ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು, ಭಾರತದಲ್ಲಿ ಮುಸ್ಲಿಮರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶವಿಲ್ಲ ಎಂದ ಬಿಜೆಪಿ

ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ದೇಶದಲ್ಲಿ ಮುಸ್ಲಿಮರ ಸ್ಥಿತಿಗತಿಯ ಕುರಿತು ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮದನಿ ಅವರು, 'ಇಂದು ಮಮ್ದಾನಿಯಂತಹ ಮುಸ್ಲಿಂ ನ್ಯೂಯಾರ್ಕ್ ಮೇಯರ್ ಆಗಬಹುದು, ಖಾನ್ ಲಂಡನ್ ಮೇಯರ್ ಆಗಬಹುದು, ಆದರೆ ಭಾರತದಲ್ಲಿ ಯಾರೂ ವಿಶ್ವವಿದ್ಯಾಲಯದ ಕುಲಪತಿಯಾಗಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ: ಬಿಜೆಪಿ

​ಮದನಿ ಅವರ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಯಾಸರ್ ಜಿಲಾನಿ ಅವರು, ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ. ಹಿಂದೂಗಳಿಗಿಂತ ಉತ್ತಮ ಮನುಷ್ಯ ಅಥವಾ ಅಣ್ಣನೂ ಇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮದನಿ ಅವರ ಹೇಳಿಕೆಯಲ್ಲಿ ಗೊಂದಲವಿದೆ ಎಂದು ಹೇಳಿದ ಜಿಲಾನಿ, 'ಒಂದೆಡೆ ಅವರು ಜಾಗತಿಕವಾಗಿ ಮುಸ್ಲಿಮರ ಕೆಟ್ಟ ಸ್ಥಿತಿಯ ಬಗ್ಗೆ ಮಾತನಾಡಿದರೆ, ಮತ್ತೊಂದೆಡೆ ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿ ಮತ್ತು ಲಂಡನ್ ಮೇಯರ್ ಬಗ್ಗೆ ಉಲ್ಲೇಖಿಸುತ್ತಾರೆ ಎಂದು ಹೇಳಿದರು.

Scroll to load tweet…

​ಅಜಮ್ ಖಾನ್ ಮತ್ತು ಅಲ್-ಫಲಾಹ್ ವಿಶ್ವವಿದ್ಯಾಲಯದ ಬಗ್ಗೆ ಮದನಿ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜಿಲಾನಿ, 'ಅಲ್-ಫಲಾಹ್ ವಿಶ್ವವಿದ್ಯಾಲಯದ ಮಾಲೀಕರು ಅನೇಕ ಜನರ ಹಣವನ್ನು ವಂಚಿಸಿದ ಅಪರಾಧಿ ಎಂದು ದೂರಿದರು. ಹಾಗೆಯೇ, ಅಜಂ ಖಾನ್ ಕೂಡ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದು, ಬಡವರಿಗೆ ಸೇರಿದ ಭೂಮಿಯನ್ನು ಕಬಳಿಸಿ ಜೌಹರ್ ವಿಶ್ವವಿದ್ಯಾಲಯವನ್ನು ನಿರ್ಮಿಸಿದ್ದಾರೆ, ಈ ವಿಷಯದಲ್ಲಿ ಮುಸ್ಲಿಮರೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಜಿಲಾನಿ ಹೇಳಿದರು. ಕೇಂದ್ರ ಸರ್ಕಾರವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಿದೆ, ಆದ್ದರಿಂದ ಮದನಿ ಅವರು ದೇಶದ ಜನರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಅವರು ಮನವಿ ಮಾಡಿದರು.

Scroll to load tweet…

ತಪ್ಪು ಮಾಡಿದವರಿಗೆ ಶಿಕ್ಷೆ, ಮುಸ್ಲಿಮರು ಎಂಬ ಕಾರಣಕ್ಕಲ್ಲ:

​ಭಾರತ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ ನಾಯಕ ಯಾಸರ್ ಜಿಲಾನಿ ಅವರು, ಭಾರತವು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಎಲ್ಲರನ್ನೂ ತನ್ನೊಂದಿಗೆ ಕರೆದೊಯ್ಯುತ್ತಿದೆ ಎಂದು ಹೇಳಿದರು. ಯಾರಾದರೂ ತಪ್ಪು ಮಾಡಿದರೆ, ಅವರಿಗೆ ಶಿಕ್ಷೆಯಾಗುವುದು ಅವರು ಮುಸ್ಲಿಮರು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರು ಅಪರಾಧ ಮಾಡುತ್ತಿರುವುದರಿಂದ. ದಾರಿ ತಪ್ಪಿ ಭಯೋತ್ಪಾದನೆಯತ್ತ ಸಾಗುತ್ತಿರುವ ಯುವಜನರ ವಿರುದ್ಧ ಫತ್ವಾ ಹೊರಡಿಸುವುದಾಗಿ ಅವರು ಹೇಳಿದರು. ಪ್ರಸ್ತುತ ಸರ್ಕಾರದ ಬಗೆಗಿನ ಕಹಿ ಭಾವನೆ ಕಡಿಮೆಯಾಗಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.