ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಹೇಳಿಕೆ ನೀಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ವರಿಷ್ಠರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
Karnataka Districts Oct 6, 2019, 1:32 PM IST
ಬಿಜೆಪಿ ಸರ್ಕಾರದ ವಿರುದ್ಧ ವಿರುದ್ಧ ನಟ ಪ್ರಕಾಶ್ ರೈ ಮತ್ತೆ ಕಿಡಿಕಾರಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ರೈ, ಹೊದ್ಕ್ಕೊಳ್ಳೊಕೆ ಕಂಬಳೀ ಕೇಳ್ದ್ರೆ .. ಕರ್ಚೀಪ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ ಉತ್ತರಕುಮಾರರು...ಪ್ರಜೆಗಳೇ.. ಮರುಳಾಗದಿರಿ ..ದೇಶದ ದುಡ್ಡು ನಮ್ದು..ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ...ಪ್ರಶ್ನಿಸೋದನ್ನ ನಿಲ್ಲಿಸ್ಬೇಡಿ...ಯಾರೆ ಆದ್ರು ನಾವು ಉಗೀತಿದ್ರೇನೆ ಕೆಲಸ ಮಾಡೊದು ಅಲ್ವಾ?? #justasking ಎಂದು ಟ್ವೀಟ್ ಮಾಡಿದ್ದಾರೆ.
News Oct 6, 2019, 1:16 PM IST
ಮನೆ ಕಳೆದುಕೊಂಡು ಮನೆಯ ಗೃಹ ಪ್ರವೇಶ ಮಾಡಿ ಮನೆಗೆ ಹೋಗಬೇಕೆಂದುಕೊಂಡಿದ್ದ ಗಂಗಮ್ಮಜ್ಜಿಗೆ ಇದ್ದಕ್ಕಿದ್ದಂತೆ ಎದುರಾಗಿತ್ತೊಂದು ಆಘಾತ ಏನದು?
Karnataka Districts Oct 6, 2019, 1:08 PM IST
ನೆರೆ ಪರಿಹಾರ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದ ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ರುಪಾಯಿ ತಾತ್ಕಾಲಿಕ ಪರಿಹಾರ ನೀಡುವ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Karnataka Districts Oct 6, 2019, 1:02 PM IST
ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
Karnataka Districts Oct 6, 2019, 12:23 PM IST
ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು 10 ಸಾವಿರ ಕೋಟಿಗೆ ಬೇಡಿಕೆ ಇರಿಸಿದ್ದಾರೆ.
Karnataka Districts Oct 6, 2019, 12:05 PM IST
ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ದುಂಬಾಲು ಬೀಳಲಾಗುತ್ತಿದೆ. ರಾಜ್ಯದ ಖಜಾನೆಗಳಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದೆ. ಜಿಲ್ಲಾಧಿಕಾರಿಗಳ ಡಿಪಿ ಖಾತೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಾ ಬಿದ್ದಿದೆ. ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಖಜಾನೆಯಲ್ಲೇ ಉಳಿದಿದ್ದು ಹೇಗೆ? ಸುವರ್ಣ ನ್ಯೂಸ್ ಬಳಿ ಇದೆ ಎಕ್ಸ್ ಕ್ಲೂಸಿವ್ ಮಾಹಿತಿ. ಇಲ್ಲಿದೆ ಕ್ಲಿಕ್ಕಿಸಿ.
News Oct 6, 2019, 11:54 AM IST
ಜಿಲ್ಲೆಯ ನೆರೆ ಪರಿಹಾರಕ್ಕೆ ಸಿಕ್ಕ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರವಾಹದಿಂದ ಒಟ್ಟು 2543 ಕೋಟಿ ಹಣದಷ್ಟು ವಿವಿಧ ಬಗೆಯ ಹಾನಿ ಸಂಭವಿಸಿದೆ. ಅದಕ್ಕೆ ಜಿಲ್ಲಾಡಳಿತ ಪರಿಹಾರದ ಬೇಡಿಕೆ ಇಟ್ಟಿದ್ದು, ಕೇವಲ 420 ಕೋಟಿ ಮಾತ್ರ. ಇದಕ್ಕೆ ಪ್ರಮುಖ ಕಾರಣ ಎನ್ಡಿಆರ್ಎಫ್ ಮಾರ್ಗಸೂಚಿಯಲ್ಲಿನ ಕನಿಷ್ಠ ಪರಿಹಾರದ ಸೂತ್ರಗಳು. ಇದರಿಂದ ಸಂತ್ರಸ್ತರಲ್ಲಿ ನಮಗೆ ಪರಿಹಾರ ದೊರೆಯುತ್ತದೆಯೋ ಇಲ್ಲ ಎಂಬ ಆತಂಕ ಮನೆ ಮಾಡಿದೆ.
Karnataka Districts Oct 6, 2019, 11:53 AM IST
ಸೂಲಿಬೆಲೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ| ಚಕ್ರವರ್ತಿ ದೇಶದ್ರೋಹಿ ಅಂತ ಹೇಳಿಲ್ಲ: ಡಿವಿಎಸ್|
News Oct 6, 2019, 11:40 AM IST
ಕೇಂದ್ರದ ಅನುದಾನ ಏತಕ್ಕೂ ಸಾಲದು| ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಹ ನೆರೆ ಪರಿಹಾರ: ಸತೀಶ ಲೇವಡಿ
News Oct 6, 2019, 11:25 AM IST
ಕೊಡಗು ಸಂತ್ರಸ್ತರಿಗೆ ಎಚ್ಡಿಕೆ ಮನೆ ಕೊಟ್ಟರಾ?| ಮನೆ ಕಟ್ಟಿಸಿಕೊಡಲಿಲ್ಲ, 97 ಸಾವಿರ ರು. ಪರಿಹಾರವನ್ನೂ ನೀಡಲಿಲ್ಲ| ಈ ಬಾರಿ ಪರಿಹಾರ ಕಾರ್ಯಗಳು ಸುಸೂತ್ರವಾಗಿ ನಡೀತಿವೆ: ಕಟೀಲ್
News Oct 6, 2019, 10:18 AM IST
ಆಗ ನೆರೆ ಹಾವಳಿಗೆ ಸಿಲುಕಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿತ್ತು. ಪ್ರವಾಹದಿಂದ ಬಚಾವಾಗಿದ್ದ ಬೆಳೆಯನ್ನು ಈಗ ಕಟಾವು ಮಾಡುತ್ತಿದ್ದು, ಮಳೆ ಕಾಟ ಆರಂಭವಾಗಿದೆ. ಇದರಿಂದ ಅಳಿದುಳಿದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
Karnataka Districts Oct 6, 2019, 9:03 AM IST
ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕಾಗಿ ನೀಡಿರುವ 1200 ಕೋಟಿ ತೀರಾ ಕಡಿಮೆಯಾಗಿದ್ದು, ಕನಿಷ್ಠ 5 ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಅವರು ಹೇಳಿದ್ದಾರೆ.
Karnataka Districts Oct 6, 2019, 8:00 AM IST
ಬೆಳಗಾವಿ, [ಅ.05]: ಬೆಳೆ ಪರಿಹಾರ ಕೇಳಲು ಬಂದಿದ್ದ ರೈತರಿಗೆ ನಂದು 80 ಎಕ್ಕರೆ ಕಬ್ಬು ಪ್ರವಾಹದಲ್ಲಿ ಮುಳುಗಿದ್ದು, ನನಗೆ 1 ಕೊಟಿ ರೂ. ಆಗುತ್ತದೆ ಕೊಡಲು ಸಾಧ್ಯವೆ ಎಂದು ರೈತರಿಗೆ ಉಡಾಫೆ ಮಾತುಗಳನ್ನಾಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇದೀಗ ರೈತರು ಟಾಂಗ್ ಕೊಟ್ಟಿದ್ದಾರೆ. ರೈತರೆಲ್ಲರೂ ಸೇರಿ ಉಪಮುಖ್ಯಮಂತ್ರಿಗೆ ನೆರವಾಗಲು ಬಿಕ್ಷಾಟನೆ ಮಾಡಿದ್ದಾರೆ. ಅದರ ಝಲಕ್ ವಿಡಿಯೋನಲ್ಲಿ ನೋಡಿ.
Karnataka Districts Oct 5, 2019, 9:10 PM IST
ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ
Karnataka Districts Oct 5, 2019, 7:12 PM IST