ಚೆನ್ನೈ: ಕರ್ನಾಟಕದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 12000 ಕ್ಯುಸೆಕ್ನಷ್ಟು ನೀರು ಹರಿದುಬರುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ, ನಮಗೆ ಅಷ್ಟು ಸಾಲದು ಎಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಖಾತೆ ಸಚಿವ ನಿರ್ಮಲ್ ಕುಮಾರ್, ‘ನಮಗೆ 12000 ಕ್ಯುಸೆಕ್ ನೀರು ಸಾಲದು. ನಮಗೆ ನಮ್ಮ ಪಾಲಿನ 17 ಟಿಎಂಸಿ ನೀರು ಕರ್ನಾಟಕದಿಂದ ಬೇಕು’ ಎಂದು ಹೇಳಿದ್ದಾರೆ. ಸಿಡಬ್ಲ್ಯುಆರ್ಸಿ, 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್ ನೀರು ಹರಿಸಲು ಸೂಚಿಸಿತ್ತು. ಇದೀಗ ಕಬಿನಿ ಜಲಾಶಯ ತುಂಬಿರುವ ಕಾರಣ ಹೆಚ್ಚುವರಿ ನೀರು ಕಾವೇರಿ ನದಿಗೆ ಸೇರಿಕೊಂಡು ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡಿಗೆ ಹರಿದುಹೋಗುತ್ತಿದೆ.

12:26 AM (IST) Aug 04
ಕಳೆದ ಆರು ವರ್ಷಗಳಿಂದ ಬಾಲಿವುಡ್ನಿಂದ ದೂರವಿದ್ದು ಹಾಲಿವುಡ್ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ, ಈಗ ಹತ್ತಕ್ಕೂ ಹೆಚ್ಚು ಇಂಗ್ಲಿಷ್ ಪ್ರಾಜೆಕ್ಟ್ಗಳನ್ನು ಮುಗಿಸಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಸಂಭಾವನೆ ಈಗ ಎಷ್ಟು ಗೊತ್ತಾ? ಶಾಕ್ ಆಗ್ತೀರಾ…!
11:43 PM (IST) Aug 03
ಅಖಿಲ್ ಅಕ್ಕಿನೇನಿ ಅವರ 'ಲೆನಿನ್' ಸಿನಿಮಾ ಬಾಕ್ಸಾಫೀಸ್ನಲ್ಲಿ 100 ಕೋಟಿ ಗಳಿಸಿ, ಅವರ ವೃತ್ತಿಜೀವನದ ಮೊದಲ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಈಗ ಈ ಸಿನಿಮಾ ಓಟಿಟಿಗೆ ಬರುವ ಸಮಯ ಫಿಕ್ಸ್ ಆಗಿದ್ದು, ಈ ತಿಂಗಳಲ್ಲೇ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲಿದೆ.
11:09 PM (IST) Aug 03
ಕಾವೇರಿ ವಿವಾದದ ಪ್ರತಿಭಟನೆಯಲ್ಲಿ, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಅವರನ್ನು ಕುರಿತು ನೀಡಿದ್ದಾರೆನ್ನಲಾದ ಅಸಭ್ಯ ಹೇಳಿಕೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.
10:54 PM (IST) Aug 03
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಒಂದು ವಿಶಿಷ್ಟ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನು 16 ಆಟಗಾರರೊಂದಿಗೆ ಆಡಿದರೆ 1,000 ಆಟಗಾರರೊಂದಿಗೆ ಆಡಿದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.
10:45 PM (IST) Aug 03
'ದಿ ಪ್ಯಾರಡೈಸ್' ಚಿತ್ರದಲ್ಲಿ ಕೀರ್ತಿ ಸುರೇಶ್ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಅವರು ಪಡೆದ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ಹಿಂದಿನ ಸತ್ಯಾಂಶ ಏನು?
10:13 PM (IST) Aug 03
ಮಹೀಂದ್ರಾ ತನ್ನ ಜನಪ್ರಿಯ ಸ್ಕಾರ್ಪಿಯೋ N ಎಸ್ಯುವಿಯ ಫೇಸ್ಲಿಫ್ಟ್ ಆವೃತ್ತಿಯನ್ನು 2026ರ ಆಗಸ್ಟ್ 15 ರಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಹೊಸ ಮಾದರಿಯು ಪ್ಯಾನೊರಾಮಿಕ್ ಸನ್ರೂಫ್, ಥಾರ್ ರಾಕ್ಸ್ನಿಂದ ಎರವಲು ಪಡೆದ ದೊಡ್ಡ ಟಚ್ಸ್ಕ್ರೀನ್ ಇದರಲ್ಲಿ ಇರಲಿದೆ.
09:46 PM (IST) Aug 03
ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾಗೆ 'ಡೇರ್ಡೆವಿಲ್' ಅಂತ ಟೈಟಲ್ ಫಿಕ್ಸ್ ಆಗಿದೆ. ಆದಿಕ್ ರವಿಚಂದ್ರನ್ ನಿರ್ದೇಶಿಸಲಿರುವ ಈ ಚಿತ್ರವನ್ನು ಅಜಿತ್ ಪತ್ನಿ ಶಾಲಿನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
09:39 PM (IST) Aug 03
ಜುಲೈ 2026ರಲ್ಲಿ 55,480 ಇವಿ ಸ್ಕೂಟರ್ಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ ಕಂಪನಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಭಾರತದ ನಂ.1 ಇವಿ ದ್ವಿಚಕ್ರ ವಾಹನ ಸಂಸ್ಥೆಯಾಗಿ ಹೊರಹೊಮ್ಮಿದೆ.
09:19 PM (IST) Aug 03
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಕೊಡುಗೆಯನ್ನು ಶ್ಲಾಘಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
08:54 PM (IST) Aug 03
ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಆ್ಯಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಜೊತೆ ನಟಿಸಿರುವ ಮಮಿತಾ ಬೈಜು, ತಮ್ಮ ಬಾಲ್ಯದ ಕ್ರಶ್ ಜೊತೆ ನಟಿಸಿದ್ದು ಕನಸು ನನಸಾದ ಹಾಗೆ ಇದೆ ಎಂದಿದ್ದಾರೆ. ಈ ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ.
08:09 PM (IST) Aug 03
ನಟ ಸಲ್ಮಾನ್ ಖಾನ್ ಅವರು 'ದಿ ಅಲಯನ್ಸ್' ರಿಯಾಲಿಟಿ ಶೋನಲ್ಲಿ ತಾವು ಜೈಲಿನಲ್ಲಿದ್ದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಕಿರಿಯ ಸಹೋದರ ಸೊಹೈಲ್ ಖಾನ್ಗೆ ಧೈರ್ಯ ತುಂಬಲು ಸಲ್ಮಾನ್ ಈ ಶೋಗೆ ಬಂದಿದ್ದರು.
07:10 PM (IST) Aug 03
Triggered Insaan: ಖ್ಯಾತ ಯೂಟ್ಯೂಬರ್ ಟ್ರಿಗರ್ಡ್ ಇನ್ಸಾನ್, ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ 50 ಗಂಟೆಗಳ ಕಾಲ ನಿರಂತರ ಲೈವ್ಸ್ಟ್ರೀಮ್ ಮಾಡಿ ಸುಮಾರು 75 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ.
07:07 PM (IST) Aug 03
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಗ್ರೀಸ್ನಲ್ಲಿ ಗಾಯಕಿ ಕನಿಕಾ ಕಪೂರ್ ಜೊತೆ ಪಾರ್ಟಿ ಮಾಡುತ್ತಿರುವ ವೀಡಿಯೊದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, 16 ವರ್ಷಗಳ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಮರಳುವ ಸೂಚನೆ ನೀಡಿದ್ದಾರೆ.
