ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಬೆಂಗಳೂರಿನ ಆನೇಕಲ್ ಬಳಿ ಕೇರಳ ಮೂಲದ ಗ್ಯಾಂಗ್ ಅಪಹರಿಸಿದೆ. ₹10 ಕೋಟಿ ಸುಪಾರಿ ನೀಡಲಾಗಿದೆ ಎಂದು ಬೆದರಿಸಿ, ನಂತರ ₹2 ಕೋಟಿಗೆ ಬೇಡಿಕೆಯಿಟ್ಟು, ಹಣ ನೀಡುವುದಾಗಿ ಒಪ್ಪಿದ ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Home
- News
- State
- Karnataka News Live: ಮಾಜಿ ಎಂಎಲ್ಸಿ ದಯಾನಂದರೆಡ್ಡಿ ಅಪಹರಣ; ₹10 ಕೋಟಿ ಸುಪಾರಿ, 2 ಕೋಟಿಗೆ ಡಿಮ್ಯಾಂಡ್
LIVE NOW
Karnataka News Live: ಮಾಜಿ ಎಂಎಲ್ಸಿ ದಯಾನಂದರೆಡ್ಡಿ ಅಪಹರಣ; ₹10 ಕೋಟಿ ಸುಪಾರಿ, 2 ಕೋಟಿಗೆ ಡಿಮ್ಯಾಂಡ್

ಸಾರಾಂಶ
ನವದೆಹಲಿ: ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರನ್ನಾಗಿ ನೇಮಕ ಮಾಡಿ ಪಕ್ಷವು ಮಂಗಳವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಈವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸಿಡಬ್ಲ್ಯುಸಿಯ ಪದನಿಮಿತ್ತ ಸದಸ್ಯರಾಗಿದ್ದರು. ಈಗ ಸಿಎಂ ಸ್ಥಾನದಿಂದ ನಿರ್ಗಮನದ ಕಾರಣ ಕಾಯಂ ಸದಸ್ಯರೆಂದು ನೇಮಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
07:27 AM (IST) Jun 03
Karnataka News Live 3 June 2026ಮಾಜಿ ಎಂಎಲ್ಸಿ ದಯಾನಂದರೆಡ್ಡಿ ಅಪಹರಣ; ₹10 ಕೋಟಿ ಸುಪಾರಿ, 2 ಕೋಟಿಗೆ ಡಿಮ್ಯಾಂಡ್
Read Full Story
07:06 AM (IST) Jun 03
Karnataka News Live 3 June 2026ಮೂರು ಜಿಲ್ಲೇಲಿ ಮಳೆಯಬ್ಬರ - ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್, ಬಳ್ಳಾರೀಲಿ 100 ಮರ ಧರೆಗೆ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆಯು ಕರಾವಳಿ ಭಾಗಕ್ಕೆ ಜೂ.3 ರಿಂದ 6ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜೂ. 4ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.
Read Full Story