Asianet Suvarna News Asianet Suvarna News

ಕಾಂಗ್ರೆಸ್‌ ಲೋಕಸಭೆಯಲ್ಲಿ ರಾಹುಲ್‌ ಗಾಂಧಿಗೆ ಆಗಿರುವ ವಯಸ್ಸಿನಷ್ಟು ಸೀಟ್‌ ಗೆಲ್ಲಲಿದೆ: ಹಿಮಾಂತ ಬಿಸ್ವಾ ಶರ್ಮ

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಎಷ್ಟು ಸೀಟ್‌ ಗೆಲ್ಲಬಹುದು ಎನ್ನುವ ಪ್ರಶ್ನೆಗೆ ಅಸ್ಸಾಂ ಮುಖ್ಯಂಮತ್ರಿ ಹಿಮಾಂತ ಬಿಸ್ವಾ ಶರ್ಮ, ರಾಹುಲ್‌ ಗಾಂಧಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಸೀಟ್‌ಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದಿದ್ದಾರೆ.

Himanta Biswa Sarma says in 2024 Lok Sabha Congress Will Win seats equal to Rahul Gandhi age san
Author
First Published Dec 15, 2023, 5:27 PM IST

ನವದೆಹಲಿ (ಡಿ.15): ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ ಎಷ್ಟು ಸೀಟ್‌ಗಳನ್ನು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ತಮ್ಮ ಉತ್ತರ ನೀಡಿದ್ದಾರೆ. ಸಇಂದು ರಾಹುಲ್‌ ಗಾಂಧಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಸೀಟ್‌ಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಪ್ರತಿ ಒಂದೊಂದು ವರ್ಷ ಅವರ ಸೀಟ್‌ ಏರುತ್ತಲೇ ಇರುತ್ತದೆ ಎಂದು ಲೇವಡಿ ಮಾಡಿದ್ದಾರೆ. ಖಾಸಗಿ ಟಿವಿ ಕಾರ್ಯಕ್ರಮದ ಸಂವಾದದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಕಾಂಗ್ರೆಸ್‌ ನಾಯಕನ ಕುರಿತಾಗಿ ವಾಗ್ದಾಳಿ ನಡೆಸಿದರು. ತುಂಬಾ ಚುರುಕಾಗಿ ಇರುವಂತೆ ತೋರ್ಪಡಿಸುವುದನ್ನು ಅವರು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಚಂದ್ರನತ್ತ ಕಳುಹಿಸುವುದರಿಂದ ಪಿಒಕೆ ಮತ್ತು ಕಾಶ್ಮೀರ ಸೇರಿದಂತೆ ರಾಷ್ಟ್ರದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದರು. ಅಸ್ಸಾಂ ಮುಖ್ಯಮಂತ್ರಿಯವರು ಸಾರ್ವಜನಿಕರೊಂದಿಗೆ ಕಾಂಗ್ರೆಸ್ ಸಂಪರ್ಕ ಕಡಿತವಾಗಿದೆ ಎನ್ನುವುದನ್ನು ಎತ್ತಿ ತೋರಿಸಿದರು. ಜನರ ಸಮಸ್ಯೆಗಳನ್ನು ಆಲಿಸಿ ಆ ನಿಟ್ಟಿನಲ್ಲಿ ಯೋಚಿಸುವುದರ ಬದಲಿ ಇವಿಎಂಗಳ ಬಗ್ಗೆ ಮಾತನಾಡುತ್ತಾರೆ. ಮತದಾರರೊಂದಿಗೆ ಸಂಪರ್ಕದಲ್ಲಿರುವುದೇ ಚುನಾವಣೆ ಗೆಲ್ಲೋಕೆ ಇರುವ ದೊಡ್ಡ ಅಂಶ ಎಂದು ಹೇಳಿದ್ದಾರೆ.

