ದುರ್ಬಲ ಡಾಲರ್ ಮೌಲ್ಯ ಮತ್ತು ವ್ಯಾಪಾರ ಯುದ್ಧದ ಬೇಡಿಕೆಯ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆ 1,650 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 99,800 ರೂ. ತಲುಪಿದ್ದು, ಮಂಗಳವಾರ 1 ಲಕ್ಷ ರೂ. ತಲುಪುವ ನಿರೀಕ್ಷೆಯಿದೆ. ಬೆಳ್ಳಿ ಬೆಲೆಯೂ ಕೆಜಿಗೆ 500 ರೂ. ಏರಿಕೆಯಾಗಿ 98,500 ರೂ.ಗೆ ತಲುಪಿದೆ.
ಪೂರ್ತಿ ಓದಿKarnataka News Live: ನಾಳೆ ಚಿನ್ನಕ್ಕೆ ಮಹಾ ದಿನ, 1 ಲಕ್ಷದ ಗಡಿ ದಾಟಲಿದೆ 10 ಗ್ರಾಂ ಬಂಗಾರ!

ಬೆಂಗಳೂರು: ಜಾತಿಜನಗಣತಿಯ ಮೂಲ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗಿರುವುದು ನಕಲಿ ವರದಿ ಎಂದು ಹೇಳಿದರು. ತುಮಕೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಾವಿಯಲ್ಲಿರುವ ಕಸದಂತೆ ಆಗಿದೆ ಎಂದಿದ್ದಾರೆ. ಧರ್ಮಾಚರಣೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಿರಿಯರು ಮಾಡಿರುವ ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸರ್ಕಾರ ಬದ್ಧವಿದೆ. ಆಚರಣೆಗಳನ್ನು ಅನುಸರಿಸಲು ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇಂದು ನಡೆಯುವ ರಾಜಕೀಯ ಮತ್ತು ರಾಜಕೀಯೇತರ ಸುದ್ದಿಗಳ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ನಾಳೆ ಚಿನ್ನಕ್ಕೆ ಮಹಾ ದಿನ, 1 ಲಕ್ಷದ ಗಡಿ ದಾಟಲಿದೆ 10 ಗ್ರಾಂ ಬಂಗಾರ!
ಕೆನಡಾ ಹಿಂದೂ ದೇಗುಲದಲ್ಲಿ ಖಲಿಸ್ತಾನಿಗಳಿಂದ ಭಾರತ ವಿರೋಧಿ ಗೀಚುಬರಹ!
ಕೆನಡಾದ ವ್ಯಾಂಕೋವರ್ನಲ್ಲಿರುವ ಗುರುದ್ವಾರವನ್ನು ಭಾರತ ಮತ್ತು ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ. ಖಲಿಸ್ತಾನಿ ಪರ ಸಿಖ್ ಪ್ರತ್ಯೇಕತಾವಾದಿಗಳ ಗುಂಪಿನ ಕೈವಾಡ ಇದರ ಹಿಂದಿದೆ ಎಂದು ಖಾಲ್ಸಾ ದಿವಾನ್ ಸೊಸೈಟಿ ಆರೋಪಿಸಿದೆ.
ಪೂರ್ತಿ ಓದಿಕಾಯಿಲೆ ಹೆಸರಲ್ಲಿ ಓಂಪ್ರಕಾಶ್ ಕೊಂದ ಪತ್ನಿ ಬಚಾವ್ ಆಗ್ತಾರಾ, ಏನಿದು ಸ್ಕಿಜೋಫ್ರೇನಿಯಾ?
ನಿವೃತ್ತ ಡಿಜಿಪಿ ಓಂಪ್ರಕಾಶ್ ರವರನ್ನು ಪತ್ನಿ ಮತ್ತು ಮಗಳು ಹತ್ಯೆ ಮಾಡಿದ್ದು, ಆಸ್ತಿ ವಿವಾದ ಮತ್ತು ಮಾನಸಿಕ ಕಾಯಿಲೆ ಕಾರಣ ಎಂದು ಶಂಕಿಸಲಾಗಿದೆ. ಪತ್ನಿ ಮತ್ತು ಮಗಳು ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪೂರ್ತಿ ಓದಿಜೆಡಿ ವಾನ್ಸ್ ಮಕ್ಕಳಿಗೆ ನವಿಲುಗರಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ!
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವ್ಯಾಪಾರ, ಸುಂಕ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಅಕ್ಷರಧಾಮ ದೇವಸ್ಥಾನಕ್ಕೂ ಭೇಟಿ ನೀಡಿದರು.
ಪೂರ್ತಿ ಓದಿಚೀನಾ ಮ್ಯಾರಥಾನ್ನಲ್ಲಿ ರೋಬೋಟ್ಗಳ ಓಟ, ಬಾಲವಿಲ್ಲದ ಜೆಟ್!
ಬೀಜಿಂಗ್ನಲ್ಲಿ ನಡೆದ ಹಾಫ್ ಮ್ಯಾರಥಾನ್ನಲ್ಲಿ ರೋಬೋಟ್ಗಳು ಸ್ಪರ್ಧಿಸಿದವು. ಚೀನಾದಲ್ಲಿ 10G ಬ್ರಾಡ್ಬ್ಯಾಂಡ್ ನೆಟ್ವರ್ಕ್ ಅನ್ನು ಪರಿಚಯಿಸಲಾಗಿದೆ. ಚೀನಾ ಬಾಲವಿಲ್ಲದ ಜೆಟ್ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಪೂರ್ತಿ ಓದಿಮುಸ್ಲಿಂ ಆಯುಕ್ತ ಎಂದ ಬಿಜೆಪಿ ಸಂಸದ ದುಬೆಗೆ ಖುರೇಶಿ ತಿರುಗೇಟು!
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ವೈ ಖುರೇಶಿ ಅವರನ್ನು 'ಮುಸ್ಲಿಂ ಆಯುಕ್ತ' ಎಂದು ಕರೆದಿದ್ದಾರೆ. ಖುರೇಶಿ ಅವರು ತಮ್ಮ ಕಾರ್ಯವಧಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ವೋಟರ್ ಐಡಿಗಳನ್ನು ನೀಡಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಖುರೇಶಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಪೂರ್ತಿ ಓದಿನಡುರಸ್ತೆಯಲ್ಲೇ ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!
ಬೆಂಗಳೂರಿನಲ್ಲಿ ಡಿಆರ್ಡಿಓ ವಿಂಗ್ ಕಮಾಂಡರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್ ಮೊದಲು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವುದನ್ನು ಬಹಿರಂಗಪಡಿಸಿವೆ, ಆರಂಭಿಕ ವರದಿಗಳಿಗೆ ವಿರುದ್ಧವಾಗಿದೆ.
ಪೂರ್ತಿ ಓದಿಬೆಂಗಳೂರಿನ ಬಳಿ 3273 ಕೋಟಿ ರೂಪಾಯಿ ವೆಚ್ಚದ ಐಟಿ ಪಾರ್ಕ್ ನಿರ್ಮಿಸಲಿರುವ ಟಾಟಾ ರಿಯಾಲ್ಟಿ!
ಬೆಂಗಳೂರು ಬಳಿ 3,273 ಕೋಟಿ ರೂ.ಗಳ ಐಟಿ ಮತ್ತು ಐಟಿಇಎಸ್ ಬ್ಯುಸಿನೆಸ್ ಪಾರ್ಕ್ ಸ್ಥಾಪಿಸಲು ಟಾಟಾ ರಿಯಾಲ್ಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಈ ಉದ್ಯಾನವನವು ವೈಟ್ಫೀಲ್ಡ್ನಲ್ಲಿ ಸ್ಥಾಪಿತವಾಗಲಿದ್ದು, ಸುಮಾರು 5,500 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಪೂರ್ತಿ ಓದಿಸಿ ಸೆಕ್ಷನ್ ನಂತರ ಬೆನ್ನು ಸೊಂಟ ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ
ಸಿ-ಸೆಕ್ಷನ್ ನಂತರ ದೇಹವು ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹಲವು ವಾರಗಳಿಂದ ಹಲವು ತಿಂಗಳುಗಳವರೆಗೆ ಇರುತ್ತದೆ. ಬೆನ್ನು ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.
ಪೂರ್ತಿ ಓದಿಈಕೆ ವಿಶ್ವದ ಅತೀ ಶ್ರೀಮಂತ ಟಿವಿ ನಿರೂಪಕಿ: ಹಾಲಿವುಡ್ ಟಾಪ್ ನಟರು ಈಕೆಯ ಶ್ರೀಮಂತಿಕೆ ಮುಂದೆ ಫ್ಲಾಪು
ಕೆಲವರು ಅಪ್ಪ ಅಜ್ಜ ಮಾಡಿದ ಆಸ್ತಿಯಿಂದಾಗಿ ಶ್ರೀಮಂತಿಕೆ ಹುಟ್ಟಿನಿಂದಲೇ ಬಂದಿದ್ದರೆ ಮತ್ತೆ ಕೆಲವರು ಸ್ವತಃ ದುಡಿದು ಕೋಟ್ಯಾಧಿಪತಿಗಳು, ಬಿಲಿಯನೇರ್ಗಳು ಆದವರು. ಅಂತಹ ಬಿಲಿಯನೇರ್ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನ ಅತೀ ಶ್ರೀಮಂತ ಟಿವಿ ಶೋ ನಿರೂಪಕಿ
ಪೂರ್ತಿ ಓದಿರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೂರ್ತಿ ಓದಿಎಲೋನ್ ಮಸ್ಕ್ ತಾಯಿ ಜೊತೆ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಜಾಕ್ವೆಲಿನ್ ಫೆರ್ನಾಂಡಿಜ್!
ಎಲೋನ್ ಮಸ್ಕ್ ಅವರು ತಮ್ಮ ತಾಯಿ ಮಾಯ್ ಮಸ್ಕ್ ಅವರ ಹುಟ್ಟುಹಬ್ಬದಂದು ಮುಂಬೈನಲ್ಲಿ ಅಚ್ಚರಿಯ ಉಡುಗೊರೆಯನ್ನು ನೀಡಿದ್ದಾರೆ. ಮಾಯ್ ಮಸ್ಕ್ ಅವರು ಜಾಕ್ವೆಲಿನ್ ಫೆರ್ನಾಂಡೆಜ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪೂರ್ತಿ ಓದಿಮಹಿಳೆಯ ರಿವರ್ ರಾಫ್ಟಿಂಗ್ ವೀಡಿಯೋ ಕೂಡಲೇ ಡಿಲೀಟ್ ಮಾಡಿ: ಫೇಸ್ಬುಕ್ ಗೂಗಲ್ ಎಕ್ಸ್ಗೆ ಹೈಕೋರ್ಟ್ ಆದೇಶ
ಋಷಿಕೇಶದಲ್ಲಿ ರಾಫ್ಟಿಂಗ್ ಮಾಡುವಾಗ ಚಿತ್ರೀಕರಿಸಿದ ವೀಡಿಯೊವನ್ನು ಬೋಧಕರು ಮತ್ತು ಟ್ರಾವೆಲ್ ಏಜೆನ್ಸಿಯು ಆನ್ಲೈನ್ನಲ್ಲಿ ಹಂಚಿಕೊಂಡಿದ್ದು,ಇದರಿಂದ ಮಹಿಳೆಗೆ ಕಿರುಕುಳ ಶುರುವಾಗಿದೆ.
ಪೂರ್ತಿ ಓದಿಬ್ಯಾಗ್ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..
ಲಂಡನ್ನ ಈ ಮಹಿಳೆಗೆ ಹೃದಯವೇ ಇಲ್ಲ. ಬ್ಯಾಗ್ನಲ್ಲಿ ಇರುವ ಕೃತಕ ಹೃದಯದಿಂದಲೇ ಈಕೆ ಕಾರ್ಯ ನಿರ್ವಹಿಸುತ್ತಾಳೆ. ಅಬ್ಬಬ್ಬಾ ಎನ್ನುವ ಸ್ಟೋರಿ ಕೇಳಿ...
ಒಂದು ಸಿನಿಮಾಗೆ 200 ಕೋಟಿ: ದಕ್ಷಿಣ ಭಾರತದ ಇವರು ದೇಶದ ಅತೀ ದುಬಾರಿ ನಿರ್ದೇಶಕ
ನಿರ್ದೇಶಕರ ಸಂಭಾವನೆಯ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆ ಆದರೆ ಈಗ ನಾವು ಭಾರತದ ಅತೀಹೆಚ್ಚು ಸಂಭಾವನೆ ಪಡೆಯುವ ನಿರ್ದೇಶನ ಬಗ್ಗೆ ಹೇಳ ಹೊರಟಿದ್ದೇವೆ. ಈ ನಿರ್ದೇಶಕ ತಾವು ನಿರ್ದೇಶಿಸುವ ಪ್ರತಿ ಸಿನಿಮಾಗೆ ಸುಮಾರು 200 ಕೋಟಿ ಚಾರ್ಜ್ ಮಾಡುತ್ತಾರೆ.
ಪೂರ್ತಿ ಓದಿಬೆಂಗಳೂರಿನಲ್ಲಿ ಲಾ & ಆರ್ಡರ್ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್ ಕಮಾಂಡರ್ ಮೇಲೆ ಬೈಕ್ ಸವಾರನ ಹಲ್ಲೆ!
ಬೆಂಗಳೂರಿನಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಅವರ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ್ದಾನೆ. ಏರ್ಪೋರ್ಟ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರ್ ಡೋರ್ ಬೈಕ್ಗೆ ತಾಕಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ.
ಪೂರ್ತಿ ಓದಿಇನ್ಸುಲಿನ್, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದ ಸಚಿವ ಅಮಿತ್ ಶಾ ಮಾತು ಕೇಳಿ
ಇನ್ಸುಲಿನ್, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದಿರುವುದೂ ಅಲ್ಲದೇ, 20 ಕೆ.ಜಿ. ತೂಕ ಇಳಿಸಿಕೊಂಡಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ ಕೇಳಿ.
ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯನ ಸಮಾಧಿಯ ಮೇಲೆ ಮಾಂಸ ಕತ್ತರಿಸಿದ ಸ್ಥಳೀಯರು!
ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಕಟ್ ಮಾಡಿ ಅಪಚಾರ ಎಸಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ.
ಪೂರ್ತಿ ಓದಿಪೋಪ್ ಫ್ರಾನ್ಸಿಸ್ ನಿಧನ: ಕ್ರೈಸ್ತರ ಮುಂದಿನ ಪರಮೋಚ್ಛ ಗುರುವಿನ ನೇಮಕ ಹೇಗಿರುತ್ತದೆ?
12 ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್ ಮುನ್ನಡೆಸಿದ್ದ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ. ಕಾರ್ಡಿನಲ್ಗಳ ಸಮಾವೇಶವು ಹೊಸ ಪೋಪ್ ಆಯ್ಕೆಗೆ ಶತಮಾನಗಳಷ್ಟು ಹಳೆಯ ಸಂಪ್ರದಾಯ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತದೆ.
ಪೂರ್ತಿ ಓದಿಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ ಉತ್ತರ ಭಾರತೀಯನಿಂದ ಕನ್ನಡದಲ್ಲಿ ಕ್ಷಮೆ
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ ಉತ್ತರ ಭಾರತ ಮೂಲದ ವ್ಯಕ್ತಿ ವೀಡಿಯೋ ವೈರಲ್ ಆದ ನಂತರ ಕ್ಷಮೆ ಕೇಳಿದ್ದಾನೆ. ಈತ ಬೆಂಗಳೂರಿನಲ್ಲಿ 9 ವರ್ಷಗಳಿಂದ ವಾಸವಾಗಿದ್ದು, ನಗರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾನೆ.
ಪೂರ್ತಿ ಓದಿ