ಯುಎಇ ಸರ್ಕಾರವು 23 ಲಕ್ಷ ರೂ.ಗೆ ಜೀವಿತಾವಧಿ ಗೋಲ್ಡನ್ ವೀಸಾ ನೀಡುತ್ತಿದೆ ಎಂಬ ವದಂತಿಯನ್ನು ನಿರಾಕರಿಸಿದೆ. ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ಮಾಹಿತಿ ಲಭ್ಯ ಎಂದು ಸ್ಪಷ್ಟಪಡಿಸಿದೆ.
India News Live: 23 ಲಕ್ಷ ರೂ.ಗೆ ಗೋಲ್ಡನ್ ವೀಸಾ ವದಂತಿ ಸುಳ್ಳು - ಯುಎಇ ಸ್ಪಷ್ಟನೆ

ಬೆಂಗಳೂರು (ಜುಲೈ 9): ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್ ಕೈಗಾರಿಕಾ ಪ್ರದೇಶದ ಮಾಸ್ಟರ್ ಪ್ಲಾನ್ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಎಚ್ಬಿಐಸಿ)ನ ಭಾಗವಾಗಿ ನಿರ್ಮಿಸುತ್ತಿರುವ ಇದು ಕರ್ನಾಟಕದ ಬಳ್ಳಾರಿಗೆ ಹೊಂದಿಕೊಂಡಿರುವ ಕರ್ನೂಲ್ ಜಿಲ್ಲೆಯಲ್ಲಿದೆ. ಬೆಂಗಳೂರು, ತಮಿಳು ನಾಡು, ತೆಲಂಗಾಣದ ಕೈಗಾರಿಕೆಗಳನ್ನು ಇದು ಸೆಳೆಯುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 9h July: 23 ಲಕ್ಷ ರೂ.ಗೆ ಗೋಲ್ಡನ್ ವೀಸಾ ವದಂತಿ ಸುಳ್ಳು - ಯುಎಇ ಸ್ಪಷ್ಟನೆ
India News Live 9h July: ಮತ್ತೆ 6 ದೇಶಗಳ ಮೇಲೆ ಹೊಸ ತೆರಿಗೆ ಘೋಷಿಸಿದ ಡೊನಾಲ್ಡ್ ಟ್ರಂಪ್! ಭಾರತದ ಮೇಲೆಷ್ಟು ಟ್ಯಾಕ್ಸ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ದೇಶಗಳ ಮೇಲೆ ಹೊಸ ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ತೆರಿಗೆಯು ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ.
India News Live 9h July: ಅಂಧರಿಗಾಗಿ 50 ರೂ. ನಾಣ್ಯ ಬರುತ್ತಾ? RBI ಸ್ಪಷ್ಟನೆ
RBI ಸಮೀಕ್ಷೆಯ ಪ್ರಕಾರ ಜನರು ನೋಟುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ಸರ್ಕಾರದ ವಾದ.
India News Live 9h July: ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಮುಂದಿನ ಪ್ಲಾನ್ ಏನು?
Amit Shah political retirement: ಸಹಕಾರದ ಮೂಲಕ ಸಮೃದ್ಧಿ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಗ್ರಾಮೀಣ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
India News Live 9h July: ಗೂಗಲ್ ಕಂಪನಿ ಉದ್ಯೋಗಿ ತಿಂಗಳ ಖರ್ಚು ₹4.28; ಬೇರೆ ಕಂಪನಿಗಳಲ್ಲಿ ವರ್ಷಕ್ಕೆ ಇಷ್ಟು ಸಂಬಳನೂ ಕೊಡಲ್ಲ!
ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯಾಗಿರುವ ಗೂಗಲ್ನಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಉದ್ಯೋಗಿ ಮೈತ್ರಿ ಮಂಗಲ್ ಅವರ ಮಾಸಿಕ ಖರ್ಚು 4.28 ಲಕ್ಷ ರೂ. ಆಗಿದೆ. ಅಂದರೆ, ಬಹುತೇಕ ಕಂಪನಿಗಳು ಫ್ರೆಶರ್ಸ್ಗೆ ಕೊಡುವ ವಾರ್ಷಿಕ ಸಂಬಳ ಇದಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
India News Live 9h July: ಮೊಮ್ಮಗಳ ಪರೀಕ್ಷೆಗೆ ಸಿದ್ಧಪಡಿಸುತ್ತ ತಾವೇ ಸಿಎ ಪಾಸ್ ಮಾಡಿದ ತಾತ - ಲಕ್ಷಾಂತರ ಜನರಿಗೆ ಸ್ಪೂರ್ತಿ 71ರ ತಾರಾಚಂದ್
ಜೈಪುರದ 71 ವರ್ಷದ ತಾರಾಚಂದ್ ಅಗರ್ವಾಲ್ ಅವರು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ಮೊಮ್ಮಗಳಿಗೆ ಅಧ್ಯಯನದಲ್ಲಿ ಸಹಾಯ ಮಾಡುವಾಗ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತು ಎಂದು ಅವರು ಹೇಳಿದ್ದಾರೆ.
India News Live 9h July: ಯೆಮೆನ್ನಲ್ಲಿ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ತಡೆಗೆ ಆ ಕುಟುಂಬದ ನಿರ್ಧಾರವೇ ಮುಖ್ಯ!
ಕೊಲೆ ಪ್ರಕರಣದಲ್ಲಿ ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜು.16ರಂದು ಗಲ್ಲಿಗೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
India News Live 9h July: ಆಪಲ್ನ COO ಆಗಿ ಭಾರತೀಯ ಮೂಲದ ಸಬಿಹ್ ಖಾನ್ ನೇಮಕ; ಯಾವ ರಾಜ್ಯದವರು?
ಟೆಕ್ ದೈತ್ಯ ಆಪಲ್, ಭಾರತೀಯ ಮೂಲದ ಸಬಿಹ್ ಖಾನ್ ಅವರನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ (COO) ನೇಮಿಸಿದೆ.
India News Live 9h July: ಬಾಹ್ಯಾಕಾಶ ಅನ್ವೇಷಣೆಯ 14 ದಿನಗಳು - ಐಎಸ್ಎಸ್ನಲ್ಲಿ ಶುಭಾಂಶು ಶುಕ್ಲಾ ಸಾಧನೆಗಳು
India News Live 9h July: ಪಾಕಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ, ಭಯಭೀತರಾಗಿ ದಿಕ್ಕಪಾಲಾಗಿ ಓಡಿದ ಜನ
India News Live 9h July: ಬಂಜೆತನ ನಿವಾರಿಸ್ತಿನಿ ಅಂತ ಟಾಯ್ಲೆಟ್ ನೀರು ಕುಡಿಸಿದ ಮಂತ್ರವಾದಿ - ಮಹಿಳೆ ಸಾವು
ಮಕ್ಕಳಾಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕುಟುಂಬಸ್ಥರು ಮಾಂತ್ರಿಕನ ಬಳಿ ಕರೆದೊಯ್ದಿದ್ದು, ಆತ ಆಕೆಗೆ ಟಾಯ್ಲೆಟ್ ನೀರು ಕುಡಿಸಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.
India News Live 9h July: 15 ಅಡಿ ಉದ್ದದ ಹೆಬ್ಬಾವು ಹಿಡಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಮಕ್ಕಳು
India News Live 9h July: ಕೆಲಸಕ್ಕೆ ಹೋದ ಮೊದಲ ದಿನವೇ 40 ಲಕ್ಷ ಮೌಲ್ಯದ ವಜ್ರ ಸಂಪಾದಿಸಿದ ಆದಿವಾಸಿ ಕಾರ್ಮಿಕ!
ಪನ್ನಾದ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಗಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬುಡಕಟ್ಟು ಯುವಕನೊಬ್ಬ ಇದೇ ಮೊದಲ ಬಾರಿಗೆ ಗಣಿ ಅಗೆದಾಗ ಆತ ನಿರೀಕ್ಷೆಯಯೇ ಮಾಡದ ಉಡುಗೊರೆ ಸಿಕ್ಕಿದೆ. ಮೊದಲ ದಿನವೇ ಆತನಿಗೆ ಜಾಕ್ಪಾಟ್ ಹೊಡೆದಿದೆ.
