ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಚೆನ್ನೈ/ಹೈದರಾಬಾದ್‌: ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಕಸ್ತೂರಿ ಹೇಳಿಕೆ ಖಂಡಿಸಿ ತೆಲುಗರು ಪ್ರತಿಭಟನೆ ನಡೆಸಿದ್ದರು ಹಾಗೂ ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಅವರು ಒಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೂ ಸಮರ್ಥಿಸಿಕೊಂಡಿದ್ದರು. ಆದರೆ ಆಕ್ರೋಶ ತೀವ್ರಗೊಂಡ ಬಳಿಕ ಕ್ಷಮೆಯಾಚಿಸಿದ್ದರು. ‘ನನ್ನ ಮಾತು ಈಗ ಇರುವ ತಮಿಳುನಾಡಿನಲ್ಲಿನ ತೆಲುಗರನ್ನು ಉದ್ದೇಶಿಸಿ ಅಲ್ಲ. ಈ ಹಿಂದಿನ ಇತಿಹಾಸದ ಬಗ್ಗೆ ಮಾತನಾಡಿದ್ದೆ ಅಷ್ಟೆ. ಇದಕ್ಕಾಗಿ ಕ್ಷಮೆ ಕೋರುವೆ’ ಎಂದಿದ್ದರು. ಆದರೂ ಅವರ ವಿರುದ್ಧದ ಆಕ್ರೋಶ ತಣಿದಿರಲಿಲ್ಲ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಈ ನಟಿಯ ಪ್ರೇಮ ಪಾಶಕ್ಕೆ ಬಿದ್ದು ಹುಚ್ಚನಾಗಿದ್ದ!

ನವೆಂಬರ್ 3 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಶಂಕರ್ ಅವರು"ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು' ಎಂದಿದ್ದರು. ಈ ಹೇಳಿಕೆ ವಿರುದ್ಡ ತೆಲುಗು ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ತೆಲುಗು ಅಸೋಸಿಯೇಷನ್ ​​​​ನಟಿ ವಿರುದ್ಡ ಪ್ರಕರಣ ದಾಖಲಿಸಿತ್ತು.ಕೇಸು ದಾಖಲಾದ ಕಾರಣ ಕೆಲ ದಿನ ನಾಪತ್ತೆ ಆಗಿದ್ದರು. ಆಕೆಯ ಕ್ಷಮೆಯ ಹೊರತಾಗಿಯೂ, ತಮಿಳುನಾಡು ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಯ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

SHOCKING NEWS: 'ಅಮರನ್' ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ!

ಕಸ್ತೂರಿ ಶಂಕರ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1991 ರ ಚಲನಚಿತ್ರ ಆತಾ ಉನ್ ಕೊಯಿಲಿಲೆಯಲ್ಲಿ ಪಾದಾರ್ಪಣೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಮಲ್ ಹಾಸನ್ ಅವರ ಇಂಡಿಯನ್ (1996) ಮತ್ತು ಅನ್ನಮಯ್ಯ (1997) ಸಿನಿಮಾ ಬಳಿಕ ಖ್ಯಾತಿಯನ್ನು ಗಳಿಸಿದರು .