- Home
- News
- India News
- National News Live: IPL 2026 - ನಿನ್ನೆ ತಡರಾತ್ರಿ ನಡೆದ ಆರ್ಸಿಬಿ vs ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
National News Live: IPL 2026 - ನಿನ್ನೆ ತಡರಾತ್ರಿ ನಡೆದ ಆರ್ಸಿಬಿ vs ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ನವದೆಹಲಿ (ಏ.11): 40 ದಿನಗಳ ಮಧ್ಯಪ್ರಾಚ್ಯ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ಹುಟ್ಟಿನಲ್ಲಿ ಶನಿವಾರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಸಂಧಾನ ಸಭೆಗೂ ಮುನ್ನ ಇರಾನ್ಗೆ ಮತ್ತೆ 24 ಗಂಟೆಗಳ ಡೆಡ್ಲೈನ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನಿಯನ್ನರ ಮುಂದೆ ಬೇರೆ ಯಾವುದೇ ಅವಕಾಶವೇ ಉಳಿದಿಲ್ಲ. ಇರಾನಿಯನ್ನರು ಬದುಕಿರೋದೇ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಲು. ಪಾಕಿಸ್ತಾನದ ಮಾತುಕತೆಯಲ್ಲಿ ಯಾವುದೇ ಡೀಲ್ ಹೊರಹೊಮ್ಮದೇ ಇದ್ದರೆ ನಾವು ಇರಾನ್ ಮೇಲೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಸುತ್ತೇವೆ' ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 11th April: IPL 2026 - ನಿನ್ನೆ ತಡರಾತ್ರಿ ನಡೆದ ಆರ್ಸಿಬಿ vs ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
India News Live 11th April: Justice Yashwant Varma resignation - ನ್ಯಾ। ವರ್ಮಾ ಕೊನೆಗೂ ರಾಜೀನಾಮೆ! ವಾಗ್ದಂಡನೆ ವಿಚಾರಣೆಯಿಂದ ಪಾರು, ಸಿಗಲಿದೆ ಪಿಂಚಣಿ
ಮನೆಯಲ್ಲಿ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧ ವಾಗ್ದಂಡನೆ ಪ್ರಕ್ರಿಯೆ ಎದುರಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್ನ ನ್ಯಾ। ಯಶವಂತ್ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನಿಖಾ ಸಮಿತಿಯ ಮುಂದೆ ಹಾಜರಾಗುವ ಮುನ್ನವೇ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡಿವಾಗ್ದಂಡನೆಯಿಂದ ಬಚಾವ್.
India News Live 11th April: ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ - ಭೂಮಿಗೆ ಮರಳಿದ ಆರ್ಟೆಮಿಸ್ 2 ಗಗನಯಾತ್ರಿಗಳು; ನಾಸಾದ ಚಂದ್ರಯಾನ ದಿಗ್ವಿಜಯ!
ನಾಸಾದ ಆರ್ಟೆಮಿಸ್ II ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ 10 ದಿನಗಳ ಐತಿಹಾಸಿಕ ಪಯಣದಲ್ಲಿ, ಗಗನಯಾತ್ರಿಗಳು ಅತಿ ಹೆಚ್ಚು ದೂರ ಪ್ರಯಾಣಿಸಿದ ದಾಖಲೆ ನಿರ್ಮಿಸಿದೆ.
India News Live 11th April: West bengal assembly election 2026 ಬಂಗಾಳ ಚುನಾವಣೆಗೆ ಕರ್ನಾಟಕ ರೀತಿ ಬಿಜೆಪಿಯಿಂದ ಗ್ಯಾರೆಂಟಿ ಭರವಸೆ!
ಪಶ್ಚಿಮ ಬಂಗಾಳ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಬಿಜೆಪಿ 'ಸಂಕಲ್ಪ ಪತ್ರ'ವನ್ನು ಬಿಡುಗಡೆ. ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿಯುಸಿಸಿ ಜಾರಿ, ಮಹಿಳೆಯರಿಗೆ ಆರ್ಥಿಕ ನೆರವು, ಯುವಕರಿಗೆ ಮಾಸಿಕ ಭತ್ಯೆ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಯಂತಹ ಪ್ರಮುಖ ಭರವಸೆಗಳನ್ನು ಒಳಗೊಂಡಿದೆ.
India News Live 11th April: ಭಾರತದ ಸೇನಾ ಓಡಾಟದ ಬಗ್ಗೆ ಪಾಕ್ಗೆ ಲೈವ್ ಪ್ರಸಾರ! 11 ದೇಶದ್ರೋಹಿಗಳ ಸೆರೆ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ನಿಷೇಧಿತ ಬಬ್ಬರ್ ಖಾಲ್ಸಾ ಉಗ್ರರ ಮೂಲಕ ಭಾರತದ 4 ರಾಜ್ಯಗಳ ಸೇನಾ ನೆಲೆಗಳ ಬಳಿ ಸಿಸಿಟಿವಿ ಅಳವಡಿಸಿತ್ತು. ಈ ಮೂಲಕ ಭಾರತೀಯ ಸೇನೆಯ ಚಲನವಲನಗಳನ್ನು ನೇರವಾಗಿ ವೀಕ್ಷಿಸುತ್ತಿದ್ದ ಬೇಹುಗಾರಿಕಾ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, 11 ಮಂದಿ ಸೆರೆ.
India News Live 11th April: ಇರಾನ್ ಕದನ ನಿಲ್ಲಿಸಿದ್ದೇ ನಾನು ಎಂದಿದ್ದ ಪಾಕ್ ಮತ್ತೆ ಬೆತ್ತಲು; ಸಂದೇಶ ಬರೆದುಕೊಟ್ಟಿದ್ದೇ ಅಮೆರಿಕ, ಸ್ಫೋಟಕ ವರದಿ ಬಯಲು!
ಅಮೆರಿಕ-ಇರಾನ್ ನಡುವಿನ ಸಂಧಾನದ ಕೀರ್ತಿ ಪಡೆಯಲು ಯತ್ನಿಸಿದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಅಮೆರಿಕದ ಶ್ವೇತಭವನವೇ ಬರೆದುಕೊಟ್ಟಿತ್ತು ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿಯಲ್ಲಿ ಬಯಲು