2018 ರಲ್ಲಿ ಕಾಸರಗೋಡಿನ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 23 ಶಿಕ್ಷಕರ ಪೈಕಿ ಕಳೆದ ವರ್ಷ ನಾಲ್ವರು ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿದೆ. ಕಳೆದ ಆಗಸ್ಟ್ನಲ್ಲಿ ಮಂಗಲ್ಪಾಡಿ ಹೈಸ್ಕೂಲ್ಗೆ ಗಣಿತ ಪಾಠಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಲಾಯಿತು. ಆಗ ಸಾಕಷ್ಟುಪ್ರತಿಭಟನೆ, ಹೋರಾಟ ನಡೆದು ಆ ಶಿಕ್ಷಕರನ್ನು ರಜೆ ಮೇಲೆ ಕಳುಹಿಸಲಾಗಿತ್ತು.
state Oct 20, 2019, 3:08 PM IST
ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.
Dakshina Kannada Oct 19, 2019, 8:35 AM IST
ಕೇರಳ ಸರ್ಕಾರ ಇದೀಗ ನೇಮಕವಾದ ಕನ್ನಡ ಗೊತ್ತಿರದ ಮಲಯಾಳಿ ಶಿಕ್ಷಕರಿಗೆ ಕನ್ನಡ ಕಲಿಯಲು ಆದೇಶಿಸಿದೆ. ಈಗಾಗಲೇ ಕನ್ನಡ ಮಾಧ್ಯಮ ಹೈಸ್ಕೂಲ್ಗಳಿಗೆ ನೇಮಕಗೊಂಡ ಇಬ್ಬರು ಮಲಯಾಳಂ ಅಧ್ಯಾಪಕರನ್ನು ಕನ್ನಡ ಕಡ್ಡಾಯ ಕಲಿಕೆಗಾಗಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ 1 ವರ್ಷ ವೇತನ ಸಹಿತ ಕಳುಹಿಸಿದೆ.
Karnataka Districts Oct 6, 2019, 9:11 AM IST
ನಗರದ ಶಾಲೆಗಳಲ್ಲಿ ಕನ್ನಡ ಮಾಧ್ಯಮ ತರಗತಿಗಳನ್ನು ಮುಚ್ಚಲಾಗುತ್ತಿದೆ. ಇದಕ್ಕೆ ಕಾರಣ ಮಕ್ಕಳ ಸಂಖ್ಯೆ ಕುಸಿಯುತ್ತಿರುವುದೇ ಆಗಿದೆ.
Karnataka Districts Jul 11, 2019, 7:56 AM IST
ಸರ್ಕಾರಿ ಶಾಲೆಗಳಲ್ಲಿ ಆರಂಭವಾದ ಇಂಗ್ಲಿಷ್ ಮೀಡಿಯಂಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ.
NEWS Jun 5, 2019, 8:14 AM IST
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ರಾಜ್ಯದಲ್ಲೇ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಮತ್ತು ವಾಣಿಜ್ಯ (science and commerce) ಬೋಧಿಸುವ ಏಕೈಕ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸುತ್ತಿದೆ.
Karnataka Districts May 8, 2019, 10:25 PM IST
ಗಡಿಯಾರ ಕಾರ್ಯನಿರ್ವಹಿಸಲು ಬ್ಯಾಟರಿ ಅವಶ್ಯಕ. ಆದರೆ ಬ್ಯಾಟರಿ ಇಲ್ಲದೆ ಪರಿಸರ ಸ್ನೇಹಿ ಗಡಿಯಾರವನ್ನು ಉಡುಪಿಯ ಟಿ.ಎಂ.ಪೈ ಪ್ರೌಢಶಾಲೆ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ನೋಡಿ.
TECHNOLOGY Feb 25, 2019, 8:50 PM IST
ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಖಾಸಗಿ ಶಾಲೆಗಳು ಬರುವ ಮೇ ತಿಂಗಳಿಂದಲೇ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಸರ್ಕಾರಿ ಶಾಲೆಗಳನ್ನು ಮೇ ಮೊದಲ ವಾರದಿಂದ ಪ್ರಾರಂಭಿಸುವ ಚಿಂತನೆಯಿದೆ. ಆದರೆ, ಶಿಕ್ಷಕರು ರಜೆ ಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
NEWS Feb 22, 2019, 8:51 AM IST
ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರು ಕೇವಲ 22 ನಿಮಿಷಗಳ ಭಾಷಣದ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ಕಳೆದ ಎರಡು ದಶಕದಲ್ಲಿ ಅತ್ಯಂತ ಪುಟ್ಟಅಧ್ಯಕ್ಷ ಭಾಷಣ ಮಾಡಿದ ದಾಖಲೆಗೂ ಪಾತ್ರರಾದರು. ಅವರ ಭಾಷಣ ಕನ್ನಡ ಶಾಲೆಗಳ, ಕನ್ನಡ ಮಾಧ್ಯಮದ ಕುರಿತಷ್ಟೇ ಆಗಿದ್ದರಿಂದ ಸಾಕಷ್ಟುಚರ್ಚೆಗೂ ಒಳಗಾಯಿತು. ಸಮ್ಮೇಳನದ ಉದ್ದಕ್ಕೂ ಅದು ವಿವಿಧ ವೇದಿಕೆಗಳಲ್ಲಿ ಅನುರಣಿಸಿತು.
NEWS Jan 7, 2019, 9:21 AM IST
ನಮ್ಮ ದೇಶದಲ್ಲಿ ನಡೆದ ದೊಡ್ಡ ಕ್ರಾಂತಿಗಳು ಎರಡು. ಮೊದಲನೆಯದು ಭಕ್ತಿ ಚಳವಳಿ. ಅದರಿಂದಾಗಿ ಸಂಸ್ಕೃತದಲ್ಲಿ ಮಾತ್ರ ಪೂಜಿಸುತ್ತಿದ್ದ ದೇವರನ್ನು ಎಲ್ಲ ಜನರು ತಮ್ಮ ಮನದ ಭಾಷೆಯಿಂದ ಪೂಜಿಸುವಂತಾಯಿತು. ನಂತರ ನಡೆದಿದ್ದು ಅಕ್ಷರ ಕ್ರಾಂತಿ. ಅದು ಆಗಿದ್ದು ಲಾರ್ಡ್ ಮೆಕಾಲೆಯಿಂದ. ಅದರಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಯಿತು. ಆದರೆ, ಆ ಪದ್ಧತಿ ಇಂಗ್ಲಿಷ್ ಪದ್ಧತಿ. ಅದನ್ನು ನಾವೀಗ ಬದಲಿಸಬೇಕು - ಚಂದ್ರಶೇಖರ ಕಂಬಾರರು
NEWS Jan 5, 2019, 12:53 PM IST
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತಿದೆ. ಧಾರವಾಡಲ್ಲಿ ಇಂದಿನಿಂದ ಮೂರು ದಿನ ಕಾಲ ಸಾಹಿತ್ಯ ಜಾತ್ರೆ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ್ ಕಂಬಾರ ಅವರು ಉದ್ಘಾಟನಾ ಭಾಷಣದಲ್ಲಿ ಕನ್ನಡ ಮಾಧ್ಯಮ ಕಡೆಗಣಿಸುವವರನ್ನು ಕುಟುಕಿದ್ದಾರೆ.
NEWS Jan 4, 2019, 5:26 PM IST
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ತಾಂತ್ರಿಕ ಶಿಕ್ಷಣ ಪಡೆಯಲು ಹೊರ ರಾಜ್ಯದ ಕಾಲೇಜುಗಳಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಸೂಚನೆ ನೀಡಿದ್ದಾರೆ.
NEWS Dec 8, 2018, 8:13 AM IST
WEB Nov 1, 2018, 11:54 AM IST
ಈಗ ಭೌತ ವಿಜ್ಞಾನ, ಸಮಾಜಶಾಸ್ತ್ರ ಬೋಧಿ ಸಲೂ ಕನ್ನಡ ಶಾಲೆಗಳಿಗೆ ಕೇರಳ ಸರ್ಕಾರ ಮಲಯಾಳಿ ಶಿಕ್ಷಕರನ್ನು ನೇಮಿಸಲು ಹೊರಟಿದೆ. ಒಟ್ಟಾರೆ ಕನ್ನಡ ಮಾಧ್ಯಮ ಶಾಲೆಗಳಿಗೆ 20 ಮಲಯಾಳಿ ಶಿಕ್ಷಕರ ನೇಮಕ ನಡೆದಿದ್ದು, ಈ ಮೂಲಕ ಕಾಸರಗೋಡಲ್ಲಿ ಕನ್ನಡ ಅಸ್ಮಿತೆಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ.
NEWS Oct 8, 2018, 7:32 AM IST
ಕಿರಣ್ ಮಜುಂದಾರ್ ಷಾ ಟ್ವೀಟ್ ಗೆ ವ್ಯಾಪಕ ಖಂಡನೆ
ಸಾಮಾಜಿಕ ತಾಣದಲ್ಲಿ ಕಿರಣ್ ಕಾಲೆಳೆದ ಕನ್ನಡಿಗರು
NEWS Jul 9, 2018, 6:32 PM IST