ ಆದಾಯ'ದ ದೇಶವಾಗಿದ್ದರೂ, ದೆಹಲಿ ಮತ್ತು ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವಿಶ್ವಬ್ಯಾಂಕ್‌ನ 'ಮೇಲ್ಮಧ್ಯಮ ಆದಾಯ'ದ ಮಟ್ಟವನ್ನು ದಾಟಿವೆ. ಆದರೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅತ್ಯಂತ ಹಿಂದುಳಿದಿದ್ದು, ದೇಶದ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.

Read Full Story

03:59 PM (IST) Jul 06

NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.

Read Full Story

03:56 PM (IST) Jul 06

ಅಂಡರ್‌ 19 ಕ್ರಿಕೆಟ್‌ ಟೀಮ್‌ ವಾಲ್‌ ಆದ ರಾಹುಲ್ ದ್ರಾವಿಡ್‌ ಪುತ್ರ, 87 ರನ್‌ಗಳ ಕ್ಲಾಸ್‌ ಇನ್ನಿಂಗ್ಸ್‌ ಆಡಿದ ಅನ್ವಯ್‌!

ಟೀಂ ಇಂಡಿಯಾದ 'ದಿ ವಾಲ್' ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ಶ್ರೀಲಂಕಾ ಅಂಡರ್-19 ವಿರುದ್ಧದ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಅನ್ವಯ್, ಭರ್ಜರಿ 87 ರನ್ ಗಳಿಸಿ ತಂಡವನ್ನು ಪಾರುಮಾಡಿದರು. ಇದು ಅವರ ಅಂಡರ್-19 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ.
Read Full Story

03:07 PM (IST) Jul 06

ಹೊಸೂರಿನಲ್ಲಿ ಬೃಹತ್ 1.6 ಲಕ್ಷ 'ಏರೋಸ್ಪೇಸ್-ಡಿಫೆನ್ಸ್' ಘಟಕ ನಿರ್ಮಾಣಕ್ಕೆ ಬೆಂಗಳೂರಿನ ಹಿಕಲ್ ಟೆಕ್ನಾಲಜೀಸ್ ಚಾಲನೆ!

ಬೆಂಗಳೂರು ಮೂಲದ 'ಹಿಕಲ್ ಟೆಕ್ನಾಲಜೀಸ್' ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಉಪಕರಣಗಳನ್ನು ಪೂರೈಸಲು ತಮಿಳುನಾಡಿನ ಹೊಸೂರಿನಲ್ಲಿ ಬೃಹತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಈ ಅತ್ಯಾಧುನಿಕ ಘಟಕವು ಜಾಗತಿಕ ಪೂರೈಕಾ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
Read Full Story

02:11 PM (IST) Jul 06

ಟಾಟಾ ಸಾಮ್ರಾಜ್ಯದಲ್ಲಿ ದಿಡೀರ್ ಬದಲಾವಣೆ, ವೆಸ್ಟ್‌ಸೈಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಹೆಡ್ ಆಗಿ ಮಾಯಾ ಎಂಟ್ರಿ!

ಮಾಯಾ ಟಾಟಾ, ಟ್ರೆಂಟ್ ಲಿಮಿಟೆಡ್‌ನ 'ವೆಸ್ಟ್‌ಸೈಡ್' ಬ್ರ್ಯಾಂಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಟಾಟಾ ಡಿಜಿಟಲ್‌ನಲ್ಲಿನ ತಮ್ಮ ಅನುಭವವನ್ನು ಬಳಸಿಕೊಂಡು, ಅವರು ವೆಸ್ಟ್‌ಸೈಡ್‌ನ ಆನ್‌ಲೈನ್ ಮತ್ತು ಅಂತರರಾಷ್ಟ್ರೀಯ ಇ-ಕಾಮರ್ಸ್ ವಿಸ್ತರಣೆಯನ್ನು ಮುನ್ನಡೆಸಲಿದ್ದಾರೆ.

