MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನಾತಿಚರಾಮಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಯಶವಂತ್ ಗೌಡ… ಅಭಿಮಾನಿಗಳು ಫುಲ್ ಖುಷ್!

ನಾತಿಚರಾಮಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಯಶವಂತ್ ಗೌಡ… ಅಭಿಮಾನಿಗಳು ಫುಲ್ ಖುಷ್!

ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಸೀರಿಯಲ್ ನಾತಿಚರಾಮಿ ಮೂಲಕ ಕನ್ಯಾಕುಮಾರಿ ಸೀರಿಯಲ್ ನಟ ಯಶವಂತ್ ಗೌಡ ಮತ್ತೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ.  

2 Min read
Pavna Das
Published : Oct 26 2024, 04:07 PM IST| Updated : Oct 27 2024, 09:10 AM IST
Share this Photo Gallery
  • FB
  • TW
  • Linkdin
  • Whatsapp
17

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿ (Kanya Kumari serial) ನೆನಪಿದ್ಯಾ? ಈ ಸೀರಿಯಲ್ ನಲ್ಲಿ ನಾಯಕ ಚರಣ್ ಪಾತ್ರದಲ್ಲಿ ನಟಿಸಿದ ನಟ ಯಶ್ವಂತ್ ಗೌಡ. ಮೊದಲ ಧಾರಾವಾಹಿಯ ನಟನೆಯಿಂದಲೇ ಚಾಕಲೇಟ್ ಹೀರೋ ಯಶ್ವಂತ್ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದರು. 
 

27

ಕನ್ಯಾಕುಮಾರಿ ಸೀರಿಯಲ್ ನಲ್ಲಿ ಯಶವಂತ್ ಗೆ (Yashwanth Gowda) ಜೋಡಿಯಾಗಿ ಆಸಿಯಾ ಫಿರ್ದೋಸೆ ನಟಿಸಿದ್ದರು. ಸದ್ಯ ಆಸಿಯಾ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶವಂತ್ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಅವರು ಮತ್ತೆ ಕನ್ನಡಕ್ಕೆ ಬರಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದರು.. ಇದೀಗ ಅಭಿಮಾನಿಗಳ ಕನಸು ನನಸಾಗಿದೆ. ಹೊಸ ಧಾರಾವಾಹಿ ಮೂಲಕ ಯಶವಂತ್ ಮತ್ತೆ ಕನ್ನಡಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. 
 

37

ಝೀ ತೆಲುಗು ವಾಹಿನಿಯಲ್ಲಿ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಜೊತೆ ಅಮ್ಮಾಯಿಗಾರು ಧಾರಾವಾಹಿಯಲ್ಲಿ ನಟಿಸುತ್ತಿರುವ ಯಶವಂತ್, ಇದೀಗ ಉದಯವಾಹಿನಿಯಲ್ಲಿ ಶೀಘ್ರದಲ್ಲೆ ಪ್ರಸಾರವಾಗಲಿರುವ ನಾತಿಚರಾಮಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. 
 

47

ಯಶವಂತ್ ನಾತಿಚರಾಮಿ (Nathicharami)ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗಸ್ತ್ರ ತಾಯಿ ಇಲ್ಲದ ಹುಡುಗ. ಎಲ್ಲಾ ಪ್ರಿತಿಯನ್ನು ಕೊಡುವ ತಾಯಿಯನ್ನೇ ತನ್ನಿಂದ ಕಿತ್ತಿಕೊಂಡಿರುವ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ನಾಯಕ ಅಗಸ್ತ್ಯ. 
 

57

ಆದರೆ ನಾಯಕಿಯ ಪಾತ್ರ ಅದಕ್ಕೆ ವಿರುದ್ಧವಾದುದು. ಆಕೆ ಸಂಪೂರ್ಣವಾಗಿ ದೈವ ಭಕ್ತೆ.  ತಾಯಿ ಬನಶಂಕರಮ್ಮನ ಭಕ್ತೆಯಾಗಿರುವ ಹುಡುಗಿ ಭಕ್ತಿ. ತಾನು ಏನೇ ಕೆಲಸ ಮಾಡೋದಾದರೂ ಅದರಲ್ಲೂ ಮದುವೆ ಆಗಬೇಕಾದರೂ ದೇವರು ಒಪ್ಪಬೇಕು ಎನ್ನುವ ಹುಡುಗಿ ಆಕೆ. 
 

67

ದೇವರಲ್ಲಿ ಅಪಾರ ಭಕ್ತಿಯನ್ನು ಹೊಂದಿರುವ ತನ್ನ ಜೀವನದಲ್ಲಿ ಏನೇ ನಡೆಯುವುದಾದರು ದೇವರನ್ನು ಕೇಳಿಯೇ ನಡೆಯುವ ಭಕ್ತಿಗೂ, ದೇವರ ಮೇಲೆ ಭಕ್ತಿ ಇಲ್ಲದೇ ಬರೀ ಕೋಪವೇ ಇರುವ ನಾಯಕ ಅಗಸ್ತ್ಯ ಹೇಗೆ ಒಂದಾಗಲಿದ್ದಾರೆ ಎನ್ನುವ ಕಥೆಯೇ ನಾತಿಚರಾಮಿ.
 

77

ಉದಯವಾಹಿನಿ (Udaya Tv) ನವೆಂಬರ್ 4 ರಿಂದ ಧಾರಾವಾಹಿ ಪ್ರಾರಂಭವಾಗುತ್ತಿದೆ. ಸಂಜೆ 6:30ಕ್ಕೆ ಸೀರಿಯಲ್ ಪ್ರಸಾರವಾಗಲಿದೆ. ಯಶವಂತ್ ಅವರು ನಾಯಕನಾಗಿ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮಗೋಸ್ಕರನಾದ್ರೂ ಸೀರಿಯಲ್ ನೋಡ್ತೀವಿ ಎಂದಿದ್ದಾರೆ ಜನ.
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved