ಬೆಳಗಾವಿ ತಾಲೂಕಿನ ಸತ್ತಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ, ಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನು ಬಳಸಿ 80 ಕೆಜಿ ಭಾರ ಎಳೆಯಬಲ್ಲ ಟ್ರ್ಯಾಕ್ಟರ್ ಅನ್ನು ಸಂಶೋಧಿಸಿದ್ದಾನೆ. ಈ ಬಾಲಕನ ವೈಜ್ಞಾನಿಕ ಮನೋಭಾವ ಮತ್ತು ಸಾಧನೆಗೆ ಶಾಲೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
- Home
- News
- State
- Karnataka News Live: 80 ಕೆಜಿ ಭಾರ ಜಗ್ಗುವ ಪುಟಾಣಿ ಟ್ರ್ಯಾಕ್ಟರ್ ಕಂಡು ಹಿಡಿದ 8ನೇ ಕ್ಲಾಸ್ ಬಾಲ ವಿಜ್ಞಾನಿ
Karnataka News Live: 80 ಕೆಜಿ ಭಾರ ಜಗ್ಗುವ ಪುಟಾಣಿ ಟ್ರ್ಯಾಕ್ಟರ್ ಕಂಡು ಹಿಡಿದ 8ನೇ ಕ್ಲಾಸ್ ಬಾಲ ವಿಜ್ಞಾನಿ

ಕಲಬುರಗಿ: ಕಲಬುರಗಿಯಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿನ ವಾಜಪೇಯಿ ಬಡಾವಣೆಯಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಲೋಕಾರ್ಪಣೆಗೊಂಡಿದ್ದ ‘ಪ್ರಬುದ್ಧ ಅಕಾಡೆಮಿ’ಯ ಕಟ್ಟಡದಲ್ಲಿದ್ದ ಉಪಾಹಾರ ಕೊಠಡಿಯಲ್ಲಿ ಚಾವಣಿ ಕುಸಿದಿದ್ದು ವಿದ್ಯಾರ್ಥಿನಿಯೋರ್ವಳು ಪಾರಾಗಿರುವ ಘಟನೆ ಸೋಮವಾರ ನಡೆದಿದೆ. ಕಳೆದ ಜನವರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಬುದ್ಧ ಅಕಾಡೆಮಿ ಕೇಂದ್ರವನ್ನು ಉದ್ಘಾಟಿಸಿದ್ದರು. ಒಂದೇ ತಿಂಗಳಲ್ಲೇ ಕುಸಿದು ಬೀಳುವ ಹಂತಕ್ಕೆ ಕಟ್ಟಡವನ್ನು ಕಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತರಬೇತಿ ಕೇಂದ್ರದ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಪ್ರತಿಕ್ರಿಯಿಸಿದ್ದು, "ಮೇಲ್ಚಾವಣಿ ಕುಸಿದಿರುವ ಬಗ್ಗೆ ಕಟ್ಟಡ ಕಂಟ್ರಾಕ್ಟರ್ ಆಗಿರುವ ಕೆಆರ್ ಐಡಿಎಲ್ ಇಲಾಖೆಗೆ ತಿಳಿಸಿದ್ದೇವೆ. ಉಪಾಹಾರ ಕೇಂದ್ರ ಉಪಯೋಗಿಸದ ಕಾರಣ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
Karnataka News Live 3 March 202680 ಕೆಜಿ ಭಾರ ಜಗ್ಗುವ ಪುಟಾಣಿ ಟ್ರ್ಯಾಕ್ಟರ್ ಕಂಡು ಹಿಡಿದ 8ನೇ ಕ್ಲಾಸ್ ಬಾಲ ವಿಜ್ಞಾನಿ
Karnataka News Live 3 March 2026ಅಪರಿಚಿತರು ಪರಿಚಿತರಾಗಿ ಪರಸ್ಪರ ಸಮ್ಮತಿ ಮೇರೆಗೆ ಮೋಜು ಮಸ್ತಿ; ವಿಲ್ಲಾ ಪಾರ್ಟಿ ರಹಸ್ಯ
ಸಾಮೂಹಿಕ ಅತ್ಯಾ*ಚಾರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಮೃತಹಳ್ಳಿ ಪೊಲೀಸರು, ಆರೋಪಿ ನಿಖಿಲ್ ಗ್ಯಾಂಗ್ ಈ ಹಿಂದೆ ನಗರದ ಹೊರವಲಯದ ವಿಲ್ಲಾಗಳಲ್ಲಿ ಆಯೋಜಿಸಿದ್ದ ಹಲವು ಪಾರ್ಟಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
Karnataka News Live 3 March 2026ಬಾರ್ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ
Karnataka News Live 3 March 2026ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ - ಮೋದಿಗೆ ಸಿಎಂ ಸಿದ್ದು ಪತ್ರ
ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತೊಂದರೆಗೊಳಗಾದ ಕನ್ನಡಿಗರು ಮತ್ತು ಇತರೆ ಭಾರತೀಯರನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕು, ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Karnataka News Live 3 March 2026ಬಾಗಲಕೋಟೆ ಹೋಳಿ - ರಂಗಿನಾಟದ ಅದ್ದೂರಿ ಆರಂಭಕ್ಕೆ ಕ್ಷಣಗಣನೆ, ಮಾ.6ರಂದು ರೇನ್ ಡ್ಯಾನ್ಸ್
ಬಾಗಲಕೋಟೆ ಹೋಳಿ ಹಬ್ಬ ಆಚರಣೆ ಮಂಗಳವಾರ ಉದ್ಘಾಟನೆಗೊಳ್ಳಲಿದೆ. ಈ ಉತ್ಸವದಲ್ಲಿ ಕಾಮದಹನ, ಮಾ.5 ರಿಂದ 7ರವರೆಗೆ ಮೂರು ದಿನಗಳ ಬಣ್ಣದಾಟ, ಸೋಗಿನ ಪ್ರದರ್ಶನ ಹಾಗೂ ಮಾ.6 ರಂದು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ವಿಶೇಷ ರೇನ್ ಡ್ಯಾನ್ಸ್ ಕಾರ್ಯಕ್ರಮಗಳು ಜರುಗಲಿವೆ.
Karnataka News Live 3 March 2026ಆಲೂಗಡ್ಡೆ ಸಿಪ್ಪೆ ತೆಗೆಯಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್; ಸಲಹೆ ಕೇಳಿ ಗೃಹಿಣಿಯರು ಖುಷಿ
ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಹಲವರಿಗೆ ಕಷ್ಟದ ಕೆಲಸ. ಆದರೆ, ಖ್ಯಾತ ಶೆಫ್ ಪಂಕಜ್ ಬದೌರಿಯಾ ಹಂಚಿಕೊಂಡಿರುವ ಒಂದು ಸರಳ ಕಿಚನ್ ಹ್ಯಾಕ್ ಬಳಸಿ ಈ ಕೆಲಸವನ್ನು ಸುಲಭವಾಗಿಸಬಹುದು.
Karnataka News Live 3 March 2026ಧಾರವಾಡ - ಮಹಿಳೆ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ರೋಚಕ ತಿರುವು - ಬಸ್ನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಧಾರವಾಡದಲ್ಲಿ ಅಪಘಾತವೆಂದು ಬಿಂಬಿಸಲಾಗಿದ್ದ ಮಹಿಳೆಯ ಸಾವಿನ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಪಘಾತ ಮಾಡಿದ ವಾಹನದ ಹಿಂದಿದ್ದ ಬಸ್ನಲ್ಲಿರುವ ಡ್ಯಾಶ್ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Karnataka News Live 3 March 2026ಬಾರ್ಕೂರು - ಬೆಣ್ಣೆಕುದ್ರು ಸೇತುವೆ ಮೇಲೆ ಗ್ರಹಗಳ ಪರೇಡ್ !
ಬಾರ್ಕೂರು ಸಮೀಪದ ಬೆಣ್ಣೆಕುದ್ರು ಸೇತುವೆಯ ಮೇಲೆ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನೆಸ್ ಮತ್ತು ನೆಪ್ಚೂನ್ ಗ್ರಹಗಳು ಒಂದೇ ರೇಖೆಯಲ್ಲಿ ಬಂದ ಅಪರೂಪದ 'ಪ್ಲಾನೆಟರಿ ಪರೇಡ್' ನಡೆಯಿತು. ಖಗೋಳಾಸಕ್ತರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ದೂರದರ್ಶಕದ ಮೂಲಕ ವಿಸ್ಮಯವನ್ನು ವೀಕ್ಷಿಸಿ ಸಂತಸಪಟ್ಟರು.