ಭಾರತೀಯ ಸಂಸ್ಕೃತಿಯಲ್ಲಿ ಗುರು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವ ದಿವ್ಯಶಕ್ತಿಯಾಗಿದ್ದಾರೆ. ವೇದವ್ಯಾಸರಿಂದ ಆರಂಭವಾದ ಗುರುಪರಂಪರೆಯು ಇಂದಿನ ಆಧುನಿಕ ಯುಗದಲ್ಲೂ ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ತಿಳಿಸಿ, ಬದುಕಿಗೆ ದಾರಿ ತೋರುತ್ತದೆ.
- Home
- News
- State
- Karnataka News Live: Guru Purnima 2026 - 'ಗುರು’ ಭಾರತೀಯ ಸಂಸ್ಕೃತಿಯ ಜೀವನಾಡಿ; ನಿಜವಾದ ಗುರು ಯಾರು?
Karnataka News Live: Guru Purnima 2026 - 'ಗುರು’ ಭಾರತೀಯ ಸಂಸ್ಕೃತಿಯ ಜೀವನಾಡಿ; ನಿಜವಾದ ಗುರು ಯಾರು?

ಮೈಸೂರು: ಮುಖ್ಯಮಂತ್ರಿಗಳ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಲ್ಲದೆ, ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ. ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ರೈತರಿಗೆ ವಿಷ ಹಾಕಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ನ್ಯಾಯಾಧಿಕರಣದ ಮುಂದೆ ಪ್ರಬಲವಾಗಿ ಏಕೆ ವಾದ ಮಂಡಿಸಲಿಲ್ಲ? ರಾಜ್ಯ ಸರ್ಕಾರಕ್ಕೆ ರೈತರು ಆಧ್ಯತೆಯಾಗಿ ಉಳಿದಿಲ್ಲ. 1 ತಿಂಗಳಿನಿಂದ ಬರಿ ಸಂಪುಟ ವಿಸ್ತರಿಸುವ ಕಸರತ್ತಿನಲ್ಲೇ ಇದ್ದಾರೆ ಎಂದು ಟೀಕಿಸಿದರು.
ದರ ನಿಗದಿ ಆಗುವವರೆಗೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡಾದಾಗುತ್ತಿದೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ ಎಂದರು.
Karnataka News Live 29 July 2026Guru Purnima 2026 - 'ಗುರು’ ಭಾರತೀಯ ಸಂಸ್ಕೃತಿಯ ಜೀವನಾಡಿ; ನಿಜವಾದ ಗುರು ಯಾರು?
Karnataka News Live 29 July 2026'ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ' - ಯೂಟ್ಯೂಬ್ ನೋಡಿ 11 ಮೊಬೈಲ್, 9 ಲ್ಯಾಪ್ಟಾಪ್, 2 ಟ್ಯಾಬ್ ಕದ್ದಿದ್ದವ ಅರೆಸ್ಟ್!
ಯೂಟ್ಯೂಬ್(Youtube)ನಲ್ಲಿ ಕಳ್ಳತನ ಕೃತ್ಯಗಳ ವಿಡಿಯೋ ನೋಡಿ ಮೊಬೈಲ್ ಮಾರಾಟ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನೊಬ್ಬನನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Karnataka News Live 29 July 2026ಕೂದಲು ಉದುರುವುದು, ದೋಸೆ, ಮುದ್ದೆ ಮಾಡಲು ಕೇಳುವುದು ದೌರ್ಜನ್ಯ ಹೇಗಾಗುತ್ತೆ? ಹೈಕೋರ್ಟ್
Karnataka News Live 29 July 2026ಧರ್ಮಸ್ಥಳ ಕೇಸ್ನಲ್ಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ; ನ್ಯಾಯಾಲಯದಿಂದ ಸಮನ್ಸ್
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ದಾಖಲಿಸಿದ ಮಾನನಷ್ಟ ಮೊಕದ್ದಮೆ ಸಂಬಂಧ ನ್ಯಾಯಾಲಯವು ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ. ರಾಜಕೀಯ ದ್ವೇಷದಿಂದ ರೆಡ್ಡಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Karnataka News Live 29 July 2026ಗ್ರಾಪಂಗೆ ಕಸದ ಉಡುಗೊರೆ; ಗ್ರಾಮಸ್ಥರ ವಿರುದ್ಧವೇ ದೂರು ದಾಖಲಿಸಲು ಸೂಚಿಸಿದ ಅಧಿಕಾರಿ
ಸ್ವಚ್ಛತಾ ನಿರ್ಲಕ್ಷ್ಯವನ್ನು ಖಂಡಿಸಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಚರಂಡಿಯ ಕಸವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿಯ ಪ್ರತಿಭಟನೆ ನಡೆದಿದೆ.
Karnataka News Live 29 July 2026ಆಗಸ್ಟ್ ಮೊದಲ ದಿನವೇ ಮೈಸೂರಿಗೆ ಪ್ರಧಾನಿ ಮೋದಿ! ಸಮಯ, ಸ್ಥಳ, ವಿಶೇಷತೆ ಸಂಪೂರ್ಣ ವಿವರ ಇಲ್ಲಿದೆ
ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮವು ವಿವೇಕ ಸ್ಮಾರಕ ಹೆಸರಿನಲ್ಲಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ.1ರಂದು ಉದ್ಘಾಟಿಸುವರು.
Karnataka News Live 29 July 2026ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ
Karnataka News Live 29 July 2026ತುಂಗಭದ್ರಾ ಎಥೆನಾಲ್ ಘಟಕ ನಮ್ಮೂರಿಗೆ ಬೇಡ, ಕೂಡಲೇ ಸ್ಥಗಿತಗೊಳಿಸಿ; ಗ್ರಾಮಸ್ಥರ ಬೇಡಿಕೆ
Karnataka News Live 29 July 2026ಅಕ್ರಮ ಬಾಂಗ್ಲಾದೇಶಿಯರ ಮಾಹಿತಿ ನೀಡಿದವರ ವಿರುದ್ಧವೇ ದೂರು! ಪೊಲೀಸರ ನಡೆ, ಸರ್ಕಾರದ ಓಲೈಕೆ ವಿರುದ್ಧ ಹೈ ಗರಂ
Karnataka News Live 29 July 2026International Tiger Day - ವ್ಯಾಘ್ರನ ರಕ್ಷಣೆಯ ಅನಿವಾರ್ಯತೆ ಇಂದು ಹುಲಿ ಸಂರಕ್ಷಣಾ ದಿನ
ಪ್ರಶಾಂತ ಕೆ.ಪಿ. ಡೆಪ್ಯೂಟಿ ನ್ಯೂಸ್ ಎಡಿಟರ್, ಕನ್ನಡಪ್ರಭ
ಹುಲಿ ಸಂರಕ್ಷಣೆಯು ಪರಿಸರ ಸಮತೋಲನಕ್ಕೆ ಅತ್ಯಗತ್ಯವಾಗಿದೆ. ಭಾರತದಲ್ಲಿ ಯಶಸ್ವಿ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಅವುಗಳ ವಾಸಸ್ಥಾನವಾದ ಕಾಡುಗಳು ಕುಗ್ಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷದಂತಹ ಹೊಸ ಸವಾಲುಗಳನ್ನು ಸೃಷ್ಟಿಸಿದೆ.