ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಟ್ ಪ್ರಕರಣ ಸಂಬಂಧ ನಟಿ ರಮ್ಯಾ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Home
- News
- State
- Karnatata Latest News Live: ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕೇಸ್, ರಮ್ಯಾ ದೂರಿನ ಅನ್ವಯ ಎಫ್ಐಆರ್ ದಾಖಲು
Karnatata Latest News Live: ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕೇಸ್, ರಮ್ಯಾ ದೂರಿನ ಅನ್ವಯ ಎಫ್ಐಆರ್ ದಾಖಲು

ಮೈಸೂರು : ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಈಗ ಮೈಸೂರಲ್ಲೂ ಡ್ರಗ್ಸ್ ಜಾಲದ ನಂಟು ಬಯಲಾಗಿದ್ದು, ಮೈಸೂರಿನಲ್ಲೇ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ಭಾನುವಾರ ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, 13 ಕೆ.ಜಿ.ಎಂಡಿಎಂಎ, 50 ಕೆ.ಜಿ. ದ್ರವರೂಪದ ಡ್ರಗ್ಸ್ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿಸುಮಾರು 100 ಕೋಟಿ ರು. ಎಂದು ಅಂದಾಜಿಸಲಾಗಿದೆ. ವಿಶೇಷವೆಂದರೆ, ಇಲ್ಲಿನ ಡ್ರಗ್ಸ್ ತಯಾರಿಕಾ ಘಟಕದಿಂದ ಮಹಾರಾಷ್ಟ್ರಕ್ಕೆ ಡ್ರಗ್ಸ್ ಪೂರೈಸಲಾಗುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತುಗೊಳಿಸಲಾಗಿದೆ.

karnataka news live 28th july 2025ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕೇಸ್, ರಮ್ಯಾ ದೂರಿನ ಅನ್ವಯ ಎಫ್ಐಆರ್ ದಾಖಲು
karnataka news live 28th july 2025ಬಳ್ಳಾರಿಯಲ್ಲಿ ಭೀಕರ ಅಪಘಾತ, ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು
ಬಳ್ಳಾರಿಯ ದೇವಿನಗರ ಕ್ಯಾಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
karnataka news live 28th july 2025ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಎರಡು ದಿನ ವಾಹನ ಸಂಚಾರ ನಿಷೇಧ
ಅತ್ಯಂತ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಎರಡು ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ಯಾವ ಎರಡು ದಿನ ವಾಹನ ಸಂಚಾರ ನಿಷೇಧ? ಕಾರಣವೇನು?
karnataka news live 28th july 2025ಕೆಟ್ಟ ಕಾಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನ ಬ್ಲಾಕ್ ಮಾಡಿದ ನಟಿ ಅನುಸೂಯ; ಫಾಲೋವರ್ಸ್ ಎಷ್ಟಿದ್ದಾರೆ?
ತೆಲುಗು ನಟಿ ಅನಸೂಯ ಒಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಾನು ಸೋಶಿಯಲ್ ಮೀಡಿಯಾದಲ್ಲಿ, ಕಾಮೆಂಟ್ ಮಾಡುತ್ತಿದ್ದ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
karnataka news live 28th july 2025ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದ ಅನಾಮಿಕ, ಒಂದೇ ದಿನ 13 ಸ್ಥಳ ಗುರುತು ಮಾಡಿದ!
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವ ಹೂತಿರುವ ಬಗ್ಗೆ ಆರೋಪ ಮಾಡಿರುವ ಅನಾಮಿಕ ವ್ಯಕ್ತಿ ಎಸ್ಐಟಿ ತಂಡಕ್ಕೆ 13 ಶವಗಳ ಸ್ಥಳಗಳನ್ನು ತೋರಿಸಿದ್ದಾರೆ. ಈ ಸ್ಥಳಗಳನ್ನು ಗುರುತಿಸಿ ಮಹಜರು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ನಡೆಯಲಿದೆ.