06:52 PM (IST) Aug 03
Sunny Leone: ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾದ, ವಯಸ್ಕರ ಚಿತ್ರರಂಗಕ್ಕೆ ಸೇರುವ ನಿರ್ಧಾರವನ್ನು ಪೋಷಕರಿಗೆ ತಿಳಿಸಿದ ಘಟನೆಯನ್ನು ಸನ್ನಿ ಲಿಯೋನ್ ಒಮ್ಮೆ ನೆನಪಿಸಿಕೊಂಡಿದ್ದರು.
06:30 PM (IST) Aug 03
ಟಾಕ್ಸಿಕ್ ಬ್ಯೂಟಿ ಕಿಯಾರಾ ಅಡ್ವಾಣಿ ಅವರ ಫ್ಯಾಷನ್ ಸೆನ್ಸ್ ಸಖತ್ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಂಬರುವ ಹಬ್ಬದ ಸೀಸನ್ಗೆ ಪರ್ಫೆಕ್ಟ್ ಆಗಿರುವ ಅವರ ಕೆಲವು ಅದ್ಭುತ ಮತ್ತು ಹೊಳೆಯುವ ಡ್ರೆಸ್ಗಳ ಮೇಲೆ ಇಲ್ಲಿದೆ ಒಂದು ನೋಟ. ಇನ್ನಷ್ಟು ತಿಳಿಯಲು ಮುಂದೆ ಓದಿ.
06:07 PM (IST) Aug 03
ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರಕ್ಕೆ ರಕುಲ್ ಪ್ರೀತ್ ಸಿಂಗ್ ಆಯ್ಕೆ ಆಗಿರೋದು ಯಾಕೆ ಸರಿ ಅನ್ನಿಸ್ತಿದೆ? ಶೂರ್ಪನಖಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಮುಂದೆ ಓದಿ.
05:42 PM (IST) Aug 03
04:45 PM (IST) Aug 03
04:40 PM (IST) Aug 03
04:27 PM (IST) Aug 03
ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು. ಈಗ
04:15 PM (IST) Aug 03
03:44 PM (IST) Aug 03
2018ರ ಕಾನ್ ಪಾರ್ಟಿಯ ಹಳೆ ವಿಡಿಯೋ ವೈರಲ್ ಆದ್ಮೇಲೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಮಾಡರೇಟ್ ಹಿಂದೂ ಆಗಿದ್ದೆ, ಈಗ ಸಂಘಿ ಆಗ್ಬೇಕು’ ಅಂತ ಹೇಳಿದ್ದಾರೆ. Gen-Z ಯುವಜನರ ಬಗ್ಗೆಜನರೇಷನ್ ಗಟರ್ಅಂ ತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈ ಹಳೆಯ ವಿಡಿಯೋ ಒಂದು ಟ್ರೋಲ್ ಆಗಿತ್ತು.
03:43 PM (IST) Aug 03
03:37 PM (IST) Aug 03
ರಾಮಾಯಣ ಸಿನಿಮಾ ನೋಡಿ, ಬಳಿಕ ಸಾವಿರಾರು ಜನರಿಗೆ ಉಚಿತವಾಗಿ ಈ ಸಿನಿಮಾ ತೋರಿಸಲು ಶ್ರೀ ರಾಮಲೀಲಾ ಸಮಿತಿ ರೆಡಿಯಿದೆ, ಆದರೆ ಅದಕ್ಕೆ ಕಂಡಿಶನ್ ಒಂದೇ—ಸಿನಿಮಾ ಶಾಸ್ತ್ರೋಕ್ತವಾಗಿರಬೇಕು! ಚಿತ್ರತಂಡ ಸಂಘಟನೆಯ ಈ ಮನವಿಗೆ ಒಪ್ಪಿ 'ಸ್ಪೆಷಲ್ ಸ್ಕ್ರೀನಿಂಗ್' ಏರ್ಪಡಿಸುತ್ತಾರಾ? ಅಥವಾ ವಿವಾದವನ್ನು ಮೈಮೇಲೆ ಎಳೆದುಕೊಳ್ತಾರಾ? ಕಾದು ನೋಡಬೇಕು.
02:46 PM (IST) Aug 03
02:39 PM (IST) Aug 03
ಪ್ರಪಂಚದಲ್ಲಿ ಸಾವಿರಾರು ಹಾವುಗಳಿದ್ದರೂ, ಕೇವಲ ಒಂದು ಪ್ರಭೇದ ಮಾತ್ರ ತನ್ನ ಮರಿಗಳಿಗಾಗಿ ಗೂಡು ಕಟ್ಟುತ್ತದೆ. ಸರ್ಪ ಎಲೆಗಳಿಂದ ಗೂಡು ನಿರ್ಮಿಸಿ, ಮೊಟ್ಟೆಗಳನ್ನಿಟ್ಟು, ಮರಿಗಳು ಹೊರಬರುವವರೆಗೂ ಕಾವಲು ಕಾಯುತ್ತದೆ. ಈ ವಿಶೇಷ ಗುಣದಿಂದಾಗಿ ಕಾಳಿಂಗ ಸರ್ಪವು ಹಾವುಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ.
01:32 PM (IST) Aug 03
12:50 PM (IST) Aug 03
12:35 PM (IST) Aug 03
12:29 PM (IST) Aug 03
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ 1 ರಿಂದ ಬ್ಯಾಂಕ್ ಠೇವಣಿಗಳ ಬಡ್ಡಿದರಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು, ವಿಶೇಷವಾಗಿ ₹3 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೃಹತ್ ಠೇವಣಿಗಳ ಮೇಲೆ ಪಾರದರ್ಶಕತೆ ಮತ್ತು ಏಕರೂಪತೆಯನ್ನು ತರುವುದನ್ನು ಗುರಿಯಾಗಿಸಿಕೊಂಡಿವೆ.
12:09 PM (IST) Aug 03
ಭಾರತೀಯ ಸೇನಾಧಿಕಾರಿಯನ್ನು ನೋಡುತ್ತಿದ್ದಂತೆ ಪಾಕಿಸ್ತಾನದ ರೇಂಜರ್ ಸಲ್ಯೂಟ್ ನೀಡಿದ ಘಟನೆ ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ವೃತ್ತಿಪರ ಗೌರವ ಎಂದು ಹಲವರು ಉಲ್ಲೇಖಿಸಿದ್ದಾರೆ.
11:54 AM (IST) Aug 03
ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ ಕಂಗನಾ ಅವರ 'ಫೈಟಿಂಗ್ ಸ್ಪಿರಿಟ್' ಮಾತ್ರ ಕಮ್ಮಿಯಾಗಿಲ್ಲ. ಅತ್ತ ಹೃತಿಕ್ ಈ ಬಾರಿಯಾದರೂ ಈ ವಿವಾದಕ್ಕೆ ಫುಲ್ ಸ್ಟಾಪ್ ಇಡುತ್ತಾರಾ ಅಥವಾ ಕಂಗನಾ ಅವರ ಈ 'ಟಾಂಗ್'ಗೆ ಮತ್ತೊಂದು ತಿರುಗೇಟು ನೀಡುತ್ತಾರಾ? ಏನಿದು ಸ್ಟೋರಿ ನೋಡಿ..
11:43 AM (IST) Aug 03
ಸಿಜೆಪಿ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ದ ಅವಾಚ್ಯ ಶಬ್ದ ಪ್ರಯೋಗಿಸಿದ ಅಪ್ರಾಪ್ತ ಬಾಲಕಿ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಪ್ರಧಾನಿ ಮೋದಿ ವಿಡಿಯೋ ಮೂಲಕ ತಾವು ಕ್ಷಮಿಸಿರುವುದಾಗಿ ಹೇಳಿದ ಬೆನ್ನಲ್ಲೇ ಪೊಲೀಸ್ ಕೇಸ್ ರದ್ದುಗೊಳಿಸಿದ್ದಾರೆ.
11:25 AM (IST) Aug 03
11:00 AM (IST) Aug 03
09:28 AM (IST) Aug 03
08:42 AM (IST) Aug 03