ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನ 18ನೇ ಆವೃತ್ತಿಯಲ್ಲಿ 8ನೇ ಸೋಲು ಅನುಭವಿಸಿದೆ. ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್ಗಳ ಅಂತರದಿಂದ ಸೋತು, ಚೆನ್ನೈ ಪ್ಲೇಆಫ್ನಿಂದ ಹೊರಬಿದ್ದಿದೆ. ಚಹಲ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಪೂರ್ತಿ ಓದಿ- Home
- News
- State
- Karnataka News Live: ಐಪಿಎಲ್ ಪ್ಲೇ ಆಫ್ ರೇಸ್ನಿಂದ ಚೆನ್ನೈ ಕಿಕೌಟ್; ಧೋನಿ ಪಡೆಗೆ ತವರಿನಲ್ಲೇ ಮುಖಭಂಗ
Karnataka News Live: ಐಪಿಎಲ್ ಪ್ಲೇ ಆಫ್ ರೇಸ್ನಿಂದ ಚೆನ್ನೈ ಕಿಕೌಟ್; ಧೋನಿ ಪಡೆಗೆ ತವರಿನಲ್ಲೇ ಮುಖಭಂಗ

ಗಂಗಾ ನದಿ ತಟದಲ್ಲಿನ ಗಂಗಾ ಆರತಿ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ದೇಶದ ಹಲವು ಭಾಗಗಳಿಂದ ಜನರು ತೆರಳುತ್ತಾರೆ. ಇದೇ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಡಿಕೆ ಶಿವಕುಮಾರ್ 92.30 ಕೋಟಿ ರೂಪಾಯಿ ವೆಚ್ಚದ ಯೋಚನೆ ಸಿದ್ಧಪಡಿಸಿದ್ದಾರೆ. ಕೆಆರ್ಎಸ್ ಜಲಾಶಯದ ಬೃಂದಾವನದ ಬಳಿ ಕಾವೇರಿ ಆರತಿ ಮಾಡಲು ಮೂಲಭೂತ ಸೌಕರ್ಯ ನೀಡುವ ಯೋಜನೆ ಇದಾಗಿದೆ. ಆದರೆ ಆರ್ಥಿಕ ಇಲಾಖೆ ಸಂಪೂರ್ಣ ಬರಿದಾಗಿದೆ. ಹೀಗಾಗಿ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ. ಕಾವೇರಿ ನೀರಾವರಿ ನಿಗಮದಲ್ಲಿ 2254 ಕೋಟಿ ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿ ಎಂದು ಇಲಾಖೆ ಸೂಚಿಸಿದೆ.
ಐಪಿಎಲ್ ಪ್ಲೇ ಆಫ್ ರೇಸ್ನಿಂದ ಚೆನ್ನೈ ಕಿಕೌಟ್; ಧೋನಿ ಪಡೆಗೆ ತವರಿನಲ್ಲೇ ಮುಖಭಂಗ
GIPKL 2025: ತಮಿಳ್ ತಂಡವನ್ನು ಸೋಲಿಸಿ ಚಾಂಪಿಯನ್ ಆದ ಮರಾಠಿ ವಲ್ಚರ್ಸ್!
ಗುರುಗ್ರಾಮದಲ್ಲಿ ಬುಧವಾರ ನಡೆದ ರೋಚಕ ಫೈನಲ್ನಲ್ಲಿ ತಮಿಳು ಲಯನ್ಸ್ ವಿರುದ್ಧ 40-30 ಅಂತರದಲ್ಲಿ ಗೆದ್ದ ಮರಾಠಿ ವಲ್ಚರ್ಸ್ GI-PKL 2025 ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದೆ.
ಪೂರ್ತಿ ಓದಿಪಾಕಿಸ್ತಾನ ಪ್ರಜೆ ಬಳಿ ಭಾರತದ ಆಧಾರ್, ವೋಟಿಂಗ್ ಮತ್ತು ರೇಷನ್ ಕಾರ್ಡ್!
ಪೆಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕುತ್ತಿರುವ ಭಾರತ ಸರ್ಕಾರಕ್ಕೆ ಆಘಾತ. ಪಾಕಿಸ್ತಾನದ ಪ್ರಜೆಯೊಬ್ಬ ತನ್ನ ಬಳಿ ಭಾರತದ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ಇದೆ, ಭಾರತದಲ್ಲಿ ವೋಟ್ ಕೂಡ ಹಾಕಿದ್ದೇನೆ ಎಂದು ಹೇಳಿದ್ದಾನೆ.
ಪೂರ್ತಿ ಓದಿಜಿಐ-ಪಿಕೆಎಲ್ 2025: ತಮಿಳು ಲಯನೆಸ್ ಚಾಂಪಿಯನ್
ಬುಧವಾರ ಗುರುಗ್ರಾಮದಲ್ಲಿ ನಡೆದ ಉದ್ಘಾಟನಾ ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್ (GI-PKL) ಟೂರ್ನಿಯಲ್ಲಿ ತಮಿಳ್ ಲಯನೆಸ್, ತೆಲುಗು ಚೀತಾ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
ನಟಿ ಲಾಸ್ಯ ನಾಗರಾಜ್ ತಾಯಿಗೆ ಸ್ವಂತ ತಂಗಿಯಿಂದಲೇ ಹಲ್ಲೆ; ವಿಡಿಯೋ ಸೆರೆ
ಕನ್ನಡ ನಟಿ ಲಾಸ್ಯ ನಾಗರಾಜ್ ಅವರ ತಾಯಿ ಡಾ.ಸುಧಾ ನಾಗರಾಜ್ ಮೇಲೆ ಅವರ ತಂಗಿ ಮತ್ತು ಬಾವ ದೈಹಿಕ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ನಡೆದ ಈ ಘಟನೆಗೆ ಮನೆ ಮುಂದಿನ ಜಾಗದ ವಿಚಾರ ಕಾರಣ ಎನ್ನಲಾಗಿದೆ. ಲಾಸ್ಯ ನಾಗರಾಜ್ ಪ್ರಸ್ತುತ ಕೆನಡಾದಲ್ಲಿದ್ದು, ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಭಾರತ ಪಾಕ್ ವಿಮಾನಗಳಿಗೆ ವಾಯುಪ್ರದೇಶ ಬಂದ್
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದಿಂದ ನೋಂದಾಯಿತ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ನಿರ್ಬಂಧವು 2025 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ.
ಪೂರ್ತಿ ಓದಿಕೇಂದ್ರದ ಜಾತಿ ಗಣತಿಗೆ ಸಿದ್ದರಾಮಯ್ಯ ಸ್ವಾಗತ; ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಆಗ್ರಹ!
ಕೇಂದ್ರ ಸರ್ಕಾರದ ಜಾತಿ ಗಣತಿಯ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಜಾತಿ ಗಣತಿ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಸಮೀಕ್ಷೆಗೆ ರಾಜ್ಯ ಸರ್ಕಾರದ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ.
ಪೂರ್ತಿ ಓದಿಆದಾಯ ತೆರಿಗೆ ರಿಟರ್ನ್ಸ್ ನೋಟಿಫಿಕೇಶನ್ ನೀಡಿದ ಇಲಾಖೆ
ಆಡಿಟ್ಗೆ ಒಳಪಡದ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025.
ಪೂರ್ತಿ ಓದಿರೈಲ್ವೆ ಪ್ರಯಾಣಕ್ಕೆ ಹೊಸ ನಿಯಮಗಳು: ಮೇ 1ರಿಂದ ಭಾರೀ ಬದಲಾವಣೆ
ಭಾರತೀಯ ರೈಲ್ವೆ ಇಲಾಖೆಯು ಮೇ 1, 2025 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್ಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ, ಕೇವಲ ಸಾಮಾನ್ಯ ಕೋಚ್ಗಳಲ್ಲಿ ಮಾತ್ರ ಪ್ರಯಾಣಿಸಬಹುದು.
ಪೂರ್ತಿ ಓದಿಭಾರತೀಯ ಶತಕೋಟ್ಯಾಧಿಪತಿಗಳ ಸಂಪತ್ತು ಏರಿಕೆ
ಮಾರ್ಚ್ ಮಧ್ಯಭಾಗದಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ಏರಿಕೆಯಿಂದಾಗಿ ಹಲವಾರು ಭಾರತೀಯ ಶತಕೋಟ್ಯಾಧಿಪತಿಗಳ ನಿವ್ವಳ ಮೌಲ್ಯ ಹೆಚ್ಚಾಗಿದೆ. ಮುಖೇಶ್ ಅಂಬಾನಿ 100 ಬಿಲಿಯನ್ ಡಾಲರ್ ಕ್ಲಬ್ಗೆ ಮತ್ತೆ ಪ್ರವೇಶಿಸಿದ್ದಾರೆ, ಗೌತಮ್ ಅದಾನಿ, ದಿಲೀಪ್ ಶಾಂಘ್ವಿ ಮತ್ತು ಇತರರು ಸಹ ಲಾಭ ಗಳಿಸಿದ್ದಾರೆ. ಆದರೆ, ಕೆಲವು ಶತಕೋಟ್ಯಾಧಿಪತಿಗಳು ಇನ್ನೂ ತಮ್ಮ ಹಿಂದಿನ ಗರಿಷ್ಠ ಮಟ್ಟವನ್ನು ತಲುಪಿಲ್ಲ.
ಪೂರ್ತಿ ಓದಿಬಸ್ನಲ್ಲಿ ನಮಾಜ್: NWKRTC ಚಾಲಕನ ವಿರುದ್ಧ ತನಿಖೆಗೆ ಆದೇಶ
ಹುಬ್ಬಳ್ಳಿ-ಹಾವೇರಿ NWKRTC ಬಸ್ನಲ್ಲಿ ಚಾಲಕ-ಕಂ-ನಿರ್ವಾಹಕರು ನಮಾಜ್ ಮಾಡಿದ್ದಕ್ಕೆ ಸಾರಿಗೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಪ್ರಯಾಣಿಕರು ಇದ್ದಾಗಲೇ ಬಸ್ನಲ್ಲಿ ನಮಾಜ್ ಮಾಡಿದ್ದು ಸೇವಾ ನಿಯಮ ಉಲ್ಲಂಘನೆಯಾಗಿದೆ.
ಪೂರ್ತಿ ಓದಿವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ 7 ಸದಸ್ಯರ ಸಂಪರ್ಕಿಸಿದ ಜೈಶಂಕರ್!
ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಏಳು ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರಗಳ ಜೊತೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಿದ್ದಾರೆ. ದಾಳಿಗೆ ಗಡಿಯಾಚೆಗಿನ ಸಂಪರ್ಕದ ಬಗ್ಗೆ ಅವರಿಗೆ ತಿಳಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ಒತ್ತಿ ಹೇಳಿದರು.
ಪೂರ್ತಿ ಓದಿಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರಿ?: ಕೆ.ಎಸ್.ಈಶ್ವರಪ್ಪ
ಕಾಶ್ಮೀರದಲ್ಲಿ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತಿರುವಾಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮುಸಲ್ಮಾನರ ಚೇಲಾಗಳಂತೆ ಮಾತನಾಡುತ್ತಿದ್ದಾರೆ.
ಪೂರ್ತಿ ಓದಿಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಮೊದಲ ಕಲ್ಲನ್ನು ಪಾಕ್ ಯೋಧರು ಇಡಲಿದ್ದಾರೆ: ಪಾಕ್ ಸೆನೆಟರ್
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.ಈ ನಡುವೆ ಪಾಕಿಸ್ತಾನದ ಸೆನೆಟರ್ ಪಲ್ವಾಶಾ ಮೊಹಮ್ಮದ್ ಜೈ ಖಾನ್, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಪೂರ್ತಿ ಓದಿಕಾಂಚಿ ಕಾಮಕೋಟಿ ಪೀಠದ 71 ನೇ ಶಂಕರಾಚಾರ್ಯರಾಗಿ ಶ್ರೀ ಸುಬ್ರಹ್ಮಣ್ಯ ಗಣೇಶ ಶರ್ಮ ಪಟ್ಟಾಭಿಷೇಕ!
ಸನ್ಯಾಸ ದೀಕ್ಷೆ ಪಡೆಯುವ ಮೊದಲು ಗಣೇಶ ಶರ್ಮಾ ದ್ರಾವಿಡ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದ 25 ವರ್ಷದ ಆಚಾರ್ಯರನ್ನು ಮಠದಿಂದ ಪ್ರಸ್ತುತ ಶ್ರೀ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯರ ಉತ್ತರಾಧಿಕಾರಿ ಎಂದು ಗುರುತಿಸಲಾಗಿದೆ. ಅವರು ಕಾಂಚಿ ಕಾಮಕೋಟಿ ಪೀಠದ 71 ನೇ ಶಂಕರಾಚಾರ್ಯರಾಗಲಿದ್ದಾರೆ.
ಪೂರ್ತಿ ಓದಿಕಾಫಿನಾಡಿನಲ್ಲಿ ರಸ್ತೆಗೆ ಇಳಿಯುತ್ತಿದೆ ಹೊಸ ಹೊಸ ಕಾರುಗಳು: ಕಾಫಿ ಬೆಳೆಗಾರರಿಗೆ ಬಂಪರ್ ರೇಟ್
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕಾಫಿ, ಕಾಳು ಮೆಣಸು ಕೈಹಿಡಿದಿದೆ.
ಪೂರ್ತಿ ಓದಿKodagu: ಸರ್ಕಾರಿ ಜಾಗದಲ್ಲಿ ಕುಳಿತ ಪ್ರತಿಭಟನಾಕಾರರ ಗುಡಿಸಲು ತೆರವು
ಜಿಲ್ಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಫಿ ಎಸ್ಟೇಟ್, ಎಸ್ಟೇಟ್ ಮಾಲೀಕರುಗಳಿದ್ದರೆ, ಅಷ್ಟೇ ಪ್ರಮಾಣದಲ್ಲಿ ಬಡ ಕೂಲಿ ಕಾರ್ಮಿಕರು, ನಿವೇಶನ ರಹಿತರು ಇದ್ದಾರೆ.
ಪೂರ್ತಿ ಓದಿಕೇಂದ್ರದಿಂದ ಜನ+ಜಾತಿಗಣತಿ: ರಾಜ್ಯದ ₹150 ಕೋಟಿ ವೆಚ್ಚದ ಜಾತಿಗಣತಿ ವರದಿ ಮೂಲೆಗುಂಪಾಗುವ ಭೀತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಮಾಡಿಸಿದ್ದ ಜಾತಿಗಣತಿ ವರದಿಯನ್ನು 10 ವರ್ಷಗಳು ಕಳೆದರೂ ಜಾರಿಗೆ ತಂದಿಲ್ಲ. ಇದೀಗ ಕೇಂದ್ರ ಸರ್ಕಾರ 2025ರ ಸೆಪ್ಟಂಬರ್ನಿಂದ ಜನಗಣತಿಯ ಜೊತೆಗೆ ಜಾತಿಗಣತಿ ಮಾಡುವುದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವರದಿ ಮೂಲೆಗುಂಪಾಗುವ ಸಾಧ್ಯತೆ ಇದೆ.
ಪೂರ್ತಿ ಓದಿಪಹಲ್ಗಾಮ್ ಉಗ್ರರ ಜೀವಂತವಾಗಿ ಹಿಡಿಯಿರಿ, ಭದ್ರತಾ ಏಜೆನ್ಸಿಗಳಿಗೆ ಮೋದಿ ಖಡಕ್ ಸೂಚನೆ
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಿಸಿಎಸ್ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕರನ್ನು ಜೀವಂತವಾಗಿ ಹಿಡಿಯಲು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೋರಿಸುವ ಪುರಾವೆಗಳಿವೆ ಎಂದು ವರದಿಗಳು ಹೇಳುತ್ತವೆ. ಸ್ಥಳೀಯ ಸಹ-ಸಂಚುಕೋರರನ್ನು ಮಟ್ಟಹಾಕಲು ಸಹ ಸೂಚಿಸಲಾಗಿದೆ.
ಪೂರ್ತಿ ಓದಿವಿಜಯನಗರ ಸಾಮ್ರಾಜ್ಯವಲ್ಲ, ಅಕ್ಷಯ ತೃತೀಯಕ್ಕೆ ಇನ್ಸ್ಟಾಮಾರ್ಟ್ ಬೈಕ್ನಲ್ಲಿ ಚಿನ್ನ ಡೆಲಿವರಿ
ಅಕ್ಷಯ ತೃತೀಯಕ್ಕೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ಬಂಗಾರ ಡೆಲಿವರಿ ಇದೀಗ ಭಾರಿ ಚರ್ಚೆಯಾಗುತ್ತಿದೆ. ಬೈಕ್ನಲ್ಲಿ ಫುಡ್ ಡೆಲಿವರಿ ರೀತಿ ಚಿನ್ನ ಡೆಲಿವರಿ ಮಾಡಲಾಗುತ್ತಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದೆ.
ಪೂರ್ತಿ ಓದಿ