ಶಾಸಕ ಜಿ.ಟಿ.ದೇವೇಗೌಡರು ಮೈಸೂರು ಭಾಗದಲ್ಲಿ ತಾವೇ ಏಕಾಂಗಿಯಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾಗಿ ಹೇಳುವ ಮೂಲಕ ದಳಪತಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮನ್ನು ಬೆಳೆಸಿದವರೇ ಕಳೆದ ಚುನಾವಣೆಯಲ್ಲಿ ವಿರೋಧ ಮಾಡಿದರು, ಆದರೂ ಕ್ಷೇತ್ರದ ಜನ ಕೈಬಿಡಲಿಲ್ಲ ಎಂದಿದ್ದಾರೆ.
- Home
- News
- State
- Karnataka News Live: ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ
Karnataka News Live: ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ

ಬೆಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಗಾದಿ ಹಬ್ಬದ ಮುನ್ನ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದು ಧರೆಯನ್ನು ಸ್ವಲ್ಪ ತಂಪು ಮಾಡಿದೆ. ಧಾರವಾಡದ ಕಲಘಟಗಿ ಸೇರಿ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಹಾಸನ, ರಾಮನಗರ, ಕೊಡಗು, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಮಳೆ ವಿವರ:
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಾಸನ ಮತ್ತು ಮಾಗಡಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 4 ಸೆಂ.ಮೀ, ಧರ್ಮಸ್ಥಳದಲ್ಲಿ 3 ಸೆಂ.ಮೀ, ದಾವಣಗೆರೆ ನಗರದಲ್ಲಿ 3 ಸೆಂ.ಮೀ ಮತ್ತು ಚನ್ನಗಿರಿಯಲ್ಲಿ 2 ಸೆಂ.ಮೀ ಮಳೆಯಾದ ವರದಿಯಾಗಿದೆ.
ಕುಣಿಗಲ್ ಮತ್ತು ಬೆಂಗಳೂರು ನಗರದ ಟಿ.ಜಿ. ಹಳ್ಳಿ ಎಚ್ಎಂಎಸ್ ಕೇಂದ್ರಗಳಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ. ಚಿತ್ರದುರ್ಗ ನಗರ, ನಾಯಕನಹಟ್ಟಿ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಬೀದರ್ ಜಿಲ್ಲೆಯ ಮಂತಾಳದಲ್ಲಿ ತಲಾ 1 ಸೆಂ.ಮೀ. ಮಳೆ ಸುರಿದಿದೆ.
Karnataka News Live 18 March 2026ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ
Karnataka News Live 18 March 2026ಒಡೆದ ತುಂಗಭದ್ರಾ ಎಡದಂಡೆ ಕಾಲುವೆ - ಅಪಾರ ಪ್ರಮಾಣ ನೀರು ಪೋಲು - ರೈತರ ಜಮೀನಿಗೆ ನುಗ್ಗಿದ ನೀರು
Karnataka News Live 18 March 2026ಏನ್ ಮಾಡಕತ್ತೀ ಮೇಂಬರವ್ವಾ ಅಂತಾ ಮಂದಿ ಮನೀಗೆ ಬರ್ತಾರಿ - ಪಂಚಾಯಿತಿ ಸಭೆಯಲ್ಲಿ ಆಕ್ರೋಶ
ಕುಕನೂರಿನಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಭೆಯಲ್ಲಿ, ಸಂಜಯ ನಗರದ ಚರಂಡಿ ಮತ್ತು ನೀರಿನ ಸಮಸ್ಯೆಗೆ ಸದಸ್ಯೆ ಲಕ್ಷ್ಮೀ ಸಬರದ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Karnataka News Live 18 March 2026ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ
ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಜಿ.ಟಿ.ದೇವೇಗೌಡರು, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಟಿಕೆಟ್ ಸಿಗದಿದ್ದರೆ, ಮತದಾರರ ತೀರ್ಮಾನಕ್ಕೆ ಬದ್ಧ ಎಂದಿರುವ ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಇದೇ ವೇಳೆ, ಅವರ ಪುತ್ರ ಹರೀಶ್ ಗೌಡ ಕೂಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
Karnataka News Live 18 March 2026ಸಿಎಂ ಇದ್ದಾಗಲೇ ಸ್ಪೀಕರ್ ಸಭಾತ್ಯಾಗ, ಇದು ಆಡಳಿತ ಅಸಮರ್ಥತೆಗೆ ಸಾಕ್ಷಿ - ಜೋಶಿ
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಸದನದಿಂದ ಹೊರನಡೆದ ಘಟನೆಯನ್ನು ಉಲ್ಲೇಖಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಟೀಕಿಸಿದ್ದಾರೆ. ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದಿರುವುದು, ಗೈರುಹಾಜರಾಗುವುದು ಸರ್ಕಾರದ ಅಧೋಗತಿಗೆ ಸಾಕ್ಷಿ ಎಂದರು.
