11:36 PM (IST) Aug 24

Karnataka Latest News Live 24 August 2026ನಾಚಿಕೆಯ ನೋಟ, ಮುದ್ದಾದ ನಗು - ಸೀರೆಯಲ್ಲಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ

Kannada Actress Ashika Ranganath ತಮ್ಮ ಹೊಸ ಫೋಟೋಶೂಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಸೀರೆಯುಟ್ಟರೂ ಅದಕ್ಕೆ ಮಾಡರ್ನ್ ಟಚ್ ನೀಡಿರುವ ನಟಿಯ ಸ್ಟೈಲಿಶ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story
10:53 PM (IST) Aug 24

Karnataka Latest News Live 24 August 2026EPFO - 10 ವರ್ಷದ ಸೇವೆಯ ನಂತರವೂ ಪಿಂಚಣಿ ಕೈತಪ್ಪಬಹುದು! EPFO ಖಾತೆಯಲ್ಲಿ ಈ ಕೆಲಸ ಇಂದೇ ಪೂರ್ಣಗೊಳಿಸಿ!

ಇಪಿಎಫ್ ಖಾತೆಯಲ್ಲಿ ಸೇರ್ಪಡೆ ಅಥವಾ ನಿರ್ಗಮನ ದಿನಾಂಕ ತಪ್ಪಾಗಿದ್ದರೆ, ಅದು ನಿಮ್ಮ ಪಿಂಚಣಿ ಅರ್ಹತೆಗೆ ಧಕ್ಕೆ ತರಬಹುದು ಮತ್ತು ಪಿಎಫ್ ವರ್ಗಾವಣೆಗೆ ಅಡ್ಡಿಯಾಗಬಹುದು. ಈ ಲೇಖನವು, ಉದ್ಯೋಗದಾತರ ಸಹಾಯವಿಲ್ಲದೆ, ಮನೆಯಲ್ಲೇ ಆನ್‌ಲೈನ್ ಮೂಲಕ 'Mark Exit' ಬಳಸಿ ದಿನಾಂಕವನ್ನು ಸರಿಪಡಿಸುವ ಸರಳ ವಿಧಾನವನ್ನು ವಿವರಿಸುತ್ತದೆ.
Read Full Story
10:52 PM (IST) Aug 24

Karnataka Latest News Live 24 August 2026ಹುಲಿಯ ಜಾಡು ಹಿಡಿದ ಅರಣ್ಯ ಇಲಾಖೆ - ಗಂಗಾವತಿಯಲ್ಲಿ ನಡೆಯುತ್ತಿದೆ ಮಹಾ ಕಾರ್ಯಾಚರಣೆ!

Koppal News: ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.

Read Full Story
10:12 PM (IST) Aug 24

Karnataka Latest News Live 24 August 2026Shivamogga - ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಿದ ತಾಯಿ, ಇಬ್ಬರು ಹಸುಗೂಸುಗಳು ನಾಪತ್ತೆ!

ಕೌಟುಂಬಿಕ ಕಲಹದಿಂದ ಮನನೊಂದು, ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ತುಂಗಾ ನದಿಗೆ ಹಾರಿದ್ದಾಳೆ. ಸ್ಥಳೀಯರು ತಾಯಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದರೂ, ಇಬ್ಬರು ಹೆಣ್ಣುಮಕ್ಕಳು ನದಿಯ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.
Read Full Story
09:41 PM (IST) Aug 24

Karnataka Latest News Live 24 August 2026breaking news - ಕರ್ನಾಟಕದಲ್ಲೂ ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್ ಫುಡ್ ಲೈಸೆನ್ಸ್ ಅಮಾನತು..

ವಿಷಕಾರಿ ಧತ್ತೂರಾ ಹಣ್ಣು ಮತ್ತು ಬೀಜಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್ ಕಂಪನಿಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆಯು ಈ ಕಠಿಣ ಕ್ರಮ ಕೈಗೊಂಡಿದೆ.

Read Full Story
09:35 PM (IST) Aug 24

Karnataka Latest News Live 24 August 2026'ನಮ್ಮನೆಗೆ ಲಕ್ಷ್ಮಿ ಬಂದಿದ್ದಾಳೆ' - 25ರ ಹರೆಯದಲ್ಲೇ ತಾಯಿಯಾದ ಕನ್ನಡದ ಯೂಟ್ಯೂಬರ್‌ ಮಧು ಗೌಡ

Kannada YouTuber Madhu Gowda: 25ನೇ ವಯಸ್ಸಿನಲ್ಲಿ ತಾಯಿಯಾದ ಜನಪ್ರಿಯ ಯೂಟ್ಯೂಬರ್‌ ಮಧು ಗೌಡ. ನಿಖಿಲ್‌ ರವೀಂದ್ರ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.

Read Full Story
09:31 PM (IST) Aug 24

Karnataka Latest News Live 24 August 2026BEO ಕಚೇರಿ ಅಧೀಕ್ಷಕ ಮಂಜುನಾಥ್ ಆತ್ಮ*ತ್ಯೆ ಶಂಕೆ; ಡೆತ್ ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು!

ಗಂಗಾವತಿ ಬಿಇಓ ಕಚೇರಿ ಅಧೀಕ್ಷಕ ಮಂಜುನಾಥ್, ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ ನೀಡಿದ ಮೂವರು ಮೇಲಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story
08:42 PM (IST) Aug 24

Karnataka Latest News Live 24 August 2026ಯಶ್‌ ಅಂದ್ರೆ ‘ಗೋಲ್ಡನ್‌ ಹಾರ್ಟ್‌’ - ಅಭಿಮಾನಿಗಾಗಿ ಬಾಡಿಗಾರ್ಡ್‌ಗೇ ಸೂಚನೆ ಕೊಟ್ಟ ರಾಕಿಂಗ್‌ ಸ್ಟಾರ್‌

Toxic pre release event ಕಾರ್ಯಕ್ರಮದಲ್ಲಿ ಸೆಲ್ಫಿ ಹಾಗೂ ಆಟೋಗ್ರಾಫ್‌ಗಾಗಿ ಯಶ್‌ ಅವರನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್‌ ಹಿಂದೆ ಸರಿಸಲು ಮುಂದಾದಾಗ, ಯಶ್‌ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.

Read Full Story
08:24 PM (IST) Aug 24

Karnataka Latest News Live 24 August 2026Supreme Court - ಶಾಲೆಗಳ ಸ್ಥಿತಿಗೆ ಸುಪ್ರೀಂ ಕೋರ್ಟ್ ಕಳವಳ - ಕುಂಭಮೇಳದ ಶೇ. 0.1ರಷ್ಟು ಹಣ ಸಿಕ್ಕರೂ ನೂರಾರು ಸರ್ಕಾರಿ ಶಾಲೆ ಉಳಿಸಬಹುದಿತ್ತು ಎಂದ ಪೀಠ!

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಸರ್ಕಾರಿ ಶಾಲೆಗಳ ಮುಚ್ಚುವಿಕೆ ಮತ್ತು ಶಿಕ್ಷಣದ ಮೇಲಿನ ನಿರ್ಲಕ್ಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೃಹತ್ ಯೋಜನೆಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುವಾಗ, ಕನಿಷ್ಠ ಸೌಲಭ್ಯಗಳಿಲ್ಲದೆ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವ ದುರಂತವನ್ನು ಉಲ್ಲೇಖಿಸಿ, ಶಿಕ್ಷಣ ಮತ್ತು ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
Read Full Story
07:48 PM (IST) Aug 24

Karnataka Latest News Live 24 August 2026‘ಆ ತಾಯಿಯನ್ನು ನೋಡಿದಾಗ ಶಕ್ತಿ ಬರುತ್ತದೆ’ - ಮಧುರೈ ಮೀನಾಕ್ಷಿ ದೇಗುಲದಲ್ಲಿ ನಟಿ ರಕ್ಷಿತಾ ಪ್ರೇಮ್

Kannada Actress Rakshitha Prem ಅವರು ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಆ ತಾಯಿಯನ್ನು ನೋಡಿದಾಗ ಶಕ್ತಿ ಬರುತ್ತದೆ ಎಂದು ವಿಶೇಷ ಆಧ್ಯಾತ್ಮಿಕ ಅನುಭವ ಎಂದು ಬಣ್ಣಿಸಿದ್ದಾರೆ.

Read Full Story
07:42 PM (IST) Aug 24

Karnataka Latest News Live 24 August 2026Diplomacy - ಮಾಸ್ಕೋ ತಲುಪಿದ 'ಮೋದಿ ಸಿಗೇಚರ್' - ಪುಟಿನ್ ಕೈಗೆ ಜೈಶಂಕರ್ ನೀಡಿದ ಆ ರಹಸ್ಯ ಪತ್ರದಲ್ಲೇನಿದೆ? ಇಲ್ಲಿದೆ ಭಾರತದ ಮಾಸ್ಟರ್ ಪ್ಲಾನ್!

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿ, ಪ್ರಧಾನಿ ಮೋದಿಯವರ ವಿಶೇಷ ಸಂದೇಶವನ್ನು ತಲುಪಿಸಿದರು. ಈ ಭೇಟಿಯು ಭಾರತದ '3D ರಾಜತಾಂತ್ರಿಕತೆ'ಯನ್ನು ಜಗತ್ತಿಗೆ ಪರಿಚಯಿಸಿದ್ದು, ರಷ್ಯಾ, ಅಮೆರಿಕ ಮತ್ತು ಚೀನಾವನ್ನು ಸಮತೋಲನಗೊಳಿಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಗುರಿಯನ್ನು ಸ್ಪಷ್ಟಪಡಿಸಿದೆ.
Read Full Story
06:59 PM (IST) Aug 24

Karnataka Latest News Live 24 August 2026‘ನನ್ನ ಕನಸು ನನಸಾಗಿದೆ’ - ಗೃಹಪ್ರವೇಶದ ಸಂಭ್ರಮದಲ್ಲಿ ಭಾವುಕರಾದ ಬಿಗ್‌ಬಾಸ್‌ ಬೆಡಗಿ ರಿಷಾ ಗೌಡ!

Bigg Boss Kannada 12 ಮೂಲಕ ಕನ್ನಡಿಗರಿಗೆ ಮತ್ತಷ್ಟು ಪರಿಚಿತರಾದ ನಟಿ ರಿಷಾ ಗೌಡ, 20ರ ಹರೆಯದಲ್ಲೇ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಂಡು, ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ತಮ್ಮ ಖುಷಿ ಹಾಗೂ ಭಾವುಕತೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story
06:28 PM (IST) Aug 24

Karnataka Latest News Live 24 August 2026ಈದ್ ಮಿಲಾದ್ ಹಬ್ಬದ ರಜೆಯಲ್ಲಿ ದಿಢೀರ್ ಬದಲಾವಣೆ - ಕರಾವಳಿ ಜಿಲ್ಲೆಗಳಿಗೆ ನಾಳೆಯೇ ಸರ್ಕಾರಿ ರಜೆ!

ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಘೋಷಿಸಲಾಗಿದ್ದ ಸಾರ್ವಜನಿಕ ರಜಾ ದಿನಾಂಕದಲ್ಲಿ ಬದಲಾವಣೆಯಾಗಿದೆ. ಚಂದ್ರದರ್ಶನದ ಆಧಾರದ ಮೇಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದು ರಜೆ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಈ ಮೊದಲೇ ನಿಗದಿಯಾಗಿದ್ದಂತೆ ಆಗಸ್ಟ್ 26 ರಂದು ರಜೆ ಇರಲಿದೆ ಎಂದು ಸರ್ಕಾರ ಆದೇಶಿಸಿದೆ.
Read Full Story
06:26 PM (IST) Aug 24

Karnataka Latest News Live 24 August 2026ಹೈದರಾಬಾದ್‌ನಲ್ಲಿ Toxic ಹವಾ - ಸಕ್ಸಸ್‌ಫುಲ್ ತೆಲುಗು ಸಿನಿಮಾ ಎತ್ತಂಗಡಿ 'ಇದು ಕನ್ನಡಿಗರ ತಾಕತ್ತು' ಎಂದ ಯಶ್‌ ಫ್ಯಾನ್ಸ್‌!

ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ತೆಲುಗಿನ 'ಇರುಮುಡಿ' ಚಿತ್ರವನ್ನು ತೆಗೆದುಹಾಕಿ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕೆ ಜಾಗ ನೀಡಲಾಗಿದೆ. ಈ ಬೆಳವಣಿಗೆಯು ತೆಲುಗು ಮತ್ತು ಕನ್ನಡ ಸಿನಿಪ್ರೇಮಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Read Full Story
06:25 PM (IST) Aug 24

Karnataka Latest News Live 24 August 2026ದಾವಣಗೆರೆ ಶಾಸಕ ಸಮರ್ಥ ಶಾಮನೂರು ಕಾರು ಭೀಕರ ಅಪಘಾತ; ಓವರ್‌ಟೇಕ್ ಮಾಡುವಾಗ ಅನಾಹುತ

ದಾವಣಗೆರೆ ಶಾಸಕ ಸಮರ್ಥ ಶಾಮನೂರು ಅವರ ಕಾರು ಚಿತ್ರದುರ್ಗದ ಹಿರಿಯೂರು ಬಳಿ ಸರಣಿ ಅಪಘಾತಕ್ಕೀಡಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಸಂದೀಪ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಘಟನೆ ಹೇಗೆ ಆಯಿತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
06:16 PM (IST) Aug 24

Karnataka Latest News Live 24 August 2026KPSC ಹಗರಣದ ಅಸಲಿ ಕಹಾನಿ ಏನು? ಐಎಎಸ್ ಜ್ಞಾನೇಂದ್ರ ವಿರುದ್ಧ ₹1 ಕೋಟಿ ಲಂಚದ ಆರೋಪ; ಹೇಗೆ ಬಯಲಾಯ್ತು ರಹಸ್ಯ? ಇಲ್ಲಿದೆ ಅಸಲಿ ಸತ್ಯ!

ಕೆಪಿಎಸ್‌ಸಿ ಪಶುವೈದ್ಯಕೀಯ ಅಧಿಕಾರಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಕೈಗೆತ್ತಿಕೊಂಡಿದೆ. ಕೋಟಿಗಟ್ಟಲೆ ಲಂಚದ ಆರೋಪದ ಮೇಲೆ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಈ ಹಗರಣವು ಕಷ್ಟಪಟ್ಟು ಓದಿದ ಸಾವಿರಾರು ನಿಷ್ಠಾವಂತ ಅಭ್ಯರ್ಥಿಗಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ.

Read Full Story
05:33 PM (IST) Aug 24

Karnataka Latest News Live 24 August 2026ಕೇರಳ ಸುಂದರಿಗೆ Miss Universe India ಕಿರೀಟ.. 19 ವರ್ಷದ ಈ ಬಹುಮುಖ ಪ್ರತಿಭೆ ಯಾರು?

ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಪಟ್ಟ ಗೆದ್ದ ಕೇರಳದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Read Full Story
05:24 PM (IST) Aug 24

Karnataka Latest News Live 24 August 2026ಕನ್ನಡದಾಚೆ ಶಿವಣ್ಣನ ಮತ್ತೊಂದು ಹೆಜ್ಜೆ - ಬಾಲಿವುಡ್‌ ಡೆಬ್ಯೂಗೆ ಸಜ್ಜಾದ ಹ್ಯಾಟ್ರಿಕ್‌ ಹೀರೋ!

ಶಿವರಾಜ್‌ಕುಮಾರ್‌ ಮತ್ತು ಆರ್. ಚಂದ್ರು ಕಾಂಬಿನೇಷನ್‌ನ ಈ ಬಹುಕೋಟಿ ಪ್ರಾಜೆಕ್ಟ್‌ನ ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಆಗಸ್ಟ್‌ 28ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

Read Full Story
05:03 PM (IST) Aug 24

Karnataka Latest News Live 24 August 2026‘ಒಂದೇ ಸಿನಿಮಾದಲ್ಲಿ ನಾಲ್ಕೈದು ಸ್ಟಾರ್ಸ್‌ ನಟಿಸಿದ್ರೆ ಸ್ಯಾಂಡಲ್‌ವುಡ್‌ಗೆ ಒಳ್ಳೆಯದು’ - ನಟ ಕೋಮಲ್

‘ಕೋಣ’ ಚಿತ್ರದ ಬಳಿಕ ನಟ ಕೋಮಲ್ ಕುಮಾರ್ ಮತ್ತೊಮ್ಮೆ ವಿಭಿನ್ನ ಕಥೆ ಮತ್ತು ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕೋಮಲ್ ಕುಮಾರ್, ಸೋನಲ್‌ ಮೊಂಥೆರೋ ಹಾಗೂ ವಿನೋದ್ ಪ್ರಭಾಕರ್..

Read Full Story
04:59 PM (IST) Aug 24

Karnataka Latest News Live 24 August 2026Chikkamgaluru - ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಟಿಪ್ಪು ಸುಲ್ತಾನ್ ಕಟೌಟ್‌ಗೆ ದೇಶದ್ರೋಹಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಘಟನೆಗೆ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದೆ.
Read Full Story