04:31 AM (IST) Jan 28

Karnataka News Live 27th January: ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿರುದ್ಧ ಕ್ಷಿಪ್ರಕ್ರಾಂತಿ ಯತ್ನ?

ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.

Read Full Story
10:47 PM (IST) Jan 27

Karnataka News Live 27th January: ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, ಸ್ಯಾಂಡಲ್‌ವುಡ್ ಸಿನಿಮಾಗೆ ಭರ್ಜರಿ ಎಂಟ್ರಿ

ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, 12ನೇ ಆವೃತ್ತಿ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದ ಮಲ್ಮಮ್ಮಗೆ ಇದೀಗ ಅವಕಾಶಗಳ ಸುರಿಮಳೆಯಾಗಿದೆ. ಸಿನಿಮಾ, ಸೀರಿಯಲ್ ಆಫರ್ ಬಂದಿದೆ. ಇದೀಗ ಮಲ್ಲಮ್ಮ ಸಿನಿಮಾ ಒಪ್ಪಿಕೊಂಡಿದ್ದು, ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ.

Read Full Story
10:13 PM (IST) Jan 27

Karnataka News Live 27th January: Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್​

ಬಿಗ್​ಬಾಸ್​ ಸೀಸನ್​ 12ರ ಬಳಿಕವೂ ಗಿಲ್ಲಿ ನಟನ ಹವಾ ಮುಂದುವರೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ, ಬಟ್ಟೆಗಾಗಿ ಖರ್ಚು ಮಾಡಿರುವ ಲೆಕ್ಕಾಚಾರವನ್ನು ಗಿಲ್ಲಿ ನಟ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದು ಕೇಳಿ ಫ್ಯಾನ್ಸ್​ ಶಾಕ್​!

Read Full Story
09:10 PM (IST) Jan 27

Karnataka News Live 27th January: ಸೀರಿಯಲ್​ ಹೆಂಗಸ್ರು ಹೀಗ್ಯಾಕೆ? ಇರೋ ಕೂದಲಿಗೆ ಡೈ ಮಾಡ್ಕೊಂಡು ಅದರ ಮೇಲೆ ಬಿಳಿ ಲೈನ್​ ಹಾಕೋದ್ಯಾಕೆ?

ಬಿಳಿಕೂದಲನ್ನು ಮರೆಮಾಚಲು ಬಳಸುವ ಹೇರ್ ಡೈಗಳು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ವೇಳೆ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ವಯಸ್ಸಾದ ಪಾತ್ರಗಳನ್ನು ತೋರಿಸಲು ಕೇವಲ ಒಂದು ಎಳೆ ಬಿಳಿ ಕೂದಲನ್ನು ಬಳಸುವುದು ಹಾಸ್ಯಾಸ್ಪದವೆನಿಸಿದೆ.

Read Full Story
09:02 PM (IST) Jan 27

Karnataka News Live 27th January: ವಿಧಾನಸಭೆಯಲ್ಲಿ ಬಿಗ್ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್

ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಬಿಗ್‌ಬಾಸ್ 11ರ ವಿನ್ನರ್ ಗಿಲ್ಲಿ ಅಲ್ಲ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ನಿಜವಾದ ವಿಜೇತರು ಎಂದು ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story
08:02 PM (IST) Jan 27

Karnataka News Live 27th January: ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ

ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ, ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಮ್ಯಾಪಲ್ಸ್ ಬೆಂಗಳೂರಿನ ಪ್ರತಿ ಸಿಗ್ನಲ್ ಬಿದ್ದಿದೆಯಾ, ತೆರೆದಿದಾಯ ಎಲ್ಲಾ ಮಾಹಿತಿ ನೀಡುತ್ತೆ.

Read Full Story
07:39 PM (IST) Jan 27

Karnataka News Live 27th January: ಶಿವಮೊಗ್ಗದಲ್ಲಿ ಸಕಾಲಕ್ಕೆ ಸಿಗದ ಆಂಬುಲೆನ್ಸ್; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಣಂತಿ ದುರಂತ ಅಂತ್ಯ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದೆ, ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಗು ಕಳೆದುಕೊಂಡಿದ್ದ ತಾಯಿಯೂ ಸಾವು ಕಂಡಿದ್ದಾರೆ.

Read Full Story
07:27 PM (IST) Jan 27

Karnataka News Live 27th January: ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್; ನಿಮ್ಮ ಹತ್ತಿರದ ನಿಲ್ದಾಣ ಯಾವುದಿದೆ ಚೆಕ್ ಮಾಡಿ

ಬೆಂಗಳೂರಿನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸಲು, ಬಿಎಂಆರ್‌ಸಿಎಲ್ ನಗರದ 9 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಘೋಷಿಸಿದೆ. ಈ ನಿರ್ಧಾರವನ್ನು ಸೈಕಲ್ ಸವಾರರು ಸ್ವಾಗತಿಸಿದ್ದರೂ, ಶುಲ್ಕ ಮನ್ನಾ ಜೊತೆಗೆ ಸುರಕ್ಷಿತ ಪಾರ್ಕಿಂಗ್ ಒದಗಿಸಲು ಮನವಿ ಮಾಡಿದ್ದಾರೆ.

Read Full Story
07:20 PM (IST) Jan 27

Karnataka News Live 27th January: Dharwad - 15ಕ್ಕೂ ಹೆಚ್ಚು ಜನರ ಮೇಲೆ ದಾಳಿಗೈದು ಕಚ್ಚಿದ ನಾಯಿಯನ್ನು ಕೊಂದ ಗ್ರಾಮಸ್ಥರು

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಮಕ್ಕಳು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ನಾಯಿಯ ಹಾವಳಿಯಿಂದ ಆತಂಕಗೊಂಡ ಗ್ರಾಮಸ್ಥರು ಅಂತಿಮವಾಗಿ ಅದನ್ನು ಹೊಡೆದು ಕೊಂದಿದ್ದಾರೆ. 

Read Full Story
06:51 PM (IST) Jan 27

Karnataka News Live 27th January: ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡಗೆ ಜೈಲೇ ಗತಿ - ಕಾಂಗ್ರೆಸ್ ನಾಯಕನ ಅಟ್ಟಹಾಸಕ್ಕೆ ಕೋರ್ಟ್ ಬ್ರೇಕ್!

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read Full Story
06:34 PM (IST) Jan 27

Karnataka News Live 27th January: ಹೈಕೋರ್ಟ್‌ನಲ್ಲಿ ಸಿಗದ 'ಜಾಮೀನು' ಭಾಗ್ಯ - ವಿನಯ್ ಕುಲಕರ್ಣಿಗೆ ಜೈಲೂಟ ಮುಂದುವರಿಕೆ, ಸುಪ್ರೀಂ ಹಾದಿ ಅನಿವಾರ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪರಿಗಣಿಸಿ, ಈ ಹಂತದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಾಲಯ, ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
Read Full Story
06:12 PM (IST) Jan 27

Karnataka News Live 27th January: ಬೆಳಗಾವಿ ಜಿಲ್ಲೆಗೆ ಸತೀಶ್ ಜಾರಕಿಹೊಳಿ ಬಂಪರ್ ಗಿಫ್ಟ್; ಒಂದಲ್ಲ, ಎರಡಲ್ಲ ಬರೋಬ್ಬರಿ 15ಕ್ಕೂ ಅಧಿಕ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಜಿಲ್ಲೆಯಲ್ಲಿ ಹದಿನೈದಕ್ಕೂ ಹೆಚ್ಚು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. 

Read Full Story
05:49 PM (IST) Jan 27

Karnataka News Live 27th January: ಕ್ಯಾನ್ಸರ್ ಜೊತೆ ಸೆಣೆಸುತ್ತಲೇ ಶೂಟಿಂಗ್! ಸಾವು ಗೆದ್ದ ಶಿವಣ್ಣನ ಹೋರಾಟದ ಜರ್ನಿ ಕಥೆಯೇ ‘ಸರ್ವೈವರ್’!

ನಟ ಶಿವರಾಜ್‌ ಕುಮಾರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಹೋರಾಟದ ಪಯಣವು ಈಗ 'ಸರ್ವೈವರ್' ಎಂಬ ಸಾಕ್ಷಚಿತ್ರವಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಇದು ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ತುಂಬುವ ಗುರಿ ಹೊಂದಿದೆ.
Read Full Story
05:47 PM (IST) Jan 27

Karnataka News Live 27th January: ಕಾಂತಾರ ಆರಂಭಕ್ಕೆ ಪೂಜಿಸಿದ ದೇವರ ಪೂಜೆಗೆ ಮತ್ತೆ ಬಂದ ರಿಷಬ್ ಶೆಟ್ಟಿ; ಇದು ಹೊಸ ಆರಂಭದ ಮುನ್ಸೂಚನೆಯಾ?

'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಉಡುಪಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 'ಕಾಂತಾರ' ಚಿತ್ರದ ಮುಹೂರ್ತ ನೆರವೇರಿದ್ದ ಇದೇ ದೇಗುಲದಲ್ಲಿ ಅವರು 'ಮೂಡು ಗಣಪತಿ' ಸೇವೆ ಸಲ್ಲಿಸಿದರು.

Read Full Story
05:05 PM (IST) Jan 27

Karnataka News Live 27th January: 30 ರೂಪಾಯಿ ಟೀ ಕುಡಿಯಲು ಹೋಗಿ 30 ಲಕ್ಷ ಬೆಲೆ ತೆತ್ತ ಬೆಂಗಳೂರಿನ ಟೆಕ್ಕಿ ದಂಪತಿಗಳು!

Bengaluru Software Employees: ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿ ಜೋಡಿಯೊಂದು ಟೀ ಕುಡಿಯಲು ಹೋದಾಗ ಕಳ್ಳತನ ಆಗಿದೆ. ಹೌದು, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಹಾಗಾದರೆ ಏನಾಯ್ತು?

Read Full Story
05:02 PM (IST) Jan 27

Karnataka News Live 27th January: ಕರ್ನಾಟಕ, ಕನ್ನಡ ಬೇಡವೆಂದರೂ, ರಶ್ಮಿಕಾ ಮಂದಣ್ಣ ಮದ್ವೆಗೆ ಇದು ಮಾತ್ರ ಬೆಂಗಳೂರಿನದ್ದೇ ಬೇಕಂತೆ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದಲ್ಲಿ ನಡೆಯಲಿದೆ. ಈ ಅದ್ಧೂರಿ ಸಮಾರಂಭದ ಅಲಂಕಾರಕ್ಕಾಗಿ ಬೆಂಗಳೂರಿನಿಂದ ವಿಶೇಷ ಹೂವುಗಳು ರವಾನೆಯಾಗಲಿದ್ದು, ಬೆಂಗಳೂರಿನಲ್ಲಿ ಬೆಳೆದ ರಶ್ಮಿಕಾ ಮದುವೆಗೆ ಬೆಂಗಳೂರಿನ ಪುಷ್ಪಗಳು ಮೆರುಗು ನೀಡಲಿವೆ.
Read Full Story
04:49 PM (IST) Jan 27

Karnataka News Live 27th January: ಸ್ವ-ಹಿತಕ್ಕೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ, ಆದ್ರೆ ಜೆಡಿಎಸ್ ಕಾರ್ಯಕರ್ತರೇ ಕಟ್ಟಿದ ಪಕ್ಷ; ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಚುನಾವಣಾ ಸೋಲು ತನಗೆ ಪರಿಪಕ್ವತೆ ಕಲಿಸಿದೆ. ಸ್ವ ಹಿತಾಸಕ್ತಿಗೆ ಹಲವು ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ, ಜೆಡಿಎಸ್ ಕಾರ್ಯಕರ್ತರಿಂದಲೇ ಕಟ್ಟಿದ ಪಕ್ಷವಾಗಿದ್ದು, ಮುಂಬರುವ ದಿನಗಳಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story
04:34 PM (IST) Jan 27

Karnataka News Live 27th January: Wallpaper Ideas - ನಿಮ್ಮ ಮನೆ ನೋಡಿದವ್ರು 'ರಾಯಲ್‌, ವಾವ್‌' ಎನ್ನಬೇಕಾ? 5 ಕಡಿಮೆ ಬೆಲೆಯ ವಾಲ್‌ಪೇಪರ್‌ ಬಳಸಿ

Wall Decoration Ideas: ಲಿವಿಂಗ್ ರೂಮ್ ಮನೆಯ ಗುರುತು. ದೊಡ್ಡ ಬದಲಾವಣೆ ಇಲ್ಲದೆ ಹೊಸ ಲುಕ್ ನೀಡಲು ವಾಲ್‌ಪೇಪರ್ ಸುಲಭ ಆಯ್ಕೆ. ಸೋಫಾ ಹಿಂದೆ ವಾಲ್‌ಪೇಪರ್ ಹಾಕಿದರೆ ರೂಮ್ ಸ್ಟೈಲಿಶ್, ಐಷಾರಾಮಿ ಮತ್ತು ಮಾಡರ್ನ್ ಆಗಿ ಕಾಣುತ್ತದೆ.

Read Full Story
04:19 PM (IST) Jan 27

Karnataka News Live 27th January: ಗಿಲ್ಲಿ ನಟನ ಕೈತುಂಬಾ ಸಿನಿಮಾ ಆಫರ್ಸ್ ! ಈ ನಟನ ಸ್ಥಾನ ತುಂಬ್ತಾರಾ ಗಿಲ್ಲಿ?

ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ನಟನ ಜನಪ್ರಿಯತೆ ಹೆಚ್ಚಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಾಸ್ಯನಟನಾಗಿ ಮಿಂಚುವ ನಿರೀಕ್ಷೆಗಳಿವೆ. ಹಾಸ್ಯನಟ ಚಿಕ್ಕಣ್ಣ ನಾಯಕನಾದ ನಂತರ ತೆರವಾದ ಸ್ಥಾನವನ್ನು ಗಿಲ್ಲಿ ತುಂಬಬಲ್ಲರೇ ಎಂಬ ಚರ್ಚೆ ಶುರುವಾಗಿದೆ.

Read Full Story
04:11 PM (IST) Jan 27

Karnataka News Live 27th January: Photos - ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು

South Indian celebrity Stars: ವೈಯಕ್ತಿಕ ಭಿನ್ನಾಭಿಪ್ರಾಯ, ವೃತ್ತಿ ಬದುಕಿನ ಗುರಿಗಳು, ಅನಿರೀಕ್ಷಿತ ಕಾರಣಗಳಿಂದ ಈ ಬ್ರೇಕಪ್‌ಗಳು ಆಗಿವೆ. ಎಷ್ಟೇ ಅದ್ಧೂರಿ ಎನಿಸಿದ ಸಂಬಂಧಗಳೂ ಮುರಿದು ಬೀಳಬಹುದು ಎಂಬುದಕ್ಕೆ ಉದಾಹರಣೆ. ನಿಶ್ಚಿತಾರ್ಥದ ನಂತರ ಬೇರೆಯಾದ ಆರು ದಕ್ಷಿಣ ಭಾರತದ ತಾರೆಯರ ಲಿಸ್ಟ್ ಇಲ್ಲಿದೆ.

Read Full Story