Read Full Story

01:50 PM (IST) Jul 06

ಕ್ರಿಕೆಟ್ ಬಿಟ್ಟು ಟ್ರಕ್ ಡ್ರೈವರ್ ಆಗಲು ಹೊರಟಿದ್ದವನು ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಆಗಿ ಬಿಟ್ಟ!

ಅಶಿಸ್ತಿನ ಕಾರಣಕ್ಕೆ ತಂಡದಿಂದ ಹೊರಬಿದ್ದು, ಕುಟುಂಬದ ಜವಾಬ್ದಾರಿಗಾಗಿ ಟ್ರಕ್ ಡ್ರೈವರ್ ಆಗಲು ನಿರ್ಧರಿಸಿದ್ದ ಯುವ ಕ್ರಿಕೆಟಿಗನಿಗೆ ಸೌರವ್ ಗಂಗೂಲಿ ಆಸರೆಯಾದರು. ಆಯ್ಕೆ ಸಮಿತಿಯ ವಿರೋಧದ ನಡುವೆಯೂ ತಂಡಕ್ಕೆ ಆಯ್ಕೆಯಾದ ಆ ಆಫ್ ಸ್ಪಿನ್ನರ್, 2001ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ಸಹಿತ 32 ವಿಕೆಟ್ ಪಡೆದು ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
Read Full Story

01:36 PM (IST) Jul 06

15 ರೂ. ಆರ್ಡರ್​- 500 ರೂ. ಟಿಪ್ಸ್​ - ಡೆಲಿವರಿ ಬಾಯ್ ಭಾವನಾತ್ಮಕ​ ವಿಡಿಯೋಗೆ ಕೋಟಿಗೂ ಅಧಿಕ ವ್ಯೂವ್ಸ್​

ಕುರುಕ್ಷೇತ್ರದಲ್ಲಿ ಬ್ಲಿಂಕಿಟ್ ಡೆಲಿವರಿ ಯುವಕನೊಬ್ಬ ₹15ರ ವಸ್ತುವಿಗೆ ₹500 ಟಿಪ್ಸ್ ಪಡೆದಿದ್ದಾನೆ. ಈ ಅನಿರೀಕ್ಷಿತ ಉದಾರತೆಗೆ ಕೃತಜ್ಞತೆ ಸಲ್ಲಿಸಿ ಆತ ಹಂಚಿಕೊಂಡ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಹೃದಯ ಗೆದ್ದಿದೆ.
Read Full Story

01:14 PM (IST) Jul 06

ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು - ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ

ಬೆಂಗಳೂರು ಮೂಲದ ಮೈಕ್ರೋಸಾಫ್ಟ್ ತಂತ್ರಜ್ಞ ಮನು ಅಗರ್ವಾಲ್, ತಮ್ಮ ಯಶಸ್ಸಿನ ಹಿಂದಿನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ. ಕಾಲೇಜು ಶುಲ್ಕಕ್ಕಾಗಿ ತಮ್ಮ ತಾಯಿ ಚಿನ್ನದ ಬಳೆಗಳನ್ನು ಮಾರಿದ್ದನ್ನು ನೆನಪಿಸಿಕೊಂಡ ಅವರು, ಇಂದು 1.9 ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದು, ತಮ್ಮ ಕುಟುಂಬದ ತ್ಯಾಗವೇ ಯಶಸ್ಸಿಗೆ ಕಾರಣ ಎಂದಿದ್ದಾರೆ.
Read Full Story

12:54 PM (IST) Jul 06

ಶಿವನ ದೇಗುಲದ ಆವರಣ ಆಗೆಯುವಾಗ ಅಚ್ಚರಿ.. ಕೇಳಿಬಂದ ವಿಚಿತ್ರ ಶಬ್ಧದ ಹಿಂದಿತ್ತು ರಹಸ್ಯಗಳ ವಿಸ್ಮಯ

ಅದು 300 ವರ್ಷಗಳ ಹಳೆಯ ಪ್ರಸಿದ್ಧ ದೇಗುಲ. ಆ ಶಿವನ ಆಲಯದಲ್ಲಿ ಉತ್ಖನ ನಡೆಯುತ್ತಿತ್ತು. ಜೆಸಿಬಿಯಿಂದ ಆವರಣ ಅಗೆಯುತ್ತಿದ್ದಾಗ ವಿಚಿತ್ರ ಧ್ವನಿಯೊಂದು ಕೇಳಿಬಂದಿತ್ತು. ಜಾಗೃತರಾದ ಸ್ಥಳೀಯರು, ಪರಿಶೀಲನೆ ನಡೆಸಿದಾಗ ಆ ಜಾಗ ದೊಡ್ಡ ರಹಸ್ಯಗಳನ್ನೇ ಹೊದ್ದು ನಿಂತಿತ್ತು.

Read Full Story

12:44 PM (IST) Jul 06

Jio ಹಣೆಯಲ್ಲಿ ಬೆವರು ತರಿಸಿದ ಕೇವಲ 225 ರೂ. ಪ್ಲಾನ್; ಕಡಿಮೆ ಬೆಲೆಯಲ್ಲಿ ಬಂಪರ್ ಆಫರ್

ಟೆಲಿಕಾಂ ಕಂಪನಿಯೊಂದು 225 ರೂಪಾಯಿಗೆ ಬಂಪರ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 30 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು ಅನಿಯಮಿತ ಕರೆಗಳು ಲಭ್ಯವಿದ್ದು, ಇದು ಜಿಯೋ ಮತ್ತು ಏರ್‌ಟೆಲ್‌ನ ದುಬಾರಿ ಪ್ಲಾನ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

Read Full Story

12:37 PM (IST) Jul 06

ಮದುವೆಯಾಗದೇ ಚುಂಬಿಸಿದ್ದಕ್ಕಾಗಿ ಜೋಡಿಗೆ 21 ಛಡಿಯೇಟಿನ ಕ್ರೂರ ಶಿಕ್ಷೆ- ನಾಲ್ಕು ತಿಂಗಳು ಜೈಲು

ಇಂಡೋನೇಷ್ಯಾದಲ್ಲಿ, ಟಿಕ್​ಟಾಕ್​ ಲೈವ್ ವಿಡಿಯೋದಲ್ಲಿ ಚುಂಬಿಸಿದ್ದಕ್ಕಾಗಿ ಅವಿವಾಹಿತ ಜೋಡಿಯೊಂದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಇಸ್ಲಾಮಿಕ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರಿಗೆ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದ್ದು, ಈ ಘಟನೆ ಮಾನವ ಹಕ್ಕುಗಳ ಚರ್ಚೆಗೆ ಕಾರಣವಾಗಿದೆ.
Read Full Story

12:24 PM (IST) Jul 06

Trisha Krishnan - ತ್ರಿಷಾ ಕೃಷ್ಣನ್ ನೋಡಲು ಕಾದು ಕುಳಿತಿರೋ ಫ್ಯಾನ್ಸ್‌ಗೆ ಗುಡ್ ನ್ಯೂಸ್.. ಅಕ್ಟೋಬರ್ 16ಕ್ಕೆ ಸಿಗ್ತೀನಿ ಎಂದ ನಟಿ!

ನಟಿ ತ್ರಿಷಾ ಅವರು ಸದ್ಯಕ್ಕೆ ಭಾರೀ ಟ್ರೆಂಡಿಂಗ್‌ನಲ್ಲಿ ಇರೋ ನಟಿ. ಕಾರಣ, ಸಿನಿಮಾ ನಟಿಯಾಗಿ ಮಾತ್ರವಲ್ಲ ವೈಯಕ್ತಿಕ ವಿಷಯದ ಮೂಲಕವೂ ಕೂಡ ನಟಿ ತ್ರಿಷಾ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಈಗ ಮತ್ತೊಂದು ಹೊಸ ಸುದ್ದಿ ಬಂದಿದೆ.. 

Read Full Story

12:03 PM (IST) Jul 06

ಅಯ್ಯೋ, ಇದೆಂಥಾ ದುರಂತ? ಕ್ರಿಕೆಟ್ ಆಡುತ್ತಿರುವಾಗಲೇ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಲಂಕಾ ಕ್ರಿಕೆಟಿಗ! ವಿಡಿಯೋ ವೈರಲ್

ಶ್ರೀಲಂಕಾದ ಬೆರುವಾಲಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ, 46 ವರ್ಷದ ಆಟಗಾರ ಝುಲ್ಫಿಕರ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯು ಪಂದ್ಯದ ನೇರ ಪ್ರಸಾರದ ವೇಳೆ ನಡೆದಿದ್ದು, ಹೃದಯಘಾತದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
Read Full Story

11:40 AM (IST) Jul 06

38 ವರ್ಷದ ಪ್ರೇಯಸಿಗಾಗಿ 22ರ ಹರೆಯದ ಚಿನ್ನದಂಥ ಪತ್ನಿಗೆ ಗುಂಡಿಟ್ಟ.. ಮುಂದೇನಾಯ್ತು?

ಗಂಡ ಹೆಂಡತಿಯನ್ನ ಸಾಯಿಸೋದು, ಹೆಂಡತಿ ಗಂಡನ ಸಾಯಿಸೋ ಪ್ರಕರಣಗಳು ಇತ್ತೀಚೆಗೆ ಜೋರಾಗಿ ನಡೆಯುತ್ತಿದೆ. ಸಮಾಜದಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿದ್ದು, ಇಲ್ಲಿ ಯಾರನ್ನ ಯಾರು ನಂಬಬೇಕು, ಯಾರನ್ನ ನಂಬಬಾರದು ಎಂಬ ಭಯ ಶುರುವಾಗಿದೆ. ಈ ಮಧ್ಯೆ ಹರಿಯಾಣದಲ್ಲಿ ಘೋರ ಕೃತ್ಯ ನಡೆದಿದೆ.

Read Full Story

11:09 AM (IST) Jul 06

ಟೀಂ ಇಂಡಿಯಾದ ಈ ಆಟಗಾರನ ಗರ್ಲ್‌ಫ್ರೆಂಡ್‌ ಜತೆ ವೈಭವ್ ಹೆಸರು ಥಳುಕು..! ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ 15 ವರ್ಷದ ಪೋರಾ?

15 ವರ್ಷದ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿರುವ ಇವರು, ಅಭಿಷೇಕ್ ಶರ್ಮಾ ಅವರ ಗೆಳತಿಯ ಫೋಟೋವನ್ನು ರೀಪೋಸ್ಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
Read Full Story

10:25 AM (IST) Jul 06

ಟ್ರಕ್‌ ಹಿಂದೆ ಬರೆಯೋ 'Use Dipper At Night' ಬರಹಕ್ಕೂ ಕಾಂಡೋಮ್‌ಗೆ ಅವಿನಾಭವ ಸಂಬಂಧ

ಟ್ರಕ್‌ಗಳ ಮೇಲಿನ 'Use Dipper At Night' ಘೋಷಣೆಯು ರಾತ್ರಿ ವೇಳೆ ಸುರಕ್ಷಿತ ಡ್ರೈವಿಂಗ್‌ಗಾಗಿ ಲೋ ಬೀಮ್ ಲೈಟ್ ಬಳಸಲು ಸೂಚಿಸುತ್ತದೆ. ಇದಲ್ಲದೆ, 2016ರಲ್ಲಿ ಟ್ರಕ್ ಡ್ರೈವರ್‌ಗಳಲ್ಲಿ ಎಚ್‌ಐವಿ/ಏಡ್ಸ್ ಜಾಗೃತಿ ಮೂಡಿಸಲು ಇದೇ ಹೆಸರಿನಲ್ಲಿ 'ಡಿಪ್ಪರ್' ಕಾಂಡೋಮ್ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿತ್ತು. 

Read Full Story

10:21 AM (IST) Jul 06

ಕೊನೆಗೆ ಒಳ್ಳೆತನವೇ ಗೆಲ್ಲುತ್ತದೆ..! ಬೆನ್ನಿಗೆ ಚೂರಿ ಹಾಕಿದ ಗೆಳೆಯನೇ ಬಾಲ್ಯಸ್ನೇಹಿತನನ್ನು ನೆನೆದು ಕಣ್ಣೀರು ಹಾಕಿಬಿಟ್ಟ..!

ಬಾಲ್ಯಸ್ನೇಹಿತ ಮುರಳಿ ವಿಜಯ್‌ನಿಂದಾದ ದ್ರೋಹದಿಂದ ಕುಸಿದು ಹೋಗಿದ್ದ ದಿನೇಶ್ ಕಾರ್ತಿಕ್, ಕಾಲಾನಂತರದಲ್ಲಿ ಆತನನ್ನು ಕ್ಷಮಿಸಿ ಹೊಸ ಬದುಕು ಕಟ್ಟಿಕೊಂಡರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುರಳಿ ವಿಜಯ್, ಕಾರ್ತಿಕ್ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದ್ದು, ಈ ಲೇಖನವು ಅವರ ಸ್ನೇಹ, ದ್ರೋಹ ಮತ್ತು ಕ್ಷಮೆಯ ಕಥೆಯನ್ನು ವಿವರಿಸುತ್ತದೆ.
Read Full Story

09:57 AM (IST) Jul 06

FIFA World Cup 2026 ಫ್ರಾನ್ಸ್‌ಗೆ ಕ್ವಾರ್ಟರ್‌ ಫೈನಲ್ ಟಿಕೆಟ್; ಪರಗ್ವೆ ವಿರುದ್ಧ ಎಂಬಾಪೆ ಮಿಂಚಿನ ಗೋಲು

ಫಿಫಾ ವಿಶ್ವಕಪ್‌ನ ಸಂಘರ್ಷಮಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ, ಪರಗ್ವೆ ವಿರುದ್ಧ ಫ್ರಾನ್ಸ್‌ 1-0 ಗೋಲಿನಿಂದ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕೀಲಿಯನ್‌ ಎಂಬಾಪೆ ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲು ಪಂದ್ಯದ ಫಲಿತಾಂಶ ನಿರ್ಧರಿಸಿತು. ಈ ಗೆಲುವಿನೊಂದಿಗೆ ಫ್ರಾನ್ಸ್‌ 150 ವಿಶ್ವಕಪ್ ಗೋಲುಗಳ ಮೈಲಿಗಲ್ಲು ಸಾಧಿಸಿತು.
Read Full Story

09:48 AM (IST) Jul 06

ಇಂಗ್ಲೆಂಡ್ ಕನಸು ಭಗ್ನ; ಮಹಿಳಾ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ 7ನೇ ಬಾರಿಗೆ ಚಾಂಪಿಯನ್ ಆಗಿದೆ. ಬೆಥ್ ಮೂನಿ ಅವರ ಅರ್ಧಶತಕ ಆಸೀಸ್ ಗೆಲುವಿಗೆ ಕಾರಣವಾದರೆ, ಇಂಗ್ಲೆಂಡ್‌ನ ಡ್ಯಾನಿ ವ್ಯಾಟ್ ವಿಶ್ವಕಪ್‌ನಲ್ಲಿ 300 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದರು.
Read Full Story

09:40 AM (IST) Jul 06

ವಾರಣಾಸಿ ಕಾಶಿ ವಿಶ್ವನಾಥನ ಕ್ಷೇತ್ರದಲ್ಲೇ ನಾಟಕ ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ Actress Bhagyashree

