Karnataka News Live: ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್!

ಮೈಸೂರು: ಮುಖ್ಯಮಂತ್ರಿಗಳ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಲ್ಲದೆ, ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ. ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ರೈತರಿಗೆ ವಿಷ ಹಾಕಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ನ್ಯಾಯಾಧಿಕರಣದ ಮುಂದೆ ಪ್ರಬಲವಾಗಿ ಏಕೆ ವಾದ ಮಂಡಿಸಲಿಲ್ಲ? ರಾಜ್ಯ ಸರ್ಕಾರಕ್ಕೆ ರೈತರು ಆಧ್ಯತೆಯಾಗಿ ಉಳಿದಿಲ್ಲ. 1 ತಿಂಗಳಿನಿಂದ ಬರಿ ಸಂಪುಟ ವಿಸ್ತರಿಸುವ ಕಸರತ್ತಿನಲ್ಲೇ ಇದ್ದಾರೆ ಎಂದು ಟೀಕಿಸಿದರು.
ದರ ನಿಗದಿ ಆಗುವವರೆಗೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡಾದಾಗುತ್ತಿದೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ ಎಂದರು.
Karnataka News Live 29 July 2026ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್!
Karnataka News Live 29 July 2026ಸಂಬಳ ಕೇವಲ 12 ಸಾವಿರ, ಬ್ಯಾಂಕ್ನಲ್ಲಿ ಲಕ್ಷ ಲಕ್ಷ ಹಣ! ಕ್ಲಾಸ್ರೂಮ್ನಿಂದಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಲೇಡಿ ಟೀಚರ್ಸ್ ಅಂದರ್!
ಕೇರಳದ ಕೋಝಿಕ್ಕೋಡ್ನಲ್ಲಿ, ಕಡಿಮೆ ಸಂಬಳ ಪಡೆಯುತ್ತಿದ್ದ ಮೂವರು ಮಹಿಳಾ ಶಿಕ್ಷಕಿಯರು ಎಂಡಿಎಂಎ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 29 July 2026ಒಂದೇ ದೃಶ್ಯದಲ್ಲಿ ಸಿಂಹವನ್ನೇ ಮೌನಗೊಳಿಸಿದ ರಾವಣ - ಯಶ್ ಅಬ್ಬರದ ರಾಮಾಯಣ ಟ್ರೇಲರ್ ಲೀಕ್!
ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.
Karnataka News Live 29 July 2026ಟಾಕ್ಸಿಕ್ ಕಥೆಯ ನಿಜವಾದ ಹೀರೋ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿದ ಉತ್ತರವೇ ಹೈಲೈಟ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..
Karnataka News Live 29 July 2026Vaibhav Sooryavanshi - 3 ಪಂದ್ಯ, 2 ಫಿಫ್ಟಿ, 151 ರನ್! - ಜಿಂಬಾಬ್ವೆಯಲ್ಲಿ ಕೇವಲ 4 ದಿನದಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ ಹಣವೆಷ್ಟು ಗೊತ್ತಾ?
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಪಂದ್ಯ ಶುಲ್ಕ ಮತ್ತು ಬಹುಮಾನದ ಹಣ ಸೇರಿ ಅವರು ಒಟ್ಟಾರೆ ಸಂಪಾದಿಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!
Karnataka News Live 29 July 2026'ಇಂತಹ ನಿರ್ದೇಶಕರನ್ನು ನಾನು ನೋಡಿಲ್ಲ' - ರಿಷಬ್ ಕೆಲಸದ ಶೈಲಿಗೆ ಫಿದಾ ಆದ ಹಿರಿಯ ನಟ ಜಯರಾಮ್
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಈ ಯಶಸ್ಸಿನ ಹಿಂದೆ ಇರುವ ಪರಿಶ್ರಮ ಮತ್ತು ಸಿನಿಮಾ ಮೇಲಿನ ಸಮರ್ಪಣೆಯನ್ನು ಕಂಡಿರುವ ಹಿರಿಯ ನಟ ಜಯರಾಮ್ ಇದೀಗ ಅವರ ಕೆಲಸದ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Karnataka News Live 29 July 2026Vaibhav Sooryavanshi - ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ವೈಭವ್; ಟೀಮ್ ಇಂಡಿಯಾದ ಯುವ ಪ್ರತಿಭೆಗೆ ಉಪನಾಯಕನ ಪಟ್ಟ!
ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
Karnataka News Live 29 July 2026'ನಮ್ಮ ಬದುಕಿನ ಬೆಳಕು ಬಂದಳು' - ಮಗಳು ಹುಟ್ಟಿದ ಖುಷಿ ಹಂಚಿಕೊಂಡ 'ರತ್ನನ್ ಪ್ರಪಂಚ' ನಟಿ ರೆಬಾ
Reba Monica John Baby Girl: ʻರತ್ನನ್ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ ‘ಬಿಗಿಲ್’ ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
Karnataka News Live 29 July 2026ಭವಿಷ್ಯದ ಜಗತ್ತಿನಲ್ಲಿ ಕಿಚ್ಚ ಸುದೀಪ್ ಆರ್ಭಟ - 'ಬಿಲ್ಲ ರಂಗ ಭಾಷಾ'ಗೆ ಕನಸಿನ ರಾಣಿ ಸಾಥ್?
Billa Ranga Baashaa First Blood: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಭಾಷಾ - ಫಸ್ಟ್ ಬ್ಲಡ್' ಚಿತ್ರದ ಚಿತ್ರೀಕರಣ ಮತ್ತೆ ಭರ್ಜರಿಯಾಗಿ ಆರಂಭವಾಗಿದೆ.
Karnataka News Live 29 July 2026ವಿಜಯ್ ಸೂರ್ಯ-ವೈಷ್ಣವಿ ಗೌಡ 'ಜೋಡಿ'ಯಾಗಿ ಗೆದ್ದಿರೋದು ಹೌದು! ಆದ್ರೆ ಈಗ 'ಬೇರೆ-ಬೇರೆ' ಯಾಗಿ ಗೆಲ್ಲೋದು ಯಾರು?
ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.
Karnataka News Live 29 July 2026Viral News - ಗಂಟಲಲ್ಲಿ ಸಿಲುಕಿದ ಮೊಟ್ಟೆ, ನಿಂತ ಹೃದಯಬಡಿತ - ಆದರೆ ಹುಡುಗನ ಜೀವ ಉಳಿದಿದ್ದೇ ರೋಚಕ!
ಕೊಚ್ಚಿಯ ರೆಸ್ಟೋರೆಂಟ್ನಲ್ಲಿ ಮೊಟ್ಟೆ ತಿನ್ನುವಾಗ ಯುವಕನೊಬ್ಬನ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿತು. ತಕ್ಷಣವೇ ಆತನ ಸ್ನೇಹಿತರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ್ದಾರೆ. ಹೇಗೆ ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 29 July 2026ಕಾಮಿಡಿ ಕಿಂಗ್ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜು - ಮದುವೆ ಸ್ಥಳ ಎಲ್ಲಿ? ದಿನಾಂಕ ಯಾವಾಗ? ಇಲ್ಲಿದೆ ಮಾಹಿತಿ
ಸ್ಯಾಂಡಲ್ವುಡ್ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ.
Karnataka News Live 29 July 2026'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿಗೆ ಮತ್ತೊಂದು ಗರಿ - ಮೆಲ್ಬೋರ್ನ್ನಲ್ಲಿ 'ಲೀಡರ್ಶಿಪ್ ಇನ್ ಸಿನಿಮಾ' ಪ್ರಶಸ್ತಿ!
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ನಲ್ಲಿ 'ಲೀಡರ್ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದಕ್ಕಾಗಿ ಈ ಗೌರವ ಸಂದಿದೆ.
Karnataka News Live 29 July 2026Team India - ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?
ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 29 July 2026ವಿಜಯ್ ಕೊನೆ ಸಿನಿಮಾದಲ್ಲಿ 6.3 ಅಡಿ ಎತ್ತರದ ಕನ್ನಡಿಗನ ಖದರ್ - ಕಾಲಿವುಡ್ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ!
ಸ್ಯಾಂಡಲ್ವುಡ್ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್ಗೆ ಭರ್ಜರಿ ಎಂಟ್ರಿ..
Karnataka News Live 29 July 2026ICC ODI Rankings ಪ್ರಕಟ ಶುಭ್ಮನ್ ಗಿಲ್ ನಂ.1; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಷ್ಟನೇ ಸ್ಥಾನ?
ದುಬೈ: ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇನ್ನು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Karnataka News Live 29 July 2026ಸಚಿವ ಸಂಪುಟ ವಿಸ್ತರಣೆ ಸಭೆ ಮತ್ತೆ ಮುಂದೂಡಿಕೆ - ಹೈಕಮಾಂಡ್ ನಡೆಗೆ ಬೇಸತ್ತು ಊರಿನತ್ತ ಹೊರಟ ಆಕಾಂಕ್ಷಿಗಳು!
Karnataka News Live 29 July 2026ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆ ನಿರ್ಲಕ್ಷ - ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪ
Farmers Agitation: ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು.
Karnataka News Live 29 July 2026ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ರೈತರ ಹೋರಾಟ - ಜುಲೈ 31ರಂದು ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ
Tungabhadra Dam: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
Karnataka News Live 29 July 2026ಆಷಾಢದ ವಿರಹ ಮರೆಸಿದ ನವದಂಪತಿಗಳ ಜಾತ್ರೆ - ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವದ ವೈಭವ!
Chamarajeshwara Rathotsava: ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ.