ವಿಶ್ವವಿಖ್ಯಾತ ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಲು ಸಜ್ಜಾಗಿದೆ. ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ, ಒಂದು ಸಾವಿರ ಡ್ರೋನ್ಗಳನ್ನು ಬಳಸಿ ಹಂಪಿಯ ಸ್ಮಾರಕಗಳ ಚಿತ್ತಾರವನ್ನು ಬಾನಂಗಳದಲ್ಲಿ ಮೂಡಿಸುವ ಅದ್ಭುತ ಡ್ರೋನ್ ಶೋ ಆಯೋಜಿಸಲಾಗಿದೆ.
- Home
- News
- State
- Karnataka News Live: ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ
Karnataka News Live: ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ನಿಗದಿತ ಸ್ಥಳ ಬಿಟ್ಟು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ಗಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡಿನಲ್ಲಿ ಲ್ಯಾಂಡಿಂಗ್ ಆಗಿ ಅಧಿಕಾರಿಗಳನ್ನು ಗಲಿಬಿಲಿ ಮಾಡಿದ ಘಟನೆ ಭಾನುವಾರ ಲಿಂಗಸುಗೂರಿನಲ್ಲಿ ಸಂಭವಿಸಿದೆ.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸಿಎಂ ಪ್ರಯಾಣಕ್ಕೆ ವಿಟಿ ಕಂಪನಿ ಹೆಲಿಕಾಪ್ಟರ್ ಕಾಯ್ದಿರಿಸಲಾಗಿತ್ತು. ಸಚಿವ ಸತೀಶ ಜಾರಕಿಹೊಳಿಗೂ ಇದೇ ಕಂಪನಿಯ ಒಂದೇ ಮಾದರಿಯ ಎರಡು ಪ್ರತ್ಯೇಕ ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಲಾಗಿತ್ತು. ಪಟ್ಟಣದ ಲಿಂಗಸುಗೂರು-ರಾಯಚೂರು ಮುಖ್ಯರಸ್ತೆ ಬದಿಯ ಖಾಸಗಿ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನಿರೀಕ್ಷಿಸಿದಂತೆ ಹೆಲಿಕಾಪ್ಟರ್ ಬಂದಿಳಿಯಿತು. ಆದರೆ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರಲಿಲ್ಲ. ಬದಲಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು. ಇದರಿಂದ ಅಧಿಕಾರಿಗಳು ಗಲಿಬಿಲಿಗೊಂಡರು
Karnataka News Live 9 February 2026ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ
Karnataka News Live 9 February 2026ತನ್ನ ಡಿಎನ್ಎ ಬಳಸಿ ಸೂಪರ್ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! 20 ಮಹಿಳೆಯರ ಗರ್ಭಿಣಿ ಮಾಡಲು ಬಯಸಿದ್ದ!
ಲೈಂಗಿಕ ಶೋಷಣೆಗ ಬಳಸುವ ಉದ್ದೇಶದಿಂದ ಅಪ್ರಾಪ್ತ ಮಕ್ಕಳ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೆರಿಕದ ಜೆಫ್ರೀ ಎಫ್ಸ್ಟೀನ್ ತನ್ನ ಡಿಎನ್ಎ ಬಳಸಿಕೊಂಡು ಸೂಪರ್ ರೇಸ್ (ಶ್ರೇಷ್ಠ ಮಾನವ ಕುಲ) ಸೃಷ್ಟಿಸುವ ಭಯಾನಕ ಯೋಜನೆಯೊಂದನ್ನು ಹಾಕಿಕೊಂಡಿದ್ದ!
Karnataka News Live 9 February 2026‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’
ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಮೌಲ್ಯಗಳ ಹತ್ಯೆಯಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೇಸರ ವ್ಯಕ್ತಪಡಿಸಿದೆ.
Karnataka News Live 9 February 2026ಮಂಡ್ಯದಲ್ಲಿ ಅರೈ ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ಕೇಂದ್ರ ಸಚಿವ ಹೆಚ್ಡಿಕೆ ಪತ್ರ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಅರೈ) ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Karnataka News Live 9 February 2026ಕೃಷಿ ಯೋಜನೆಯಲ್ಲಿ ರಾಜ್ಯ ಮಾದರಿ - ಚಲುವರಾಯಸ್ವಾಮಿ
ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊಮ್ಮಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ರಫ್ತು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡುವ ಅಗತ್ಯವಿದೆ ಎಂದು ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.