Asianet Suvarna News Asianet Suvarna News

ದುಬೈಗೆ ಹಾರಿದ ಕೊಹ್ಲಿ ಬಾಯ್ಸ್, ಬಿಡುಗಡೆಯಾಯ್ತು ಟಾಪ್ ನಟಿಯರ ಲಿಸ್ಟ್: ಆ.21ರ ಟಾಪ್ 10 ಸುದ್ದಿ!

ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ್ದ ಧಂಗೆಕೋರರ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಯ ನಾಮನಿರ್ದೇಶನವನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ತಂಡ ದುಬೈಗೆ ಹಾರಿದೆ. ಆದರೆ ಈ ವಿಮಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಇರಲಿಲ್ಲ. ಭಾರತದ ನಂ.1 ನಟಿ, ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಸಿಎಂ ಯಡಿಯೂರಪ್ಪ ಸೇರಿದಂತೆ ಆಗಸ್ಟ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

IPL 2020 RCB team to Deepika Padukone Top 10 news of August 21
Author
Bengaluru, First Published Aug 21, 2020, 5:09 PM IST

ವೆಬ್ ಸೀರಿಸ್‌ಗೆಂದು ಹೊಸ ನಟಿಯ ಬೆತ್ತಲೆ ಶೂಟ್ ಮಾಡಿ ಆನ್‌ಲೈನ್‌ಗೆ ಹಾಕಿದ್ರು!...

IPL 2020 RCB team to Deepika Padukone Top 10 news of August 21

ವೆಬ್ ಸೀರಿಸ್ ನಲ್ಲಿ ಅಭಿನಯಿಸಿದ್ದ  20  ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.  ಓಟಿಟಿ ಆಪ್ ಮುಖ್ಯಸ್ಥರೊಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ.

ಬೆಂಕಿ ಇಟ್ಟ ದಂಗೆಕೋರರ ಬಣ್ಣ ಬಯಲು: ಶಾಕಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ!...

IPL 2020 RCB team to Deepika Padukone Top 10 news of August 21

ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ್ದ ಧಂಗೆಕೋರರ ಬೆನ್ನತ್ತಿದ ಸುವರ್ಣ ನ್ಯೂಸ್‌ ತಂಡಕ್ಕೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. 


ಅಮೆರಿಕದ ಉಪಾಧ್ಯಕ್ಷ ಹುದ್ದೆ ಸ್ಪರ್ಧಿಯಾಗಿ ಕಮಲಾ ಅಧಿಕೃತ ಆಯ್ಕೆ!...

IPL 2020 RCB team to Deepika Padukone Top 10 news of August 21

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಯ ನಾಮನಿರ್ದೇಶನವನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ನಾಯಕನಿಲ್ಲದೇ ದುಬೈ ವಿಮಾನವೇರಿದ RCB ಪಡೆ..! ಈಗ ಶುರುವಾಯ್ತು ಧೋನಿ-ಕೊಹ್ಲಿ ಅಭಿಮಾನಿಗಳ ಕಿತ್ತಾಟ

IPL 2020 RCB team to Deepika Padukone Top 10 news of August 21

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಶುಕ್ರವಾರವಾದ ಇಂದು(ಆ.21) 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಾಡಲು ಬೆಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ RCB ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಫೋಟೋವನ್ನು ಶೇರ್ ಮಾಡಿದೆ. ಆದರೆ ಈ ಫೋಟೋದಲ್ಲಿ ನಾಯಕ ವಿರಾಟ್ ಕೊಹ್ಲಿಯೇ ಕಾಣುತ್ತಿಲ್ಲ. 

ವಿರಾಟ್ ಕೊಹ್ಲಿ ಸ್ಲಾಮ್ ಬುಕ್ ವೈರಲ್; ಫೋನ್ ನಂಬರ್, ವಿಳಾಸ ಫುಲ್‌ ಲೀಕ್?

IPL 2020 RCB team to Deepika Padukone Top 10 news of August 21

ಸ್ಕೂಲ್‌ ಹಾಗೂ ಕಾಲೇಜ್ ಲೈಫ್‌ಗೆ ಗುಡ್‌ ಬೈ ಹೇಳುವ ಮೊದಲು ನಾವೆಲ್ಲರೂ ತಪ್ಪದೆ ಮಾಡುವ ಕೆಲಸವೇ ಸ್ಲಾಮ್ ಬುಕ್ ಬರೆಯುವುದು. ನಮ್ಮ ಬಯೋಡೇಟಾದಿಂದ ಹಿಡಿದು ಫ್ಯೂಚರ್‌ ಪ್ಲಾನ್‌ವರೆಗೆ ಇದರಲಲ್ಲಿ ಬರೆದಿರುತ್ತೇವೆ. ಸದ್ಯ ಭಾರತೀಯ ಕ್ರಿಕೆಟರ್‌ ವಿರಾಟ್‌ ಬರೆದ ಸ್ಲಾಮ್‌ ಬುಕ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಳೆದ 5 ವರ್ಷದಿಂದಲೂ ದೀಪಿಕಾ ಭಾರತದ ನಂ.1 ನಟಿ..!

IPL 2020 RCB team to Deepika Padukone Top 10 news of August 21

ವೀಕ್ಷಕರ ವೋಟ್‌ ಆಧರಿಸಿದ ನಟಿ ದೀಪಿಕಾ ಪಡುಕೋಣೆ ಭಾರತದ ನಂಬರ್ 1 ನಟಿ ಎಂದು ಗುರುತಿಸಲ್ಪಟ್ಟಿದ್ದಾರೆ. ಕಳೆದ 5 ವರ್ಷದಿಂದಲೂ ದೀಪಿಕಾ ಟಾಪ್‌ ವನ್ ಸ್ಥಾನದಲ್ಲಿಯೇ ಇರೋದು ವಿಶೇಷ

20 ನಿಮಿಷದಲ್ಲಿ 500 ಕಿ.ಮೀ ಮೈಲೇಜ್; ಬರುತ್ತಿದೆ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು!...

IPL 2020 RCB team to Deepika Padukone Top 10 news of August 21

ಮೊಬೈಲ್ ಕ್ಷೇತ್ರದಲ್ಲಿ ಆದ ಬದಲಾವಣೆಗಳನ್ನು ನಾವೆಲ್ಲ ಗಮನಿಸಿದ್ದೇವೆ. ಸ್ಮಾರ್ಟ್‌ಫೋನ್, ಚಾರ್ಜಿಂಗ್, ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳನ್ನು ಮೊಬೈಲ್ ಕಂಡಿದೆ. ಇದೀಗ ಎಲೆಕ್ಟ್ರಿಕ್ ಕಾರಿನಲ್ಲಿ ಇದೇ ರೀತಿ ಆವಿಷ್ಕಾರ, ಬದಲಾವಣೆಗಳು ಆಗುತ್ತಿದೆ. ಇದೀಗ ವಿಶ್ವದ ಜನಪ್ರಿಯ ಹಾಗೂ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಹೊಚ್ಚ ಹೊಸ ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ಒಂದು ಬಾರಿ ಚಾರ್ಜ್ ಮಾಡಿದರೆ 830 ಕಿ.ಮೀ ಮೈಲೇಜ್ ನೀಡಲಿದೆ.

ಭಾರತದ ಜೊತೆ ಸೇರಿ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸುಕ!...

IPL 2020 RCB team to Deepika Padukone Top 10 news of August 21

 ಕೊರೋನಾ ವೈರಸ್‌ ತಡೆಗೆ ತಾನು ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್‌-ವಿ’ ಉತ್ಪಾದನೆಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಷ್ಯಾ ಉತ್ಸಾಹ ತೋರಿದೆ. ಲಸಿಕೆ ಉತ್ಪಾದನೆಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್‌ ಡಿಮಿಟ್ರೀವ್‌ ಗುರುವಾರ ಹೇಳಿದ್ದಾರೆ.

2 ರಾಷ್ಟ್ರೀಯ ಪಕ್ಷಗಳಿಗೆ ಎಚ್‌ಡಿಕೆ ಬಹಿರಂಗ ಪತ್ರ: ಉತ್ತರ ಕೊಡ್ತಾವಾ ಕಾಂಗ್ರೆಸ್, ಬಿಜೆಪಿ?...

IPL 2020 RCB team to Deepika Padukone Top 10 news of August 21

ಡಿ.ಜೆ. ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಇದರ ಮಧ್ಯೆ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ.

ಬೆಂಗಳೂರು ಗಲಭೆ: ಕಾಂಗ್ರೆಸ್‌ಗೆ ಸಿಎಂ ಯಡಿಯೂರಪ್ಪ ತಿರುಗೇಟು...

IPL 2020 RCB team to Deepika Padukone Top 10 news of August 21

ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ತನಿಖೆಯ ಬಳಿಕ ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios