ಚೆನ್ನೈ: ಕರ್ನಾಟಕದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 12000 ಕ್ಯುಸೆಕ್ನಷ್ಟು ನೀರು ಹರಿದುಬರುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ, ನಮಗೆ ಅಷ್ಟು ಸಾಲದು ಎಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಖಾತೆ ಸಚಿವ ನಿರ್ಮಲ್ ಕುಮಾರ್, ‘ನಮಗೆ 12000 ಕ್ಯುಸೆಕ್ ನೀರು ಸಾಲದು. ನಮಗೆ ನಮ್ಮ ಪಾಲಿನ 17 ಟಿಎಂಸಿ ನೀರು ಕರ್ನಾಟಕದಿಂದ ಬೇಕು’ ಎಂದು ಹೇಳಿದ್ದಾರೆ. ಸಿಡಬ್ಲ್ಯುಆರ್ಸಿ, 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್ ನೀರು ಹರಿಸಲು ಸೂಚಿಸಿತ್ತು. ಇದೀಗ ಕಬಿನಿ ಜಲಾಶಯ ತುಂಬಿರುವ ಕಾರಣ ಹೆಚ್ಚುವರಿ ನೀರು ಕಾವೇರಿ ನದಿಗೆ ಸೇರಿಕೊಂಡು ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡಿಗೆ ಹರಿದುಹೋಗುತ್ತಿದೆ.

09:28 AM (IST) Aug 03
08:42 AM (IST) Aug 03