- Home
- Astrology
- Vaastu
- ದೇವರ ಕೋಣೆಯಲ್ಲಿ ಚಿಕ್ಕ ಮಡಕೆಯಲ್ಲಿ ಈ ಕೆಂಪುಬಟ್ಟೆ, ಕಲ್ಲುಪ್ಪು ಇಡೋದ್ಯಾಕೆ? ಇದಕ್ಕಿದೆ ಹಣದ ನಂಟು
ದೇವರ ಕೋಣೆಯಲ್ಲಿ ಚಿಕ್ಕ ಮಡಕೆಯಲ್ಲಿ ಈ ಕೆಂಪುಬಟ್ಟೆ, ಕಲ್ಲುಪ್ಪು ಇಡೋದ್ಯಾಕೆ? ಇದಕ್ಕಿದೆ ಹಣದ ನಂಟು
Vastu Tips: ಕೆಲವರ ಮನೆಗೆ ಹೋದಾಗ ದೇವರ ಕೋಣೆಯಲ್ಲಿ ಕಲ್ಲುಪ್ಪು, ಕೆಂಪು ಬಟ್ಟೆ ತುಂಬಿದ ಪುಟ್ಟ ಮಣ್ಣಿನ ಮಡಕೆ ಇಟ್ಟಿರುವುದನ್ನು ನೋಡಿರಬಹುದು. ಆಗ "ದೇವರ ಮುಂದೆ ಈ ಮಡಕೆ ಯಾಕಿಟ್ಟಿದ್ದಾರೆ?" ಅನ್ನೋ ಅನುಮಾನ ನಿಮಗೂ ಬಂದಿರಬಹುದು ಅಲ್ವಾ? ಇದು ಕೇವಲ ಸಾಂಪ್ರದಾಯಿಕ ಪದ್ಧತಿಯಲ್ಲ, ಮತ್ತೇ?
ಪಂಚಭೂತಗಳ ಮಹತ್ವ
ಪಂಚಭೂತಗಳ ಮಹತ್ವ
ಎಷ್ಟೇ ದುಡಿದರೂ ಕೈಯಲ್ಲಿ ಕಾಸು ಉಳಿಯುತ್ತಿಲ್ಲ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಅಥವಾ ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ ಎನ್ನುವವರಿಗೆ ಸ್ವಾಮೀಜಿಗಳು ತಿಳಿಸಿದ ಅತ್ಯಂತ ಶಕ್ತಿಶಾಲಿ ಜ್ಯೋತಿಷ್ಯ ಹಾಗೂ ವಾಸ್ತು ಪರಿಹಾರವಿದು. ಈ ಪರಿಹಾರದಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ಧಾರ್ಮಿಕ ಮತ್ತು ಪಂಚಭೂತಗಳ ಮಹತ್ವವಿದೆ.
ಮಣ್ಣಿನ ಮಡಕೆ: ಇದು 'ಪೃಥ್ವಿ ತತ್ವ'ವನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ಕಲ್ಲುಪ್ಪು: ಲಕ್ಷ್ಮೀ ಸ್ವರೂಪವಾದ ಕಲ್ಲುಪ್ಪು ಮನೆ ಮತ್ತು ಆದಾಯಕ್ಕೆ ತಗುಲಿರುವ ಕೆಟ್ಟ ದೃಷ್ಟಿ ಹಾಗೂ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ.
ಕೆಂಪು ಬಟ್ಟೆ & ನಾಣ್ಯಗಳು: ಕೆಂಪು ಬಣ್ಣ ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದದ್ದು. ನಾಣ್ಯಗಳು ಹಣದ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು
ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು
ಒಂದು ಸಣ್ಣ ಮಣ್ಣಿನ ಮಡಕೆ
ಅರಿಶಿನ, ಕುಂಕುಮ ಮತ್ತು ಶ್ರೀಗಂಧ
ಜಾವಾದ್ ಪೌಡರ್ (ಪೂಜಾ ಸಾಮಗ್ರಿ ಅಂಗಡಿಯಲ್ಲಿ ಸಿಗುತ್ತದೆ)
ಕಲ್ಲುಪ್ಪು (ದಪ್ಪ ಉಪ್ಪು)
ಒಂದು ಸಣ್ಣ ಕೆಂಪು ಬಟ್ಟೆ
11 ನಾಣ್ಯಗಳು (Coins)
5 ಲವಂಗಗಳು
ಮಾಡುವ ಸರಳ ವಿಧಾನ
ಮಾಡುವ ಸರಳ ವಿಧಾನ
ಮಡಕೆಯ ಸಿದ್ಧತೆ: ಮಣ್ಣಿನ ಮಡಕೆಯನ್ನು ಚೆನ್ನಾಗಿ ತೊಳೆದು ಒಣಗಿಸಿ. ಅರಿಶಿನ ಮತ್ತು ಶ್ರೀಗಂಧದ ಪೇಸ್ಟ್ ಮಾಡಿ ಮಡಕೆಯ ಹೊರಭಾಗಕ್ಕೆ ಹಚ್ಚಿ, 5 ಕಡೆ ಕುಂಕುಮದ ಬೊಟ್ಟು ಇಡಿ.
ಒಳಗೆ ಹಾಕಬೇಕಾದ ವಸ್ತುಗಳು: ಮಡಕೆಯೊಳಗೆ ಸ್ವಲ್ಪ ಅರಿಶಿನ, ಕುಂಕುಮ, ಸುಗಂಧಭರಿತ ಜಾವಾದ್ ಪೌಡರ್ ಹಾಕಿ, ನಂತರ ಕಾಲು ಭಾಗದಷ್ಟು ಕಲ್ಲುಪ್ಪನ್ನು ತುಂಬಿಸಿ.
11 ನಾಣ್ಯಗಳ ರಹಸ್ಯ: ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ 11 ನಾಣ್ಯಗಳನ್ನಿಟ್ಟು ಗಂಟು ಕಟ್ಟಿ (ಮಡಚಿ), ಅದನ್ನು ಮಡಕೆಯೊಳಗಿನ ಕಲ್ಲುಪ್ಪಿನ ಮಧ್ಯಭಾಗದಲ್ಲಿಡಿ.
ಲವಂಗದ ಬಳಕೆ: ಆ ಬಟ್ಟೆಯ ಮೇಲೆ ಮತ್ತೆ ಸ್ವಲ್ಪ ಕಲ್ಲುಪ್ಪು ಹಾಕಿ ಮುಚ್ಚಿ, ಅದರ ಮೇಲ್ಭಾಗದಲ್ಲಿ 5 ಲವಂಗಗಳನ್ನು ಇಡಿ.
ಪೂಜೆ: ಈ ಮಡಕೆಯನ್ನು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವು ಇಟ್ಟು ಧೂಪ-ದೀಪಗಳಿಂದ ಭಕ್ತಿಯಿಂದ ಪೂಜೆ ಮಾಡಿ.
ಯಾವಾಗ ಮಾಡಬೇಕು? ನಿರ್ವಹಣೆ ಹೇಗೆ?
ಯಾವಾಗ ಮಾಡಬೇಕು? ನಿರ್ವಹಣೆ ಹೇಗೆ?
ಈ ಪರಿಹಾರವನ್ನು ಹುಣ್ಣಿಮೆಯ ದಿನ ಮಾಡುವುದು ಅತ್ಯಂತ ಶ್ರೇಷ್ಠ ಮತ್ತು ಶುಭಫಲ ನೀಡುತ್ತದೆ.
ಪ್ರತಿ ಹುಣ್ಣಿಮೆಗೆ: ಮಡಕೆಯೊಳಗಿರುವ ಕಲ್ಲುಪ್ಪು ಮತ್ತು 5 ಲವಂಗಗಳನ್ನು ಮಾತ್ರ ಬದಲಾಯಿಸಿ (ಹಳೆಯ ಉಪ್ಪನ್ನು ನೀರಿನಲ್ಲಿ ಕರಗಿಸಿ ಹೊರಗೆ ಹಾಕಿ). ಕೆಂಪು ಬಟ್ಟೆಯಲ್ಲಿರುವ 11 ನಾಣ್ಯಗಳು ಹಾಗೆಯೇ ಇರಲಿ.
ಸಂಬಳ ಬಂದಾಗ ಮಾಡಬೇಕಾದ ಮುಖ್ಯ ಕೆಲಸ
ಸಂಬಳ ಬಂದಾಗ ಮಾಡಬೇಕಾದ ಮುಖ್ಯ ಕೆಲಸ
ನಿಮಗೆ ಪ್ರತಿ ತಿಂಗಳು ಸಂಬಳ (ಆದಾಯ) ಬಂದಾಗ, ಆ ಹಣವನ್ನು ಮೊದಲು ಈ ಮಡಕೆಯ ಮೇಲಿಟ್ಟು ಲಕ್ಷ್ಮೀದೇವಿಗೆ ನಮಸ್ಕರಿಸಿ. ಕನಿಷ್ಠ ಅರ್ಧ ಗಂಟೆ ಆ ಹಣವನ್ನು ಮಡಕೆಯ ಮೇಲೆಯೇ ಬಿಟ್ಟು ನಂತರ ತೆಗೆದು ಬಳಸಿ. ಹೀಗೆ ಮಾಡುವುದರಿಂದ ಹಣ ಪೋಲಾಗುವುದು ತಪ್ಪುತ್ತದೆ ಮತ್ತು ಅನಗತ್ಯ ಖರ್ಚುಗಳು ಕಡಿಮೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ.