ತಲೆ ಗಿರ ಗಿರ ಮಾಡಿದ ಅಮೃತಧಾರೆ ಕಥೆ; ಕೆಡಿ ಜೈದೇವ್ ಸಂಚಿಗೆ ಭೂಮಿಕಾ-ಗೌತಮ್ ಶಾಕ್!
ಅಮೃತಧಾರೆ ಸೀರಿಯಲ್ನಲ್ಲಿ ಮಿಂಚು ತಮ್ಮ ಮಗಳು ಎಂದು ತಿಳಿದ ಭೂಮಿಕಾ-ಗೌತಮ್ ಆಕೆಯನ್ನು ದತ್ತು ನೀಡಲು ಮುಂದಾಗಿದ್ದಾರೆ. ಆದರೆ, ಜೈದೇವ್ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್ ಮುಗಿಯಲಿದೆ ಎಂಬ ಮಾತುಗಳ ನಡುವೆಯೇ ಸೀರಿಯಲ್ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ವಿಷಯ ತಿಳಿದ ಭೂಮಿಕಾ ಮತ್ತು ಗೌತಮ್ ಆಕೆಯನ್ನು ಜೀವಾ-ಮಹಿಮಾಗೆ ದತ್ತು ನೀಡಲು ಮುಂದಾಗಿದ್ದಾರೆ. ಮಹಿಮಾ ಜೊತೆ ಹೋಗಲು ಇಷ್ಟವಿಲ್ಲದ ಕಾರಣ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ.
ಮಿಂಚು ಜನ್ಮ ರಹಸ್ಯ
ಮತ್ತೊಂದೆಡೆ ಮಿಂಚು ಜನ್ಮ ರಹಸ್ಯ ತಿಳಿದಿರುವ ಜೈದೇವ್, ತನ್ನ ಕಿಡಿಗೇಡಿ ಕೆಲಸವನ್ನು ಮುಂದುವರಿಸಿದ್ದಾನೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ. ಯಾರೋ ಆಕೆಯನ್ನು ಸಾಕಿದ್ದರು. ನಂತರ ಅವರು ವಿದೇಶಕ್ಕೆ ತೆರಳುವಾಗ ಮಗಳನ್ನು ಬಿಟ್ಟು ಹೋಗಿದ್ದರು. ಆನಂತರ ಯಾರೋ ಡ್ರೈವರ್ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಪರಿಚಿತ ದಂಪತಿ ಜೈದೇವ್ ಹೇಳಿಕೊಟ್ಟಂತೆ ಹೇಳಿದ್ದಾರೆ.
ಭೂಮಿಕಾ ತಂದೆ-ತಾಯಿಗೆ ಬಿಗ್ ಶಾಕ್
ಮತ್ತೊಂದೆಡೆ ಶಾಲೆಗೆ ಮಿಂಚು ಬಂದಿಲ್ಲ ಎಂಬ ವಿಷಯ ತಿಳಿದು ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಮಿಂಚು ಮಗಳಾಗಿ ಬರ್ತಾಳೆ ಎಂಬ ಖುಷಿಯಿಂದ ಬಂದಿದ್ದ ಮಹಿಮಾಗೆ ಮತ್ತು ಮಗಳ ಜೀವನ ಸರಿ ಹೋಗ್ತಿದ್ದ ಶಕುಂತಲಾಗೆ, ಮನೆಗೆ ಮೊಮ್ಮಗು ಬರುತ್ತಿದೆ ಎಂಬ ಖುಷಿಯಲ್ಲಿ ಭೂಮಿಕಾ ತಂದೆ-ತಾಯಿಗೆ ಬಿಗ್ ಶಾಕ್ ಎದುರಾಗಿದೆ. ಭೂಮಿಕಾ-ಗೌತಮ್ ಬೇಡ ಅಂದ್ರೂ ಮಿಂಚು ಶಾಲೆಗೆ ಹೋಗಿದ್ದಳು. ಈ ವೇಳೆ ಮಿಂಚುಳನ್ನು ಜೈದೇವ್ ಕರೆದುಕೊಂಡು ಹೋಗಿದ್ದಾನೆ.
ಮಿಂಚು ಕಾಣೆ
ಇದೀಗ ಮಿಂಚು ಕಾಣೆಯಾಗಿರೋದರಿಂದ ಅಮೃತಧಾರೆ ಮತ್ತೊಂದಿಷ್ಟು ದಿನ ಸೀರಿಯಲ್ ಪ್ರಸಾರವಾಗಲಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಮಿಂಚು ಜನ್ಮರಹಸ್ಯ ತಿಳಿದ್ರೆ ಮಾತ್ರ ಕತೆ ಕೊನೆಯಾಗಬಹುದು. ಆದ್ರೆ ಜೈದೇವ್ ಪಾತ್ರ ಮಾತ್ರ ಸೀರಿಯಲ್ ಕೊನೆಯಾಗಲು ಬಿಡುತ್ತಿಲ್ಲ ಎಂದು ಸೀರಿಯಲ್ ವೀಕ್ಷಕರ ಅಭಿಪ್ರಾಯವಾಗಿದೆ.
ತಲೆ ಗಿರ ಗಿರಿ ಅಂತಿದೆ
ಎಲ್ಲವನ್ನು ಕಳೆದುಕೊಂಡಿದ್ದ ಜೈದೇವ್ ತಾನು ಪ್ರೀತಿಸಿದ ಬೇಬಿಯನ್ನು ಕೊಂದು ಮತ್ತೆ ಕಮ್ ಬ್ಯಾಕ್ ಮಾಡಿದ್ದಾನೆ. ಮಿಂಚು ರಹಸ್ಯ ತಿಳಿದ ಲಕ್ಷ್ಮೀಕಾಂತ್ ಇನ್ನು ಜೈದೇವ್ ಬಂಧನದಲ್ಲಿದ್ದಾನೆ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದ ವೀಕ್ಷಕರು, ಇದೇನಪ್ಪಾ ಟ್ವಿಸ್ಟ್, ತಲೆ ಗಿರ ಗಿರಿ ಅಂತಿದೆ ಎಂದು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Amruthadhaare: ಅಲ್ಲಿ ಹನಿಮೂನ್ ಮೂಡ್ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

