11:39 PM (IST) Apr 11

India News Live 11th April: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಸಿಎಸ್‌ಕೆ; ಮ್ಯಾಚ್ ಗೆಲ್ಲಿಸಿದ ಶತಕ ವೀರ ಸಂಜು ಸ್ಯಾಮ್ಸನ್!

ಹ್ಯಾಟ್ರಿಕ್ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿ ಗೆಲುವಿನ ಖಾತೆ ತೆರೆದಿದೆ. ಸಂಜು ಸ್ಯಾಮ್ಸನ್ ಅವರ ಅಜೇಯ ಶತಕ (115*) ಹಾಗೂ ಜೇಮಿ ಓವರ್‌ಟನ್ ಅವರ ಮಾರಕ ಬೌಲಿಂಗ್ (4 ವಿಕೆಟ್) ಸಿಎಸ್‌ಕೆ ಗೆಲುವಿಗೆ ಕಾರಣವಾದರೆ, ಡೆಲ್ಲಿ ಪರ ಟ್ರಿಸ್ಟಿನ್ ಸ್ಟಬ್ಸ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
Read Full Story
10:33 PM (IST) Apr 11

India News Live 11th April: 6 ವರ್ಷದ ಪುತ್ರಿ ಜೊತೆ ಮೊದಲ ಬಾರಿ ನಟಿ Shilpa Shetty - ಬಾಡಿಗೆ ತಾಯ್ತನದಿಂದ ಹುಟ್ಟಿದ ಪುಟಾಣಿ ಸ್ಟೋರಿ

ನಟಿ ಶಿಲ್ಪಾ ಶೆಟ್ಟಿ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗುವನ್ನು ಪಡೆದ ಹಿಂದಿನ ನೋವಿನ ಕಥೆಯನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಪತಿ ರಾಜ್ ಕುಂದ್ರಾ ಅವರ ನೀಲಿ ಚಿತ್ರ ಪ್ರಕರಣದ ವಿವಾದ ಮತ್ತು ಆ ಬಿರುಗಾಳಿಯ ನಂತರ ದಂಪತಿಯ ಜೀವನದ ಕುರಿತು ಬೆಳಕು ಚೆಲ್ಲುತ್ತದೆ.
Read Full Story
10:12 PM (IST) Apr 11

India News Live 11th April: ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​

ತನ್ನನ್ನು ಆದಿತ್ಯ ಎಂದು ಪರಿಚಯಿಸಿಕೊಂಡ ಅಬ್ದುಲ್ಲ ಎಂಬ ಯುವಕ, ದಲಿತ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಸ್ನೇಹದ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ತನ್ನ ನಿಜಬಣ್ಣ ಬಯಲಾಗುತ್ತಿದ್ದಂತೆ ಇಸ್ಲಾಂಗೆ ಮತಾಂತರವಾಗುವಂತೆ ಬೆದರಿಕೆ ಹಾಕಿದ ಆತಂಕಕಾರಿ ಘಟನೆ ಇದು.
Read Full Story
10:05 PM (IST) Apr 11

India News Live 11th April: Asha Bhosle - ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ, ಗಂಭೀರ? ಐಸಿಯುನಲ್ಲಿ ಚಿಕಿತ್ಸೆ

ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಹೃದಯಾಘಾತದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆನೋವು ಮತ್ತು ಸೋಂಕಿನಿಂದ ಬಳಲುತ್ತಿರುವುದಾಗಿ ಅವರ ಮೊಮ್ಮಗಳು ಖಚಿತಪಡಿಸಿದ್ದು, ವದಂತಿಗಳಿಗೆ ಕಿವಿಗೊಡದಂತೆ ಕುಟುಂಬ ಮನವಿ ಮಾಡಿದೆ.
Read Full Story
10:03 PM (IST) Apr 11

India News Live 11th April: ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್ - ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ

ರಾಜಸ್ತಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕಿವಿಯಲ್ಲಿದ್ದ ಜೆಬಿಎಲ್ ಇಯರ್‌ಬಡ್ ಸ್ಫೋಟಗೊಂಡು ಕಿವಿಗೆ ಹಾನಿಯಾಗಿದೆ. ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
09:42 PM (IST) Apr 11

India News Live 11th April: ಪರೀಕ್ಷೆ ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ ಅನನ್ಯಾ ಪಾಂಡೆ ಕೊಟ್ಟ ಸಿಂಪಲ್ ಟಿಪ್ಸ್

ಅನನ್ಯಾ ಪಾಂಡೆ ನಿಕ್ ಚಾನೆಲ್‌ನ ಜನಪ್ರಿಯ ಪಾತ್ರಗಳಾದ ಚಿಕೂ ಮತ್ತು ಬಂಟಿ ಜೊತೆ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಪರೀಕ್ಷೆಯ ಚಿಂತೆಗಳನ್ನು ಬಲೂನ್‌ಗಳ ಮೇಲೆ ಬರೆದು..

Read Full Story
09:41 PM (IST) Apr 11

India News Live 11th April: ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು!

ವಿಶ್ವದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ, ದೇಶಗಳು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಿವೆ. ಅಚ್ಚರಿಯ ವಿಷಯವೆಂದರೆ, ಫೆಬ್ರವರಿ ತಿಂಗಳಿನಲ್ಲಿ ಪೋಲೆಂಡ್ ಮತ್ತು ಉಜ್ಬೇಕಿಸ್ತಾನ್‌ನಂತಹ ಸಣ್ಣ ದೇಶಗಳು ಚಿನ್ನ ಖರೀದಿಯಲ್ಲಿ ಭಾರತ ಮತ್ತು ಚೀನಾವನ್ನು ಹಿಂದಿಕ್ಕಿವೆ.
Read Full Story
09:16 PM (IST) Apr 11

India News Live 11th April: Tripti Dimri - ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ 'ಅನಿಮಲ್' ಬೆಡಗಿ!

ತೃಪ್ತಿ ದಿಮ್ರಿ ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾಗಿರುವುದು ಕೇವಲ ಸೆಲೆಬ್ರಿಟಿ ಒಪ್ಪಂದವಲ್ಲ.ಇದೊಂದು ಸಾಂಸ್ಕೃತಿಕ ಮೈಲಿಗಲ್ಲು. ದಶಕಗಳಿಂದ ಪಾಶ್ಚಿಮಾತ್ಯ ಸೌಂದರ್ಯವನ್ನೇ..

Read Full Story
09:00 PM (IST) Apr 11

India News Live 11th April: ಅಟ್ಲಿ ಕಾಪಿ ಮಾಡಿದ್ದು ನಿಜಾನಾ? ಅಲ್ಲು ಅರ್ಜುನ್ ಚಿತ್ರದ 'ರಾಕಾ' ಪದದ ಅಸಲಿ ಅರ್ಥವೇನು?

ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿರುವ ಬಿಗ್ ಬಜೆಟ್ ಚಿತ್ರಕ್ಕೆ 'ರಾಕಾ' ಎಂದು ಹೆಸರಿಡಲಾಗಿದೆ. ಈ ಪದದ ಅರ್ಥವೇನು ಮತ್ತು ಈ ಚಿತ್ರದ ಕುರಿತ ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

Read Full Story
08:26 PM (IST) Apr 11

India News Live 11th April: ಪತಿಗಾಗಿ ರೂಲ್ಸ್ ಬ್ರೇಕ್ ಮಾಡಿದ ನಟಿ ನಯನತಾರಾ - ವೇದಿಕೆಯಲ್ಲೇ ಭಾವುಕರಾಗಿದ್ದೇಕೆ ವಿಘ್ನೇಶ್ ಶಿವನ್?

ನಯನತಾರಾ ಬಗ್ಗೆ ಗೊತ್ತಿರುವವರಿಗೆ ಅವರ ಒಂದು ರೂಲ್ಸ್ ಕೂಡ ಚೆನ್ನಾಗಿ ಗೊತ್ತು. ಅದೇನೆಂದರೆ, ಅವರು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಇದು ಅವರ ಸಿನಿಮಾ ಕಾಂಟ್ರ್ಯಾಕ್ಟ್‌ನಲ್ಲಿರೋ ಒಂದು ಕಡ್ಡಾಯ ಷರತ್ತು ಕೂಡ.

