ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳ ನಡುವಿನ ಜಗಳ ಒಂದು ಭೀಕರ ಘಟನೆಯಾಗಿ ಪರಿಣಮಿಸಿದೆ. 6 ನೇ ತರಗತಿಯ ವಿದ್ಯಾರ್ಥಿಯೊಬ್ಬ 8 ನೇ ತರಗತಿಯ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆ ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಆತಂಕ ಮೂಡಿಸಿದೆ.
ಪೂರ್ತಿ ಓದಿ- Home
- News
- State
- Karnataka News Live: ಹುಬ್ಬಳ್ಳಿ ಆಘಾತಕಾರಿ ಘಟನೆ: 6ನೇ ತರಗತಿ ವಿದ್ಯಾರ್ಥಿಯಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಭೀಕರ ಹತ್ಯೆ!
Karnataka News Live: ಹುಬ್ಬಳ್ಳಿ ಆಘಾತಕಾರಿ ಘಟನೆ: 6ನೇ ತರಗತಿ ವಿದ್ಯಾರ್ಥಿಯಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಭೀಕರ ಹತ್ಯೆ!

ರಾಜ್ಯದ ಸರ್ಕಾರಿ ನೌಕರರ 2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಇಲಾಖೆಗಳಲ್ಲಿ ವೃಂದ ಬಲದ ಶೇ.6ರಷ್ಟು ಮೀರದಂತೆ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ. ವರ್ಗಾವಣೆ ವೇಳೆ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 2 ವರ್ಷ, ಸಿ ವೃಂದದ ಸಿಬ್ಬಂದಿಗೆ 4 ವರ್ಷ, ಡಿ ವೃಂದದ ನೌಕರರು 1 ವರ್ಷ ಒಂದು ಸ್ಥಳದಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣಿಸಬಹುದು.
ಏನಿದು ನಿಯಮ?
ಮೇ 15ರಿಂದ ಜೂ.1 4ರವರೆಗೆ ವರ್ಗಕ್ಕೆ ಅವಕಾಶ. ವೃಂದ ಬಲದ ಶೇ.8ರಷ್ಟು ಮೀರದಂತೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರದಿಂದ ಸೂಚನೆ
ಎಬಿ ಅಧಿಕಾರಿಗಳು 2 ವರ್ಷ ಕಾಲ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣನೆ
'ಸಿ' ವೃಂದ ಸಿಬ್ಬಂದಿ 4 ವರ್ಷ, 'ಡಿ' ಸಿಬ್ಬಂದಿ 7 ವರ್ಷ ಅವಧಿ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿರಬೇಕು
ಈ ಅವಧಿ ಮೀರಿದರೆ ಮಾತ್ರ ವರ್ಗಾವಣೆ. ಆದರೆ ಈ ಷರತ್ತಿನಿಂದ ಅಂಗವಿಕಲರಿಗೆ ವಿನಾಯ್ತಿ ಇದೆ
ಗ್ರೂಪ್-ಎ, ಗ್ರೂಪ್-ಬಿವೃಂದದ ಅಧಿಕಾರಿಗಳಿಗೆ ವರ್ಗಾವಣೆ ಅಧಿಕಾರ ಇಲಾಖಾ ಸಚಿವರಿಗೆ
ಹುಬ್ಬಳ್ಳಿ ಆಘಾತಕಾರಿ ಘಟನೆ: 6ನೇ ತರಗತಿ ವಿದ್ಯಾರ್ಥಿಯಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಭೀಕರ ಹತ್ಯೆ!
ಧಾರವಾಡದಲ್ಲಿ 7 ಕೋಟಿ ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ
ಧಾರವಾಡದಲ್ಲಿ ಐದು ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ ನೀಡಿದರು. ಸುಮಾರು 30 ಬೆಳೆಗಾರರು ಭಾಗವಹಿಸಿದ್ದು, ವಿವಿಧ ತಳಿಗಳ ಮಾವುಗಳು ಮಾರಾಟಕ್ಕೆ ಲಭ್ಯವಿವೆ. ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಇಳುವರಿ ಕುಂಠಿತವಾಗಿದೆ.
ಪೂರ್ತಿ ಓದಿಇವರೇ ನೋಡಿ ಬೆಂಗಳೂರಿನ ಮಹಾನ್ ಕಳ್ಳರು; ಒಬ್ಬೊಬ್ಬರದ್ದೂ ಒಂದೊಂದು ನಂಬಿಕೆ ದ್ರೋಹದ ಕಥೆ!
