vitamin B12 Deficiency: ನೀವು ಸಸ್ಯಾಹಾರಿಗಳಾಗಿದ್ದರೆ ಮತ್ತು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದರೆ ಈ ಮಸಾಲೆಯನ್ನು ಸೇವಿಸಬಹುದು.
ಜೀರಿಗೆ ಭಾರತೀಯ ಅಡುಗೆಮನೆಯಲ್ಲಿ ಕಂಡುಬರುವ ಒಂದು ಮಸಾಲೆ ಪದಾರ್ಥವಾಗಿದ್ದು, ಇದು ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೀರಿಗೆಯನ್ನು ಸಾಮಾನ್ಯವಾಗಿ ಮಸಾಲೆ ಸಾಂಬಾರ್ಗೆ, ಸಲಾಡ್ ಮತ್ತು ರಾಯಿತಾ (ಮೊಸರು ಬಜ್ಜಿ) ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ಇದು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ ಎಂದು ನಿಮಗೆ ಗೊತ್ತೇ?, ಹೌದು, ವಿಟಮಿನ್ ಬಿ 12 ನಮ್ಮ ದೇಹಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಾಗೆ ನೋಡಿದರೆ ಆಹಾರದಲ್ಲಿ ವಿಟಮಿನ್ ಬಿ-12 ಕೊರತೆ ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಇದರ ಕೊರತೆಯಿಂದಾಗಿ, ದೇಹವು ಆಯಾಸ, ದೌರ್ಬಲ್ಯ, ಮಾನಸಿಕ ಗೊಂದಲ, ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ರಕ್ತಹೀನತೆ ಮುಂತಾದ ಅನೇಕ ಕಾಯಿಲೆಗಳನ್ನು ಎದುರಿಸಬಹುದು.
ಆದ್ದರಿಂದ ವಿಟಮಿನ್ ಬಿ-12 ದೇಹಕ್ಕೆ ಬಹಳ ಮುಖ್ಯ. ವಿಟಮಿನ್ ಬಿ 12 ಕೊರತೆಯು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಭಾರತದಲ್ಲಿಯೂ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ವಿಟಮಿನ್ ಬಿ 12 ವಿಷಯಕ್ಕೆ ಬಂದಾಗಲೆಲ್ಲಾ, ಮಾಂಸಾಹಾರದ ಹೆಸರನ್ನು ಮೊದಲು ತೆಗೆದುಕೊಳ್ಳಲಾಗುತ್ತದೆ. ಆದರೆ ನೀವು ಸಸ್ಯಾಹಾರಿಗಳಾಗಿದ್ದರೆ ಜೀರಿಗೆ ನಿಮಗೆ ಉತ್ತಮ ಆಯ್ಕೆಯಾಗಿರಬಹುದು.
ಸೇವಿಸುವುದು ಹೇಗೆ?
ಜೀರಿಗೆ ಅಡುಗೆಮನೆಯಲ್ಲಿ ಬಳಸುವ ಮಸಾಲೆ ಪದಾರ್ಥವಾಗಿದ್ದು, ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಸಕ್ಕರೆಯನ್ನು ನಿಯಂತ್ರಿಸುತ್ತದೆ, ಆದರೆ ಇದೆಲ್ಲದರ ಜೊತೆಗೆ, ಜೀರಿಗೆ ದೇಹದಲ್ಲಿನ ವಿಟಮಿನ್ ಬಿ -12 ಕೊರತೆಯನ್ನು ಸಹ ಪೂರೈಸುತ್ತದೆ. ಜೀರಿಗೆಯನ್ನು ವೈಜ್ಞಾನಿಕವಾಗಿ ಕ್ಯುಮಿನಮ್ ಸಿಮಿನಮ್ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿಟಮಿನ್ ಬಿ12 ಹೇರಳವಾಗಿ ಕಂಡುಬರುತ್ತದೆ. ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ನೀವು ನಿಮ್ಮ ಆಹಾರದಲ್ಲಿ ಜೀರಿಗೆಯನ್ನು ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು. ನೀವು ಜೀರಿಗೆ ಬೀಜಗಳನ್ನು ಪುಡಿಮಾಡಿ ಅಥವಾ ಅರಿಶಿನ, ಮೊಸರು ಅಥವಾ ಸೂಪ್ಗೆ ಸೇರಿಸುವ ಮೂಲಕ ತಿನ್ನಬಹುದು. ಇದಲ್ಲದೆ, ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸಹ ಸೇವಿಸಬಹುದು.
ಪ್ರಯೋಜನಗಳು
ಜೀರಿಗೆ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಜೀರಿಗೆ ನೀರನ್ನು ಸೇವಿಸಿದರೆ ಅದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ದೇಹದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಟಾಕ್ಸಿನ್ ತೆಗೆದುಹಾಕಲು ಇದು ಸಹಾಯಕವಾಗಿದೆ.
ಇತರ ಪ್ರಯೋಜನಗಳು
ಜೀರಿಗೆಯಲ್ಲಿ ವಿಟಮಿನ್ ಬಿ-12 ಕಂಡುಬರುತ್ತದೆ, ಇದು ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.
ಜೀರಿಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳನ್ನು ಹೊಂದಿದ್ದು, ಇದು ಮೂಳೆಗಳನ್ನು ಬಲಪಡಿಸುತ್ತದೆ.
ಈ ಮಸಾಲೆಯಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ.
ಜೀರಿಗೆ ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಆಯಾಸದ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನು ತಿನ್ನಲು ಸರಿಯಾದ ಮಾರ್ಗ
* ಜೀರಿಗೆಯನ್ನು ಹುರಿದು ನೀವು ಪುಡಿ ಮಾಡಬಹುದು. ನಂತರ ರಾಯಿತಾ ಮತ್ತು ಮೊಸರಿನೊಂದಿಗೆ ಬೆರೆಸಿ ತಿನ್ನಿರಿ.
* ಜೀರಿಗೆ ನೀರು ಕುಡಿಯುವುದು ಕೂಡ ಒಳ್ಳೆಯದು.
*ನೀವು ಜೀರಿಗೆ ಚಹಾ ಸಹ ಕುಡಿಯಬಹುದು.
