ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು, ನಾಗರೀಕತೆ, ಭಾರತದ ಇತಿಹಾಸದಲ್ಲಿ ಸಿಂಧ್ ಪ್ರಾಂತ್ಯ ಅತ್ಯಂತ ಪ್ರಮುಖ. ಸದ್ಯ ಪಾಕಿಸ್ತಾನದಲ್ಲಿರುವ ಸಿಂದ್ ಭಾರತ ಕೈಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
- Home
- News
- India News
- India Latest News Live: ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು
India Latest News Live: ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು

ಪ್ರಯಾಗರಾಜ್: ಕಳೆದ ವರ್ಷ ಅದ್ಧೂರಿ ಕುಂಭಮೇಳ ನಡೆಸಿದ್ದ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 2026ರ ಜ.3ರಿಂದ ಫೆ.15ರವರೆಗೆ ಮಾಘ ಮೇಳ ನಡೆಯಲಿದೆ. ಪುಣ್ಯಸ್ನಾನಕ್ಕೆ 12-15 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಶನಿವಾರ ಮೇಳೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ‘ಜ.3ರಿಂದ ಆರಂಭವಾಗಿ ಫೆ.15 ಶಿವರಾತ್ರಿವರೆಗೆ 6 ಪುಣ್ಯಸ್ನಾನಗಳು ಇರಲಿವೆ. ಇಲ್ಲಿಗೆ 15 ಕೋಟಿ ಭಕ್ತರ ಆಗಮನದ ನಿರೀಕ್ಷೆಯಿದ್ದು ತಯಾರಿ ಆರಂಭವಾಗಿದೆ. ಜನರ ಅನುಕೂಲಕ್ಕಾಗಿ 42 ಪಾರ್ಕಿಂಗ್ ಕೇಂದ್ರ ತೆರೆಯಲಾಗುತ್ತಿದೆ. 7 ಫೋನ್ಟೂನ್ ಸೇತುವೆ, 20 ಹಾಸಿಗೆಯ 2 ಆಸ್ಪತ್ರೆ, 12 ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುರ್ವೇದ ಮತ್ತು ಹೋಮಿಯೋಪಥಿಯ ತಲಾ 5 ಕ್ಲಿನಿಕ್ಗಳು ಇರಲಿವೆ. ಜೊತೆಗೆ ಜನರ ಭದ್ರತೆಗಾಗಿ 17 ಪೊಲೀಸ್ ಸ್ಟೇಷನ್, ನೀರಿನ ಮೇಲಿನ ಠಾಣೆಯನ್ನು ನಿರ್ಮಿಸಲಾಗುತ್ತಿದೆ’ ಎಂದರು. ಮಾಘ ಮೇಳವು ಪ್ರತಿ ವರ್ಷವೂ ನಡೆದರೆ, ಮಹಾಕುಂಭಮೇಳವು 12 ವರ್ಷಗಳಿಗೊಮ್ಮೆ ನಡೆಯುತ್ತದೆ
India Latest News Live 23 November 202ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು
India Latest News Live 23 November 202ದೂರವಾಗಿರೋ ಸಂಗಾತಿ ಜೊತೆ ವಿಡಿಯೋ ಕಾಲ್ ಮೂಲಕ ನಾಯಿ ಸಂಭಾಷಣೆ - ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನಿಂದ ದೂರವಿರುವ ಸಂಗಾತಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಸಂಭಾಷಣೆ ನಡೆಸಿದೆ. ಎರಡೂ ನಾಯಿಗಳು ಊಳಿಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ಅವು ಪರಸ್ಪರ ಮಿಸ್ ಮಾಡಿಕೊಳ್ಳುತ್ತಿರಬಹುದು ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.
India Latest News Live 23 November 202ಸೌತ್ ಆಫ್ರಿಕಾ ವಿರುದ್ಧ ODI ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ಕೆಎಲ್ ರಾಹುಲ್ಗೆ ನಾಯಕತ್ವ
ಸೌತ್ ಆಫ್ರಿಕಾ ವಿರುದ್ಧ ODI ಸರಣಿಗೆ ಭಾರತ ತಂಡ ಪ್ರಕಟ, ಕೆಎಲ್ ರಾಹುಲ್ಗೆ ನಾಯಕತ್ವ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಶುಬಮನ್ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ.
India Latest News Live 23 November 202ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತ, ಮದುವೆ ಸೇರಿ ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಕ್ರಿಕೆಟರ್
ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತ, ಮದುವೆ ಸೇರಿ ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಕ್ರಿಕೆಟರ್, ಸದ್ಯ ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಆರೋಗ್ಯದ ಕುರಿತು ಮ್ಯಾನೇಜರ್ ಅಪ್ಡೇಟ್ ನೀಡಿದ್ದಾರೆ.
India Latest News Live 23 November 202ಹಲವು ಬ್ಯಾಂಕ್ ಮ್ಯಾನೇಜರ್, ಪೊಲೀಸ್ ಅಧಿಕಾರಿಗಳ ಪತ್ನಿ ಈಕೆ! ಖತರ್ನಾಕ್ ಸುಂದರಿಯ ಮಂಚದ ಸ್ಟೋರಿ ಕೇಳಿ
ಸರ್ಕಾರಿ ಅಧಿಕಾರಿಗಳನ್ನು ತನ್ನ ಸೌಂದರ್ಯದಿಂದ ಮರುಳು ಮಾಡಿ, ಮದುವೆಯಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ಉತ್ತರ ಪ್ರದೇಶದ ದಿವ್ಯಾಂಶಿ ಎಂಬ ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 15ಕ್ಕೂ ಹೆಚ್ಚು ಪುರುಷರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಈಕೆ, ಈಗ ಸಿಕ್ಕಿಬಿದ್ದಿದ್ದಾಳೆ.
India Latest News Live 23 November 202ಸಂಭ್ರಮದಲ್ಲಿದ್ದ ಜೋಡಿಗೆ ಶಾಕ್, ಸ್ಮೃತಿ ಮಂಧನಾ ಪಲಾಶ್ ಮದುವೆ ಮುಂದೂಡಿಕೆ
ಸಂಭ್ರಮದಲ್ಲಿದ್ದ ಜೋಡಿಗೆ ಶಾಕ್, ಸ್ಮೃತಿ ಮಂಧನಾ ಪಲಾಶ್ ಮದುವೆ ಮುಂದೂಡಿಕೆ ಮಾಡಲಾಗಿದೆ. ಹಳದಿ, ಸಂಗೀತ್ ಸಮಾರಂಭ ಎಲ್ಲಾ ಕಾರ್ಯಕ್ರಮ ಮುಗಿಸಿದ್ದ ಈ ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.
India Latest News Live 23 November 202ಅಪಘಾತದಲ್ಲಿ ಮೃತಪಟ್ಟ ಖ್ಯಾತ ಗಾಯಕ ಹರ್ಮನ್ ಸಿಧು ಕೊನೆಯ ಪೋಸ್ಟ್ ನೋಡಿ ಕಣ್ಣೀರಿಟ್ಟ ಜನ
ಅಪಘಾತದಲ್ಲಿ ಮೃತಪಟ್ಟ ಖ್ಯಾತ ಗಾಯಕ ಹರ್ಮನ್ ಸಿಧು ಕೊನೆಯ ಪೋಸ್ಟ್ ನೋಡಿ ಕಣ್ಣೀರಿಟ್ಟ ಜನ , ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಹಾಡು, ಆಲ್ಬಮ್ ಪ್ರಮೋಶನ್ ವಿಡಿಯೋ, ಫೋಟೋಗಳನ್ನೇ ಹಾಕುತ್ತಿದ್ದ ಹರ್ಮನ್ ಅಂದು ತನ್ನ ಮುದ್ದಿನ ಮಗಳ ಪೋಸ್ಟ್ ಹಾಕಿದ್ದರು.
India Latest News Live 23 November 202ಶನಿವಾರ ಆಗಸ ನೋಡಲು ಮರೆಯದಿರಿ ಮಾಯವಾಗಲಿದೆ ಶನಿಗ್ರಹದ ರಿಂಗ್, ಇದು ವಿಸ್ಮಯವೋ, ಆತಂಕವೋ?
ಶನಿವಾರ ಆಗಸ ನೋಡಲು ಮರೆಯದಿರಿ ಮಾಯವಾಗಲಿದೆ ಶನಿಗ್ರಹದ ರಿಂಗ್, ಇದು ವಿಸ್ಮಯವೋ, ಆತಂಕವೋ? , ಈಗಾಗಲೇ ಶನಿಗ್ರಹದ ಹೊರಭಾಗದಲ್ಲಿ ಕಾಣುವ ರಿಂಗ್ ಮಾಯವಾಗುತ್ತಿದೆ. ಇದಕ್ಕೆ ಕಾರಣವೇನು? ಬರಿಗಣ್ಣಿನಿಂದ ನೋಡಲು ಸಾಧ್ಯವೇ?
India Latest News Live 23 November 202ಭಾರತದಲ್ಲಿ ಮುಸ್ಲಿಮರ ಕುರಿತು ಮೌಲಾನಾ ಮದನಿ ಹೇಳಿಕೆ ವಿವಾದ; 'ಭಾರತಕ್ಕಿಂತ ಉತ್ತಮ ಸ್ಥಳವಿಲ್ಲ, ಹಿಂದೂಗಿಂತ ಒಳ್ಳೆಯ ಅಣ್ಣ ಇಲ್ಲ' ಎಂದ ಬಿಜೆಪಿ!
ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು, ಭಾರತದಲ್ಲಿ ಮುಸ್ಲಿಮರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶವಿಲ್ಲ ಎಂದ ಬಿಜೆಪಿ
India Latest News Live 23 November 202ದುಬೈ ಏರ್ ಶೋನಲ್ಲಿ ತೇಜಸ್ ಫೈಟರ್ ಜೆಟ್ ಅಪಘಾತ; ಪೈಲಟ್ ನಿಯಂತ್ರಣ ಕಳೆದುಕೊಂಡರೇ ಅಥವಾ..!?
ದುಬೈ ಏರ್ ಶೋ 2025 ರಲ್ಲಿ ಭಾರತೀಯ ವಾಯುಪಡೆಯ ತೇಜಸ್ ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ನಾಮ್ನಾಶ್ ಸಯಾಲ್ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಜಿ-ಫೋರ್ಸ್ ಬ್ಲ್ಯಾಕೌಟ್ ಅಥವಾ ಪೈಲಟ್ ನಿಯಂತ್ರಣ ಕಳೆದುಕೊಂಡಿರುವುದು ಕಾರಣವಿರಬಹುದೆಂದು ರಕ್ಷಣಾ ತಜ್ಞರು ಶಂಕಿಸಿದ್ದು, ವಾಯುಪಡೆ ತನಿಖೆ ಆರಂಭ