MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 50 ವರ್ಷಕ್ಕೆ ನಿವೃತ್ತಿ ತಗೋತೇನಪ್ಪಾ ಎಂದಿದ್ದ Dileep Raj 47ಕ್ಕೇ ಮುಗಿಸಿದ್ರು ಪಯಣ, ಮುಂದಿನ ಪ್ಲ್ಯಾನ್​ ಏನಿತ್ತು

50 ವರ್ಷಕ್ಕೆ ನಿವೃತ್ತಿ ತಗೋತೇನಪ್ಪಾ ಎಂದಿದ್ದ Dileep Raj 47ಕ್ಕೇ ಮುಗಿಸಿದ್ರು ಪಯಣ, ಮುಂದಿನ ಪ್ಲ್ಯಾನ್​ ಏನಿತ್ತು

ನಟ ದಿಲೀಪ್ ರಾಜ್ ಅವರ ಹಳೆಯ ಸಂದರ್ಶನವೊಂದು ಅವರ ಸಾವಿನ ನಂತರ ವೈರಲ್ ಆಗಿದೆ. ಅದರಲ್ಲಿ, ತಮ್ಮ 50ನೇ ವಯಸ್ಸಿಗೆ ನಿರ್ಮಾಣದಿಂದ ನಿವೃತ್ತಿ ಹೊಂದಿ, ಜೀವನಪೂರ್ತಿ ನಟನಾಗಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, 47ನೇ ವಯಸ್ಸಿನಲ್ಲಿಯೇ ಅವರು ನಿಧನರಾಗಿದ್ದಾರೆ.

1 Min read
Author : Suchethana D
Published : May 13 2026, 05:59 PM IST
Share this Photo Gallery
  • FB
  • TW
  • Linkdin
  • Whatsapp
16
ತಾನೊಂದು ಬಗೆದರೆ ದೈವವೊಂದು...
Image Credit : Social Media

ತಾನೊಂದು ಬಗೆದರೆ ದೈವವೊಂದು...

'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎನ್ನುವ ಮಾತು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ನಮ್ಮ ಪ್ಲ್ಯಾನೇ ಬೇರೆ ಇರುತ್ತದೆ. ಆದರೆ ವಿಧಿ ಮೊದಲೇ ಎಲ್ಲವನ್ನೂ ನಿಗದಿ ಮಾಡಿಬಿಟ್ಟಿರುತ್ತದೆ. ಭವಿಷ್ಯದ ಬಗ್ಗೆ, ಮುಂದಿನ ಹತ್ತಾರು ವರ್ಷಗಳ ಬಗ್ಗೆ ಕನಸುಗಳು ನಮ್ಮ ಕಣ್ಣುಮುಂದೆ ಇದ್ದು ಅದರ ಬಗ್ಗೆ ಮಾತನಾಡುತ್ತಿದ್ದರೆ ಸಾವು ನಗುತ್ತಿರುತ್ತದೆಯಂತೆ, ಇವರೆಂಥ ಹುಚ್ಚರಪ್ಪಾ ಎಂದು.

Add Asianetnews Kannada as a Preferred SourcegooglePreferred
26
ದಿಲೀಪ್​ ರಾಜ್ ಸಂದರ್ಶನ
Image Credit : Rapid Rashmi Instagramm

ದಿಲೀಪ್​ ರಾಜ್ ಸಂದರ್ಶನ

ಇದೀಗ ಕಿರುತೆರೆ, ಹಿರಿತೆರೆಯ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್​ ರಾಜ್​ ಅವರ ಸಾವಿನ ಬಳಿಕ ಅವರ ಸಂದರ್ಶನಗಳು ಒಂದೊಂದಾಗಿ ವೈರಲ್​ ಆಗುತ್ತಿವೆ. ತಮ್ಮ ಜೀವನದ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಏಳು ಬೀಳುಗಳ ಬಗ್ಗೆ ಸಂದರ್ಶನಗಳಲ್ಲಿ ರಿವೀಲ್​ ಮಾಡಿದ್ದರು. ಆದರೆ 50ನೇ ವರ್ಷಕ್ಕೆ ನಿವೃತ್ತರಾಗುವ ಬಗ್ಗೆ rapidrashmi ಚಾನೆಲ್​ಗೆ ಕಳೆದ ವರ್ಷ ಅವರು ನೀಡಿದ್ದ ಸಂದರ್ಶನವನ್ನು ರಶ್ಮಿ ಅವರು ಪುನಃ ಶೇರ್​ ಮಾಡಿಕೊಂಡಿದ್ದಾರೆ.

