Asianet Suvarna News Asianet Suvarna News

ಭಾರತ ಹಿಂದೂ ರಾಷ್ಟ್ರ: ಸುರಕ್ಷತೆಗಾಗಿ ಹಿಂದೂ ಸಮಾಜ ಒಗ್ಗೂಡಬೇಕು: ಭಾಗವತ್‌

ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಅವರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಉಲ್ಲೇಖಿಸಿ, ಸಮಾಜದ ಸುರಕ್ಷತೆಗಾಗು ಹಿಂದೂ ಸಮಾಜವು ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದ್ದಾರೆ.

Unite for Security: Bhagawat Urges Hindu Society
Author
First Published Oct 7, 2024, 9:49 AM IST | Last Updated Oct 7, 2024, 9:50 AM IST

ಕೋಟಾ: ಭಾರತ ಮೂಲತಃ ಹಿಂದೂ ರಾಷ್ಟ್ರ ಎಂದು ಹೇಳಿರುವ ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌, ಹಿಂದೂ ಸಮಾಜವು ಭಾಷೆ, ಜಾತಿ, ಪ್ರಾದೇಶಿಕ ವಿವಾದಗಳ ಭಿನ್ನತೆಯನ್ನು ಮರೆತು ತನ್ನ ಸುರಕ್ಷತೆಗಾಗಿ ಒಗ್ಗೂಡಬೇಕು ಹಾಗೂ ಇತರರನ್ನೂ (ಇತರ ಸಮಾಜಗಳನ್ನೂ) ತನ್ನ ಜತೆಗೆ ಕರೆದುಕೊಂಡು ಹೋಗಬೇಕು ಎಂದು ಕರೆ ನೀಡಿದ್ದಾರೆ.

ರಾಜಸ್ಥಾನದ ಬರನ್‌ನಲ್ಲಿ ನಡೆದ ಸ್ವಯಂಸೇವಕ ಏಕತ್ರೀಕರಣ ಸಮಾರಂಭದಲ್ಲಿ ಮಾತನಾಡಿದ ಭಾಗವತ್‌, ಭಾರತ ಮೂಲತಃ ಹಿಂದೂ ರಾಷ್ಟ್ರ. ಅನಾದಿ ಕಾಲದಿಂದ ಇಲ್ಲಿ ವಾಸವಿದ್ದೇವೆ . ಆದರೆ ನಂತರ ಹಿಂದೂ ಪದ ಬಂತು. ಹಿಂದೂಗಳು ಎಲ್ಲರನ್ನೂ ತಮ್ಮವರೆಂದು ತಿಳಿದು ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರು. ಜೊತೆಗೆ, ಶಿಸ್ತುಬದ್ಧ ನಡವಳಿಕೆ, ರಾಷ್ಟ್ರದ ಪ್ರತಿಯೊಬ್ಬನ ಕರ್ತವ್ಯ ಮತ್ತು ಗುರಿಗಳ ಹಿಂಬಾಲಿಸಲು ಪ್ರತಿಯೊಬ್ಬನ ಸಮರ್ಪಣೆ ಅಗತ್ಯ ಎಂದರು.

RSS ಭಾರತವನ್ನು ವಿಶ್ವಕ್ಕೆ ಮಾದರಿ ಸಮಾಜವನ್ನಾಗಿಸುತ್ತಿದೆ : ಮೋಹನ್ ಭಾಗವತ್

ಈ ವೇಳೆ, ಸಂಘದ ಕಾರ್ಯವಿಧಾನ ಯಾಂತ್ರಿಕವಲ್ಲ. ಅದು ಕಲ್ಪನೆ ಆಧರಿತ ಎಂದ ಭಾಗವತ್‌, ಇಲ್ಲಿ ಮೌಲ್ಯಗಳು ನಾಯಕರಿಂದ ಸ್ವಯಂಸೇವಕರಿಗೆ, ಅವರ ಪರಿವಾರಕ್ಕೆ ಹಾಗೂ ಸಮಾಜಕ್ಕೆ ರವಾನಿಸಲ್ಪಡುತ್ತದೆ ಎಂದರು. ಅಂತೆಯೇ ಸಮಾಜದೊಂದಿಗೆ ಕಾರ್ಯಕರ್ತರು ಸಂಪರ್ಕದಲ್ಲಿರಬೇಕು. ನಮ್ಮ ಗಮನ ಸಾಮಾಜಿಕ ಸಾಮರಸ್ಯ, ನ್ಯಾಯ, ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೇಲಿರಬೇಕು ಎಂದು ಕಿವಿಮಾತು ಹೇಳಿದರು. ಭಾರತದ ಜಾಗತಿಕ ಖ್ಯಾತಿ ಮತ್ತು ಸ್ಥಾನ ಅದರ ಶಕ್ತಿಯಿಂದ ದೊರೆತಿದ್ದು. ರಾಷ್ಟ್ರ ಬಲಶಾಲಿಯಾದಾಗ ಮಾತ್ರರ ವಲಸಿಗರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯ ಎಂದು ಭಾಗವತ್‌ ಹೇಳಿದರು.

ಕೆಲವರ ತಪ್ಪಿಗೆ ಸಮುದಾಯ ದೂಷಣೆ ತಪ್ಪು: ಭಾಗವತ್‌

Latest Videos
Follow Us:
Download App:
  • android
  • ios