ಮೈಸೂರಿನ ಕೃಷಿ ಪದವೀಧರೆ ಸುಧಾ ಸಂದೀಪ್ ಅವರು ಪಂಚಗವ್ಯ ಬಳಸಿ ತಮ್ಮ ಒಣಗಿದ ತೋಟಕ್ಕೆ ಮರುಜೀವ ನೀಡಿದ್ದಾರೆ. ರಾಸಾಯನಿಕ ಮುಕ್ತವಾದ ಈ ಸಾಂಪ್ರದಾಯಿಕ ವಿಧಾನದಿಂದಾಗಿ, ಅವರ ತೋಟದಲ್ಲಿ ತರಕಾರಿಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಇದು ಇತರ ಕೃಷಿಕರಿಗೆ ಸ್ಫೂರ್ತಿಯಾಗಿದೆ.

ಬಿಸಿಲಿನ ತಾಪಕ್ಕೆ ಒಣಗಿದ ಗಿಡಗಳೂ ಈಗ ಜೀವ ಪಡೆದಿವೆ. ತೋಟದ ತುಂಬಾ ತರಕಾರಿಗಳು ನಳನಳಿಸುತ್ತಿವೆ. ರಾಸಾಯನಿಕದ ಸೋಂಕು ಇಲ್ಲದೇ ಭೂತಾಯಿ ನೆಮ್ಮದಿಯಿಂದ ಫಲ ನೀಡುತ್ತಿದ್ದಾಳೆ. ಮೈಸೂರು ಜಿಲ್ಲೆಯ ಹುಣಸೂರಿನ ಎಂಎಸ್ಸಿ ಕೃಷಿ ಪದವೀಧರೆ ಸುಧಾ ಸಂದೀಪ್ ಅವರ ತೋಟ ಇದೀಗ ರಾಜ್ಯದ ಮೂಲೆ ಮೂಲೆಗಳ ಕೃಷಿಕರನ್ನು ಆಕರ್ಷಿಸುತ್ತಿದೆ. ಐಟಿ-ಬಿಟಿ ಕಂಪೆನಿಗಳನ್ನು ಬಿಟ್ಟು ಕೃಷಿಯತ್ತ ವಾಲುತ್ತಿರುವ ಅಸಂಖ್ಯ ಉದ್ಯೋಗಿಗಳಿಗೆ ಸುಧಾ ಅವರ ಈ ಕೃಷಿ ಒಂದು ಪಾಠವೂ ಆಗಲಿದೆ. ಕೃಷಿಯನ್ನು ಮಾಡುವ ಆಸೆ ಹೊತ್ತು, ಆ ಕ್ಷಣದ ಲಾಭಕ್ಕಾಗಿ ಕಾಯದೇ, ಭವಿಷ್ಯದ ಬಗ್ಗೆಯೂ ಯೋಚನೆ ಮಾಡಿದರೆ, ಒಣಗಿನ ಭೂಮಿಯಲ್ಲಿಯೂ ಹಸಿರು ಚಿಮ್ಮಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಸುಧಾ ಸಂದೀಪ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ರಾಸಾಯನಿಕ ಮುಕ್ತವಾಗಿರುವ ಇವರ ತೋಟದಲ್ಲಿ ಇಂಥದ್ದೊಂದು ಕಮಾಲ್​ಗೆ ಕಾರಣವಾಗಿರುವುದು ಪಂಚಗವ್ಯ. ಬಿಸಿಲಿನ ತಾಪಕ್ಕೆ ತೋಟದ ಗಿಡಗಳು ಒಣಗಿದಾಗಲೂ ಅವರ ನೆರವಿಗೆ ಬಂದದ್ದು ಇದೇ ಪಂಚಗವ್ಯ ಎನ್ನುತ್ತಾರೆ ಸುಧಾ. ಗೋವನ್ನು ಮಾತೆ ಎಂದು ಹಿಂದೂಗಳು ಪೂಜಿಸುವುದು ಕೂಡ ಇದೇ ಕಾರಣಕ್ಕೆ. ಇದ್ದರೂ, ಸತ್ತರೂ ಗೋವಿನಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಪಂಚಗವ್ಯ ಎನ್ನುವುದು ಕೂಡ ಗೋಮಾತೆ ಕೃಷಿಕರಿಗೆ ನೀಡುತ್ತಿರುವ ಜೀವನಾಮೃತವೇ ಆಗಿದೆ. ಹಸುವಿನಿಂದ ದೊರೆಯುವ ಐದು ಪ್ರಮುಖ ಉತ್ಪನ್ನಗಳನ್ನು (ಸಗಣಿ, ಗಂಜಲ, ಹಾಲು, ಮೊಸರು ಮತ್ತು ತುಪ್ಪ) ಬಳಸಿ ತಯಾರಿಸುವ ಸಾಂಪ್ರದಾಯಿಕವಾಗಿ ತಯಾರಿಸುವುದೇ ಪಂಚಗವ್ಯ.

ಫಲವೇ ನೀಡುವುದಿಲ್ಲ ಎಂದುಕೊಂಡಿದ್ದ ಬೆಂಡೇಕಾಯಿ ಗಿಡ, ಪ್ರತಿ ಎರಡು ಮೂರು ದಿನಗಳಿಗೊಮ್ಮೆ 500–750 ಗ್ರಾಂ ಬೆಂಡೆಕಾಯಿಯನ್ನು ನೀಡುತ್ತಿದೆ. ಯಾವುದೇ ರೋಗ ಅಥವಾ ಕೀಟಗಳ ದಾಳಿಯಿಲ್ಲದೆ ಸಸ್ಯಗಳು ಅಭಿವೃದ್ಧಿ ಹೊಂದುತ್ತಿವೆ. ಸುಧಾ ಅವರ ಸಸ್ಯಗಳು ಪ್ರಮುಖ ರೋಗ ಅಥವಾ ಕೀಟ ಸಮಸ್ಯೆಗಳಿಲ್ಲದೆ ಚೆನ್ನಾಗಿ ಬೆಳೆದಿವೆ.

ಅಭೂತಪೂರ್ವ ಸಾಧನೆ

ಇದಾಗಲೇ ಸಾವಯವ, ನೈಸರ್ಗಿಕ ಕೃಷಿಯತ್ತ ವಾಲಿ ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಕೃಷಿಕರು ಕೆಲವರು ಇದ್ದಾರೆ. ಭೂಮಿ ತಾಯಿಗೆ ರಾಸಾಯನಿಕ ಸೋಕಿಸಬೇಡಿ, ಆ ಕ್ಷಣದಲ್ಲಿ ಬೆಳೆ ಬಂದರೂ ಅದು ವಿಷಯುಕ್ತವಾಗಿರುತ್ತದೆ. ಆದರೆ ಅದರ ಆಯಸ್ಸು ಕೆಲವೇ ವರ್ಷ ಎಂದು ಸಾವಯವ ಕೃಷಿಕರು ಹೇಳುತ್ತಿದ್ದರೂ, ಕ್ಷಣಿಕ ಲಾಭಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸುವವರು ಧಾರಾಳವಾಗಿ ಕಾಣಿಸುತ್ತಾರೆ. ಆದರೆ ಅದರ ನಡುವೆಯೂ, ಅಲ್ಲಲ್ಲಿ ಕೆಲವು ಕೃಷಿಕರು, ಹೀಗೆ ಸಾಧನೆ ಮಾಡಿ, ರಾಸಾಯನಿಕ ಮುಕ್ತ ಕೃಷಿಯಲ್ಲಿ ಕಾರ್ಯನಿರತರಾಗಿದ್ದಾರೆ. ಮನೆಯಲ್ಲಿ ತಯಾರಿಸಿದ ದ್ರಾವಣಗಳೇ ಈ ಸಸ್ಯಗಳಿಗೆ ಅಮೃತವಾಗಿದೆ. ಪಂಚಗವ್ಯಗಳ ಜೊತೆ, ಬೆಲ್ಲ, ತೆಂಗಿನ ನೀರು, ಬಾಳೆಹಣ್ಣು ಮತ್ತು ನೀರು ಕೂಡ ಸೇರಿಸಿ ಜೈವಿಕ ಗೊಬ್ಬರ ತಯಾರಿಸಲಾಗುತ್ತದೆ.

ತಯಾರಿಸುವುದು ಹೇಗೆ?