Related Articles

Related image1
Dileep Raj's death: ಜಿಮ್​ಗೆ ಹೋಗ್ತಿರೋರೇ ಹೆಚ್ಚು ಹೃದಯಾಘಾತದಿಂದ ಸಾಯ್ತಿರೋದು ಯಾಕೆ? ತಜ್ಞರು ಏನಂದ್ರು
Related image2
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು
36
ಡಿಸೈನ್​ ಮಾಡಬಾರದು
Image Credit : instagram

ಡಿಸೈನ್​ ಮಾಡಬಾರದು

ಈ ಸಂದರ್ಶನದಲ್ಲಿ ದಿಲೀಪ್​ ರಾಜ್​ ಅವರು, ಲೈಫ್​ ಹೀಗೆಯೇ ಇರಬೇಕು ಎಂದು ಡಿಸೈನ್ ಮಾಡುವುದು ಕಷ್ಟ, ನಮ್ಮ ಲೈಫ್​ ಅನ್ನು ನಾವೇ ಡಿಸೈನ್​ ಮಾಡಲು ಆಗುವುದಿಲ್ಲ. ಲೈಫ್​ ಕಾಲಕ್ಕೆ ತಕ್ಕಂತೆ ಚೇಂಜ್​ ಆಗುತ್ತಿರುತ್ತದೆ. ಆ ಚೇಂಜ್​ಗೆ ತಕ್ಕಂತೆ ನಾವು ಚೇಂಜ್​ ಆಗಬೇಕು ಎಂದಿದ್ದರು.

46
ಸಾವಿರ ರೂಪಾಯಿಗೂ ಕಷ್ಟಪಡ್ತಿರೋದು ಇದೆ
Image Credit : instagram

ಸಾವಿರ ರೂಪಾಯಿಗೂ ಕಷ್ಟಪಡ್ತಿರೋದು ಇದೆ

ನನ್ನ ಬಳಿ ದುಡ್ಡು ಇಲ್ಲ ಅಂತೇನಿಲ್ಲ. ದುಡ್ಡು ಇದೆ. ಆದರೆ ಕೆಲವೊಮ್ಮೆ ಸಾವಿರ ರೂಪಾಯಿ ಬೇಕು ಎಂದ್ರೂ ಸಿಗದದ್ದು ಕೂಡ ಇದೆ. ಏಕೆಂದ್ರೆ ಟೈಮ್​ ಹಾಗೆ ಇರುತ್ತದೆ. ಅದಕ್ಕೆ ನಾವು ಹೊಂದಿಕೊಳ್ಳಬೇಕು ಅಷ್ಟೇ ಎಂದಿದ್ದರು ದಿಲೀಪ್​ ರಾಜ್.

56
50ಕ್ಕೆ ರಿಟೈರ್​ ಆಗ್ತೀನಿ
Image Credit : Instagram

50ಕ್ಕೆ ರಿಟೈರ್​ ಆಗ್ತೀನಿ

ನನ್ನ ಜರ್ನಿಯಲ್ಲಿ ಹಣಕ್ಕಿಂತ ಹೆಚ್ಚಾಗಿ ವ್ಯಕ್ತಿಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದೇನೆ. ನನ್ನ ಹೆಂಡ್ತಿ ಹತ್ರ ಯಾವಾಗಲೂ ಹೇಳ್ತಾ ಇರ್ತೀನಿ. ನೋಡಮ್ಮಾ ನಾವೀಗ ಹತ್ತಿರ ಬರುತ್ತಿದ್ದೇವೆ. ಆದ್ದರಿಂದ 50 ವರ್ಷಕ್ಕೆ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದರು.

66
ಲೈಫ್​ಲಾಂಗ್​ ನಟನಾಗಿರ್ತೀನಿ
Image Credit : Instagram

ಲೈಫ್​ಲಾಂಗ್​ ನಟನಾಗಿರ್ತೀನಿ

ಆದರೆ ಅದು ನಟನೆಯಿಂದ ಅಲ್ಲ, ಬದಲಿಗೆ ಪ್ರೊಡಕ್ಷನ್​ಗಳಿಂದ ನಿವೃತ್ತನಾಗ್ತೇನೆ. ಆದರೆ ಲೈಫ್​ ಲಾಂಗ್​ ನಟನಾಗಿಯೇ ಉಳಿಯುತ್ತೇನೆ ಎಂದಿದ್ದರು. ಕೊನೆಯವರೆಗೂ ನಟನಾಗಿಯೇ ಉಳಿದರು ನಿಜ. ಆದರೆ 47ನೇ ವಯಸ್ಸಿನಲ್ಲಿಯೇ ವಿಧಿಯಾಟವೇ ಬೇರೆ ಆಗೋಯ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
'ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಓಲ್ಡನ್ ಡೇಸ್ ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌
Recommended image2
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು
Recommended image3
ಒಂದೇ ದಿನದ ಅಂತರದಲ್ಲಿ ‘ಹಿಟ್ಲರ್ ಕಲ್ಯಾಣ’ದ ಇಬ್ಬರು ನಟರು ಹೃದಯಾಘಾತಕ್ಕೆ ಬಲಿ!
Related Stories
Recommended image1
Dileep Raj's death: ಜಿಮ್​ಗೆ ಹೋಗ್ತಿರೋರೇ ಹೆಚ್ಚು ಹೃದಯಾಘಾತದಿಂದ ಸಾಯ್ತಿರೋದು ಯಾಕೆ? ತಜ್ಞರು ಏನಂದ್ರು
Recommended image2
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved