ನವದೆಹಲಿ: ಭವಿಷ್ಯನಿಧಿ ಚಂದಾದಾರರು ಇಪಿಎಫ್ ಹಣವನ್ನು ಪಡೆಯಲಿರುವ ನಿಯಮವನ್ನು ಮತ್ತಷ್ಟು ಸರ್ಕಾರ ಸರಳಗೊಳಿಸಲಿದ್ದು, ಶೀಘ್ರ ಯುಪಿಐ ಮೂಲಕವೇ ಪಿಎಫ್ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾದ ನಿಯಮ ಜಾರಿಗೆ ತರಲು ಮುಂದಾಗಿದೆ.
ಮಂಗಳವಾರ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ‘ಪಿಎಫ್ ಖಾತೆಯನ್ನು ಯುಪಿಐ ಮೂಲಕ ಬ್ಯಾಂಕ್ ಖಾತೆಗೆ ಸಂಯೋಜನೆ ಮಾಡಲು ಅವಕಾಶ ನೀಡಲಾಗುವುದು’ ಎಂದರು.
‘ನೌಕರರ ಆಧಾರ್ ಸಂಖ್ಯೆ ಇಪಿಎಫ್ ಖಾತೆ ಮತ್ತು ಅವರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದರಿಂದ ಅರ್ಜಿ ಸಲ್ಲಿಸಿದ ಬಳಿಕ ಹಣ ಯುಪಿಐ ಮೂಲಕ ಹಣ ಪಾವತಿಗೆ ಅನುವು ಮಾಡಿಕೊಡಲಾಗುವುದು. ಯುಪಿಐ ಪಾವತಿ ಗೇಟ್ ವೇ ಮೂಲಕ ಸದಸ್ಯರು ನೌಕರರ ಭವಿಷ್ಯ ನಿಧಿ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಗ್ರಾಹಕರು ವಿತ್ ಡ್ರಾ ಮಾಡಿಕೊಂಡ ಮೊತ್ತ ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದರು.
09:47 PM (IST) May 20
ಕೋಯಿಕ್ಕೋಡ್ ಬೀಚ್ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಆದ ಗದ್ದಲದ ಬಗ್ಗೆ ನಟಿ ರಂಜಿನಿ ಹರಿದಾಸ್ ಈಗ ಮಾತನಾಡಿದ್ದಾರೆ. ಮಕ್ಕಳು ತಪ್ಪಿಹೋದ ಗಂಭೀರ ವಿಚಾರವನ್ನು ಕೆಲವರು ತಮಾಷೆ ಮಾಡಿದ್ದಕ್ಕೆ ತಾನು ಗರಂ ಆಗಿದ್ದಾಗಿ ಹೇಳಿಕೊಂಡಿದ್ದಾರೆ.
09:40 PM (IST) May 20
ಕಳೆದ ಎರಡು ತಿಂಗಳಲ್ಲಿ ಹೀರೊ ಸ್ಪ್ಲೆಂಡರ್ ಮತ್ತು ಎಚ್ಎಫ್ ಡಿಲಕ್ಸ್ ಬೈಕ್ಗಳು 4 ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕೈಗೆಟುಕುವ ಬೆಲೆಯೇ ಈ ಯಶಸ್ಸಿಗೆ ಕಾರಣವಾಗಿದೆ.
09:13 PM (IST) May 20
ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು.
08:31 PM (IST) May 20
‘ಭಗವತಿ’ ಚಿತ್ರದಲ್ಲಿ ದಳಪತಿ ವಿಜಯ್ ಅವರ ಸಹೋದರನಾಗಿ ನಟಿಸಿದ್ದ ತಮಿಳು ನಟ ಜೈ ಸಂಪತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 2011ರಿಂದಲೇ ಇಸ್ಲಾಂ ಆಚರಣೆಗಳನ್ನು ಪಾಲಿಸುತ್ತಿರುವ ಅವರು, ಮಸೀದಿಯಲ್ಲಿ ತಮಗೆ ದೊರೆತ ಸಮಾನತೆ ಮತ್ತು ಶಾಂತಿಯೇ ಈ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.
08:19 PM (IST) May 20
ಜೂ.ಎನ್ಟಿಆರ್ ತಮ್ಮ ತಾಯಿಯ ಬಗ್ಗೆ ಕೆಲವು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಶಾಲಿನಿ ಮತ್ತು ತಂದೆ ಹರಿಕೃಷ್ಣ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಎನ್ಟಿಆರ್ ಏನೆಲ್ಲಾ ಹೇಳಿದ್ದಾರೆ.
07:49 PM (IST) May 20
ಇಟಲಿಯ ಮೊದಲ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೀವನ ಸಾಮಾನ್ಯವಾದುದಲ್ಲ. ಮುರಿದ ಸಂಸಾರ, ಬಡತನ, ನೈಟ್ಕ್ಲಬ್ನಲ್ಲಿ ಬಾರ್ಟೆಂಡರ್ ಕೆಲಸದಂತಹ ಕಠಿಣ ಹಾದಿಗಳನ್ನು ದಾಟಿ, ತಮ್ಮ ಛಲ ಮತ್ತು ಪರಿಶ್ರಮದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ.
07:10 PM (IST) May 20
ಮಾನ್ಸೂನ್ ಆರಂಭಗೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಕೆಲೆವಡೆ ಭಾರಿ ಮಳೆಯಾಗುತ್ತಿದೆ. ಉತ್ತರ ಪ್ರದೇಶದ ಬಿರುಗಾಳಿ ಮಳೆ ಅವಾಂತರ ಆತಂಕ ತರಿಸಿದೆ. ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.
06:59 PM (IST) May 20
ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪ ಮಾಡಿರುವ ಅವರು, ಈಗ ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ. ಮುಂದೇನು ಗತಿ?
06:41 PM (IST) May 20
06:38 PM (IST) May 20
ಜಾನ್ವಿ ಕಪೂರ್ ಸದ್ಯ 'ಪೆದ್ದಿ' ಸಿನಿಮಾದಿಂದಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇದರ ಟ್ರೇಲರ್ ರಿಲೀಸ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ಜೂನ್ 4 ರಂದು ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜಾನ್ವಿ ಅವರ ಬಾಕ್ಸ್ ಆಫೀಸ್ ರೆಕಾರ್ಡ್ ಹೇಗಿದೆ ನೋಡೋಣ.
06:19 PM (IST) May 20
ಜೂ.ಎನ್ಟಿಆರ್ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ನಲ್ಲಿ ಸುಮಾರು 12 ಸ್ಟಾರ್ಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬ ನಟಿಯೂ ಇದ್ದಾರೆ. ಆ ನಟಿ ಯಾರು, ಅವರು ಇಲ್ಲಿಯವರೆಗೆ ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
05:53 PM (IST) May 20
05:48 PM (IST) May 20
ಜೂ.ಎನ್ಟಿಆರ್ ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್'ನ ಫಸ್ಟ್ ಲುಕ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
05:42 PM (IST) May 20
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕೋಲ್ಕತ್ತಾದ ಐತಿಹಾಸಿಕ ನಖೋಡಾ ಮಸೀದಿಯ ಇಮಾಮ್, ಈದ್ ಸಂದರ್ಭದಲ್ಲಿ ಗೋಹತ್ಯೆಯನ್ನು ತಪ್ಪಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಹೊಸ ಸರ್ಕಾರದ ಕಠಿಣ ಪ್ರಾಣಿ ವಧೆ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದಾರೆ.
05:30 PM (IST) May 20
ಜೂ.ಎನ್ಟಿಆರ್ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಟೀಸರ್ನಲ್ಲಿ ಸುಮಾರು 12 ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.
05:14 PM (IST) May 20
05:08 PM (IST) May 20
ನಟ ರಿಷಬ್ ಶೆಟ್ಟಿ ಅವರು ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೇಲರ್ ಅನ್ನು 'ಅದ್ಭುತ' ಎಂದು ಬಣ್ಣಿಸಿದ್ದಾರೆ. ಜೂನ್ 4, 2026 ರಂದು ಈ ಸಿನಿಮಾ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ..
05:02 PM (IST) May 20
04:44 PM (IST) May 20
ಜೂ.ಎನ್ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದ ಸ್ಪೆಷಲ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಭಿಮಾನಿಗಳ ನಿರೀಕ್ಷೆ ಮೀರಿ ಜೂ.ಎನ್ಟಿಆರ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
04:27 PM (IST) May 20
ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
04:18 PM (IST) May 20
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ BTS ಫೋಟೋಗಳು ವೈರಲ್ ಆಗಿವೆ. ಹೊಸ ಗ್ಯಾಂಗ್ಸ್ಟರ್ ಲುಕ್ನಲ್ಲಿ ಯಶ್ ಮಿಂಚಿದ್ದು, ಸಿನಿಮಾದ ಕಥೆ ಹಾಗೂ ರಿಲೀಸ್ ಡೇಟ್ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
03:57 PM (IST) May 20
ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, "ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?" ಎಂದಿದ್ದಾರೆ ನಟ..
03:51 PM (IST) May 20
ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೊಡಿ ಚಾಕೊಲೇಟ್ ನೀಡಿದ ವಿಡಿಯೋ ವೈರಲ್ ಆದ ಬಳಿಕ, ಹೂಡಿಕೆದಾರರು ತಪ್ಪಾಗಿ 'ಪಾರ್ಲೆ ಇಂಡಸ್ಟ್ರೀಸ್' ಷೇರುಗಳನ್ನು ಖರೀದಿಸಿದರು. ಇದರಿಂದ ಷೇರು ಬೆಲೆ ಶೇ. 5ರಷ್ಟು ಏರಿಕೆಯಾಗಿದೆ.
03:44 PM (IST) May 20
ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೋಲೇಟ್ ಗಿಫ್ಟ್ ನೀಡಿದ ಬೆನ್ನಲ್ಲೇ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಪ್ರಮುಖವಾಗಿ ಪಾರ್ಲೆ ಜಿ ಕಂಪನಿಯ ಮೆಲೋಡಿ ಚಾಕೋಲೇಟ್ ಬ್ಲಿಂಕಿಟ್ ಸೇರಿದಂತೆ ಹಲವು ಇ ಕಾಮರ್ಸ್ ತಾಣದಲ್ಲಿ ಖಾಲಿಯಾಗಿದೆ.
02:56 PM (IST) May 20
ಇಂಜಿನಿಯರ್ಗಳು ಎಐ ಬಳಸಿ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ಯಾವುದೇ ಕಾಮಗಾರಿ ನಡೆಸದೆ, ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ ಫೋಟೋಗಳನ್ನು ಬಳಸಿ ಒಳಚರಂಡಿ ಮತ್ತು ಒಡ್ಡು ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬಿಲ್ ಕ್ಲಿಯರ್ ಮಾಡಿಕೊಂಡಿದ್ದಾರೆ. ಈ ಭ್ರಷ್ಟಾಚಾರದಿಂದಾಗಿ 12ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಅಪಾಯವನ್ನು ಎದುರಿಸುತ್ತಿವೆ.
02:26 PM (IST) May 20
ಬೆಂಗಳೂರು: 19ನೇ ಆವೃತ್ತಿಯ IPL ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಈಗಾಗಲೇ 3 ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಲಖನೌ ಎದುರು ರಾಜಸ್ಥಾನದ ಗೆಲುವು ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.
01:02 PM (IST) May 20
12:51 PM (IST) May 20
ಪ್ರಧಾನಿ ನರೇಂದ್ರ ಮೋದಿಯ ಪ್ರವಾಸದಲ್ಲಿ ಇಟಲಿ ಭೇಟಿ ಭಾರಿ ಚರ್ಚೆಯಾಗುತ್ತಿದೆ. ಕೊಲೊಸಿಯಂ ಭೇಟಿ ಹಾಗೂ ಮಾತುಕತೆ ಬೆನ್ನಲ್ಲೇ ಇದೀಗ ಖುದ್ದು ಇಟಲಿ ಪ್ರಧಾನಿ ಸೆಲ್ಫಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೋದಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ.
12:08 PM (IST) May 20
11:35 AM (IST) May 20
AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರು ಮತ್ತು ಪಾರ್ಸಿಗಳ ಜನಸಂಖ್ಯೆಯನ್ನು ಹೋಲಿಸಿ ರಿಜಿಜು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಓವೈಸಿ ಆಕ್ಷೇಪ ವ್ಯಕ್ತಪಡಿಸಿದರು.
10:42 AM (IST) May 20
ಮೇ 15 ರಂದು ವಿಶ್ವಾದ್ಯಂತ ಬಿಡುಗಡೆಯಾದ 'ಕರುಪ್ಪು', ಸೂರ್ಯ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದೆ. ಸೂರ್ಯ ಇಲ್ಲಿ ಕರುಪ್ಪಸ್ವಾಮಿಯ ಅವತಾರದಲ್ಲಿ ನ್ಯಾಯಾಲಯದ ಅನ್ಯಾಯಗಳ ವಿರುದ್ಧ ಗುಡುಗಿದ್ದಾರೆ. ಆರ್.ಜೆ. ಬಾಲಾಜಿ ವಕೀಲನಾಗಿ ಸೂರ್ಯನಿಗೆ ಸಾಥ್ ನೀಡಿದ್ದು, ಸಿನಿಮಾ ಸೂಪರ್ ಹಿಟ್..
10:33 AM (IST) May 20
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ದೇಶಗಳ ಪ್ರವಾಸದ ಭಾಗವಾಗಿ ರೋಮ್ಗೆ ಭೇಟಿ ನೀಡಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದರು. ಇಬ್ಬರೂ ನಾಯಕರು ಕೊಲೋಸಿಯಂನಲ್ಲಿ ಸುದೀರ್ಘ ಚರ್ಚೆ ನಡೆಸಿ, ಭಾರತ-ಇಟಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು.
10:08 AM (IST) May 20
10:02 AM (IST) May 20
ನಾರ್ವೆಯ ಪತ್ರಕರ್ತೆಯೊಬ್ಬರು ತಮ್ಮ ಪ್ರಶ್ನೆಯನ್ನು ಪ್ರಧಾನಿ ಮೋದಿ ಸ್ವೀಕರಿಸಲಿಲ್ಲ ಎಂದು ಹೇಳಿದ ನಂತರ, ರಾಹುಲ್ ಗಾಂಧಿ ಅವರು 'ಕೆಲವು ಪ್ರಶ್ನೆಗಳಿಂದ ಓಡಿಹೋಗುತ್ತಿದ್ದಾರೆ' ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
08:31 AM (IST) May 20
ಟಿವಿಕೆ ಸರ್ಕಾರಕ್ಕೆ ಎಐಎಡಿಎಂಕೆ ಶಾಸಕರು ಬೆಂಬಲ ನೀಡಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ಖಡಕ್ ಸಂದೇಶವೊಂದನ್ನು ರವಾನಿಸಿದೆ ಎಂದು ವರದಿಯಾಗುತ್ತಿದೆ.
08:20 AM (IST) May 20