ದಾವೋಸ್: ಭಾರತದ ಜೊತೆಗೆ ಶೀಘ್ರವೇ ನಾವು ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ಪ್ರಧಾನಿ ಮೋದಿ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ನನ್ನ ಆತ್ಮೀಯ ಸ್ನೇಹಿತ. ಶೀಘ್ರವೇ ನಾವು ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ ಕೀರ್ತಿಯ ಗರಿ ತೊಟ್ಟಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ ಹಾಡಿದ್ದಾರೆ. ದಾವೋಸ್ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಮಾತನಾಡುವ ವೇಳೆ, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು 71ನೇ ಸಲ ಬಡಾಯಿ ಕೊಚ್ಚಿಕೊಂಡಿದ್ದಾರೆ.
10:55 PM (IST) Jan 22
10:35 PM (IST) Jan 22
09:29 PM (IST) Jan 22
ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್ನಲ್ಲಿ ಗುಲಾಬಿ ಹೂವುಗಳನ್ನು ಮಾರುತ್ತಿದ್ದ 11 ವರ್ಷದ ಪುಟ್ಟ ಬಾಲಕಿಯನ್ನು ಕಾಮುಕನೋರ್ವ ಅಪಹರಿಸಿ ಅತ್ಯಾ*ಚಾರವೆಸಗಿ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಂತಹ ದಾರುಣ ಘಟನೆ ನಡೆದಿದೆ.
09:17 PM (IST) Jan 22
08:44 PM (IST) Jan 22
ಹೆದ್ದಾರಿಯಲ್ಲಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿದ ಮಹಿಳೆಯೊಬ್ಬಳು, ತನ್ನ ಸಹೋದರನಿಗೆ ಅಪಘಾತವಾಗಿದೆ ಎಂದು ನಂಬಿಸಿ ಬೈಕ್ ಕೇಳಿದ್ದಾಳೆ. ಆಕೆಯ ವರ್ತನೆಯಿಂದ ಅನುಮಾನಗೊಂಡ ಸವಾರ ಏನು ಮಾಡಿದ್ರು ಬೈಕ್ ನೀಡಿದ್ರಾ ಆಮೇಲೆ ಏನಾಯ್ತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...
08:28 PM (IST) Jan 22
ನ್ಯಾಟೋ 32 ಸದಸ್ಯರ ಒಂದು ಮಿಲಿಟರಿ ಮೈತ್ರಿಕೂಟ. ಆರ್ಟಿಕಲ್ 5ರ ಅಡಿ 'ಒಬ್ಬರ ಮೇಲಿನ ದಾಳಿ ಎಲ್ಲರ ಮೇಲಿನ ದಾಳಿ' ಎಂಬ ತತ್ವದ ಮೇಲೆ ಕಾರ್ಯ.. ಒಂದು ವೇಳೆ ಅಮೆರಿಕ ಸದಸ್ಯ ರಾಷ್ಟ್ರವೇ ಡೆನ್ಮಾರ್ಕ್ನ ಭಾಗವಾದ ಗ್ರೀನ್ಲ್ಯಾಂಡ್ ಮೇಲೆ ದಾಳಿ ನಡೆಸಿದರೆ, ಅದು ಆಂತರಿಕ ಬಿಕ್ಕಟ್ಟು ಸೃಷ್ಟಿಸಬಹುದು.
08:06 PM (IST) Jan 22
ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿ ಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್ರಾಜ್ ಸಿಂಗ್ ಗೋಹಿಲ್, ತಮ್ಮ ಪತ್ನಿ ರಾಜೇಶ್ವರಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಕೇವಲ ಎರಡು ತಿಂಗಳಾಗಿದ್ದ ದಂಪತಿಗಳ ಸಾವಿನ ಸುತ್ತ ಅನುಮಾನಗಳು ಮೂಡಿವೆ.
07:52 PM (IST) Jan 22
ಸಾವಿರಾರು ಕೋಟಿ ವ್ಯವಹಾರದ ಅದಾನಿ Q3 ಆದಾಯ ಕೇವಲ ಇಷ್ಟೇನಾ? ಕುಸಿತ ಕಂಡ ಎನರ್ಜಿ, ಮೂರನೈ ತ್ರೈಮಾಸಿಕದಲ್ಲಿ ಅದಾನಿ ಅದಾಯ ಕುಸಿತ ತಂಡಿದೆ. ಅಚ್ಚರಿ ಎಂದರೆ ಸಾವಿರ ಕೋಟಿ ಆದಾಯ ಪಡೆಯುತ್ತಿದ್ದ ಅದಾನಿ ಆದಾಯ ಇಷ್ಟೇನಾ?
07:31 PM (IST) Jan 22
07:08 PM (IST) Jan 22
ಸೋಷಿಯಲ್ ಮೀಡಿಯಾ ಲೈಕ್ಸ್ಗಾಗಿ ಕೇರಳದ ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ದೀಪಕ್ ಎಂಬ ಅಮಾಯಕನ ಮೇಲೆ ಸುಳ್ಳು ಆರೋಪ ಮಾಡಿ ವಿಡಿಯೋ ವೈರಲ್ ಮಾಡಿದ್ದಳು. ಈ ಅವಮಾನ ತಾಳಲಾರದೆ ದೀಪಕ್ ಸಾವಿನ ಹಾದಿ ಹಿಡಿದ ಬೆನ್ನಲ್ಲೇ ಜೀವ ರಕ್ಷಣೆಗೆ ಹೊಸ ಟ್ರೆಂಡ್ ಶುರುವಾಗಿದೆ.
07:02 PM (IST) Jan 22
ಚಿಲಿಯ ಯುವಕನೊಬ್ಬನಿಗೆ ತನ್ನ ತಂದೆಯ ಹಳೆಯ ಪೆಟ್ಟಿಗೆಯಲ್ಲಿ 60 ವರ್ಷಗಳ ಹಿಂದಿನ ಪಾಸ್ಬುಕ್ ಸಿಕ್ಕಿತು. ಕಾನೂನು ಹೋರಾಟದ ನಂತರ, ಅಂದು ಸಣ್ಣ ಮೊತ್ತವಾಗಿದ್ದ ಆ ಉಳಿತಾಯವು ಬಡ್ಡಿ ಮತ್ತು ಹಣದುಬ್ಬರದಿಂದಾಗಿ ಇಂದು 10 ಕೋಟಿ ರೂಪಾಯಿಗಳ ಬೃಹತ್ ನಿಧಿಯಾಗಿ ಪರಿವರ್ತನೆಯಾಗಿದೆ.
06:45 PM (IST) Jan 22
ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರೊಂದಿಗಿನ ಮದುವೆ ಮುರಿದುಬಿದ್ದ ನಂತರ ಸುದ್ದಿಯಲ್ಲಿದ್ದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಮೃತಿ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಪಲಾಶ್ ವಿರುದ್ಧ ದೂರು ದಾಖಲಿಸಿದ್ದಾರೆ.
06:13 PM (IST) Jan 22
ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸಲು ಬಾಂಗ್ಲಾದೇಶ ತೀರ್ಮಾನಿಸಿದೆ. ಮುಸ್ತಾಫಿಜುರ್ ರಹಮಾನ್ ಅವರ ಐಪಿಎಲ್ ವಿವಾದದ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ, ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.
05:24 PM (IST) Jan 22
ಗ್ರೇಟರ್ ನೋಯ್ಡಾದಲ್ಲಿ, ಸಿಆರ್ಪಿಎಫ್ ಜವಾನನ ಮನೆಯಲ್ಲಿ ಕೆಲಸಕ್ಕಿದ್ದ 10 ವರ್ಷದ ಬಾಲಕಿಯ ಮೇಲೆ ದಂಪತಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಸರಿಯಾಗಿ ಊಟ ನೀಡದೆ ಉಪವಾಸ ಹಾಕಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಬಾಲಿಯ ಪಕ್ಕೆಲುಬು ಮುರಿದಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ.
04:53 PM (IST) Jan 22
ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಮಕಲುಕುವ ವಿಡಿಯೋ ಇದೀಗ ಹೊರಬಂದಿದೆ. ಮಗನ ಉಳಿಸಲು ಸಾಧ್ಯವಾಗದೆ ಚಡಪಡಿಸುತ್ತಿರುವ ವಿಡಿಯೋ ಘಟನೆಯ ಕರಾಳತೆಯನ್ನು ಬಿಡಿಸಿ ಹೇಳುತ್ತಿದೆ.
04:50 PM (IST) Jan 22
ಭಾರತದ ಶಸ್ತ್ರಾಸ್ತ್ರ ರಫ್ತು ದಾಖಲೆಯ ಮಟ್ಟಕ್ಕೆ ಏರಿದ್ದು, ನಾಗ್ಪುರದಿಂದ ಪಿನಾಕಾ ರಾಕೆಟ್ ವ್ಯವಸ್ಥೆಯ ಮೊದಲ ರಫ್ತು ಆದೇಶ ರವಾನೆಯಾಗಿದೆ. 44 ಸೆಕೆಂಡುಗಳಲ್ಲಿ 72 ರಾಕೆಟ್ಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ಈ ವ್ಯವಸ್ಥೆಯನ್ನು, ರಾಜತಾಂತ್ರಿಕ ಕಾರಣಗಳಿಗಾಗಿ ಅರ್ಮೇನಿಯಾಗೆ ರಫ್ತು ಮಾಡಲಾಗಿದೆ.
04:31 PM (IST) Jan 22
ಮೀಸಲಾತಿಯ ಪ್ರಕಾರ, ಪುಣೆ, ಧುಲೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ನಾಂದೇಡ್, ನವಿ ಮುಂಬೈ, ಮಾಲೆಗಾಂವ್, ಮೀರಾ ಭಯಂದರ್, ನಾಸಿಕ್ ಮತ್ತು ನಾಗ್ಪುರದಲ್ಲಿ ಮೇಯರ್ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
04:09 PM (IST) Jan 22
ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್ಪೇ, ತನ್ನ ಐಪಿಒಗಾಗಿ ಸೆಬಿಯಿಂದ ಅನುಮೋದನೆ ಪಡೆದಿದ್ದು, ಸುಮಾರು ₹12,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಈ 'ಆಫರ್ ಫಾರ್ ಸೇಲ್' (OFS) ಮೂಲಕ, ವಾಲ್ಮಾರ್ಟ್ ತನ್ನ ಪಾಲನ್ನು ಕಡಿಮೆ ಮಾಡಲಿದೆ.
03:42 PM (IST) Jan 22
Breaking: 11 Soldiers Dead as Army Vehicle Falls into Gorge in Jammu Kashmir ಒಟ್ಟು 21 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವು ಎತ್ತರದ ಪೋಸ್ಟ್ಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ.
02:15 PM (IST) Jan 22
02:06 PM (IST) Jan 22
ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಗೆ ಬಿರಿಯಾನಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಲೆ ಮಾಡಿದ್ದಾಳೆ. ನಂತರ ಇದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದರೂ, ಮೃತನ ಸ್ನೇಹಿತರ ಅನುಮಾನದಿಂದಾಗಿ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
01:36 PM (IST) Jan 22
01:29 PM (IST) Jan 22
ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇನ್ನು ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ದಿಗ್ಗಜರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ.
01:07 PM (IST) Jan 22
1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ತೀರ್ಪಿನಿಂದ ಆಕ್ರೋಶಗೊಂಡ ಸಂತ್ರಸ್ತರ ಕುಟುಂಬಗಳು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ದಂಗೆಯಲ್ಲಿ 2,733 ಜನರು ಮೃತಪಟ್ಟಿದ್ದರು.
12:33 PM (IST) Jan 22
ತಾಂತ್ರಿಕ ದೋಷದಿಂದ IAF ವಿಮಾನ ಪತನ, ಪ್ರಯಾಗರಾಜ್ನಲ್ಲಿ ವಿಮಾನ ಪತನಗೊಂಡಿದೆ. ಸದ್ಧುಕೇಳಿ ಓಡೋಡಿ ಬಂದ ಸ್ಥಳೀಯರು ಸಾಹಸ ಮೆರೆದಿದ್ದಾರೆ. ಧೈರ್ಯದಿಂದ ಇಬ್ಬರು ಪೈಲೆಟ್ ರಕ್ಷಿಸಿದ್ದಾರೆ
12:22 PM (IST) Jan 22
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುವ ಯುವಕನೋರ್ವ, ತನ್ನ ಒಂದು ದಿನದ ಗಳಿಕೆಯ ವಿವರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸುಮಾರು 10 ಗಂಟೆಗಳ ಕಾಲ ಕೆಲಸ ಮಾಡಿ ಆತ ಗಳಿಸಿದ ಹಣದ ಮೊತ್ತವನ್ನು ತಿಳಿದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
11:43 AM (IST) Jan 22
ಹಿಂದೊಮ್ಮೆ ನಾಯಿಯನ್ನು ವಾಕ್ ಕರೆದೊಯ್ಯಲು ಇಡೀ ಕ್ರೀಡಾಂಗಣವನ್ನು ಖಾಲಿ ಮಾಡಿಸಿ ವಿವಾದಕ್ಕೆ ಒಳಗಾಗಿದ್ದ ಐಎಎಸ್ ಅಧಿಕಾರಿ ಸಂಜೀವ್ ಖಿರ್ವರ್ ಅವರನ್ನು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ನ (MCD) ನೂತನ ಕಮೀಷನರ್ ಆಗಿ ನೇಮಿಸಲಾಗಿದೆ. 2022ರ ವಿವಾದದ ನಂತರ ಅವರು ಲಡಾಕ್ಗೆ ವರ್ಗಾವಣೆಗೊಂಡಿದ್ದರು.
11:36 AM (IST) Jan 22
ಬಿಗ್ಬಾಸ್ ಸೀಸನ್ 12 ಮುಗಿದು ಬೇಸರದಲ್ಲಿರುವ ವೀಕ್ಷಕರಿಗೆ ಕಲರ್ಸ್ ಟಿವಿ ಗುಡ್ನ್ಯೂಸ್ ನೀಡಿದೆ. ಬಿಗ್ಬಾಸ್ಗಿಂತಲೂ ದೊಡ್ಡದೆನ್ನಲಾದ 'ದಿ 50' ಎಂಬ ಹೊಸ ರಿಯಾಲಿಟಿ ಷೋ ಶೀಘ್ರದಲ್ಲೇ ಆರಂಭವಾಗಲಿದ್ದು, ಇದು ಕಿರುತೆರೆ ಇತಿಹಾಸದಲ್ಲಿಯೇ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ.
11:34 AM (IST) Jan 22
ಹೆಚ್ಚುತ್ತಿರುವ ಸೊಳ್ಳೆ ಸಮಸ್ಯೆಯನ್ನು ನಿಯಂತ್ರಿಸಲು, ಮಹಾನಗರ ಪಾಲಿಕೆಯು ಚರಂಡಿ ಮ್ಯಾನ್ಹೋಲ್ಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸುತ್ತಿದೆ. ಈ ಕ್ರಮವು ವಿಪಕ್ಷ ಎಐಎಡಿಎಂಕೆ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದೆ.
11:32 AM (IST) Jan 22
17 ವರ್ಷಗಳಿಂದ ನಿಷ್ಠಾವಂತ ಬೆಂಬಲ ನೀಡಿದರೂ, ಆರ್ಸಿಬಿ ಫ್ರಾಂಚೈಸಿ ಈಗ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸಲು ಚಿಂತಿಸುತ್ತಿದೆ. ಕಳೆದ ವರ್ಷದ ಕಾಲ್ತುಳಿತ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದು, ಅಭಿಮಾನಿಗಳಿಗೆ ಮಾಡುವ ದ್ರೋಹ.
10:56 AM (IST) Jan 22
09:25 AM (IST) Jan 22
ದುಬೈ: ಫೆಬ್ರವರಿ 07ರಿಂದ ಆರಂಭವಾಗಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ವಿವಾದ ಮುಂದುವರೆದಿದ್ದು, ಬಾಂಗ್ಲಾದೇಶ ಪಟ್ಟು ಸಡಿಲಿಸಿಲ್ಲ. ಆದರೆ ಇದೀಗ ಬಾಂಗ್ಲಾದೇಶ ಮ್ಯಾಚ್ ಬೇರೆಡೆಗೆ ಶಿಫ್ಟ್ ಮಾಡಬೇಕೇ-ಬೇಡವೇ ಎನ್ನುವ ಬಗ್ಗೆ ನಡೆಸಿದ ಮತ ಚಲಾವಣೆಯಲ್ಲಿ ಬಾಂಗ್ಲಾದೇಶಕ್ಕೆ ಮುಖಭಂಗವಾಗಿದೆ.
08:10 AM (IST) Jan 22
ಬೆಂಗಳೂರಿನ ಬೀದಿಯಲ್ಲಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ಸೀರೆಯುಟ್ಟಿದ್ದ ಜರ್ಮನ್ ಯುವತಿ ಲಿಜ್ ಅವರ ಫೋಟೋಗಳನ್ನು ತೆಗೆದಿದ್ದಾರೆ. ಈ ಫೋಟೋಗಳು ಮತ್ತು ವೀಡಿಯೋಗಳು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಸೌಂದರ್ಯಕ್ಕೆ ಮಾರುಹೋಗಿ 'ಹೊಸ ನ್ಯಾಷನಲ್ ಕ್ರಶ್' ಎಂದು ಕರೆಯುತ್ತಿದ್ದಾರೆ.
07:14 AM (IST) Jan 22
ಬೆಂಗಳೂರು ಏರ್ಪೋರ್ಟ್ನಲ್ಲಿ ತಪಾಸಣೆ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸಿ ತಬ್ಬಿಕೊಂಡು ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.