MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕರ್ಣ-ನಿತ್ಯಾಳನ್ನು ಹಿಂಬಾಲಿಸಿದ ಪೆಡಂಭೂತ; ನಿಟ್ಟುಸಿರುವ ಬಿಟ್ರು ರಮೇಶ್, ತಾರಾ, ಸಂಜಯ್

ಕರ್ಣ-ನಿತ್ಯಾಳನ್ನು ಹಿಂಬಾಲಿಸಿದ ಪೆಡಂಭೂತ; ನಿಟ್ಟುಸಿರುವ ಬಿಟ್ರು ರಮೇಶ್, ತಾರಾ, ಸಂಜಯ್

ತನ್ನ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯವನ್ನು ನಿತ್ಯಾ ಹೇಳಲು ಮುಂದಾಗುತ್ತಾಳೆ. ಆದರೆ ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ತೇಜಸ್, ಆ ಮಗುವಿನ ಅಪ್ಪ ಕರ್ಣನೇ ಎಂದು ಹೇಳಿ ಎಲ್ಲರಿಗೂ ಆಘಾತ ನೀಡುತ್ತಾನೆ, ಇದರಿಂದ ಕರ್ಣನ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತವೆ.

1 Min read
Author : Mahmad Rafik
Published : Jan 19 2026, 08:14 AM IST
Share this Photo Gallery
  • FB
  • TW
  • Linkdin
  • Whatsapp
15
ಕರ್ಣ ಸೀರಿಯಲ್
Image Credit : Zee Kannada

ಕರ್ಣ ಸೀರಿಯಲ್

ಜೀ ಕನ್ನಡ ವಾಹಿನಿಯ ಕರ್ಣ ಸೀರಿಯಲ್ ಇಂದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಇಂದಿನ ಪ್ರೋಮೋ ಬಿಟ್ಟು ಕೊಟ್ಟಿದೆ. ನಿತ್ಯಾಳಿಗೆ ತಾಳಿ ಕಟ್ಟದೇ ತೇಜಸ್ ಓಡಿ ಹೋಗಿದ್ದನು. ಇದರಿಂದ ನೊಂದ ನಿತ್ಯಾ-ಕರ್ಣ ಮನೆಯಲ್ಲಿ ಸುಳ್ಳು ಮದುವೆ ವಿಷಯ ತಿಳಿಸಲು ಮುಂದಾಗಿದ್ದರು.

25
ನಿತ್ಯಾ
Image Credit : Zee Kannada

ನಿತ್ಯಾ

ನಿತ್ಯಾ ಸಹ ತಾನು ಗರ್ಭಿಣಿಯಾಗಿದ್ದು, ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯ ಎಲ್ಲರ ಮುಂದೆ ಹೇಳಲು ಸಿದ್ಧವಾಗಿದ್ದಳು. ಒಂದು ವೇಳೆ ಈ ಸತ್ಯ ಹೇಳಿದ್ರೆ ಕರ್ಣನ ಸಮಸ್ಯೆಗಳೆಲ್ಲಾ ದೂರವಾಗಿ ಆತ ಸಂತೋಷವಾಗಿ ಜೀವನ ನಡೆಸುತ್ತಾನೆ ಎಂದು ರಮೇಶ್ ಕೈ ಕೈ ಹಿಸುಕಿಕೊಳ್ಳುತ್ತಿದ್ದನು. ಸತ್ಯ ಹೇಳಿದ್ರೆ ನಮ್ಮ ಎಲ್ಲಾ ಪ್ಲಾನ್ ಫೇಲ್ ಆಗುತ್ತೆ ಸಂಜಯ್, ಅತ್ತೆ ತಾರಾ ಆತಂಕಗೊಂಡಿದ್ದರು.

Related Articles

Related image1
Karna Serial: ರಮೇಶ್‌ ಮುಖವಾಡ ಕಳಚಿಬಿತ್ತು; ದಂಡಂ ದಶಗುಣಂ ಎಂದು ಶಪಥ ಮಾಡಿದ ಕರ್ಣ! ಇದು ಬೇಕಿತ್ತು...!
Related image2
ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ
35
ಆತಂಕ ದೂರ ಮಾಡಿದ ತೇಜಸ್
Image Credit : Zee Kannada

ಆತಂಕ ದೂರ ಮಾಡಿದ ತೇಜಸ್

ಈ ಮೂವರ ಆತಂಕವನ್ನು ತೇಜಸ್ ದೂರ ಮಾಡಿದ್ದಾನೆ. ತೇಜಸ್-ನಿತ್ಯಾ ಮದುವೆ ಆಗುತ್ತೆ ಮತ್ತು ನಿಧಿ ಜೊತೆಗಿನ ಪ್ರೀತಿ ವಿಷಯವನ್ನು ಹಂಚಿಕೊಳ್ಳಲು ಕರ್ಣ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದನು. ಆದ್ರೆ ಇದೀಗ ಈ ಪಾರ್ಟಿಯಲ್ಲಿ ಸುಳ್ಳು ಮದುವೆ, ನಿತ್ಯಾಳ ಒಡಲಾಳದ ಸತ್ಯ ಹೇಳಿಕೊಳ್ಳಲು ಇಬ್ಬರು ಮುಂದಾಗಿದ್ದರು.

45
ತೇಜಸ್ ಎಂಬ ಪೆಡಂಭೂತ
Image Credit : Zee Kannada

ತೇಜಸ್ ಎಂಬ ಪೆಡಂಭೂತ

ನಿತ್ಯಾ ಸತ್ಯ ಹೇಳುವುದನ್ನು ಹೇಗೆ ತಡೆಯಬೇಕು ಎಂದು ಯೋಚಿಸುತ್ತಿರುವ ಸಂದರ್ಭದಲ್ಲಿಯೇ ಅಲ್ಲಿಗೆ ತೇಜಸ್ ಬಂದಿದ್ದಾನೆ. ನಾನು ಗರ್ಭಿಣಿ, ಈ ಮಗುವಿನ ತಂದೆ ಯಾರು ಎಂದು ನಿತ್ಯಾ ಹೇಳುತ್ತಿರುವ ಸಂದರ್ಭದಲ್ಲಿಯೇ ಬಂದ ತೇಜಸ್, ಮಗುವಿನ ಅಪ್ಪ ಕರ್ಣ ಎಂದು ಜೋರಾಗಿ ಕೂಗಿ ಹೇಳಿದ್ದಾನೆ. ಮದುವೆ ಆಗಲ್ಲ ಅಂತೇಳಿದ್ದ ತೇಜಸ್ ಎಂಬ ಪೆಡಂಭೂತ ನಿತ್ಯಾ-ಕರ್ಣನನ್ನು ಹಿಂಬಾಲಿಸುತ್ತಿದೆ.

ಇದನ್ನೂ ಓದಿ: Bigg Boss Kannada 12: ಕಲರ್ಸ್ ಕನ್ನಡದಲ್ಲಿ ಗೆದ್ದ ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಜೀ ಕನ್ನಡ

55
ಕರ್ಣನಿಗೆ ಸಂಕಷ್ಟ ತಪ್ಪಿದ್ದಲ್ಲ
Image Credit : Zee Kannada

ಕರ್ಣನಿಗೆ ಸಂಕಷ್ಟ ತಪ್ಪಿದ್ದಲ್ಲ

ಈ ಪ್ರೋಮೋ ನೋಡಿದ ವೀಕ್ಷಕರು, ನಿತ್ಯಾ ಅಲ್ಲಿಗೆ ತನ್ನ ಮಾತುಗಳನ್ನ ನಿಲ್ಲಿಸುತ್ತಾಳೆ. ಆನಂತರ ರಮೇಶ್, ಸಂಜಯ್, ತಾರಾ ಮಧ್ಯೆ ಪ್ರವೇಶ ಮಾಡಿ ಏನಾದ್ರು ಸನ್ನಿವೇಶವನ್ನು ಬದಲಿಸುತ್ತಾರೆ. ಕರ್ಣನಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Gilli Nata: ದರ್ಶನ್ ಜೊತೆ ಗಿಲ್ಲಿಯನ್ನು ಹೋಲಿಕೆ ಮಾಡಿದ ಅಭಿಮಾನಿಗಳು; ಇದು ಬೇಕಿತ್ತಾ ಎಂದ ಡೆವಿಲ್ ಫ್ಯಾನ್ಸ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
BBK 12: ಕಾವ್ಯ ಶೈವ ಜೊತೆ ಮದುವೆ ಆಗ್ತೀರಾ? ಎಂದಾಗ 'ಕಂಕಣಬಲ ಕೂಡಿ ಬರಬೇಕು' ಎಂದ ಗಿಲ್ಲಿ ನಟ
Recommended image2
Bigg Boss Kannada 12: ಕಲರ್ಸ್ ಕನ್ನಡದಲ್ಲಿ ಗೆದ್ದ ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಜೀ ಕನ್ನಡ
Recommended image3
BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?
Related Stories
Recommended image1
Karna Serial: ರಮೇಶ್‌ ಮುಖವಾಡ ಕಳಚಿಬಿತ್ತು; ದಂಡಂ ದಶಗುಣಂ ಎಂದು ಶಪಥ ಮಾಡಿದ ಕರ್ಣ! ಇದು ಬೇಕಿತ್ತು...!
Recommended image2
ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved