MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ

ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ

'ಕೃಷ್ಣ ರುಕ್ಕು' ಎಂಬ ಹೊಸ ಕನ್ನಡ ಧಾರಾವಾಹಿಯು ಅಣ್ಣನ ಸಾವಿಗೆ ಕಾರಣವಾದ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ತಂಗಿಯ ಕಥೆಯಾಗಿದೆ. ನಾಯಕನ ಅಜಾಗರೂಕತೆಯಿಂದ ನಡೆದ ಅಪಘಾತದಲ್ಲಿ ಅಣ್ಣನನ್ನು ಕಳೆದುಕೊಂಡ ಇಬ್ಬರು ಸಹೋದರಿಯರು, ಅದೇ ಮನೆಗೆ ಸೊಸೆಯರಾಗಿ ಪ್ರವೇಶಿಸುತ್ತಾರೆ.

2 Min read
Author : Mahmad Rafik
Published : Feb 23 2026, 11:55 AM IST
Share this Photo Gallery
  • FB
  • TW
  • Linkdin
  • Whatsapp
15
ಕೃಷ್ಣ ರುಕ್ಕು
Image Credit : Zee Kannada FB

ಕೃಷ್ಣ ರುಕ್ಕು

ಜೀ ಕನ್ನಡದ ಹೊಸ ಧಾರಾವಾಗಿ 'ಕೃಷ್ಣ ರುಕ್ಕು' ಸೀರಿಯಲ್ ಮಾರ್ಚ್ 9ರಿಂದ ಪ್ರಸಾರವಾಗಲಿದೆ ಎಂದು ವಾಹಿನಿ ಹೇಳಿದೆ. ಇಂದು ಸುದೀರ್ಘವಾದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಧಾರವಾಹಿ ಕಥೆ ಏನು? ಪಾತ್ರಗಳ ಪರಿಚಯವನ್ನು ನೀಡಲಾಗಿದೆ.

25
 ನವೀನ್ ಸಜ್ಜು
Image Credit : Zee Kannada FB

ನವೀನ್ ಸಜ್ಜು

ಗಾಯಕ ನವೀನ್ ಸಜ್ಜು ಈ ಸೀರಿಯಲ್‌ನಲ್ಲಿ ಮನೆಯ ಜವಾಬ್ದಾರಿ ಹೊತ್ತ ಮಗ, ಮೂವರು ತಂಗಿಯರ ಮುದ್ದಿನ ಮಗನಾಗಿ ಕಾಣಿಸಿಕೊಂಡಿದ್ದರು. ಆದ್ರೆ ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರವನ್ನು ಮುಗಿಸಲಾಗಿದೆ. ಈ ಹಿಂದೆ ಕಲರ್ಸ್ ಕನ್ನಡದ ಚುಕ್ಕಿ ತಾರೆ ಸೀರಿಯಲ್‌ನಲ್ಲಿಯೂ ನವೀನ್ ಸಜ್ಜು ನಟಿಸಿದ್ದರು. ಆದ್ರೆ ಇಲ್ಲಿಯೂ ಸೀರಿಯಲ್ ಆರಂಭವಾದ ಎರಡೇ ವಾರದಲ್ಲಿ ನವೀನ್ ಸಜ್ಜು ಪಾತ್ರ ಮುಕ್ತಾಯಗೊಂಡಿತ್ತು.

Related Articles

Related image1
ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್; ರೋಚಕ ತಿರುವಿನಲ್ಲಿ ಅಣ್ಣಯ್ಯ
Related image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
35
ಕೃಷ್ಣ-ರುಕ್ಕು ಕಥೆ ಏನು?
Image Credit : Zee Kannada FB

ಕೃಷ್ಣ-ರುಕ್ಕು ಕಥೆ ಏನು?

ಮಧ್ಯಮ ವರ್ಗದ ಮಂಜು ವೃತ್ತಿಯಲ್ಲಿ ಆಟೋ ಚಾಲಕ. ಮಂಜುಗೆ ಮೂರು ಜನ ಮುದ್ದಾದ ತಂಗಿಯರು. ಮೊದಲ ತಂಗಿ ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೊರಟಾಗ ನಡೆದ ಅಪಘಾತದಲ್ಲಿ ಮಂಜು ಸಾಯುತ್ತಾನೆ. ಇದೇ ಅಪಘಾತದಲ್ಲಿ ಮದುವೆಯಾಗಬೇಕಿದ್ದ ಹುಡುಗನೂ ಸಾಯುತ್ತಾನೆ.

45
ರೋಚಕ ಪ್ರೋಮೋ
Image Credit : Zee Kannada FB

ರೋಚಕ ಪ್ರೋಮೋ

ಇತ್ತ ಕಥಾನಾಯಕ ತಾಯಿಯನ್ನು ಕಳೆದುಕೊಂಡ ತಬ್ಬಲಿ ಮಗ. ತಂದೆ ಸೂರ್ಯಪ್ರಕಾಶ್ ಮಗನಾಗಿರುವ ಹೀರೋ ಮದ್ಯ ಸೇವಿಸಿ ಕಾರ್ ಚಲಾಯಿಸಿ ವೇಗವಾಗಿ ಆಟೋಗೆ ಡಿಕ್ಕಿ ಹೊಡೆಯುತ್ತಾನೆ. ಈ ಅಪಘಾತದಲ್ಲಿ ಮಂಜು ಮತ್ತು ಆತನ ತಂಗಿಯನ್ನು ಮದುವೆಯಾಗಬೇಕಿರೋ ಹುಡುಗ ಸಾಯುತ್ತಾನೆ.

ಇದನ್ನೂ ಓದಿ: Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​

55
ಸೂರ್ಯಪ್ರಕಾಶ್ ಮನೆಗೆ ಸೊಸೆಯಾಗಿ ಬಂದ ಸೋದರಿಯರು
Image Credit : Zee Kannada FB

ಸೂರ್ಯಪ್ರಕಾಶ್ ಮನೆಗೆ ಸೊಸೆಯಾಗಿ ಬಂದ ಸೋದರಿಯರು

ಪ್ರಿಯಕರ ಮತ್ತು ಅಣ್ಣನ ಸಾವಿನ ಚಿತೆ ಮುಂದೆ ಶಪಥ ಮಾಡುವ ಮಂಜು ತಂಗಿ, ಇಬ್ಬರ ಸಾವಿಗೆ ಕಾರಣಾದ ಕುಟುಂಬದ ನಾಶ ಮಾಡುವ ಶಪಥ ಮಾಡುತ್ತಾಳೆ. ಹಾಗಾಗಿ ಕಥಾನಾಯಕ ಕೃಷ್ಣನ ಸೋದರನನ್ನ ಮದುವೆಯಾಗಿ ಸೂರ್ಯಪ್ರಕಾಶ್ ಮನೆಗೆ ಬರುತ್ತಾಳೆ. ಅಚ್ಚರಿ ಎಂಬಂತೆ ಮಂಜು ಮತ್ತೋರ್ವ ಸೋದರಿ ರುಕ್ಕು ಸಹ ಕೃಷ್ಣನನ್ನು ಮದುವೆಯಾಗಿ ಬರುತ್ತಾಳೆ. ಸೂರ್ಯಪ್ರಕಾಶ್ ಪಾತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್.ನಾರಾಯಣ್ ನಟಿಸಿದ್ದಾರೆ.

ಇದನ್ನೂ ಓದಿ: ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ

ದಿನಾಂಕ ಮಾತ್ರ ನೀಡಲಾಗಿದ್ದು, ಯಾವ ಸಮಯ ಎಂಬುದರ ಮಾಹಿತಿಯನ್ನು ವಾಹಿನಿ ನೀಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೃಷ್ಣ ರುಕ್ಕು
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್; ರೋಚಕ ತಿರುವಿನಲ್ಲಿ ಅಣ್ಣಯ್ಯ
Recommended image2
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Recommended image3
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
Related Stories
Recommended image1
ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್; ರೋಚಕ ತಿರುವಿನಲ್ಲಿ ಅಣ್ಣಯ್ಯ
Recommended image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved