ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಪೂರೈಸಲು, ಬಿಡಿಎ 'ವರ್ಟಿಕಲ್ ಗ್ರೋತ್' ಪರಿಕಲ್ಪನೆಯಡಿ 3,200 ಕೋಟಿ ರೂ. ವೆಚ್ಚದಲ್ಲಿ ಆರು ಹೊಸ ವಸತಿ ಯೋಜನೆಗಳನ್ನು ಆರಂಭಿಸಿದೆ. ಕೋಣದಾಸಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ 1BHK ಯಿಂದ 4BHK ವರೆಗಿನ ಫ್ಲಾಟ್ಗಳನ್ನು ನಿರ್ಮಿಸಲಾಗುತ್ತಿದೆ.
- Home
- News
- State
- Karnataka News Live: ಬೆಂಗಳೂರಿಗರಿಗೆ ಬಿಡಿಎ ಗುಡ್ ನ್ಯೂಸ್ - 3,200 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಲಿವೆ 4,200ಕ್ಕೂ ಹೆಚ್ಚು ಫ್ಲಾಟ್ಗಳು!
Karnataka News Live: ಬೆಂಗಳೂರಿಗರಿಗೆ ಬಿಡಿಎ ಗುಡ್ ನ್ಯೂಸ್ - 3,200 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಲಿವೆ 4,200ಕ್ಕೂ ಹೆಚ್ಚು ಫ್ಲಾಟ್ಗಳು!

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಪರಿಣಾಮ ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20ರಿಂದ 30 ರು. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ.
ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್ ಮತ್ತು ಮೂಲಸೌಕರ್ಯ ಖರ್ಚಿನಲ್ಲಿನ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದಾಗಿ ಜಲಮಂಡಳಿ ಆರ್ಥಿಕ ನಷ್ಟದಲ್ಲಿದೆ. ಅದನ್ನು ತಪ್ಪಿಸಲು ಪ್ರತಿವರ್ಷ ಶೇ.3ರಷ್ಟು ನೀರು ಬಳಕೆ ಶುಲ್ಕ ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್ ಹೆಚ್ಚಳ ಮಾಡಲಾಗುತ್ತಿದೆ.
Karnataka News Live 1st April 2026ಬೆಂಗಳೂರಿಗರಿಗೆ ಬಿಡಿಎ ಗುಡ್ ನ್ಯೂಸ್ - 3,200 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಲಿವೆ 4,200ಕ್ಕೂ ಹೆಚ್ಚು ಫ್ಲಾಟ್ಗಳು!
Karnataka News Live 1st April 2026ಮಂಗಳೂರು ಮೀನುಗಾರಿಕೆ ವೇಳೆ ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು
ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ಯುವಕರಿದ್ದ ದೋಣಿ ಮಗುಚಿದ್ದು, ಇಬ್ಬರು ನೀರುಪಾಲಾಗಿದ್ದಾರೆ.. ಈ ದುರಂತದಲ್ಲಿ ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Karnataka News Live 1st April 2026ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ - ಸಚಿವ ಎಚ್.ಕೆ.ಪಾಟೀಲ್ ಕಳವಳ
ಗಾಂಜಾ, ಅಫೀಮು ಇಂದು ಸಮಾಜಕ್ಕೆ ಪಿಡುಗಾಗಿವೆ. ಚಹಾ ಅಂಗಡಿ ಸೇರಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
Karnataka News Live 1st April 2026ಧಮ್ಕಿ ಹಾಕಿ ಮತ ಪಡೆಯುವ ಕಾಂಗ್ರೆಸ್ - ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಕಾಂಗ್ರೆಸ್ನವರು ಧಮ್ಕಿ ಹಾಕಿ ಮತ ಪಡೆಯಲು ಹೊರಟಿದ್ದಾರೆ. ಬಾಗಲಕೋಟೆಯ ಜನ ಅದಕ್ಕೆ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Karnataka News Live 1st April 2026ಶಾಸಕ ಬಸನಗೌಡ ಯತ್ನಾಳ ಕಾಂಗ್ರೆಸ್ ಪರ ಕೆಲಸ ಮಾಡಬೇಕು - ಸಿಎಂ ಸಿದ್ದರಾಮಯ್ಯ
ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು. ಬಿಜೆಪಿಗೆ ಮಾಡಕೂಡದು. ಅವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
Karnataka News Live 1st April 2026ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ - ಆರ್.ಅಶೋಕ್ ವಾಗ್ದಾಳಿ
ದುರಾಡಳಿತ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು ಸಿಎಂ ಸಿದ್ದರಾಮಯ್ಯ ಸಾಲದರಾಮಯ್ಯ ಆಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
Karnataka News Live 1st April 2026Brahmagantu ಸೀರಿಯಲ್ನಲ್ಲಿ ದಿಶಾ ಕಂಡ್ರೆ ಕಿಡಿಕಾರೋ ಚಿರು, ರಿಯಲ್ ಲವ್ವಿಡವ್ವಿ ವೈರಲ್ ಆಗೋಯ್ತು
Karnataka News Live 1st April 2026ಒಂದು ಸಣ್ಣ ತಪ್ಪು ಮಾಡಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಕಳ್ಕೊಂಡ ಖ್ಯಾತ ನಟ, Bigg Boss ಸ್ಪರ್ಧಿ; ಯಾರದು?
Tollywood Actor: ಒಂದು ಕಾಲದಲ್ಲಿ ಟಾಲಿವುಡ್ನಲ್ಲಿ ಕಾಮಿಡಿ ಚಿತ್ರಗಳಿಂದ ಜನರನ್ನು ನಗಿಸಿದ್ದ ನಟರೊಬ್ಬರು, ಈಗ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ, ಅವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಕಳೆದುಕೊಂಡಿದ್ದಾರೆ.
Karnataka News Live 1st April 2026ಅತ್ತುಕೊಂಡೇ ಮಲಗಿದ ದಿನಗಳಿದ್ದವು, ಅಕ್ಷಯ್ ಕೊಟ್ಟ ಆ ಸಲಹೆ ನನ್ನನ್ನು ಬದಲಿಸಿತು - ಸೀತಾ ರಾಮಂ ನಟಿ!
ದುಲ್ಕರ್ ಸಲ್ಮಾನ್ ಜೊತೆ 'ಸೀತಾ ರಾಮಂ' ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿಯಾಗಿರುವ ಮೃಣಾಲ್ ಠಾಕೂರ್, ಇದೀಗ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳ ಕಷ್ಟವನ್ನು ಹಂಚಿಕೊಂಡಿದ್ದಾರೆ.
Karnataka News Live 1st April 2026ಉಗ್ರಾಯುಧಂ ಚಿತ್ರಕ್ಕೆ ಎಂಟ್ರಿ ಕೊಟ್ಟ ಕಾಂತಾರ ಬೆಡಗಿ - ಶ್ರೀಮುರಳಿಗೆ ಸಪ್ತಮಿ ಗೌಡ ಜೋಡಿ!
ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಉಗ್ರಾಯುಧಂ ಸುಮಾರು 500 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ. ಇದೊಂದು ಐತಿಹಾಸಿಕ ಚಿತ್ರ.
Karnataka News Live 1st April 2026ಇತ್ತೀಚೆಗಂತೂ ಗಟ್ಟಿಮುಟ್ಟಾದವ್ರನ್ನೂ ನರಳಿಸುತ್ತಿರೋ ಕ್ಯಾನ್ಸರ್ ; ಈ ಕಾಯಿಲೆ ತಡೆಯುವ 7 ಆಹಾರಗಳಿವು!
ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ನಮ್ಮ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳಲ್ಲಿ ಆ್ಯಂಟಿಆಕ್ಸಿಡೆಂಟ್ಗಳು, ಫೈಟೊಕೆಮಿಕಲ್ಗಳು, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ಹೇರಳವಾಗಿವೆ. ಹಾಗಾದರೆ ಅವು ಯಾವುವು?
Karnataka News Live 1st April 2026ಆ ಒಂದು ನೋಟು ಸಿನಿಮಾ ವಿಮರ್ಶೆ - ಒಂದು ನೋಟು ಹತ್ತಾರು ಬದುಕು ಬದಲಿಸಿದ ಕಥೆ
ಕಳ್ಳನಿಂದ ಆ ನೋಟು ಇನ್ಯಾರಿಗೋ ಹೋಗುತ್ತದೆ. ಹತ್ತಾರು ಮಂದಿಗೆ ಈ ನೋಟು ದಾಟುತ್ತಾ ಹೋಗುತ್ತದೆ. ಆ ಒಂದು ನೋಟು ಎಷ್ಟು ಜನರ ಬದುಕನ್ನು ಬದಲಿಸುತ್ತದೆ ಎಂಬುದನ್ನು ನಿರ್ದೇಶಕರು ಇಲ್ಲಿ ಹೇಳುತ್ತಾ ಹೋಗುತ್ತಾರೆ.
Karnataka News Live 1st April 2026ಮೈತ್ರಿ ಮೂವಿ ಮೇಕರ್ಸ್ ಜೊತೆ ಕೈ ಜೋಡಿಸಿದ ರಿಷಬ್ ಶೆಟ್ಟಿ - ನಿರ್ಮಾಪಕಿಯಾಗಿ ಪ್ರಗತಿ ಶೆಟ್ಟಿ
ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜತೆ ಕೈ ಜೋಡಿಸಿದ ರಿಷಬ್ ಶೆಟ್ಟಿ ಫಿಲಂಸ್. ಜೈ ಹನುಮಾನ್ ಸಿನಿಮಾ ನಿರ್ಮಾಣಕ್ಕೆ ರಿಷಬ್ ದಂಪತಿ ಸಾಥ್. ಚಿತ್ರದ ನಿರ್ಮಾಪಕಿಯಾಗಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಮುಂದಾಳತ್ವ.
Karnataka News Live 1st April 2026ಗೂಗಲ್ ಸರ್ಚ್ಗೂ ಸಿಗದ 'ಬಾಡಿ ಕೌಂಟ್' ಮರ್ಮ - ಕೇಳಬಾರದ ಈ ಪ್ರಶ್ನೆಗೆ ಉತ್ತರಿಸುವವರಿಗೆ ನಾಚಿಕೆಯಿಲ್ಲ!
Body Count Meaning in Kannada With Example: ಇತ್ತೀಚೆಗೆ Body Count ಎಂಬ ಪದದ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಅರ್ಥ ಏನು ಎಂದು ಗೂಗಲ್ನಲ್ಲಿ ಹುಡುಕಿದರೆ, ಎಷ್ಟು ಜನರನ್ನು ಕೊಂ*ದಿದ್ದೇವೆ ಎಂದು ಲೆಕ್ಕ ಹಾಕುವುದು ಎಂದು ಸಿಗುವುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇದರ ಅರ್ಥ ಬೇರೆಯೇ ಇದೆ.
Karnataka News Live 1st April 2026"ಇಂದೇ ನಿಮ್ಮ ಕಡೆಯ ದಿನ" ಒರಾಕಲ್ನಿಂದ 12 ಸಾವಿರಾರು ಉದ್ಯೋಗಿಗಳ ವಜಾ! ಬೆಂಗಳೂರು ಐಟಿ ವಲಯದಲ್ಲಿ ಆತಂಕ
Karnataka News Live 1st April 2026'ಫಸ್ಟ್ ನೈಟ್ ವಿತ್ ದೆವ್ವ'ದ ಸಂಭ್ರಮದ ನಡುವೆಯೇ ಅಪ್ಪ ಆಗ್ತಿರೋ ಪ್ರಥಮ್- ನಟ ಹೇಳಿದ್ದೇನು?
ಬಿಗ್ ಬಾಸ್ ವಿಜೇತ ಪ್ರಥಮ್ ಅವರ 'ಫಸ್ಟ್ ನೈಟ್ ವಿತ್ ದೆವ್ವ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೇ ವೇಳೆ ನಟ ಶ್ರೀನಿವಾಸಮೂರ್ತಿ ಪ್ರಥಮ್ ಅಪ್ಪನಾಗುತ್ತಿರುವ ಸುದ್ದಿ ಬಹಿರಂಗಪಡಿಸಿದ್ದಾರೆ. ಪ್ರಚಾರದಿಂದ ದೂರವಿರುವ ಪ್ರಥಮ್, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ
Karnataka News Live 1st April 2026236 ಎಪಿಸೋಡ್ಗೆ Nee Iralu Jotheyalli Serial ಬಿಟ್ಟ ಹೀರೋಯಿನ್; ಹೊಸ ನಟಿಯ ಎಂಟ್ರಿಯಾಯ್ತು; ಯಾರದು?
Nee Iralu Jotheyalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ನಾಯಕಿ ಬದಲಾವಣೆ ಆಗಿದೆ ಎನ್ನಲಾಗಿದೆ. ಹೌದು, ಹೊಸ ನಟಿಯ ಆಗಮನ ಆಗಿದೆಯಂತೆ. ಹಾಗಾದರೆ ಯಾರದು?
Karnataka News Live 1st April 2026'ಮೂರ್ಖ ಯೋಜನೆಗಳ' ವಿರುದ್ಧ ಬೆಂಗಳೂರಿಗರ ಆಕ್ರೋಶ - ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆಗೆ ಆಗ್ರಹ
ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕಾಗಿ ನಗರ ತನ್ನ ಪ್ರಮುಖ ಅರಣ್ಯಪ್ರದೇಶವನ್ನೇ ಕಳೆದುಕೊಳ್ಳುವ ಸಾಧ್ಯತೆಯ ಕುರಿತು ಪ್ರತಿಭಟನೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
Karnataka News Live 1st April 2026ರಾಣಿ ಫಿಕ್ಸ್ ಆಯ್ತು - ಕನ್ನಡ ಯುಟ್ಯೂಬರ್ ಸ್ಯಾಮ್ ಸಮೀರ್ ಮದುವೆ ಆಗ್ತಿರೋ ಹುಡುಗಿ ಯಾರು?
Sam Sameer Girlfriend Name: ಕನ್ನಡದಲ್ಲಿ Vlog ಮಾಡಿ ಗಮನಸೆಳೆದ ಸ್ಯಾಮ್ ಸಮೀರ್ ಈಗ ಮದುವೆಯಾಗಲು ರೆಡಿ ಆಗಿದ್ದಾರೆ. ಹುಡುಗಿ ಫಿಕ್ಸ್ ಮಾಡುವ ಶಾಸ್ತ್ರದ ವಿಡಿಯೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು?
Karnataka News Live 1st April 2026Jodi No 1 Show - ಈ ಬಾರಿ ಜೋಡಿ ನಂ 1 ಶೋನಲ್ಲಿದೆ ಭರ್ಜರಿ ಟ್ವಿಸ್ಟ್, ವಿಶೇಷತೆ; ಏನದು?
Jodi No 1 Season 3 Show: ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಶೋ ಶುರುವಾಗಲಿದೆ. ಹಿರಿತೆರೆ, ಕಿರುತೆರೆಯಲ್ಲಿ ಮಿಂಚಿರುವ ರಿಯಲ್ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು ಜನರಿಗೆ ಈ ರಿಯಾಲಿಟಿ ಶೋ ಮೂಲಕ ಜನರ ಮುಂದಿಡಲಿದೆ.