Asianet Suvarna News Asianet Suvarna News

ಖ್ಯಾತ ನಿರ್ಮಾಪಕ ಕೆ ಮಂಜು ಆಸ್ಪತ್ರೆಗೆ ದಾಖಲು; ಹೃದಯ ತಪಾಸಣೆ ಮಾಡಿದ ವೈದ್ಯರು!

ಕೆಲ ಒತ್ತಡದ ಕೆಲಸಗಳ ಕಾರಣಕ್ಕೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿತ್ತು ಅನ್ನೋ ಮಾಹಿತಿ ಇದೆ. ಇಂದು ಅವರ ಫ್ಯಾಮಿಲಿ ಡಾಕ್ಟರ್ ಬಳಿ ತಪಾಸಣೆ ಮಾಡಿಸಿರೋ ಪೋಟೋ ವೈರಲ್ ಆಗ್ತಿದೆ. ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆ ಮಾಡಿದ್ದಾರೆ..

Sandalwood producer k manju hospitalised in bangalore srb
Author
First Published Oct 19, 2024, 7:31 PM IST | Last Updated Oct 19, 2024, 7:57 PM IST

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಯಾದ ಟೆನ್ಷನ್‌ನಿಂದ ಅಶ್ವಸ್ಥರಾಗಿರೋ ಕೆ ಮಂಜು ಅವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಒದಗಿಬಂತರು ಎನ್ನಲಾಗಿದೆ. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ಕೆ ಮಂಜು ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. 

ಕೆಲ ಒತ್ತಡದ ಕೆಲಸಗಳ ಕಾರಣಕ್ಕೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿತ್ತು ಅನ್ನೋ ಮಾಹಿತಿ ಇದೆ. ಇಂದು ಅವರ ಫ್ಯಾಮಿಲಿ ಡಾಕ್ಟರ್ ಬಳಿ ತಪಾಸಣೆ ಮಾಡಿಸಿರೋ ಪೋಟೋ ವೈರಲ್ ಆಗ್ತಿದೆ. ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆ ಮಾಡಿದ್ದಾರೆ. ವೈದ್ಯರು ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದಿದ್ದಾರೆ ಎನ್ನುವ ಮಾಹಿತಿಯನ್ನು ಅವರ ಕುಟುಂಬಸ್ಥರು ಹಂಚಿಕೊಂಡಿದ್ದಾರೆ. 

ಮಗದೊಂದು ಮೈಲಿಗಲ್ಲಿಗೆ ಸಜ್ಜಾದ ರಿಷಬ್ ಶೆಟ್ಟಿ, 'ಜೈ ಹನುಮಾನ್-2'ದಲ್ಲಿ ಕಾಂತಾರ ಹೀರೋ!

ಕೆ ಮಂಜು ಅವರು ಕನ್ನಡದ ಖ್ಯಾತ ನಿರ್ಮಾಪಕರಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜಾಹುಲಿ' ಸೇರಿದಂತೆ ಬಹಳಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಅವರ ಮಗ ಶ್ರೇಯಸ್ ಮಂಜು ಕೂಡ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಪಡ್ಡೆ ಹುಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಮಂಜು ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 

ಯಶ್ ಸೇರಿದಂತೆ ಕನ್ನಡದಲ್ಲಿ ಹಲವು ಸ್ಟಾರ್ ನಟರುಗಳ ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಬನ್ನೇಋಉಘಟ್ಟದ ಅಪೋಲೋ ಆಸ್ಪತ್ರೆಯಲ್ಲಿರುವ ನಿರ್ಮಾಪಕ ಕೆ ಮಂಜು ಅವರು ಕ್ಷೇಮವಾಗಿದ್ದಾರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಇಲ್ಲ ಅವರ  ಮಗ ಶ್ರೇಯಸ್ ಮಂಜು ತಿಳಿಸಿದ್ದಾರೆ. 

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

 

Latest Videos
Follow Us:
Download App:
  • android
  • ios