ಹಗರಣಗಳ ಹಿನ್ನಲೆ ಇರುವ ಯುಪಿಎಯಿಂದ ಇಂಡಿ ಒಕ್ಕೂಟಕ್ಕೆ ಬದಲಾಗಿದ್ದನ್ನು ಗಮನಿಸಿದ ಅವರು, ಕಾಂಗ್ರೆಸ್‌ನ ಇತ್ತೀಚಿನ ಮೈತ್ರಿ ತಂತ್ರಗಳನ್ನು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡ ಅವರು, ಅವರ ಒಬಿಸಿ ಹಿನ್ನೆಲೆ ರಾಹುಲ್ ಗಾಂಧಿಗೆ ಹಠಾತ್ ಕಾಳಜಿಯಾಗಬಾರದು ಎಂದು ವಾದಿಸಿದರು.

ರಾಜ್ಯ ರಾಜಕೀಯದ ಕುರಿತಾಗಿ ಮಾತನಾಡಿದ ಅವರು, ಅಸ್ಸಾಂ 2024ರ ಫೆಬ್ರವರಿ 4 ರಂದು ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸುತ್ತದೆ ಎಂದು ಶರ್ಮಾ ಘೋಷಿಸಿದರು. ಸಿಎಎ/ಎನ್‌ಆರ್‌ಸಿಯ ಸುಗಮ ಅನುಷ್ಠಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಅದು ಗೃಹ ಸಚಿವರ ಬಳಿ ಇದೆ ಎಂದು ಹೇಳಿದರು. ಸಬಲೀಕರಣದ ಸಾಧನವಾಗಿ ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಜಾತಿ ಗಣತಿಯ ಮಹತ್ವವನ್ನು ಮುಖ್ಯಮಂತ್ರಿ ಒತ್ತಿ ಹೇಳಿದರು. ಜಾತಿ ಗಣತಿಯ ಮೂಲಕ ಮುಸ್ಲಿಮರು ಅವರಿಗೆ ಅರ್ಹವಾದ ನ್ಯಾಯ ಮತ್ತು ಸಬಲೀಕರಣವನ್ನು ಪಡೆಯುತ್ತಾರೆ ಎಂದು ಹಿಮಾಂತ ಬಿಸ್ವಾ ಶರ್ಮ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ನೇರ ಸವಾಲೆಸೆದ ಅವರು,  ಓಬಿಸಿ ಜನಗಣತಿಯನ್ನು ರಾಜಕೀಯಗೊಳಿಸಬೇಡಿ ಎಂದು ಒತ್ತಾಯಿಸಿದರು. ದೇಶಕ್ಕೆ ತುರ್ತಾಗಿ ಅಗತ್ಯವಿರುವುದು ಮುಸ್ಲಿಂ ಸಮುದಾಯದ ಒಳಗಿನ ಜನಗಣತಿ ಎಂದು ಹೇಳಿದ್ದಾರೆ. ಅಸ್ಸಾಂ ಮುಸ್ಲಿಂ ಸಮುದಾಯದೊಳಗೆ ಜಾತಿ ಗಣತಿಯನ್ನು ಪ್ರಾರಂಭಿಸಿದೆ ಎಂದು ಅವರು ಬಹಿರಂಗಪಡಿಸಿದರು, ಅದನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ದೃಷ್ಟಿಗೆ ಇರುವಂತೆ ರೂಪಿಸಲಾಗುತ್ತಿದೆ ಎಂದಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ, ಉತ್ತರ ಪ್ರದೇಶ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ!

ಒಬಿಸಿ ಅಭ್ಯರ್ಥಿಯನ್ನು ಪ್ರಧಾನಿಯಾಗಿ ಘೋಷಣೆ ಮಾಡುವಲ್ಲಿ ಕಾಂಗ್ರೆಸ್ ವಿಫಲತೆಯನ್ನು ಶರ್ಮಾ ಪ್ರಶ್ನೆ ಮಾಡಿದ್ದು, ರಾಷ್ಟ್ರದ ಪ್ರಗತಿಗಾಗಿ ಎಲ್ಲಾ ಸಮುದಾಯಗಳನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಏರಿದ ದಿನದಿಂದ ಪ್ರಧಾನಿ ಮೋದಿಗೆ ಇಲ್ಲಿಯವರೆಗೂ 14 ದೇಶದಿಂದ ಶ್ರೇಷ್ಠ ಗೌರವ!

Follow Us:
Download App:
  • android
  • ios