ಯಾವಾಗಲೂ ಟಾಪ್ 5 ಸೀರಿಯಲ್‌ಗಳ ಪಟ್ಟಿಯಲ್ಲಿ ಜೀ ಕನ್ನಡದ ನಾಲ್ಕೈದು ಧಾರಾವಾಹಿಗಳಿರುತ್ತಿದ್ದವು. ಆದರೆ ಈ ವಾರ ಚಿತ್ರಣ ಉಲ್ಟಾ ಪಲ್ಟಾ ಆಗಿದೆ. 'ಅಣ್ಣಯ್ಯ' ಧಾರಾವಾಹಿ ಉತ್ತಮ ರೇಟಿಂಗ್ ಪಡೆದಿದೆ. ಆದರೆ, ಮಿಕ್ಕಂತೆ ಕಲರ್ಸ್ ಕನ್ನಡ ಧಾರಾವಾಹಿಗಳು ಮಿಂಚಿವೆ!

ಕಿರುತೆರೆಯ ‘ಟಿಆರ್‌ಪಿ’ ಕದನ: ಈ ವಾರದ ಮಹಾ ತಿರುವು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಕಿರುತೆರೆಯ ಅಂಗಳದಲ್ಲಿ ಈಗ ಈಗ ಟಿಅರ್‌ಪಿ ಲೆಕ್ಕಾಚಾರ ಹೊಸ ಸಂಚಲನ ಮೂಡಿಸಿದೆ. ಇಷ್ಟು ದಿನ ಟಿಆರ್‌ಪಿ ಸಿಂಹಾಸನದಲ್ಲಿ 'ಏಕಚಕ್ರಾಧಿಪತಿ'ಯಾಗಿ ಮೆರೆಯುತ್ತಿದ್ದ ಜೀ ಕನ್ನಡ ವಾಹಿನಿಗೆ (Zee Kannada) ಈಗ ಕಲರ್ಸ್ ಕನ್ನಡ (Colors Kannada) ಅನಿರೀಕ್ಷಿತ ಫೈಟ್ ನೀಡಿದೆ. ಪ್ರತಿ ವಾರ ಟಾಪ್ 5 ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದ ಜೀ ಕನ್ನಡಕ್ಕೆ ಈ ವಾರ ಅನಿರೀಕ್ಷಿತ ಆಘಾತ ಎದುರಾಗಿದ್ದು, ಕಿರುತೆರೆ ಪ್ರೇಕ್ಷಕರ ಪಲ್ಸ್ ಬದಲಾಗುತ್ತಿದೆಯೇ? ಈ ಸ್ಟೋರಿ ನೋಡಿ..

ಧಾರಾವಾಹಿಗಳಲ್ಲಿ ಬರುವ ಒಂದಿಷ್ಟು ರೋಚಕ ಟ್ವಿಸ್ಟ್, ವಿಶೇಷ ಎಪಿಸೋಡ್‌ ಜೊತೆಗೆ ಕ್ರಿಕೆಟ್ ಅಬ್ಬರ, ಸಿನಿಮಾ ಅಥವಾ ಇನ್ನಿತರ ಬೆಳವಣಿಗೆಗಳಿಂದ ಕೂಡ ಸೀರಿಯಲ್‌ ಟಿಆರ್‌ಪಿಯಲ್ಲಿ ಆಗಾಗ ಬದಲಾವಣೆ ಆಗುತ್ತಿರುತ್ತದೆ. ಎಲ್ಲ ವಾರವೂ ಎಲ್ಲ ಸೀರಿಯಲ್‌ ಟಿಆರ್‌ಪಿ ಒಂದೇ ರೀತಿ ಇರೋದಿಲ್ಲ. ಸೀರಿಯಲ್‌ಗಳ ಟಿಆರ್‌ಪಿ ಬದಲಾವಣೆ ಸಹಜ. ಹೀಗಾಗಿ ಈ ವಾರ ಕೂಡ ಕನ್ನಡ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?

ಕಲರ್ಸ್‌ ಕನ್ನಡ ಧಾರಾವಾಹಿಗಳು ನಂದಗೋಕುಲ ಧಾರಾವಾಹಿ ಆರಂಭ ಆದಾಗಿನಿಂದ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಟಿಆರ್‌ಪಿಯಲ್ಲಿ ಈಗ ಕಲರ್ಸ್‌ ಕನ್ನಡ ಸೀರಿಯಲ್‌ಗಳು ಒಳ್ಳೆಯ ಸುಧಾರಣೆ ಕಂಡಿರೋದಂತೂ ಸತ್ಯ. ಇನ್ನೊಂದು ಕಡೆ ಪವಿತ್ರ ಬಂಧನ ಸೀರಿಯಲ್‌ ಟಿಆರ್‌ಪಿ ಏರಿಕೆ ಆಗುತ್ತಲೇ ಇದೆ. ಕತೆಯಲ್ಲಿ ಬದಲಾವಣೆ, ಟ್ವಿಸ್ಟ್‌ ತಂದುಕೊಂಡು ವೀಕ್ಷಕರ ಪ್ರೀತಿಯನ್ನು ಗಳಿಸುತ್ತಿವೆ.

ನಂದಗೋಕುಲ ಧಾರಾವಾಹಿ 6.4 TVR ಗೌರಿ ಕಲ್ಯಾಣ ಧಾರಾವಾಹಿ 6.1 TVR ಗಂಧದಗುಡಿ ಧಾರಾವಾಹಿ 6.2 TVR ಮುದ್ದು ಸೊಸೆ ಧಾರಾವಾಹಿ 6.1 TVR ಪವಿತ್ರಬಂಧನ ಧಾರಾವಾಹಿ 6.1 TVR

ಜೀ ಕನ್ನಡ ಧಾರಾವಾಹಿಗಳು ಅಮೃತಧಾರೆ ಹಾಗೂ ಕರ್ಣ ಧಾರಾವಾಹಿಗಳಲ್ಲಿ ಸ್ಪರ್ಧೆ ಇದ್ದೇ ಇದೆ. ಈಗ ಅಣ್ಣಯ್ಯ ಸೀರಿಯಲ್‌ ಕೂಡ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ. ಒಟ್ಟಿನಲ್ಲಿ ಈ ಸೀರಿಯಲ್‌ಗಳು ಒಂದಿಷ್ಟು ಮೆಗಾ ಎಪಿಸೋಡ್‌ಗಳನ್ನು ಕೂಡ ಕೊಡುತ್ತಿವೆ. ಅಮೃತಧಾರೆ ಧಾರಾವಾಹಿ 5.9 ಅಣ್ಣಯ್ಯ ಧಾರಾವಾಹಿ 6.6 ಕರ್ಣ ಧಾರಾವಾಹಿ 5.8 ಲಕ್ಷ್ಮೀ ನಿವಾಸ ಧಾರಾವಾಹಿ 6.0 ಆದಿಲಕ್ಷ್ಮೀ ಧಾರಾವಾಹಿ 5.3

ಸ್ಟಾರ್‌ ಸುವರ್ಣ ಧಾರಾವಾಹಿಗಳು ಸ್ವಮೇಕ್‌ ಕಥೆಯಿಂದ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಒಳ್ಳೆಯ ಟಿಆರ್‌ಪಿ ಕಾಯ್ದುಕೊಂಡು ಬಂದಿದೆ. ವಿಶೇಷ ಪಾತ್ರಗಳ ಮೂಲಕ ಈ ಸೀರಿಯಲ್‌ ಟಿಆರ್‌ಪಿ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗೆ ಹೊಸ ಧಾರಾವಾಹಿಗಳು ಕೂಡ ರೋಚಕ ಕಥೆಗಳಿಂದ ಒಳ್ಳೆಯ ಟಿಆರ್‌ಪಿ ಪಡೆಯುತ್ತಿವೆ. ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 4.0 ಆಸೆ ಧಾರಾವಾಹಿ 3.3 ವಸುದೈವ ಕುಟುಂಬ ಧಾರಾವಾಹಿ 3.1

‘ಅಣ್ಣಯ್ಯ’

ಯಾವಾಗಲೂ ಟಾಪ್ 5 ಸೀರಿಯಲ್‌ಗಳ ಪಟ್ಟಿಯಲ್ಲಿ ಜೀ ಕನ್ನಡದ ನಾಲ್ಕೈದು ಧಾರಾವಾಹಿಗಳಿರುತ್ತಿದ್ದವು. ಆದರೆ ಈ ವಾರ ಚಿತ್ರಣ ಉಲ್ಟಾ ಪಲ್ಟಾ ಆಗಿದೆ. 'ಅಣ್ಣಯ್ಯ' ಧಾರಾವಾಹಿ ಒಳ್ಳೆಯ ಟಿಅರ್‌ಪಿ ಪಡೆದು ಇಡೀ ಕರ್ನಾಟಕದ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮಿದ್ದು, ಈ ಮೂಲಕ ತನ್ನ ಸ್ಥಾನ ಕಾಪಾಡಿಕೊಂಡಿದೆ. 'ಅಮೃತಧಾರೆ' ಮತ್ತು 'ಲಕ್ಷ್ಮೀ ನಿವಾಸ' ಸಮಾಧಾನಕರ ರೇಟಿಂಗ್ ತಂದುಕೊಟ್ಟಿವೆ. ಆದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಒಟ್ಟು ಲೆಕ್ಕಾಚಾರದಲ್ಲಿ ಜೀ ಕನ್ನಡದ ಇತರೆ ಸೀರಿಯಲ್‌ಗಳನ್ನು ಕಲರ್ಸ್ ಕನ್ನಡದ ಸೀರಿಯಲ್‌ಗಳು ಓವರ್‌ಟೇಕ್ ಮಾಡಿವೆ. 

ಕಲರ್ಸ್ ಕನ್ನಡದ ಪಂಚತಂತ್ರ!

ಹೌದು, ಕಲರ್ಸ್ ಕನ್ನಡ ವಾಹಿನಿಯ ಐದು ಧಾರಾವಾಹಿಗಳು ಒಟ್ಟಾಗಿ ಜೀ ಕನ್ನಡದ ಮೇಲೆ ದಾಳಿ ಮಾಡಿವೆ. 'ನಂದಗೋಕುಲ, 'ಶ್ರೀಗಂಧದ ಗುಡಿ', 'ಮುದ್ದು ಸೊಸೆ', 'ಪವಿತ್ರ ಬಂಧನ' ಮತ್ತು 'ಗೌರಿ ಕಲ್ಯಾಣ' ಈ ಎಲ್ಲಾ ಸೀರಿಯಲ್‌ಗಳು ಉತ್ತಮ ರೇಟಿಂಗ್ ಪಡೆದು ಜಂಟಿಯಾಗಿ ನಾಲ್ಕನೇ ಸ್ಥಾನ ಆಕ್ರಮಿಸಿಕೊಂಡಿವೆ. 

ದೊಡ್ಮನೆ ಹಬ್ಬದ ಎಫೆಕ್ಟ್ ಶುರುವಾಯ್ತೇ?

ಕಲರ್ಸ್ ಕನ್ನಡದಲ್ಲಿ ಈಗಷ್ಟೇ 'ಬಿಗ್ ಬಾಸ್ ಕನ್ನಡ 12' ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ಇದರ ನಡುವೆ ಹಳೆಯ ಹಿಟ್ ಶೀರ್ಷಿಕೆ 'ಅಗ್ನಿಸಾಕ್ಷಿ'ಯನ್ನು ಮತ್ತೆ ಬಳಸಿ ಹೊಸ ಧಾರಾವಾಹಿ ತರುತ್ತಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಈ ವಾರದ ಟಿಆರ್‌ಪಿ ರೇಟಿಂಗ್ ಸ್ಯಾಂಡಲ್‌ವುಡ್ ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ ಎನ್ನಬಹುದು. ಮುಂದಿನ ವಾರ ಜೀ ಕನ್ನಡ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ? ಅಥವಾ ಕಲರ್ಸ್ ಕನ್ನಡದ ಈ ಅಬ್ಬರ ಹೀಗೆಯೇ ಮುಂದುವರಿಯುತ್ತಾ? ಕಾದು ನೋಡಬೇಕು.