ನವದೆಹಲಿ: ಭವಿಷ್ಯನಿಧಿ ಚಂದಾದಾರರು ಇಪಿಎಫ್ ಹಣವನ್ನು ಪಡೆಯಲಿರುವ ನಿಯಮವನ್ನು ಮತ್ತಷ್ಟು ಸರ್ಕಾರ ಸರಳಗೊಳಿಸಲಿದ್ದು, ಶೀಘ್ರ ಯುಪಿಐ ಮೂಲಕವೇ ಪಿಎಫ್ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾದ ನಿಯಮ ಜಾರಿಗೆ ತರಲು ಮುಂದಾಗಿದೆ.
ಮಂಗಳವಾರ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ‘ಪಿಎಫ್ ಖಾತೆಯನ್ನು ಯುಪಿಐ ಮೂಲಕ ಬ್ಯಾಂಕ್ ಖಾತೆಗೆ ಸಂಯೋಜನೆ ಮಾಡಲು ಅವಕಾಶ ನೀಡಲಾಗುವುದು’ ಎಂದರು.
‘ನೌಕರರ ಆಧಾರ್ ಸಂಖ್ಯೆ ಇಪಿಎಫ್ ಖಾತೆ ಮತ್ತು ಅವರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದರಿಂದ ಅರ್ಜಿ ಸಲ್ಲಿಸಿದ ಬಳಿಕ ಹಣ ಯುಪಿಐ ಮೂಲಕ ಹಣ ಪಾವತಿಗೆ ಅನುವು ಮಾಡಿಕೊಡಲಾಗುವುದು. ಯುಪಿಐ ಪಾವತಿ ಗೇಟ್ ವೇ ಮೂಲಕ ಸದಸ್ಯರು ನೌಕರರ ಭವಿಷ್ಯ ನಿಧಿ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಗ್ರಾಹಕರು ವಿತ್ ಡ್ರಾ ಮಾಡಿಕೊಂಡ ಮೊತ್ತ ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದರು.
08:31 AM (IST) May 20
ಟಿವಿಕೆ ಸರ್ಕಾರಕ್ಕೆ ಎಐಎಡಿಎಂಕೆ ಶಾಸಕರು ಬೆಂಬಲ ನೀಡಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ಖಡಕ್ ಸಂದೇಶವೊಂದನ್ನು ರವಾನಿಸಿದೆ ಎಂದು ವರದಿಯಾಗುತ್ತಿದೆ.
08:20 AM (IST) May 20