11:02 PM (IST) Aug 05

Karnataka News Live 5 August 2026Viral - ಒಂದೇ ಒಂದು ವಿಡಿಯೋ, ಬಿಎಂಟಿಸಿ ಚಾಲಕ ಸಸ್ಪೆಂಡ್ ಶಿಕ್ಷೆ! ವಿಡಿಯೋ ನೋಡಿ ಶಾಕ್‌ ಆದ ಬೆಂಗಳೂರಿನ ಜನ!

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಹತ್ತಲು ಯತ್ನಿಸಿದ ನಿರಾಶ್ರಿತ ವ್ಯಕ್ತಿಯನ್ನು ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗೆ ತಳ್ಳಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಬಿಎಂಟಿಸಿ ಆರೋಪಿ ಕಂಡಕ್ಟರ್‌ನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.
Read Full Story
10:19 PM (IST) Aug 05

Karnataka News Live 5 August 2026Iran - ಹಾರ್ಮುಜ್‌ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಗ್ರ್ಯಾಂಡ್ ಎಸ್ಕೇಪ್; ಕ್ಷಿಪಣಿಗಳ ನಡುವೆ ನಡೆದಿತ್ತು ಕಲ್ಪನೆಗೂ ಮೀರಿದ ಮಿಷನ್!

ಸಂಘರ್ಷದ ನಡುವೆಯೂ, ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ 60 ಸರಕು ಹಡಗುಗಳನ್ನು ಮತ್ತು 3,972 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಯಶಸ್ವಿ ಕಾರ್ಯಾಚರಣೆಯು ಭಾರತದ ಇಂಧನ ಪೂರೈಕೆ ಸರಪಳಿಯನ್ನು ಅಬಾಧಿತವಾಗಿರಿಸಿದ್ದು, ಸರ್ಕಾರದ ಸಮನ್ವಯ ಮತ್ತು ನೌಕಾಪಡೆ ಶಕ್ತಿ ಪ್ರದರ್ಶಿಸಿದೆ.

Read Full Story
10:01 PM (IST) Aug 05

Karnataka News Live 5 August 2026ಓದಲೆಂದು ಫೋನ್ ಹಿಡಿದ ಬಾಲಕ ಮರುಕ್ಷಣವೇ ಮಾಡಿದ್ದೇನು? ಮೆಸೇಜ್ ನೋಡಿ ತಂದೆಗೆ ಆಘಾತ!

8ನೇ ತರಗತಿಯ ವಿದ್ಯಾರ್ಥಿಯೊಬ್ಬ ತಂದೆಯ ಫೋನ್‌ನಲ್ಲಿ ಅಧ್ಯಯನ ಮಾಡುವ ನೆಪದಲ್ಲಿ ರೊಬ್ಲಾಕ್ಸ್ ಗೇಮ್‌ಗೆ ₹42 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಸಾಲ ಮತ್ತು ಶಾಲಾ ಶುಲ್ಕದ ಒತ್ತಡದಲ್ಲಿದ್ದ ಕುಟುಂಬ ಹಣ ಮರಳಿ ಪಡೆಯಲು ಸಹಾಯ ಕೋರಿದ್ದು, ಪೋಷಕರು ಉಳಿಸಿದ ಕಾರ್ಡ್ ವಿವರಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬ ಚರ್ಚೆಗೆ ಕಾರಣವಾಗಿದೆ.

Read Full Story
09:18 PM (IST) Aug 05

Karnataka News Live 5 August 2026IIT - ಜೆಇಇ ಪರೀಕ್ಷೆಯಲ್ಲಿ ಅಪ್ಪನಿಗೆ ಜೀರೋ ಅಂಕ! ಆದರೆ ಅದೇ ಅವರ ಮಗನಿಗೆ ಸಿಕ್ಕ ದೊಡ್ಡ ಗಿಫ್ಟಂತೆ!

