MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಒಂದು ರೂಪಾಯಿ ಖರ್ಚು ಮಾಡಿದ್ರೆ ಎಂದೂ ಒಣಗಲ್ಲ ತುಳಸಿ

ಒಂದು ರೂಪಾಯಿ ಖರ್ಚು ಮಾಡಿದ್ರೆ ಎಂದೂ ಒಣಗಲ್ಲ ತುಳಸಿ

Tulsi plant Garden tips : ತುಳಸಿ ಗಿಡ ಒಣಗಿದ್ರೆ ಒಳ್ಳೆಯದಲ್ಲ ಎನ್ನುವ ನಂಬಿಕೆ ನಮ್ಮಲ್ಲಿದೆ. ನಿಮ್ಮ ಮನೆಯಲ್ಲೂ ಪದೇ ಪದೇ ತುಳಸಿ ಗಿಡ ಹಾಳಾಗ್ತಿದ್ರೆ ಟೆನ್ಷನ್ ಬೇಡ. ಸಿಂಪಲ್ ಟ್ರಿಕ್ ಬಳಸಿ ತುಳಸಿ ಗಿಡ ಬೆಳೆಸಿ. 

2 Min read
Author : Roopa Hegde
Published : Mar 14 2026, 10:10 AM IST
Share this Photo Gallery
  • FB
  • TW
  • Linkdin
  • Whatsapp
17
ತುಳಸಿ ಗಿಡ
Image Credit : Asianet News

ತುಳಸಿ ಗಿಡ

ಹಿಂದೂಗಳ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವನ್ನು ನೋಡ್ಬಹುದು. ತುಳಸಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತೆ. ತುಳಸಿಗೆ ಪ್ರತಿ ದಿನ ಪೂಜೆ ನಡೆಯುತ್ತೆ. ಆದ್ರೆ ಈ ತುಳಸಿ ಗಿಡವನ್ನು ಬೆಳೆಸೋದು ಕಷ್ಟ. ಒಂದೆರಡು ತಿಂಗಳ ನಂತ್ರ ಗಿಡ ಒಣಗಲು ಶುರುವಾಗುತ್ತದೆ. ಇದ್ರಿಂದ ಹೊಸ ಗಿಡ ಬೆಳೆಸುವ ಅನಿವಾರ್ಯತೆ ಎದುರಾಗುತ್ತೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಒಣಗಬಾರದು ಅಂದ್ರೆ ಒಂದು ಸರಳ ಟ್ರಿಕ್ಸ್ ಬಳಸಬಹುದು. ಕಡಿಮೆ ಖರ್ಚಿನಲ್ಲಿ ಇದನ್ನು ಮಾಡ್ಬಹುದು.

27
ಒಂದೇ ರೂಪಾಯಿ ಸಾಕು
Image Credit : Asianet News

ಒಂದೇ ರೂಪಾಯಿ ಸಾಕು

ನೀವು ತುಳಸಿ ಗಿಡದ ಆರೈಕೆಗೆ ಶಾಂಪೂ ಬಳಸಬಹುದು. ಒಂದು ರೂಪಾಯಿ ಶಾಂಪೂ ನಿಮ್ಮ ತುಳಸಿ ಗಿಡ ಚೆನ್ನಾಗಿ ಬೆಳೆಯಲು ಹೆಲ್ಪ್ ಮಾಡುತ್ತೆ. ಒಂದು ರೂಪಾಯಿ ಶಾಂಪೂವನ್ನು ತಂದು ಅದನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ. ತುಳಸಿ ಗಿಡ, ಎಲೆ, ಕಾಂಡಕ್ಕೆ ಸ್ಪ್ರೇ ಮಾಡಿ.

Related Articles

Related image1
ಮನೆ, ಅಂಗಡಿಯಲ್ಲಿ ಇಲಿಗಳ ಕಾಟವೇ? ಈ ಗಿಡಗಳನ್ನು ನೆಟ್ಟು ನೋಡಿ
Related image2
ಕರಿಬೇವು ಗಿಡಕ್ಕೆ 15 ದಿನಕ್ಕೊಮ್ಮೆ ಇದನ್ನು ಹಾಕಿ ಸಾಕು, ಕಾಡಿನಂತೆ ಕಾಣುತ್ತೆ
37
ಕೀಟಗಳ ನಾಶ
Image Credit : Asianet News

ಕೀಟಗಳ ನಾಶ

ತುಳಸಿ ಗಿಡದಲ್ಲಿರುವ ಕಪ್ಪು ಕೀಟಗಳನ್ನು ನಾಶಪಡಿಸಲು ಶಾಂಪೂ ಅತ್ಯುತ್ತಮವಾಗಿದೆ. ಶಾಂಪೂವನ್ನು ನೀರಿಗೆ ಬೆರೆಸಿ ಸ್ಪ್ರೇ ಮಾಡಿದ್ರೆ ತುಳಸಿ ಗಿಡದಲ್ಲಿರುವ ಕಪ್ಪು ಕೀಟಗಳು ಸಾಯುತ್ವೆ. ಇದನ್ನು ಪ್ರತಿ ದಿನ ಮಾಡ್ಬಾರದು. ನೀವು ಮೂರರಿಂದ ನಾಲ್ಕು ದಿನಕ್ಕೊಮ್ಮೆ ಶಾಂಪೂ ಸ್ಪ್ರೇ ಮಾಡಿದ್ರೆ ಸಾಕು. ಶಾಂಪೂ ಸ್ಪ್ರೇ ಮಾಡಿದ ಮರುದಿನ ಶುದ್ಧ ನೀರಿನಿಂದ ತುಳಸಿ ಗಿಡವನ್ನು ತೊಳೆಯಬೇಕು. ಕೆಲವೇ ದಿನಗಳಲ್ಲಿ ನಿಮಗೆ ಇದ್ರ ಪರಿಣಾಮ ಕಾಣಿಸುತ್ತದೆ. ಕಪ್ಪು ಕೀಟಗಳು ನಾಶವಾಗಿ ತುಳಸಿ ಗಿಡ ಸುಂದರವಾಗಿ, ಹಸಿರು ಎಲೆಗಳಿಂದ ಕಂಗೊಳಿಸುತ್ತದೆ.

47
ಪಟಿಕ (ಆಲಮ್ ಬಳಕೆ)
Image Credit : Asianet News

ಪಟಿಕ (ಆಲಮ್ ಬಳಕೆ)

ನೀವು ತುಳಸಿ ಗಿಡಕ್ಕೆ ಆಲಮ್ ಕೂಡ ಬಳಕೆ ಮಾಡಬಹುದು. ಅಲ್ಯುಮಿನಿಯಂ ಮತ್ತು ಪೊಟ್ಯಾಶಿಯಂ ಪದಾರ್ಥ ಬಳಸಿ ಈ ಪಟಿಕವನ್ನು ತಯಾರಿಸಿರುತ್ತಾರೆ. ನೀವು ಇದನ್ನು ಆರಾಮವಾಗಿ ತುಳಸಿ ಗಿಡಕ್ಕೆ ಬಳಕೆ ಮಾಡಬಹುದು.

57
ಪಟಿಕ ಬಳಕೆ ವಿಧಾನ
Image Credit : Asianet News

ಪಟಿಕ ಬಳಕೆ ವಿಧಾನ

ತುಳಸಿ ಗಿಡಕ್ಕೆ ನೀವು ತಿಂಗಳಿಗೆ ಒಂದು ಬಾರಿ ಪಟಿಕದ ನೀರನ್ನು ಹಾಕಬೇಕು. ಒಂದು ಲೀಟರ್ ನೀರಿಗೆ ಪಟಿಕದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿ, ತುಳಸಿ ಗಿಡದ ಎಲ್ಲ ಕಡೆ ಸ್ಪ್ರೇ ಮಾಡಿ. ಎಲೆ, ಬೇರುಗಳು ಸೇರಿದಂತೆ ಎಲ್ಲ ಕಡೆ ಸ್ಪ್ರೇ ಮಾಡಬೇಕು. ಇದು ನಿಮ್ಮ ತುಳಸಿ ಗಿಡ ಒಣಗದಂತೆ ತಡೆಯುತ್ತದೆ. ಹಸಿರಾದ ಎಲೆಗಳು ಗಿಡದ ಮೇಲೆ ಕಂಗೊಳಿಸುತ್ತವೆ. ಇಲ್ಲಿ ನೆನಪಿಡಬೇಕಾದ ವಿಷ್ಯ ಅಂದ್ರೆ ನೀವು ಪಟಿಕವನ್ನು ಕೇವಲ ತಿಂಗಳಿಗೆ ಒಂದು ಬಾರಿ ಮಾತ್ರ ಬಳಸಬೇಕು. ನೀವು ಅದಕ್ಕಿಂತ ಹೆಚ್ಚು ಬಾರಿ ಬಳಸಿದ್ರೆ ತುಳಸಿ ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ.

67
ತುಳಸಿ ಆರೈಕೆ
Image Credit : Asianet News

ತುಳಸಿ ಆರೈಕೆ

ತುಳಸಿಯನ್ನು ಹಸಿರಾಗಿಡಲು, ಅದರ ಬೇರುಗಳು ಉಸಿರಾಡಲು ಅವಕಾಶ ನೀಡುವುದು ಮುಖ್ಯ. ಅದರ ಮಣ್ಣು ಒಣಗಿದಾಗ ಮಣ್ಣನ್ನು ಅಗೆಯಿರಿ. ಮಣ್ಣಿನ ಮೇಲಿನ ಪದರವನ್ನು ನಿಧಾನವಾಗಿ ಸಡಿಲಗೊಳಿಸಿ. ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ಸಸ್ಯದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಪ್ರತಿದಿನ ನೀರು ಹಾಕಿ.

77
ಉಪ್ಪಿನ ಬಳಕೆ
Image Credit : Asianet News

ಉಪ್ಪಿನ ಬಳಕೆ

ತುಳಸಿ ಗಿಡಕ್ಕೆ ನೀವು ಉಪ್ಪನ್ನು ಹಾಕಬಹುದು. ಉಪ್ಪು ಹಾಕುವುದರಿಂದ ಸಸ್ಯಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಇದು ಉತ್ತಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಉದ್ಯಾನ
ತುಳಸಿ ಗಿಡ
Latest Videos
Recommended Stories
Recommended image1
Anchor Anushree: ಯಶ್ ಜೊತೆ ಅನುಶ್ರೀ ಇರ್ಬೇಕಿತ್ತು, ಆ ನಟಿ ಅಲ್ಲ; ಏಕೆ 'ಉಪ್ಪು ಹುಳಿ ಖಾರ' ಬೆಡಗಿಗೆ ಆ ಚಾನ್ಸ್‌ ಮಿಸ್ ಆಯ್ತು?
Recommended image2
ಇದು ಮುದ್ದೆ ಅಲ್ಲ, ಆನೆ ಲದ್ದಿ; ಈ ಮಹಿಳೆ ತಿನ್ನೋದು ನೋಡಿ, ದೃಷ್ಟಿ ಬಿದ್ದು, ಉಣ್ಣಬಾರದು; ಹಿಡಿ ಶಾಪ ಹಾಕಿದ ಜನರು
Recommended image3
ಗಸಗಸೆ ಪಾಯಸ ಸೇವಿಸಿ ಕುಂಭಕರ್ಣನಂತೆ ನಿದ್ರಿಸಿ.. ನಾಲಿಗೆಗೆ ರುಚಿ ಮಾತ್ರವಲ್ಲ, ದೇಹಾರೋಗ್ಯಕ್ಕೂ ರಾಮಬಾಣ!
Related Stories
Recommended image1
ಮನೆ, ಅಂಗಡಿಯಲ್ಲಿ ಇಲಿಗಳ ಕಾಟವೇ? ಈ ಗಿಡಗಳನ್ನು ನೆಟ್ಟು ನೋಡಿ
Recommended image2
ಕರಿಬೇವು ಗಿಡಕ್ಕೆ 15 ದಿನಕ್ಕೊಮ್ಮೆ ಇದನ್ನು ಹಾಕಿ ಸಾಕು, ಕಾಡಿನಂತೆ ಕಾಣುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved