Asianet Suvarna News Asianet Suvarna News

'ಇದಕ್ಕೆ ಧೈರ್ಯ ಬೇಕು..' ಬುಲ್ಡೋಜರ್‌ ಕುರಿತು ಟೀಕೆ ಮಾಡಿದ ಅಖಿಲೇಶ್‌ ಯಾದವ್‌ಗೆ ಸಿಎಂ ಯೋಗಿ ಆದಿತ್ಯನಾಥ್‌ ಖಡಕ್‌ ಉತ್ತರ!

2027ರಲ್ಲಿ ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಬುಲ್ಡೋಜರ್‌ಗಳು ಗೋರಖ್‌ಪುರದತ್ತ ಸಾಗಲಿವೆ ಎಂಬ ಹೇಳಿಕೆಗೆ ಯೋಗಿ ತಿರುಗೇಟು ನೀಡಿದ್ದಾರೆ. ಬುಲ್ಡೋಜರ್ ನಿರ್ವಹಣೆಗೆ ದೈಹಿಕ ಶಕ್ತಿಗಿಂತ ಬುದ್ಧಿ, ಧೈರ್ಯ ಮುಖ್ಯ ಎಂದಿದ್ದಾರೆ.

UP CM Yogi Adityanath gives reply to SP Akhilesh Yadav over Bulldozer remark says It takes courage san
Author
First Published Sep 4, 2024, 2:41 PM IST | Last Updated Sep 4, 2024, 2:52 PM IST

ಲಕ್ನೋ (ಸೆ.4): ಉತ್ತರ ಪ್ರದೇಶ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಮುಖ್ಯಸ್ಥರ ಬುಲ್ಡೋಜರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಯೋಗಿ ಆದಿತ್ಯನಾಥ್‌ ಹಾಗೂ ಅಖಿಲೇಶ್‌ ಯಾದವ್‌ ನಡುವಿನ ಮಾತಿನ ಸಮರ ತೀವ್ರಗೊಂಡಿದೆ. 2027ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರ ರಚನೆಯಾದ ಬಳಿಕ ಇಡೀ ರಾಜ್ಯದ ಬುಲ್ಡೋಜರ್‌ಗಳು ಗೋರಖ್‌ಪುರದತ್ತ ಸಾಗಲಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಯೋಗಿ ಆದಿತ್ಯನಾಥ್‌ ಉತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬುಲ್ಡೋಜರ್ ಅನ್ನು ನಿರ್ವಹಿಸಲು ಕೇವಲ ದೈಹಿಕ ಶಕ್ತಿಗಿಂತ ಹೆಚ್ಚಿನದು ಅಗತ್ಯವಿದೆ ಎಂದಿದ್ದಾರೆ. ಇದು ಬುದ್ಧಿ ಮತ್ತು ಧೈರ್ಯ ಎರಡನ್ನೂ ಬೇಡುತ್ತದೆ. ಬುಲ್ಡೋಜರ್ ಅನ್ನು ನಿರ್ವಹಿಸಲು ಎಲ್ಲರೂ ಸೂಕ್ತವಲ್ಲ ಎಂದು ಅವರು ಒತ್ತಿಹೇಳಿದರು, ಇದು ಮಾನಸಿಕ ಮತ್ತು ದೈಹಿಕ ಶಕ್ತಿ ಎರಡರ ಸಂಯೋಜನೆಯನ್ನು ಕೇಳುತ್ತದೆ ಎಂದು ಒತ್ತಿಹೇಳಿದರು. ಲಕ್ನೋದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಲೋಕಭವನದಲ್ಲಿ ಬುಧವಾರ ಆಯೋಜಿಸಿದ್ದ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಅಧೀನ ಸೇವಾ ಆಯ್ಕೆ ಆಯೋಗವು ನ್ಯಾಯಯುತ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆಯಡಿ ಆಯ್ಕೆಯಾದ 1334 ಕಿರಿಯ ಎಂಜಿನಿಯರ್‌ಗಳು, ಕಂಪ್ಯೂಟರ್ ಮತ್ತು ಫೋರ್‌ಮೆನ್‌ಗಳಿಗೆ ನೇಮಕಾತಿ ಪತ್ರವನ್ನು ವಿತರಿಸಿ ಸಿಎಂ ಯೋಗಿ ಆದಿತ್ಯನಾಥ್‌ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಲ್ಲಿ ನೇಮಕಗೊಂಡವರಲ್ಲಿ ಇಂದು ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯವಿದೆ. "ಪ್ರತಿಭಾವಂತ ಯುವಕರನ್ನು ಕೇವಲ ಪ್ರತಿಭೆ ಮತ್ತು ಮೀಸಲಾತಿ ನಿಯಮಗಳನ್ನು ಅನುಸರಿಸುವ ಮೂಲಕ ನೇಮಕಾತಿ ಪ್ರಕ್ರಿಯೆಗೆ ಲಿಂಕ್ ಮಾಡಲಾಗಿದೆ" ಎಂದು ಅವರು ಹೇಳಿದರು. ಕಳೆದ ಏಳೂವರೆ ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಸ್ವಚ್ಛವಾಗಿ ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಹೇಳಿದರು. ಏಳು ವರ್ಷಗಳ ಹಿಂದೆ ಇದು ಕನಸಿನ ಮಾತಾಗಿತ್ತು ಎಂದಿದ್ದಾರೆ.

“ಇಂದು ನಾವು 6.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೇಮಕಾತಿಗಳನ್ನು ಮಾಡಿದ್ದೇವೆ. ಈ ಯುವಕರು ತಮ್ಮ ಶಕ್ತಿ ಮತ್ತು ಪ್ರತಿಭೆಯ ಲಾಭವನ್ನು ರಾಜ್ಯಕ್ಕೆ ನೀಡಿದ್ದಾರೆ, ಇಂದು ನಮ್ಮ ಮಾನವ ಸಂಪನ್ಮೂಲದ ಕೊರತೆಯನ್ನು ಪೂರೈಸಿಕೊಂಡಿದ್ದೇನೆ. ದೇಶದ ಅಭಿವೃದ್ಧಿಗೆ ಅಡ್ಡಿ ಎಂದು ಪರಿಗಣಿಸಲ್ಪಟ್ಟ ಈ ರಾಜ್ಯವು ಈ ರಾಜ್ಯವು ದೇಶದ ಏಳನೇ ಅತಿದೊಡ್ಡ ಆರ್ಥಿಕತೆ ಎಂದು ಗುರುತಿಸಲ್ಪಟ್ಟಿದೆ, ಇದು ಸಂಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ, "ಎಂದು ಅವರು ಹೇಳಿದರು.

ಯಾವುದೇ ನಾಯಕರ ಹೆಸರು ಹೇಳದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು, ಬುಲ್ಡೋಜರ್ ಮೇಲೆ ಎಲ್ಲರ ಕೈ ಒಗ್ಗೋದಿಲ್ಲ. ಬುಲ್ಡೋಜರ್ ಓಡಿಸಲು ಹೃದಯ ಮತ್ತು ಮನಸ್ಸು ಎರಡೂ ಬೇಕು, ಗಲಭೆಕೋರರ ಮುಂದೆ ಮಂದ ಆಗುವವರು ಬುಲ್ಡೋಜರ್‌ ಮುಂದೆ ಸೋಲುತ್ತಾರೆ' ಎಂದು ಹೇಳಿದರು.

ನಾವು ಒಗ್ಗಟ್ಟಾಗದಿದ್ದರೆ ನಮ್ಮನ್ನ ಕತ್ತರಿಸಲಾಗುತ್ತೆ: ದೇಶದ ಜನತೆಗೆ ಯೋಗಿ ಸಂದೇಶ

ಲೋಹಿಯಾ ಸಭಾಂಗಣದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಅಖಿಲೇಶ್‌ ಯಾದವ್‌, ;2027 ರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ರಾಜಕೀಯ ಬದಲಾವಣೆಯನ್ನು ಯೋಜಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಉತ್ತರ ಪ್ರದೇಶದಿಂದ ಹೊರಹಾಕುತ್ತೇವೆ ಎಂದ ಅವರು, ಈ ಫಲಿತಾಂಶಗಳು ರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತವೆ ಎಂದು ಭವಿಷ್ಯ ನುಡಿದರು. ಅದರೊಂದಿಗೆ ಬಿಜೆಪಿಯ ಭದ್ರಕೋಟೆಯ ಮೇಲೆ ಬುಲ್ಡೋಜರ್‌ ಕ್ರಮದ ಸುಳಿವನ್ನೂ ನೀಡಿದ್ದರು.

ಅಯೋಧ್ಯೆಯ ಅಭಿವೃದ್ಧಿ ಕಂಡು ಮೋದಿ-ಯೋಗಿಯನ್ನು ಹೊಗಳಿದ 19 ವರ್ಷದ ಪತ್ನಿಗೆ ತಲಾಖ್ ಕೊಟ್ಟ ಗಂಡ!

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಬಳಕೆ ಕುರಿತು ನಡೆಯುತ್ತಿರುವ ಚರ್ಚೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮತ್ತಷ್ಟು ಗಮನ ಸೆಳೆದಿದೆ. ಸೋಮವಾರ, ನ್ಯಾಯಾಲಯವು ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮಗಳ ಬಗ್ಗೆ ಔಪಚಾರಿಕ ಮಾರ್ಗಸೂಚಿಗಳ ಅಗತ್ಯವನ್ನು ಸೂಚಿಸಿತು. ಕೇವಲ ಆರೋಪಿಯಾಗಿರುವ ಮಾತ್ರಕ್ಕೆ ಆತನ ಮನೆಯನ್ನು ಕೆಡವಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ರಚನಾತ್ಮಕ ವಿಧಾನದ ಅಗತ್ಯವನ್ನು ಒತ್ತಿ ಹೇಳಿದೆ.

ಅಖಿಲೇಶ್‌ ಯಾದವ್ ಅವರು ಸುಪ್ರೀಂ ಕೋರ್ಟ್‌ನ ನಿಲುವನ್ನು ಸ್ವಾಗತಿಸಿದರು, ಇದು ಬುಲ್ಡೋಜರ್‌ಗಳನ್ನು ದಂಡನಾತ್ಮಕ ಕ್ರಮಗಳಿಗೆ ಬಳಸುವ ಅಸಂವಿಧಾನಿಕತೆಯ ಅಂಗೀಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಗಮನಿಸಿದರು. ಈ ನ್ಯಾಯಾಂಗ ಹಸ್ತಕ್ಷೇಪವು ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದರು.

Latest Videos
Follow Us:
Download App:
  • android
  • ios