11:51 PM (IST) Apr 15

ಶಾರುಖ್ ಖಾನ್ ₹300 ಕೋಟಿ ಮನೆ; ಒಂದು ದಿನಕ್ಕೆ 2 ಲಕ್ಷ ರೂ. ಬಾಡಿಗೆ!

ಬಾಲಿವುಡ್ ಬಾದ್‍ಶಾ, ಶಾರುಖ್ ಖಾನ್ ತಮ್ಮ 300 ಕೋಟಿ ಮೌಲ್ಯದ ಲಾಸ್ ಏಂಜಲೀಸ್ ಮನೆಯನ್ನು ದಿನಕ್ಕೆ 2 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಐಷಾರಾಮಿ ಮನೆಯ ವೈಶಿಷ್ಟ್ಯಗಳೇನು?

ಪೂರ್ತಿ ಓದಿ
11:16 PM (IST) Apr 15

ಜೊಮೆಟೋ ಡೆಲಿವರಿ ಬಾಯ್ ಫುಡ್ ಡೆಲಿವರಿ ಕೊಡದೇ ಜೀವ ಬೆದರಿಕೆ ಹಾಕಿದ

ಬೆಂಗಳೂರಿನ 22 ವರ್ಷದ ಯುವತಿ ಜೊಮ್ಯಾಟೋ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ವಿತರಣಾ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದರು. ಈ ಬಗ್ಗೆ ದೂರು ನೀಡಿದ್ದು, ನನಗೆ ಜೀವ ಭಯ ಉಂಟಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.

ಪೂರ್ತಿ ಓದಿ
10:11 PM (IST) Apr 15

ಕಾಸರಗೋಡು: ಮಹಿಳೆ ಮೇಲೆ ಥಿನ್ನರ್‌ ಎರಚಿ ಬೆಂಕಿ ಹಚ್ಚಿದ ಕುಡುಕ

ಕಾಸರಗೋಡಿನಲ್ಲಿ ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯ ಮಹಿಳೆಯ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪೂರ್ತಿ ಓದಿ
10:08 PM (IST) Apr 15

ಕೇವಲ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ ಏರ್ಟೆಲ್ ಸಿಮ್

ಕೇವಲ ಹತ್ತೇ ಹತ್ತೇ ನಿಮಿಷದಲ್ಲಿ ಸಿಮ್ ನಿಮ್ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಏರ್ಟೆಲ್ ಸಿಮ್‌ಗಾಗಿ ಶಾಪ್, ರೇಟೇಲ್ ‌ಶಾಪ್ ಹೋಗಬೇಕಿಲ್ಲ. ಏನಿದು ಹೊಸ ಆಫರ್.

ಪೂರ್ತಿ ಓದಿ
09:47 PM (IST) Apr 15

ಚಾಣಕ್ಯನೀತಿ: ತಾಯಿ ಗರ್ಭದಿಂದ ಮಹಿಳೆ ಪಡೆಯುವ 5 ಕೆಟ್ಟ ಹವ್ಯಾಸಗಳು

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುವ 5 ಕೆಟ್ಟ ಹವ್ಯಾಸಗಳ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಅವರು ಬರೆದದ್ದನ್ನು ಎಲ್ಲರೂ ಸತ್ಯ ಎಂದು ಒಪ್ಪುತ್ತಾರೆ.

ಪೂರ್ತಿ ಓದಿ
09:31 PM (IST) Apr 15

ಅಕ್ರಮ ಸಂಬಂಧ ಅಮಲು, ತನ್ನದೇ ಮಗಳ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿದ ತಾಯಿ

ಅಕ್ರಮ ಸಂಬಂಧದ ಅಮಲಿನಲ್ಲಿ ಮಹಿಳೆ ಮಾಡಿದ ಕೆಲಸ ತಾಯಿ ಕುಲಕ್ಕೆ ಅಪಮಾನ ಮಾಡುವಂತ ಕೆಲಸ ಮಾಡಿದ್ದಾಳೆ. ತನ್ನದೇ ಮಗಳ ಸ್ನಾನದ ವಿಡಿಯೋ, ಡ್ರೆಸ್ ಚೇಂಜ್ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ನಡೆದಿದೆ. ಮಹಾ ತಾಯಿ ಯ ನಡೆ ಹಿಂದೆ ಒಂದು ಕಾರಣವಿದೆ.