India News Live 9h July: ಗುಜರಾತ್ನಲ್ಲಿ ಮತ್ತೊಂದು ದೊಡ್ಡ ದುರಂತ - ಮಹಿಸಾಗರ್ ನದಿಯ ಸೇತುವೆ ಕುಸಿದು 3 ಜನರು ಸಾವು, ಐವರ ರಕ್ಷಣೆ, ಕೆಳಗೆ ಬಿದ್ದ ವಾಹನಗಳು ಶಾಕಿಂಗ್ ವಿಡಿಯೋ!
India News Live 9h July: ನಟಿ ಆಲಿಯಾ ಭಟ್ಗೆ ಮಹಾವಂಚನೆ, ಕರ್ನಾಟಕ ಮೂಲದ ಮಾಜಿ ಸಹಾಯಕಿ ಬಂಧನ
ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಅವರು 2025ರ ಜನವರಿ 23 ರಂದು ಪೊಲೀಸ್ ದೂರು ದಾಖಲಿಸಿದ್ದರು.
India News Live 9h July: ದೀಪಾವಳಿಗೂ ಮುನ್ನವೇ 4 ಸಾವಿರ ಕೋಟಿ ಬಡ್ಡಿ ಪಾವತಿ ಮಾಡಿ ಮೆಚ್ಚುಗೆ ಪಡೆದ ಇಪಿಎಫ್ಓ
ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಅಥವಾ ವರ್ಷಾಂತ್ಯದ ವೇಳೆ ಬಡ್ಡಿ ಪಾವತಿ ಮಾಡುತ್ತಿದ್ದ ಇಪಿಎಫ್ಓ ಈ ಬಾರಿ ಜುಲೈ ಮೊದಲ ವಾರದಲ್ಲಿಯೇ ಬಹುತೇಕ ಖಾತೆಗಳಿಗೆ ಬಡ್ಡಿ ಜಮೆ ಮಾಡಿ ಮೆಚ್ಚುಗೆ ಸಂಪಾದಿಸಿದೆ.
India News Live 9h July: ಕರ್ನಾಟಕ ಉದ್ಯಮ ಸೆಳೆವ ಕೈಗಾರಿಕಾ ಕಾರಿಡಾರ್ಗೆ ಆಂಧ್ರದ ಮಾಸ್ಟರ್ ಪ್ಲಾನ್
ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್ ಕೈಗಾರಿಕಾ ಪ್ರದೇಶದ ಮಾಸ್ಟರ್ ಪ್ಲಾನ್ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.
India News Live 9h July: 6ನೇ ಕ್ಲಾಸ್ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಸಮೀಕ್ಷೆ
ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು ಮಕ್ಕಳಿಗೆ 10ರ ವರೆಗಿನ ಮಗ್ಗಿ ಬರುತ್ತದೆ ಎಂದು ತಿಳಿದುಬಂದಿದೆ.
India News Live 9h July: 12 ವರ್ಷ ಒಂದು ದಿನವೂ ಸೇವೆ ಸಲ್ಲಿಸದೇ 35 ಲಕ್ಷ ವೇತನ ಪಡೆದ ಪೊಲೀಸ್
ಪೊಲೀಸ್ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
India News Live 9h July: ನಾಳೆ ಮರಳಿ ಭೂಮಿಯತ್ತ ಶುಕ್ಲಾ ಪ್ರಯಾಣ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಯಾನಿಗಳು ಜು.10ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ. ಆದರೆ ಮರಳುವ ಸಮಯವು ಭೂಮಿಯಲ್ಲಿನ ಹವಾಮಾನ ಪರಿಸ್ಥಿತಿಯ ಮೇಲೆಯೂ ಅವಲಂಬಿತವಾಗಿರುತ್ತದೆ.
ADVERTISEMENT