Karnataka News Live 18 March 2026ಐಸಿಸ್ ನಂಟು - 19 ವರ್ಷದ ವೈದ್ಯಕೀಯ ವಿದ್ಯಾರ್ಥಿ ಬಂಧನ
ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ದಂತ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಸಹರಾನ್ಪುರ ಹ್ಯಾರಿಸ್ ಅಲಿ (19) ಬಂಧಿತ. ಗುಪ್ತಚರ ಮಾಹಿತಿ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Karnataka News Live 18 March 2026ನಾರಾಯಣ ಆಸ್ಪತ್ರೆಯಿಂದ ಡ್ರೋನ್ಲ್ಲಿ ಲ್ಯಾಬ್ಗೆ ಸ್ಯಾಂಪಲ್ ಸಾಗಣೆ! 4 ಕಿ.ಮೀ ದೂರ, ಹತ್ತೇ ನಿಮಿಷದಲ್ಲಿ ರೀಚ್, ಟ್ರಾಫಿಕ್ ಸಮಸ್ಯೆಯೇ ಇಲ್ಲ
ನಾರಾಯಣ ಹೆಲ್ತ್ ಸಮೂಹವು ಬೆಂಗಳೂರಿನಲ್ಲಿ ರೋಗಿಗಳ ಆರೋಗ್ಯ ತಪಾಸಣೆಯ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಸಾಗಿಸಲು ಡ್ರೋನ್ ಬಳಕೆಯನ್ನು ಆರಂಭಿಸಿದೆ. ಏರ್ಬೌಂಡ್ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಡ್ರೋನ್ಗಳು, ಚಂದಾಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 10 ನಿಮಿಷಗಳಲ್ಲಿ ಸ್ಯಾಂಪಲ್ಗಳನ್ನು ತಲುಪಿಸಿದೆ.
Karnataka News Live 18 March 2026ಮಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೊಸ ಸೌಲಭ್ಯ ಆರಂಭ; ಸಂಪೂರ್ಣ ಡಿಜಿಟಲ್ ಸೇವೆ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಡಿಜಿಟಲ್ ಮತ್ತು ಸ್ವಯಂಚಾಲಿತ ಲಗೇಜ್ ಲಾಕರ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದು ಮೊಬೈಲ್ ಪಿನ್ ಮತ್ತು ಡಿಜಿಟಲ್ ಪಾವತಿ ಮೂಲಕ ಕಾರ್ಯನಿರ್ವಹಿಸುತ್ತದೆ. .
Karnataka News Live 18 March 2026508 ಡೌರಿ ಕೇಸಿನ ಆರೋಪಿಗಳಿಗೆ ಬೇಲ್ ನೀಡಿದ ಹೈಕೋರ್ಟ್ ಜಡ್ಜ್
ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಪಂಕಜ್ ಭಾಟಿಯಾ, ಕಳೆದ 3 ತಿಂಗಳಲ್ಲಿ ಇಂತಹದ್ದೇ 508 ಪ್ರಕರಣಗಳಲ್ಲೂ ಆರೋಪಿಗಳಿಗೆ ಜಾಮೀನು ನೀಡಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
Karnataka News Live 18 March 2026ಮಾನವನ ವ್ಯಾಮೋಹದಿಂದ ಯುದ್ಧ - ಭಾರತದಲ್ಲಿ ಶಾಂತಿ ನೆಲೆಸಲು ಕಾರಣ ಇಲ್ಲಿ ಧರ್ಮ ಇದೆ, ನಮ್ಮಂತಹ ಗುರುಗಳಿದ್ದೇವೆ -ಸಾಣೇಹಳ್ಳಿ ಶ್ರೀಗಳು
ರಾಣಿಬೆನ್ನೂರಿನ ಚಳಗೇರಿಯಲ್ಲಿ ಲಿಂ.ಡಾ. ಮಹಾಂತೇಶ್ವರ ಸ್ವಾಮಿಗಳ ನೂತನ ಕೈಲಾಸ ಮಂದಿರ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಾನವನ ವ್ಯಾಮೋಹವೇ ಯುದ್ಧಗಳಿಗೆ ಮೂಲ ಕಾರಣವಾಗಿದ್ದು, ಭಾರತದಲ್ಲಿ ಧರ್ಮ ಗುರುಗಳ ಮಾರ್ಗದರ್ಶನದಿಂದ ಶಾಂತಿ ನೆಲೆಸಿದೆ ಎಂದು ತಿಳಿಸಿದರು.
Karnataka News Live 18 March 2026ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆ; ತಲೆಮೇಲೆ ಕಲ್ಲು ಹಾಕಿ ಕೊಂದ ಅಣ್ಣ!
ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆಪಟ್ಟು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಆರೋಪಿ ಅಶೋಕ, ತನ್ನ ತಮ್ಮ ಫಕೀರಪ್ಪನನ್ನು ಹತ್ಯೆ ಮಾಡಿ, ಅಪರಿಚಿತರು ಕೊಂದಿದ್ದಾರೆಂದು ನಾಟಕವಾಡಿದ್ದ. ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Karnataka News Live 18 March 2026Jai Bangla Slogan Case - 'ಜೈ ಬಾಂಗ್ಲಾ' ಘೋಷಣೆ ಕೂಗಿ ಜೈಲು ಸೇರಿದ್ದ ಮಹಿಳೆಗೆ ಹೈಕೋರ್ಟ್ ಜಾಮೀನು
Jai Bangla Slogan Case ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಸರ್ಕಾರಿ ಜಮೀನಿನಲ್ಲಿದ್ದ ಅಕ್ರಮ ಶೆಡ್ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿ ಬಂಧಿತರಾಗಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಗೆ ಹೈಕೋರ್ಟ್ ಜಾಮೀನು ನೀಡಿದೆ.
Karnataka News Live 18 March 2026ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್ ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ
Bengaluru: ಜಾತಿ ಬೇರೆ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಪ್ರೇಮಿಗಳಿಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ, ಪೊಲೀಸರು ದೇವಸ್ಥಾನದಲ್ಲಿ ನಡೆದ ಅವರ ವಿವಾಹಕ್ಕೆ ಭದ್ರತೆ ಒದಗಿಸಿದ್ದಾರೆ.