karnataka news live 28th july 2025ಮದುವೆಯಾಗಲು ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯಗೊಳಿಸಲು ಮುಂದಾದ ಸರ್ಕಾರ
ಮದುವೆಯಾಗಲು ಹುಡುಗ-ಹುಡುಗಿ ಒಪ್ಪಿಗೆ ಮಾತ್ರವಲ್ಲ, ಇದೀಗ ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಮದುವೆಗೂ ಮೊದಲು ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
karnataka news live 28th july 2025ಫಿಡೆ ಮಹಿಳಾ ವಿಶ್ವಕಪ್ ಗೆದ್ದ ದಿವ್ಯಾ ದೇಶ್ಮುಖ್; ಹೊಸ ಇತಿಹಾಸ ಸೃಷ್ಟಿ!
ದಿವ್ಯಾ ದೇಶ್ಮುಖ್ ಫಿಡೆ ಮಹಿಳಾ ವಿಶ್ವಕಪ್ 2025 ಗೆದ್ದಿದ್ದಾರೆ. ಫೈನಲ್ನಲ್ಲಿ ಕೊನೇರು ಹಂಪಿಯವರನ್ನ ಸೋಲಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.
karnataka news live 28th july 2025ಈ ತಳಿ ಹಸುವಿನ ಹಾಲು ಮಾತ್ರ ಬಳಸುತ್ತೆ ನೀತಾ-ಮುಕೇಶ್ ಅಂಬಾನಿ ಕುಟುಂಬ, ಬೆಲೆ ಬಲು ದುಬಾರಿ
ನೀತಾ ಅಂಬಾನಿ, ಮುಕೇಶ್ ಅಂಬಾನಿ ಕುಟುಂಬ ಪ್ರತಿ ದಿನ ಒಂದೇ ತಳಿ ಹಸುವಿನ ಹಾಲು ಬಳಕೆ ಮಾಡುತ್ತಿದೆ. ಈ ಹಸುಗಳನ್ನು ವಿಶೇಷ ಆರೈಕೆ ಹಾಗೂ ಮೇವು ನೀಡಲಾಗುತ್ತದೆ. ಅಂಬಾನಿ ಕುಟುಂಬಕ್ಕೆ ಹಾಲು ಸರಬರಾಜಾಗುತ್ತಿರುವುದು ಎಲ್ಲಿಂದ?
karnataka news live 28th july 2025ದರ್ಶನ್ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ್ದ ಬೇಕರಿ ರಘು, ಈಗ ನಟ ಪ್ರಥಮ್ಗೆ ಕೊಲೆ ಬೆದರಿಕೆ!
ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯವನ್ನು ನೀಡಿ ಅಭಿಮಾನಿ ಆಗಿದ್ದ ಬೇಕರಿ ರಘು, ಇದೀಗ ನಟ ಪ್ರಥಮ್ಗೆ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಪ್ರಥಮ್ಗೆ ಬೆದರಿಕೆ ಹಾಕಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದಲ್ಲಿ ನಡೆದಿದೆ.
karnataka news live 28th july 2025ಪೆಹಲ್ಗಾಂ ದಾಳಿ ಉಗ್ರರ ಸದಬಡಿದ ಸೇನಾ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಹೆಸರಿಟ್ಟಿದ್ದೇಕೆ?
ಪೆಹಲ್ಗಾಂನಲ್ಲಿ ಹಿಂದೂಗಳ ಟಾರ್ಗೆಟ್ ಮಾಡಿ ನಡೆಸಿದ ಉಗ್ರದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಆಪರೇಶನ್ ಮಹಾದೇವ್ ಹೆಸರಿನಲ್ಲಿ ಸೇನೆ ಕಾರ್ಯಾಚರಣೆ ನಡೆಸಿ ಉಗ್ರರ ಹತ್ಯೆ ಮಾಡಿದೆ. ಈ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಹೆಸರಿಟ್ಟಿದ್ದೇಕೆ?
karnataka news live 28th july 2025RCB ವಿಜಯೋತ್ಸವ ಕಾಲ್ತುಳಿತ ಕೇಸ್; ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿದ ಸರ್ಕಾರ!
ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿಗಳ ಅಮಾನತು ರದ್ದತಿಯಾಗಿದೆ. ಒಬ್ಬ ಅಧಿಕಾರಿಯನ್ನು ಹೊರತುಪಡಿಸಿ ಉಳಿದ ನಾಲ್ವರು ಅಧಿಕಾರಿಗಳಿಗೆ ಸೇವೆಗೆ ಮರಳಲು ಸರ್ಕಾರ ಅನುಮತಿ ನೀಡಿದೆ. ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ಸಂಸ್ಥೆಗಳ ಮುಖ್ಯಸ್ಥರನ್ನ ಬಂಧಿಸಲಾಗಿತ್ತು.
karnataka news live 28th july 20258 ತಿಂಗಳ ಮಗು ಚೇತರಿಕೆ, ಕಣ್ಣಾಲಿ ತೇವಗೊಳಿಸಿದ ವಿಮಾನ ದುರಂತದ ತಾಯಿ ಮಗುವಿನ ಹೋರಾಟ
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 8 ತಿಂಗಳ ಮಗು ಹಾಗೂ ಮಗುವಿಗೆ ಬೆಂಕಿ ತಗುಲದಂತೆ ರಕ್ಷಣೆ ಒದಗಿಸಿದ ತಾಯಿ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದುರಂತ ನಡೆದ ಕ್ಷಣದಿಂದ ಚಿಕಿತ್ಸೆ ವರೆಗೆ ತಾಯಿಯ ತ್ಯಾಗ ಎಂತವರನ್ನು ಕಣ್ಣೀರಾಗಿಸುತ್ತದೆ.
karnataka news live 28th july 2025ದಂಡಂ ದಶಗುಣಂ ನಟಿ ರಮ್ಯಾ ಬೆನ್ನಿಗೆ ನಿಂತ FIRE; ನೇರವಾಗಿ ಸರ್ಕಾರಕ್ಕೆ ಹೋಯ್ತು ಪತ್ರ
Actress Ramya And Darshan Fans: ನಟಿ ರಮ್ಯಾ ಅವರ ಸಾಮಾಜಿಕ ಜಾಲತಾಣ ಪೋಸ್ಟ್ಗೆ ಅಸಭ್ಯ ಕಾಮೆಂಟ್ಗಳನ್ನು ಖಂಡಿಸಿ FIRE ಸಂಸ್ಥೆ ಗೃಹ ಸಚಿವರಿಗೆ ಪತ್ರ ಬರೆದಿದೆ. ದರ್ಶನ್ ಅಭಿಮಾನಿಗಳೆಂದು ಹೇಳಲಾದವರಿಂದ ಈ ಟ್ರೋಲಿಂಗ್ ನಡೆದಿದ್ದು, ಪ್ರಥಮ್ ಸೇರಿದಂತೆ ಹಲವರು ರಮ್ಯಾ ಪರ ನಿಂತಿದ್ದಾರೆ.
karnataka news live 28th july 2025ಮೈಸೂರಿನಲ್ಲಿ ಡ್ರಗ್ ಮಾಫಿಯಾ ಬೆಳೆದಿದ್ದೇ ಸಿಎಂ ಸಿದ್ದರಾಮಯ್ಯ ಕೊಡುಗೆ - ಪ್ರತಿಪಕ್ಷ ನಾಯಕ ಆರ್.ಅಶೋಕ
karnataka news live 28th july 2025ಗಂಡನನ್ನೇ ಕೊಲೆ ಮಾಡಿದ ಮತ್ತೊಬ್ಬ ಹೆಂಡತಿ; ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!
ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಪತ್ನಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಮಗು ಗರ್ಭಪಾತವಾಗಿತ್ತು. ಇದರಿಂದ ಸೇಡಿಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಗಂಡನ ಕೊಲೆ ಬಳಿಕ ಕೇರಳಕ್ಕೆ ಹೋಗಿ ನೆಲೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
karnataka news live 28th july 2025ಕಾರ್ಗಿಲ್ ವಿಜಯ್ ದಿವಸ್ ಬೆನ್ನಲ್ಲೇ ಸೋಲ್ಜರ್ ಆವೃತ್ತಿ TVS ಎನ್ಟಾರ್ಕ್ 125 ಬಿಡುಗಡೆ
ಕಾರ್ಗಿಲ್ ಯುದ್ಧ ಗೆದ್ದದ ಅಮೂಲ್ಯ ನೆನಪನ್ನು ಭಾರತಯ ಕಾರ್ಗಿಲ್ ವಿಜಯ್ ದಿವಸ್ ಮೂಲಕ ಆಚರಿಸಿದೆ ಇದರ ಬೆನ್ನಲ್ಲೇ ಟಿವಿಎಸ್ ಮೋಟಾರ್ ಇದೀಗ ಟಿವಿಎಸ್ ಎನ್ಟಾರ್ಕ್ 125 ಸೋಲ್ಜರ್ ಆವೃತ್ತಿ ಬಿಡುಗಡೆ ಮಾಡಿದೆ. ಏನಿದರ ವಿಶೇಷತೆ?
karnataka news live 28th july 2025ಟಿಸಿಎಸ್ ಉದ್ಯೋಗ ಕಡಿತದಿಂದ ಷೇರು ಕುಸಿತ ಮಾತ್ರವಲ್ಲ ಬೆಂಗಳೂರಿಗೆ ಶುರುವಾಯ್ತು ನಡುಕ
ಅತೀ ದೊಡ್ಡ ಟೆಕ್ ಕಂಪನಿ ಟಿಸಿಎಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಟಿಸಿಎಸ್ ಷೇರು ಮೌಲ್ಯ ಕುಸಿತಗೊಂಡಿದೆ. ಇಷ್ಟೇ ಅಲ್ಲ ಇದೀಗ ಈ ಉದ್ಯೋಗ ಕಡಿತ ಬೆಂಗಳೂರಿಗೆ ನಡುಕ ಹುಟ್ಟಿಸಿದೆ. ಕಾರಣವೇನು?
karnataka news live 28th july 2025ಭಾರತದಲ್ಲಿ ಮಾತ್ರ, ಕುತ್ತಾ ಬಾಬು ಮಗ ಡಾಗ್ ಬಾಬು ಹೆಸ್ರಲ್ಲಿ ನಾಯಿಗೂ ನಿವಾಸ ಪ್ರಮಾಣ ಪತ್ರ
ಈ ರೀತಿ ಭಾರತದಲ್ಲಿ ಮಾತ್ರ ಸಾಧ್ಯ. ಸತ್ತವರ ಹೆಸರಲ್ಲಿ, ಇಲ್ಲದೇ ಇರುವವರ ಹೆಸರಲ್ಲಿ ಪ್ರಮಾಣಪತ್ರ, ಸೌಲಭ್ಯ ಪಡೆಯುವುದು ನೋಡಿದ್ದೇವೆ. ಆದರೆ ಕುತ್ತಾ ಬಾಬು-ಕುತಿಯಾ ದೇವಿ ಮಗ ಡಾಗ್ ಬಾಬು ಹೆಸರಲ್ಲಿ ಸರ್ಕಾರ ನಾಯಿಗೂ ನಿವಾಸ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
karnataka news live 28th july 2025ಧರ್ಮಸ್ಥಳದಲ್ಲಿ ಶವ ಹೂಳಿರುವ ಜಾಗ ತೋರಿಸಿದ ಅನಾಮಿಕ; ನೇತ್ರಾವದಿ ನದಿ ಸ್ನಾನಘಟ್ಟ ಕಾಡಿನ ಬಳಿ ಶೋಧ!
karnataka news live 28th july 2025ಸೌಂದರ್ಯ ಸಿನಿಮಾದಿಂದ ನಷ್ಟ ಅನುಭವಿಸಿದ ಈ ನಿರ್ಮಾಪಕ ಇಂದು 2000 ಆಸ್ತಿ ಒಡೆಯ!
ನಟಿ ಸೌಂದರ್ಯ ಚಿತ್ರದಿಂದ ಒಬ್ಬ ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಟಾಲಿವುಡ್ನಲ್ಲಿ ಅವರು ದೊಡ್ಡ ನಿರ್ಮಾಪಕರಾಗಿದ್ದಾರೆ.