Read Full Story
08:18 PM (IST) Apr 11

India News Live 11th April: ಭಾರತದ ಎಲ್‌ಪಿಜಿ ಪೂರೈಕೆಗೆ ಹೊಸ ಭರವಸೆ? ಹರ್ಮೋಜ್ ಜಲಸಂಧಿ ದಾಟಿದ ಜಗ್ ವಿಕ್ರಮ್ ನೌಕೆ

ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಎಲ್‌ಪಿಜಿ ಕೊರತೆಯ ನಡುವೆ, 20,400 ಟನ್ ಎಲ್‌ಪಿಜಿ ಹೊತ್ತ 'ಜಗ್ ವಿಕ್ರಮ್' ನೌಕೆಯು ಹರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ನೌಕೆಯು ಭಾರತದತ್ತ ಆಗಮಿಸುತ್ತಿದ್ದು, ದೇಶದ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ನಿರೀಕ್ಷೆ ಮೂಡಿಸಿದೆ.
Read Full Story
08:04 PM (IST) Apr 11

India News Live 11th April: ರಾಕಾ ಪೋಸ್ಟರ್‌ಗೆ ಶಾರುಖ್ ಖಾನ್ ಫಿದಾ - ಅಲ್ಲು ಅರ್ಜುನ್ ಲುಕ್ 'ಮಾಸ್ ಮಾಸ್ ಮಾಸ್' ಎಂದ ಕಿಂಗ್ ಖಾನ್

ಸೂಪರ್‌ಸ್ಟಾರ್ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ಅವರ ಮುಂಬರುವ 'ರಾಕಾ' ಸಿನಿಮಾದ ಫಸ್ಟ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್ ಅವರ ಲುಕ್ 'ಇಂಟರೆಸ್ಟಿಂಗ್ ಮತ್ತು ಅದ್ಭುತವಾಗಿದೆ' ಎಂದು ಅವರು ಹೊಗಳಿದ್ದಾರೆ.

Read Full Story
07:43 PM (IST) Apr 11

India News Live 11th April: ಭೂಮಿಗೆ ಭಾರವಾದ ಜನಸಂಖ್ಯೆ - ನಾವಿರೋದು 8.3 ಶತಕೋಟಿ - ಆದರೆ ಭೂಮಿಯ ಸಾಮರ್ಥ್ಯ ಇರೋದೆಷ್ಟು?

ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿದರೆ ಅದು ಹೇಗೆ ಮುಳುಗುವುದೋ ಹಾಗೆಯೇ ಭೂಮಿ ಮೇಲಿನ ಮಿತಿ ಮೀರಿದ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಅತೀವ ಒತ್ತಡ ಉಂಟಾಗಿದೆಯಂತೆ. ಹಾಗಿದ್ದರೆ ಭೂಮಿಯ ಸಾಮರ್ಥ್ಯ ಎಷ್ಟು ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

Read Full Story
07:11 PM (IST) Apr 11

India News Live 11th April: 'Jana Nayagan' ಲೀಕ್ ಆಗಿದ್ದಕ್ಕೆ ಬೇಜಾರು - ದಯವಿಟ್ಟು ಥಿಯೇಟರ್‌ನಲ್ಲೇ ನೋಡಿ ಎಂದ ನಟಿ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ, 'ಜನ ನಾಯಗನ್' ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆಲೆ ಕೊಡಿ, ಪೈರಸಿ ಪ್ರೋತ್ಸಾಹಿಸಬೇಡಿ, ವಿಜಯ್ ಅವರ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Read Full Story
06:47 PM (IST) Apr 11

India News Live 11th April: 'ಹೀರೋಗಳ ಹಿಂದೆ ಬಿದ್ದು ಲೈಫ್ ಹಾಳ್ ಮಾಡ್ಕೋಬೇಡಿ' - ಯುವಕರಿಗೆ ರಜನಿಕಾಂತ್ ಖಡಕ್ ಎಚ್ಚರಿಕೆ

ಯುವಕರು ತಮ್ಮ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸ್ಟಾರ್‌ಗಳ ಮೇಲಿನ ಅತಿಯಾದ ಅಭಿಮಾನದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯುವಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Read Full Story
06:44 PM (IST) Apr 11

India News Live 11th April: ಫೋನ್ ಕಳ್ಳತನಕ್ಕಾಗಿಯೇ ಐಪಿಎಲ್ ಮ್ಯಾಚ್‌ಗೆ ವಿಮಾನವೇರಿ ಬರ್ತಿದ್ದ ಹೈಟೆಕ್ ಕಳ್ಳರು - ಸ್ಟೇಡಿಯಂನಲ್ಲಿ ಫೋನ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್

ಐಪಿಎಲ್ ಪಂದ್ಯಗಳ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೈಟೆಕ್ ಕಳ್ಳರ ಜಾಲವನ್ನು ಅಹ್ಮದಾಬಾದ್ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮತ್ತು ಅಹ್ಮದಾಬಾದ್ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.

Read Full Story
06:25 PM (IST) Apr 11

India News Live 11th April: The Paradise - ಯೂಟ್ಯೂಬ್ ಶೇಕ್ ಮಾಡಿದ 'ಆಯಾ ಶೇರ್' ಹಾಡು - ನಾನಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ತೆಲುಗು ನಟ ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರದ 'ಆಯಾ ಶೇರ್' ಹಾಡು ಯೂಟ್ಯೂಬ್‌ನಲ್ಲಿ 101 ಮಿಲಿಯನ್ ವೀಕ್ಷಣೆ ದಾಟಿದೆ. 'ದಸರಾ' ಬಳಿಕ ನಾನಿ-ಶ್ರೀಕಾಂತ್ ಒಡೆಲಾ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

Read Full Story
06:02 PM (IST) Apr 11

India News Live 11th April: ಚಪ್ಪಾಳೆ ಬದಲು ಜನ ಕೂಗಿದ್ರು, ಆ 7 ನಿಮಿಷ 7 ವರ್ಷದಂತಿತ್ತು - 'ಕಸಬ' ವಿವಾದದ ಬಗ್ಗೆ ಮಿಲನ ನಟಿ ಮಾತು

'ಕಸಬ' ಸಿನಿಮಾ ಬಗ್ಗೆ ಟೀಕೆ ಮಾಡಿದ ನಂತರ ನಡೆದ ವಿವಾದಗಳ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಮಾತನಾಡಿದ್ದಾರೆ. ಮಮ್ಮುಟ್ಟಿ ಜೊತೆ ಮಾತನಾಡಿದರೂ, ಅವರ ಪ್ರತಿಕ್ರಿಯೆ ತಡವಾದ ಕಾರಣ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ಪಾರ್ವತಿ ಹೇಳಿದ್ದಾರೆ.

Read Full Story
05:45 PM (IST) Apr 11

India News Live 11th April: Varanasi Sadhus - ಎಲ್ಲಾ ಸುಳ್ಳು ಸ್ವಾಮಿ..! ವಾರಣಾಸಿಯ ಶೇ. 40ರಷ್ಟು ಸಾಧುಗಳು ಕ್ರಿಮಿನಲ್‌ಗಳು ಎಂದ ನಟ ಆರ್ಯ

ನಟ ಆರ್ಯ ಅವರು 'ನಾನ್ ಕಡವುಳ್' ಸಿನಿಮಾ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಾರಣಾಸಿಯಲ್ಲಿರುವ ಸಾಧುಗಳಲ್ಲಿ ಶೇ. 40ರಷ್ಟು ಮಂದಿ, ಅಪರಾಧ ಮಾಡಿ ತಲೆಮರೆಸಿಕೊಂಡಿರುವ ಕ್ರಿಮಿನಲ್‌ಗಳು ಎಂದು ಆರ್ಯ ಗಂಭೀರ ಆರೋಪ ಮಾಡಿದ್ದಾರೆ.

Read Full Story
05:32 PM (IST) Apr 11

India News Live 11th April: ಮತ್ತೆ 11 ಸಾವಿರ ನೌಕರರ ಮನೆಗೆ ಕಳುಹಿಸಿದ Dell ಕಂಪೆನಿ - ರಾಜ್ಯವೂ ಸೇರಿ ವಿವಿಧೆಡೆ ಸಾಮೂಹಿಕ ವಜಾ

ಡೆಲ್ ಕಂಪನಿಯು ಈ ವರ್ಷ 11 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆ 97 ಸಾವಿರಕ್ಕೆ ಇಳಿದಿದೆ. ಶಿಸ್ತುಬದ್ಧ ವೆಚ್ಚ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ (AI) ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದೇ ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವೆಂದು ಕಂಪನಿ ತಿಳಿಸಿದೆ. ಈ ಬೆಳವಣಿಗೆಯು ಟೆಕ್ ಉದ್ಯಮದಲ್ಲಿ AI ನಿಂದಾಗಿ ಹೆಚ್ಚುತ್ತಿರುವ ಉದ್ಯೋಗ ನಷ್ಟದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Read Full Story