ಪೂರ್ತಿ ಓದಿ
09:08 PM (IST) Apr 15

ದೆಹಲಿ ಪಾರ್ಕ್‌ನಲ್ಲಿ ವೃದ್ಧ ದಂಪತಿಗಳ ನಿಷ್ಕಲ್ಮಶ ಪ್ರೀತಿ: ವೈರಲ್ ನೃತ್ಯ!

ವೃದ್ಧ ದಂಪತಿಗಳು ಪ್ರೀತಿಯ ನೃತ್ಯದ ಮೂಲಕ ಝಡ್ ಜನರೇಷನ್ ಗೆ ಮಾದರಿಯಾಗಿದ್ದಾರೆ. ದೆಹಲಿಯ ಉದ್ಯಾನವನದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪೂರ್ತಿ ಓದಿ
08:31 PM (IST) Apr 15

ಗ್ರಾಮಸ್ಥರೇ ನೀವು ಇರಬೇಕಾದರೆ ವಕ್ಫ್‌ಗೆ ಬಾಡಿಗೆ ಪಾವತಿಸಿ, ಕಾಂಗ್ರೆಸ್ ನಾಯಕನ ವಿವಾದ

ಒಮ್ಮೆ ವಕ್ಪ್ ಆದರೆ ಮತ್ತೆ ಯಾವತ್ತೂ ವಕ್ಫ್, ಗ್ರಾಮಸ್ಥರೇ ಜಾಗ ಖಾಲಿ ಮಾಡಿ ಇಲ್ಲಾ ವಕ್ಫ್‌ಗೆ ಬಾಡಿಗೆ ಕೊಡಿ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
08:12 PM (IST) Apr 15

ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್

ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ 4 ಭಾರತೀಯ ವಿಮಾನ ನಿಲ್ದಾಣಗಳು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ
07:20 PM (IST) Apr 15

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆಯ ಮೂಲ ಪತ್ತೆ ಹಚ್ಚಿದ ಪೊಲೀಸ್,ದೇವಸ್ಥಾನ ಭದ್ರತೆ ಹೆಚ್ಚಳ

ಆಯೋಧ್ಯೆ ಶ್ರೀರಾಮ ಮಂದಿರದ ಮೇಲ ಪವಿತ್ರ ಕಳಶ ಪ್ರತಿಷ್ಠಾಪಿಸಿದ ಬೆನ್ನಲ್ಲೇ ಎದುರಾದ ಬಾಂಬ್ ಬೆದರಿಕೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಬೆದರಿಕೆ ಹಾಕಿದ ಮೂಲ ಎಲ್ಲಿ ಅನ್ನೋದು ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೂರ್ತಿ ಓದಿ
06:42 PM (IST) Apr 15

ಟಾರಿಫ್ ಕುಸಿತ ಮೆಟ್ಟಿ ನಿಂತ ವಿಶ್ವದ ಮೊದಲ ಷೇರುಮಾರುಕಟ್ಟೆ ಹೆಗ್ಗಳಿಕೆ, ನಷ್ಟ ಸರಿದೂಗಿಸಿದ ಭಾರತ

ಟ್ರಂಪ್ ತೆರಿಗೆ ಸುನಾಮಿಯಲ್ಲಿ ವಿಶ್ವದ ಪ್ರಮುಖ ಷೇರುಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿತ್ತು. ಭಾರತ ಕೂಡ ಹೊರತಾಗಿರಲಿಲ್ಲ. ಆದರೆ ಈ ಕುಸಿತವನ್ನು ಅಷ್ಟೇ ವೇಗದಲ್ಲಿ ಮೆಟ್ಟಿನಿಂತು ಆದ ನಷ್ಟವನ್ನೂ ಸಂಪೂರ್ಣವಾಗಿ ಭಾರತ ಸರಿದೂಗಿಸಿದೆ. ಈ ಮೂಲಕ ನಷ್ಟ ಸರಿದೂಗಿಸಿದ ವಿಶ್ವದ ಏಕೈಕ ಷೇರುಮಾರುಕಟ್ಟೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 

ಪೂರ್ತಿ ಓದಿ
06:30 PM (IST) Apr 15

ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್‌ಸ್ಟಾಪ್‌ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್‌' ಕೃಷ್ಣಪ್ಪ!

ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನದ ಪ್ರಯುಕ್ತ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ಬಸ್‌ಸ್ಟಾಪ್‌ ಮುಚ್ಚಲಾಗಿದೆ. ಡಿ.ಕೆ. ಶಿವಕುಮಾರ್‌ ಸೂಚನೆಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ
06:28 PM (IST) Apr 15

ಬಿಬಿಎಂಪಿ ಹವಾಮಾನ ಕ್ರಿಯಾಕೋಶ ಫೆಲೋಶಿಪ್‌ಗೆ ಅರ್ಜಿ ಆಹ್ವಾನ!

ಬೆಂಗಳೂರು ಹವಾಮಾನ ಕ್ರಿಯಾ ಕೋಶವು ಎರಡು ಫೆಲೋಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ
06:13 PM (IST) Apr 15

ಗರ್ಭಪಾತ ಹಕ್ಕು ಮಾನವ ಹಕ್ಕಾಗಬೇಕು- ನ್ಯಾಯಮೂರ್ತಿ ಅಶೋಕ್ ಹಿಂಚಿಗೇರಿ

ಸಂವಿಧಾನದ 21ನೇ ವಿಧಿಯನ್ವಯ ಮಹಿಳೆಗೆ ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕಿದೆ ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದ್ದಾರೆ. ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದ್ದು, ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ಅವರು ತಿಳಿಸಿದರು.

ಪೂರ್ತಿ ಓದಿ
06:02 PM (IST) Apr 15

ಅಭಿಮಾನಿಗಳಿಗೆ ವಿಡಿಯೋ ಮೂಲಕ ಮಹತ್ವದ ಮೆಸೇಜ್ ಕೊಟ್ಟ ರಶ್ಮಿಕಾ ಮಂದಣ್ಣ

ಸಿಕಂದರ್ ಬಳಿಕ ಸಣ್ಣ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ ಇದೀಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರಾತ್ರಿಯಿಡಿ ಶೂಟಿಂಗ್ ಮಾಡಿ ಬೆಳಗ್ಗೆ ನಿದ್ದೆ ಗಣ್ಣಿನಲ್ಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಪೂರ್ತಿ ಓದಿ
05:55 PM (IST) Apr 15

Breaking: ನ್ಯಾಷನಲ್‌ ಹೆರಾಲ್ಡ್‌ ಕೇಸ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ನೋಟಿಸ್ ಜಾರಿ ಮಾಡಿತ್ತು.

ಪೂರ್ತಿ ಓದಿ
05:35 PM (IST) Apr 15

ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

ಒಡಿಶಾದ ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಗರುಡ ಪಕ್ಷಿ ಧ್ವಜದಂತಹ ಬಟ್ಟೆಯನ್ನು ಹಿಡಿದು ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಆಧ್ಯಾತ್ಮಿಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ದೈವಿಕ ಚಿಹ್ನೆ ಎಂದರೆ, ಇನ್ನು ಕೆಲವರು ಕೆಟ್ಟ ಶಕುನ ಎಂದು ಭಾವಿಸಿದ್ದಾರೆ.

ಪೂರ್ತಿ ಓದಿ
05:24 PM (IST) Apr 15

ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ

ವಿಶಾಖಪಟ್ಟಣದಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದಿದ್ದಾನೆ.

ಪೂರ್ತಿ ಓದಿ
05:15 PM (IST) Apr 15

ಮಂಡ್ಯದ ನ್ಯಾಯದಾನದ ಮೇಲೆ ಕವಿದೀತೇ ಹುಬ್ಬಳ್ಳಿ ಎನ್‌ಕೌಂಟರ್ ಕಾರ್ಮೋಡ?

ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಸತ್ಯವನ್ನು ಬಯಲುಗೊಳಿಸಿ ನ್ಯಾಯ ಒದಗಿಸಿದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉಳಿದಿವೆ. ಈ ಎರಡೂ ಘಟನೆಗಳು ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.

ಪೂರ್ತಿ ಓದಿ
04:57 PM (IST) Apr 15

ಮೇ.1 ರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ, ಪ್ರತಿ ದಿನ 20 ಕಿ.ಮಿ ಉಚಿತ

ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.

ಪೂರ್ತಿ ಓದಿ