ಕೃಷಿ ವಿಶ್ವವಿದ್ಯಾಲಯಗಳು ಕೂಡ ಇದರ ಬಗ್ಗೆ ಮಾಹಿತಿ ನೀಡಿವೆ. ಪಂಚಾಮೃತ, ಜೈವಿಕ ಗೊಬ್ಬರ ಮಾಡುವ ವಿಧಾನವನ್ನೂ ತಿಳಿಸುತ್ತಿದ್ದು, ಕೃಷಿಕರನ್ನು ಉತ್ತೇಜಿಸುತ್ತಲೇ ಬಂದಿವೆ. ಹಸುವಿನ ಸಗಣಿ ಮತ್ತು ತುಪ್ಪವನ್ನು ಮೊದಲು ಹುದುಗಿಸಲಾಗುತ್ತದೆ, ನಂತರ ಹಸುವಿನ ಮೂತ್ರ ಮತ್ತು ನೀರು, ಮತ್ತು ನಂತರ ಹಾಲು, ಮೊಸರು, ತೆಂಗಿನ ನೀರು, ಬೆಲ್ಲ ಮತ್ತು ಬಾಳೆಹಣ್ಣು ಮುಂತಾದವುಗಳನ್ನು ಸೇರಿಸಲಾಗುತ್ತದೆ. ಸಂಪೂರ್ಣ ತಯಾರಿಕೆಯ ಪ್ರಕ್ರಿಯೆಯು ಬಳಕೆಗೆ ಸಿದ್ಧವಾಗುವ ಮೊದಲು ಸುಮಾರು 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಪಂಚಗವ್ಯವನ್ನು ಲೋಹದ ಪಾತ್ರೆಗಳಲ್ಲಿ ತಯಾರಿಸಬಾರದು. ಪ್ಲಾಸ್ಟಿಕ್, ಜೇಡಿಮಣ್ಣಿನ ಅಥವಾ ಕಾಂಕ್ರೀಟ್ ಪಾತ್ರೆಗಳನ್ನು ಶಿಫಾರಸು ಮಾಡಲಾಗಿದೆ. ಮಿಶ್ರಣವನ್ನು ನೆರಳಿನಲ್ಲಿ ಸಂಗ್ರಹಿಸಬೇಕು ಮತ್ತು ಎರಡೂ ದಿಕ್ಕುಗಳಲ್ಲಿ ನಿಯಮಿತವಾಗಿ ಬೆರೆಸಬೇಕು. ಸರಿಯಾಗಿ ನಿರ್ವಹಿಸಿದರೆ ಇದನ್ನು ಆರು ತಿಂಗಳವರೆಗೆ ಸಂಗ್ರಹಿಸಬಹುದು ಮತ್ತು ಪರಿಣಾಮಕಾರಿಯಾಗಿ ಬಳಸಬಹುದು.

ಸಾಮಾನ್ಯವಾಗಿ, 2-3 ಲೀಟರ್ ಪಂಚಗವ್ಯವನ್ನು 100 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಲಾಗುತ್ತದೆ. ಇದನ್ನು ಸಸ್ಯಗಳ ಬುಡದಲ್ಲಿಯೂ ಅನ್ವಯಿಸಬಹುದು. ಇದನ್ನು ಸಾಮಾನ್ಯವಾಗಿ ಪ್ರತಿ 15 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಬಳಸಲಾಗುತ್ತದೆ ಮತ್ತು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಹೂವುಗಳು ಮತ್ತು ಇತರ ಬೆಳೆಗಳಿಗೆ ಸೂಕ್ತವಾಗಿದೆ. ಪಂಚಗವ್ಯವು ಉಪಯುಕ್ತ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುವ ಮೂಲಕ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಬಲವಾದ ಬೇರುಗಳು, ಉತ್ತಮ ಎಲೆಗಳ ಬೆಳವಣಿಗೆ, ಸುಧಾರಿತ ಹೂಬಿಡುವಿಕೆಯನ್ನು ಬೆಂಬಲಿಸುತ್ತದೆ ಮತ್ತು ಸಸ್ಯಗಳು ಶಾಖ ಮತ್ತು ಶುಷ್ಕತೆಯಂತಹ ಪರಿಸರ ಒತ್ತಡವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.