ನ್ಯೂಯಾರ್ಕ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಆಕಾಶ್ ಪಾಂಡೆ, ತಮ್ಮ ತಂದೆಯ ಐಐಟಿ ವೈಫಲ್ಯದ ಕಥೆಯನ್ನು ಹಂಚಿಕೊಂಡಿದ್ದಾರೆ. ತಂದೆಯ ಸೋಲು ತನ್ನ ಮೇಲೆ ಯಾವುದೇ ಒತ್ತಡ ಹೇರದೆ, ಯಶಸ್ಸಿಗೆ ಹೇಗೆ 'ಶೂನ್ಯ ಒತ್ತಡ'ದ ವಾತಾವರಣವನ್ನು ಸೃಷ್ಟಿಸಿತು ಎಂಬುದನ್ನು ಈ ಕಥೆ ವಿವರಿಸುತ್ತದೆ.
Read Full Story
08:02 PM (IST) Aug 05

Karnataka News Live 5 August 2026Virat - ಕುಸಿದ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯ! ರಣ್‌ವೀರ್ ಸಿಂಗ್‌ಗೆ 2ನೇ ಸ್ಥಾನ; ಹಾಗಾದ್ರೆ ನಂ. 1 ಕಿಂಗ್ ಯಾರು?

ಕ್ರಾಲ್‌ನ 2025ರ ಬ್ರಾಂಡ್ ಮೌಲ್ಯಮಾಪನ ವರದಿಯು ಭಾರತದ ಸೆಲೆಬ್ರಿಟಿ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯನ್ನು ಬಹಿರಂಗಪಡಿಸಿದೆ. ಆ ವ್ಯಕ್ತಿ ಅಗ್ರಸ್ಥಾನಕ್ಕೇರಿದ್ದರೆ, ರಣವೀರ್ ಸಿಂಗ್ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Read Full Story
08:01 PM (IST) Aug 05

Karnataka News Live 5 August 2026ಕರ್ನಾಟಕದಲ್ಲಿ ಸಿಪ್ಲಾ 200 ಕೋಟಿ, ರಾಕೆಟ್ ಇಂಡಿಯಾದಿಂದ 100 ಕೋಟಿ ಹೂಡಿಕೆ

ಸಿಪ್ಲಾ ಔಷಧ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ 200 ಕೋಟಿ ರೂಪಾಯಿ ಹಾಗೂ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಸ್ಥಾವರ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡುತ್ತಿದೆ.

Read Full Story
07:03 PM (IST) Aug 05

Karnataka News Live 5 August 2026'35 ವರ್ಷ ಆದ್ಮೇಲೆ ನಾನು ನಾನಾಗಿರಲಿಲ್ಲ, ನಿದ್ದೆ ಬರ್ತಿರಲಿಲ್ಲ' - ಹೆಣ್ಣುಮಕ್ಕಳ ಸಮಸ್ಯೆ ಬಗ್ಗೆ ನಟಿ ರಮ್ಯಾ ಓಪನ್​ ಮಾತು

ಮುಟ್ಟು ನಿಲ್ಲುವ ಸಮಯದ ಬಗ್ಗೆ ಅನೇಕ ಮಹಿಳೆಯರು ಮುಕ್ತವಾಗಿ ಮಾತನಾಡುವುದಿಲ್ಲ. ನಟಿ ರಮ್ಯಾ ತಮ್ಮ 35ನೇ ವಯಸ್ಸಿನಲ್ಲಿಯೇ ಪೆರಿಮೆನೋಪಾಸ್‌ನಿಂದ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದು, ಈ ಅನುಭವವೇ ರಾಜ್ಯ ಸರ್ಕಾರದ 'ಋತುತಾರೆ' ಯೋಜನೆಗೆ ಸ್ಫೂರ್ತಿಯಾಗಿದೆ.
Read Full Story
05:48 PM (IST) Aug 05

Karnataka News Live 5 August 2026ಕನ್ನಡ ಸೇರಿ 6 ಭಾರತದ ಭಾಷೆಗಳಲ್ಲಿ ಮಾತನಾಡಲಿದೆ ಟೆಸ್ಲಾ ಕಾರು, Y ಮಾಡೆಲ್ ಬೆಲೆ ಎಷ್ಟು?

ಭಾರತದಲ್ಲಿ ಅಮೆರಿಕನ್ ಟೆಸ್ಲಾ ಕಾರು ಈಗಾಗಲೇ ಮಾರಾಟ ಆರಂಭಿಸಿದೆ. ವಿಶೇಷ ಅಂದರೆ ಇದೀಗ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಟೆಸ್ಲಾ ಕಾರು ಮಾತನಾಡಲಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರಿನ ಬೆಲೆ ಹಾಗೂ ಗ್ರೂಕ್ ಎಐ ವಿಶೇಷತೆ ಇಲ್ಲಿದೆ.

Read Full Story
05:41 PM (IST) Aug 05

Karnataka News Live 5 August 2026PM Modi - ಭಾರತ ಸರ್ಕಾರದ ಬಿಗ್ 'ಸರ್ಜಿಕಲ್ ಸ್ಟ್ರೈಕ್'! ಮೆಟಾಗೆ ನಡುಕ; ಮೋದಿ ವಿಡಿಯೋ ಗೊಂದಲಕ್ಕೆ ಜುಕರ್ ಬರ್ಗ್ ಕ್ಷಮೆಯಾಚನೆ!

ಪ್ರಧಾನಿ ಮೋದಿ ಅವರ ವೀಡಿಯೊ ಡಿಲೀಟ್ ಸೇರಿದಂತೆ ಹಲವು ಗಂಭೀರ ಲೋಪಗಳಿಗಾಗಿ ಮೆಟಾ ಸಂಸ್ಥೆಯು ಭಾರತ ಸರ್ಕಾರದ ಮುಂದೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ದೇಶದ ಕಾನೂನಿಗಿಂತ ಯಾವುದೇ ಡಿಜಿಟಲ್ ವೇದಿಕೆ ದೊಡ್ಡದಲ್ಲ ಎಂದು ಎಚ್ಚರಿಸಿದ ಸರ್ಕಾರ, ಮೆಟಾಗೆ ನೀಡಲಾದ 'ಸೇಫ್ ಹಾರ್ಬರ್' ಕಾನೂನು ರಕ್ಷಣೆಯನ್ನು ರದ್ದುಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದೆ.

Read Full Story
05:40 PM (IST) Aug 05

Karnataka News Live 5 August 2026ಪ್ಲಾಸ್ಟಿಕ್ ವಿರುದ್ಧ 'ನಿಫ್ಟ್' ಹಳೇ ವಿದ್ಯಾರ್ಥಿ ಸಮರ - ಮಾಸಿಕ ₹2 ಕೋಟಿ ವಹಿವಾಟಿನ ಪರಿಸರ ಸ್ನೇಹಿ ನವೋದ್ಯಮ ಕಟ್ಟಿದ ವೈಭವ್ ಅನಂತ್!

ಬೆಂಗಳೂರಿನ ನಿಫ್ಟ್ ಹಳೆಯ ವಿದ್ಯಾರ್ಥಿ ವೈಭವ್ ಅನಂತ್ ಅವರು 'ಬ್ಯಾಂಬ್ರೂ' ಎಂಬ ಹಸಿರು ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಬಿದಿರು, ಕಬ್ಬಿನ ಸಿಪ್ಪೆಯಂತಹ ನೈಸರ್ಗಿಕ ವಸ್ತುಗಳಿಂದ ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುತ್ತಿದೆ.

Read Full Story
05:20 PM (IST) Aug 05

Karnataka News Live 5 August 2026"ಸಾಮಾನ್ಯರಿಗಿರಲಿ, NRIಗಳಿಗೂ ಬೆಂಗಳೂರಲ್ಲಿ ಮನೆ ಕೊಳ್ಳೋದು ಕಷ್ಟ!" - ಪ್ರತಿ ತಿಂಗಳ ಇಎಂಐ ಕೇಳಿದರೆ ಶಾಕ್!

ಬೆಂಗಳೂರು ಮನೆ ಬೆಲೆಗಳ ಬಗ್ಗೆ ವೈರಲ್ ಆದ X ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಮುಖ ಪ್ರದೇಶಗಳಲ್ಲಿ 2BHK ಬೆಲೆ ₹1.4–1.8 ಕೋಟಿಗೆ ಏರಿರುವುದರಿಂದ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಮನೆ ಖರೀದಿ ಅಸಾಧ್ಯವಾಗುತ್ತಿದೆ ಎನ್ನಲಾಗಿದೆ. ಹೆಚ್ಚಿದ EMI, ಮೂಲಸೌಕರ್ಯ ಸಮಸ್ಯೆ ಮತ್ತು ರಿಯಲ್ ಎಸ್ಟೇಟ್ ಬೆಲೆ ಏರಿಕೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Read Full Story
05:18 PM (IST) Aug 05

Karnataka News Live 5 August 2026ಏಕಾಏಕಿ ಪಹಣಿಯಿಂದ ಮಾಯವಾದ ಜಮೀನು, ಸಣ್ಣ ನೀರಾವರಿ ಇಲಾಖೆ ವಿರುದ್ಧ ರೈತರ ಆಕ್ರೋಶ

ಮುಂಡಗೋಡ ತಾಲೂಕಿನಲ್ಲಿ, ಬಾಚಣಕಿ ಜಲಾಶಯದ ಬಳಿ ತಲತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು, ಯಾವುದೇ ಮುನ್ಸೂಚನೆ ನೀಡದೆ ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ.

Read Full Story
04:45 PM (IST) Aug 05

Karnataka News Live 5 August 2026Viral News - ಯುವತಿಯ ಬದುಕನ್ನೇ ಬಲಿ ಪಡೆಯಿತಾ ರಾಪಿಡೋ ರೈಡ್‌ ? ₹20 ಲಕ್ಷ ಮೆಡಿಕಲ್ ಬಿಲ್‌ ನೋಡಿ ಕಣ್ಣೀರಿಡುತ್ತಿರುವ ಬೆಂಗಳೂರಿನ ಟೆಕ್ಕಿ!

ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಅಜಾಗರೂಕತೆಯಿಂದಾಗಿ ಯುವತಿಯೊಬ್ಬರು ಭೀಕರ ಅಪಘಾತಕ್ಕೀಡಾಗಿದ್ದಾರೆ. ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂತ್ರಸ್ತೆಗೆ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.

Read Full Story
04:06 PM (IST) Aug 05

Karnataka News Live 5 August 2026Cricket - 2027ರ ವಿಶ್ವಕಪನಿಂದ್ ಆ ಸ್ಟಾರ್ ಬ್ಯಾಟ್ಸಮನ್‌ ಔಟ್? ಅವರು ಸ್ಟೇಡಿಯಂಗೆ ಇಳಿದರೆ ಸೋಲು ಗ್ಯಾರಂಟಿಯಂತೆ; ಬಿಸಿಸಿಐ ಆಯ್ಕೆಗಾರರ ಸ್ಫೋಟಕ ವರದಿ!

2027ರ ವಿಶ್ವಕಪ್‌ಗೆ ಆ ಆಟಗಾರನ ಭವಿಷ್ಯದ ಬಗ್ಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿವೆ. ಅವರ ಇತ್ತೀಚಿನ ಶತಕ ಹಾಗೂ ನಾಯಕತ್ವದ ಯಶಸ್ಸು, ಅವರ ಸ್ಥಾನವನ್ನು ಉಳಿಸಿಕೊಳ್ಳುವ ಚರ್ಚೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಹಾಗಾದರೆ ಆಟಗಾರ ಯಾರು ಎನ್ನುವುದನ್ನು ನೋಡೋಣ ಬನ್ನಿ.

Read Full Story
02:44 PM (IST) Aug 05

Karnataka News Live 5 August 2026ಕಿಚ್ಚ ಸುದೀಪ್ 'ಪ್ರೇಮದ ಕಾದಂಬರಿ' ಫೋಟೋ ಪೋಸ್ಟ್‌ ಮಾಡಿದ 'ಎವರ್‌ಗ್ರೀನ್ ಬ್ಯೂಟಿ'ಗೆ ನೆಟ್ಟಿಗರ ಮಸ್ತ್ ರಿಯಾಕ್ಷನ್ಸ್!

ವೈರಲ್ ಆಗಿರುವ 26 ವರ್ಷಗಳ ಹಿಂದಿನ ಈ ಫೋಟೋ ಸುದೀಪ್ ಅವರ ಪರಿಶ್ರಮದ ಹಾದಿಯನ್ನು ನೆನಪಿಸುವಂತಿದೆ. ಬಿಗ್ ಬಾಸ್ ಮೂಲಕ ಕಿರುತೆರೆಯನ್ನು ಆಳುತ್ತಿರುವ ಸುದೀಪ್, ಅಂದು ಸೀರಿಯಲ್ ಮೂಲಕವೇ ತಮ್ಮ ಪಯಣಕ್ಕೆ ಭದ್ರ ಬುನಾದಿ ಹಾಕಿದ್ದರು. ನಟಿ ಸಂಗೀತಾಗೆ ಬಂದಿರುವ ಕಾಮೆಂಟ್ಸ್ ಏನು ನೋಡಿ!

Read Full Story
01:17 PM (IST) Aug 05

Karnataka News Live 5 August 2026ಹೆಬ್ಬಾಳ ಸುರಂಗ ಯೋಜನೆಗೆ 893 ಮರಗಳ ಬಲಿ, ಉತ್ತರ ಬೆಂಗಳೂರಿನ ಹಸಿರು ಕಸಿಯಲಿರುವ ಪ್ರಾಜೆಕ್ಟ್‌!

ಬೆಂಗಳೂರಿನ ಹೆಬ್ಬಾಳದಲ್ಲಿ ಉದ್ದೇಶಿತ ಕಿರು ಸುರಂಗ ರಸ್ತೆ ಯೋಜನೆಗಾಗಿ 893 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ, ಇದು ಪರಿಸರವಾದಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಿಡಿಎ ಮರಗಳನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದರೂ, ತಜ್ಞರು ಅದರ ಯಶಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story
12:50 PM (IST) Aug 05

Karnataka News Live 5 August 2026ಏನ್ ಸರ್, ಕಾವ್ಯಾಳನ್ನು ಸಹ ಕರೆಸಬೇಕಿತ್ತು ಅಲ್ವಾ? ವೇದಿಕೆ ಮೇಲೆ ಗಿಲ್ಲಿ ನಟನ ಮಾತು

ರಾಮನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟನಿಗೆ ಅಭಿಮಾನಿಗಳು 'ಕಾವು ಕಾವು' ಎಂದು ಕೂಗಿದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಮಳೆಯಲ್ಲಿ ನಿಂತು ಸರಳತೆ ಮೆರೆದರೆ, ದರ್ಶನ್ ಅಭಿಮಾನಿಗಳ ವರ್ತನೆಗೆ ಸಿಎಂ ಡಿಕೆಶಿ ಗರಂ ಆದರು.
Read Full Story
12:38 PM (IST) Aug 05

Karnataka News Live 5 August 2026ಸಿಂಗಟಾಲೂರು ಏತ ನೀರಾವರಿ - ಬರೋಬ್ಬರಿ 117 ಕೋಟಿ ವಿದ್ಯುತ್‌ ಬಿಲ್‌ ಬಾಕಿ! ಜೆಸ್ಕಾಂ, ಹೆಸ್ಕಾಂನಿಂದ ಫೈನಲ್ ವಾರ್ನ್!

ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬರೋಬರಿ ₹117 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಲದಂಡೆ ಭಾಗದಲ್ಲಿ ₹87 ಕೋಟಿ ಮತ್ತು ಎಡದಂಡೆ ಭಾಗದಲ್ಲಿ ₹29 ಕೋಟಿ ಬಾಕಿ ಇದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಮತ್ತು ಹೆಸ್ಕಾಂ ಅಂತಿಮ ಎಚ್ಚರಿಕೆ.

Read Full Story
12:34 PM (IST) Aug 05

Karnataka News Live 5 August 2026ಸರ್ಕಾರದಿಂದ ಐತಿಹಾಸಿಕ ಹೆಜ್ಜೆ - ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗಾಗಿ ‘ಋತುತಾರೆ’- ರಮ್ಯಾ ರಾಯಭಾರಿ

ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ‘ಋತುತಾರೆ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಋತುಮತಿ ಹಾಗೂ ಮೆನೋಪಾಸ್ ಸಮಯದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ನಟಿ ರಮ್ಯಾ ಅವರನ್ನು ಈ ಯೋಜನೆಗೆ ರಾಯಭಾರಿಯಾಗಿ ನೇಮಿಸಲಾಗಿದೆ.
Read Full Story
12:10 PM (IST) Aug 05

Karnataka News Live 5 August 2026kavalesad point tragedy - ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!

ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.

Read Full Story