ಬೆಂಗಳೂರಿನಲ್ಲಿ ಮನೆಕೆಲಸದವರು, ನೌಕರರು ಮನೆ ಮಾಲೀಕರ ನಂಬಿಕೆಗೆ ದುರುಪಯೋಗಪಡಿಸಿಕೊಂಡು ಕಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧಿತವಾಗಿರುವ 3 ಮಹಿಳೆಯರು ಇಬ್ರು ಪುರುಷರದ್ದು ಒಬ್ಬೊಬ್ಬರದ್ದೂ ಒಂದೊಂದು ನಂಬಿಕೆ ದ್ರೋಹದ ಕಥೆಯಿದೆ.
ಪೂರ್ತಿ ಓದಿಬಾಡಿಗೆ ಮನೆಲಿದ್ರೆ ಎಚ್ಚರ! ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೊ ಶಿಕ್ಷೆ, ಮನೆಮಾಲೀಕರ ಎಡವಟ್ಟಿಗೆ ಕುಟುಂಬ ಬೀದಿಗೆ!
ಚಾಮರಾಜನಗರದಲ್ಲಿ ಮನೆ ಮಾಲೀಕರ ಸಾಲದಿಂದಾಗಿ ಎರಡು ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆಮಾಲೀಕರು ಸಾಲ ತೀರಿಸದ ಕಾರಣ ಬ್ಯಾಂಕ್ ಮನೆಯನ್ನು ಜಪ್ತಿ ಮಾಡಿದೆ, ಇದರಿಂದಾಗಿ ಬಾಡಿಗೆದಾರರ ಬದುಕು ಅತಂತ್ರವಾಗಿದೆ. ಮನೆಯಲ್ಲಿದ್ದ ವಸ್ತುಗಳು ಲಾಕ್ ಆಗಿದ್ದು, ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ.
ಪೂರ್ತಿ ಓದಿಜೋಗ ಜಲಪಾತ ಇನ್ಮುಂದೆ ಸರ್ವ ಋತು ಪ್ರವಾಸಿ ತಾಣ, 90 ಕೋಟಿ ರೂನಲ್ಲಿ ಅಭಿವೃದ್ಧಿ!
ಜೋಗ ಜಲಪಾತವನ್ನು ಸರ್ವ ಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಗ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ ಕೆಆರ್ಎಸ್ ಮಾದರಿಯ ಉದ್ಯಾನವನ್ನು ನಿರ್ಮಿಸುವ ಚಿಂತನೆಯೂ ಇದೆ. ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.
ಪೂರ್ತಿ ಓದಿಶಿವಣ್ಣನ ಮನೆಯಲ್ಲಿ ಬರ್ತಡೇ ಮಾಡಿಕೊಂಡ ಅರ್ಜುನ್ ಜನ್ಯ; ಗೂಡ್ಸ್ ಆಟೋದಲ್ಲಿ ಹೋಗಿ ಕಾರ್ಯಕ್ರಮ ಕೊಡ್ತಿದ್ದ ಪ್ರತಿಭೆ!
ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಸರಿಗಮಪ ತೀರ್ಪುಗಾರರಾಗಿ, ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿರುವ ಅರ್ಜುನ್ ಜನ್ಯ ಅವರ ಸಾಧನೆಯ ಹಾದಿ. ಶಿವರಾಜ್ ಕುಮಾರ್ ಅವರೊಂದಿಗೆ 45ನೇ ಸಿನಿಮಾ ಮಾಡುತ್ತಿರುವ ಅವರು, ತಮ್ಮ ಜನ್ಮದಿನವನ್ನು ಶಿವಣ್ಣನ ಮನೆಯಲ್ಲಿ ಆಚರಿಸಿಕೊಂಡರು.
ಪೂರ್ತಿ ಓದಿಕೊನೆಗೂ CBSE 10ನೇ ತರಗತಿ ಫಲಿತಾಂಶ ಪ್ರಕಟ: ಈ ಬಾರಿ 93.66% ಉತ್ತೀರ್ಣ
CBSE 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ 93.66% ಉತ್ತೀರ್ಣತೆ ದಾಖಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ಪೂರ್ತಿ ಓದಿಕಲಬುರಗಿ ಜಿಮ್ಸ್ನಲ್ಲಿ ಮತ್ತೊಂದು ಯಡವಟ್ಟು; ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ 8 ಜನ ಸಿಬ್ಬಂದಿ, ಗೋಡೆ ಒಡೆದು ರಕ್ಷಣೆ!
ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ 8 ಸಿಬ್ಬಂದಿ ಸಿಲುಕಿ ಒಂದು ಗಂಟೆಗೂ ಹೆಚ್ಚು ಕಾಲ ಆತಂಕ ಅನುಭವಿಸಿದ್ದಾರೆ. ಮೂರನೇ ಮಹಡಿಯಲ್ಲಿ ಸ್ಥಗಿತಗೊಂಡ ಲಿಫ್ಟ್ನಿಂದ ಸಿಬ್ಬಂದಿಯನ್ನು ರಕ್ಷಿಸಲು ಗೋಡೆ ಒಡೆಯಬೇಕಾಯಿತು.
ಪೂರ್ತಿ ಓದಿ10 ವರ್ಷದಿಂದ ನಂಬಿಕೆ ಇಟ್ಟು ಕೆಲಸ ನೀಡಿದ್ದ ಮಾಲೀಕನ 1.51 ಕೋಟಿ ಹಣ ಎಗರಿಸಿದ ಡ್ರೈವರ್ ರಾಜೇಶ್
ಬೆಂಗಳೂರಿನಲ್ಲಿ 10 ವರ್ಷಗಳಿಂದ ಚಾಲಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕರಿಂದ 1.51 ಕೋಟಿ ರೂ.ಗಳನ್ನು ಕದ್ದ ಘಟನೆ ನಡೆದಿದೆ. ವೈಯಾಲಿಕಾವಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಕೊಡಿಗೆಹಳ್ಳಿಯಲ್ಲಿ ವಿದೇಶಿ ಪ್ರಜೆಯೊಬ್ಬರಿಂದ ದರೋಡೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.
ಪೂರ್ತಿ ಓದಿಕುಕ್ಕೆ ಸುಬ್ರಹ್ಮಣ್ಯ ದೇಗುಲ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ! ರೌಡಿ ಶೀಟರ್ಗೆ ಪಟ್ಟ?
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯು ವಿವಾದಕ್ಕೆ ಕಾರಣವಾಗಿದೆ. ಅವರ ಮೇಲಿರುವ ಅಪರಾಧ ಆರೋಪಗಳು ಮತ್ತು ರಾಜಕೀಯ ಹಿನ್ನೆಲೆ ಈ ವಿವಾದಕ್ಕೆ ಮತ್ತಷ್ಟು ಗಮನ ಸೆಳೆದಿದೆ. ಸ್ಥಳೀಯರು ಮತ್ತು ವಿಪಕ್ಷಗಳು ಈ ನೇಮಕಾತಿಯನ್ನು ವಿರೋಧಿಸುತ್ತಿದ್ದಾರೆ.
ಪೂರ್ತಿ ಓದಿಚಿಕ್ಕಮಗಳೂರು: ಮತ್ತೆ ಹಸುವಿನ ಕೆಚ್ಚಲು ಕತ್ತರಿಸಿದ ಕ್ರೂರಿಗಳು!
ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಶೇಖರಪ್ಪ ಎಂಬುವವರ ಹಸುವಿನ ಕೆಚ್ಚಲು ಕಿಡಿಗೇಡಿಗಳು ಕತ್ತರಿಸಿದ್ದಾರೆ. ರೈತರು ಯಗಟಿ ಠಾಣೆಗೆ ದೂರು ನೀಡಿದ್ದಾರೆ.
ಪೂರ್ತಿ ಓದಿಗ್ರೇಟರ್ ಬೆಂಗಳೂರು ಜಾರಿ ಶೀಘ್ರ; 40 ವರ್ಷ ಕುಡಿಯುವ ನೀರಿನ ಸಮಸ್ಯೆ ಇರೋಲ್ಲ: ಡಿಕೆ ಶಿವಕುಮಾರ
ಬೆಂಗಳೂರಿನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಸಂಚಾರಿ ಕಾವೇರಿ ಮತ್ತು ಸರಳ ಕಾವೇರಿ ಯೋಜನೆ ಜಾರಿಯಲ್ಲಿದೆ. ಪುಲಕೇಶಿನಗರದಲ್ಲಿ 2.50 ಲಕ್ಷ ಜನರಿಗೆ ನೀರು ಪೂರೈಸಲು ಹೊಸ ಜಲಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಪೂರ್ತಿ ಓದಿನೆಲಮಂಗಲ: ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅನಾಹುತ; ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ!
ನೆಲಮಂಗಲದ ಆಯಿಲ್ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ ಆಯಿಲ್ ಭಸ್ಮವಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯುದ್ಧದ ಯಶಸ್ಸು ಸೇನೆಗೆ ಮಾತ್ರ, ಯಾವ ಪಕ್ಷಕ್ಕೂ ಅದರಲ್ಲಿ ಹಕ್ಕಿಲ್ಲ: ಸಿದ್ದರಾಮಯ್ಯ
ಸೇನಾ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದರಲ್ಲಿ ಹಕ್ಕು ಪ್ರತಿಪಾದನೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪೂರ್ತಿ ಓದಿ