Actress Bhagyashree: ಅಮ್ರಾವ್ರ ಗಂಡ ಸಿನಿಮಾ ಖ್ಯಾತಿಯ ಬಾಲಿವುಡ್‌ ನಟಿ ಭಾಗ್ಯಶ್ರೀ ಅವರು ಇನ್‌ಸ್ಟಾಗ್ರಾಮ್‌ ರೀಲ್ಸ್‌ಗೋಸ್ಕರ ಲಸ್ಸಿ ತಿಂದ ಹಾಗೆ ನಾಟಕ ಮಾಡಿ, ಆಮೇಲೆ ಸಿಕ್ಕಾಪಟ್ಟೆ ಸಕ್ಕರೆ ಎಂದು ರಿಜೆಕ್ಟ್‌ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

Read Full Story

08:46 AM (IST) Jul 06

ಮತ್ತೊಬ್ಬ ನವವಿವಾಹಿತೆಯ ನಿಗೂಢ ಸಾವು.. ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ದೆಹಲಿಯ ಲೋಧಿ ಕಾಲೋನಿಯಲ್ಲಿ ನವವಿವಾಹಿತೆ ಆಕೃತಿ ಸುತಾರ್ (Aakruti Sutar) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, 20 ಲಕ್ಷ ವರದಕ್ಷಿಣೆಗಾಗಿ ಪತಿಯೇ ಮಾಡಿದ ಕೊಲೆ ಎಂದು ಮೃತರ ಕುಟುಂಬ ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

08:46 AM (IST) Jul 06

ಮರಳಲ್ಲಿ ಹೂತಿದ್ದ 1700 ವರ್ಷಗಳ ನಗರ ಪತ್ತೆ; ಚಿನ್ನದ ನಾಲಿಗೆ, ಓವನ್ ಮಾದರಿ ಒಲೆ ಪತ್ತೆ

ಪುರಾತತ್ತ್ವಜ್ಞರು ಸುಮಾರು 1700 ವರ್ಷಗಳಷ್ಟು ಹಳೆಯ, ಸಂಪೂರ್ಣವಾಗಿ ಹೂತುಹೋಗಿದ್ದ ನಗರವನ್ನು ಪತ್ತೆ ಮಾಡಿದ್ದಾರೆ. ಸುಸಜ್ಜಿತ ಮನೆಗಳು, ಚರ್ಚ್‌ಗಳನ್ನು ಹೊಂದಿದ್ದ ಈ ನಗರದ ಸಮಾಧಿಗಳಲ್ಲಿ ಚಿನ್ನದ ನಾಲಿಗೆಗಳು ಕಂಡುಬಂದಿದ್ದು, ಇದು ಸಾವಿನ ನಂತರದ ಬದುಕಿನ ನಂಬಿಕೆಗಳ ಬಗ್ಗೆ ಕುತೂಹಲ ಮೂಡಿಸಿದೆ.

Read Full Story

06:57 AM (IST) Jul 06

Mumbai Rain - ಮುಂಬೈನಲ್ಲಿ ಕಟ್ಟಡ ಕುಸಿದು ಐವರು ಮಕ್ಕಳು ಸೇರಿ 6 ಮಂದಿ ದುರ್ಮರಣ

ದೇಶಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂಬೈನಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಮನೆ ಕುಸಿದು ಮತ್ತು ಮರ ಬಿದ್ದು 7 ಜನರು ಸಾವನ್ನಪ್ಪಿದ್ದಾರೆ. ಈ ಮಳೆಯಿಂದಾಗಿ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆದಿದೆ.
Read Full Story

05:27 AM (IST) Jul 06

West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು

ಪಶ್ಚಿಮ ಬಂಗಾಳ ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಹೊಸ ಕಠಿಣ ಷರತ್ತುಗಳನ್ನು ವಿಧಿಸಿದೆ. ಎರಡಕ್ಕಿಂತ ಹೆಚ್ಚು ಮದುವೆಯಾದವರು, ಮಕ್ಕಳಿಗೆ ಲಸಿಕೆ ಹಾಕಿಸದವರು ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಶಾಲೆ ಬಿಟ್ಟವರು ಇನ್ನು ಮುಂದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಅರ್ಹರಿಗೆ ಮಾತ್ರ ಯೋಜನೆಗಳು ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
Read Full Story

More Trending News