MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು

ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು

ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್‌ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್​ ಇಲ್ಲಿದೆ.

1 Min read
Author : Suchethana D
Published : May 14 2026, 06:55 PM IST
Share this Photo Gallery
  • FB
  • TW
  • Linkdin
  • Whatsapp
15
ವಿಜಯಪುರ–SSS ಹುಬ್ಬಳ್ಳಿ ವಿಶೇಷ ರೈಲು
Image Credit : Social Media

ವಿಜಯಪುರ–SSS ಹುಬ್ಬಳ್ಳಿ ವಿಶೇಷ ರೈಲು

ರೈಲು ಮಾರ್ಗದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ. ಅದರ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ. ರೈಲು ಸಂಖ್ಯೆ 66502 ವಿಜಯಪುರ–SSS ಹುಬ್ಬಳ್ಳಿ ವಿಶೇಷ ರೈಲು ನಾಳೆ ಅಂದರೆ 15 ಮೇ 2026ರಂದು ವಿಜಯಪುರ (BJP)–ಕುಡಗಿ (KDGI )ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಇದು ವಿಜಯಪುರ ಬದಲಿಗೆ ಕುಡಗಿ ನಿಂದ (KDGI) ನಿಗದಿತ ವೇಳೆಗೆ ಪ್ರಾರಂಭವಾಗುತ್ತದೆ.

Add Asianetnews Kannada as a Preferred SourcegooglePreferred
25
ಪಂಚಗಂಗಾ ಎಕ್ಸ್‌ಪ್ರೆಸ್ ರೈಲು
Image Credit : Asianet News

ಪಂಚಗಂಗಾ ಎಕ್ಸ್‌ಪ್ರೆಸ್ ರೈಲು

ಜುಲೈ 31 ರಿಂದ ಆಗಸ್ಟ್ 2 ರವರೆಗೆ ಬೆಂಗಳುರಿನ ಕೆಎಸ್‌ಆರ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳು ರದ್ದಾಗಿವೆ. ಕಾರವಾರ-ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16596) ಜುಲೈ 31 ರಿಂದ ಆಗಸ್ಟ್ 2 ರವರೆಗೆ ( ಯಶವಂತಪುರದಲ್ಲಿಯೇ ತನ್ನ ಸಂಚಾರ ಕೊನೆಗೊಳಿಸುತ್ತದೆ. ಜೊತೆಗೆ ಇದೇ ಅವಧಿಯಲ್ಲಿ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಇದರ ಸೇವೆ ಸಂಪೂರ್ಣವಾಗಿ ರದ್ದಾಗಲಿದೆ.

Related Articles

Related image1
Viral Video: ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್​
Related image2
Video: ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ: ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ
35
ಯಶವಂತಪುರದಿಂದ ಪ್ರಯಾಣ
Image Credit : Getty

ಯಶವಂತಪುರದಿಂದ ಪ್ರಯಾಣ

ಕೆಎಸ್‌ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16595) ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಯಶವಂತಪುರದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ನಡುವಿನ ತನ್ನ ಸಂಚಾರ ರದ್ದಾಗಿದೆ.

45
 ರೈಲು ಮಾರ್ಗ ಬದಲಾವಣೆ
Image Credit : X

ರೈಲು ಮಾರ್ಗ ಬದಲಾವಣೆ

ಮುರಡೇಶ್ವರ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿಬಿ)-ಮುರ್ಡೇಶ್ವರ ಎಕ್ಸ್‌ಪ್ರೆಸ್‌ಗಳ ರೈಲುಗಳ ಸಂಚಾರ ಮಾರ್ಗದಲ್ಲಿಯೂ ಬದಲಾವಣೆ ಆಗಿದೆ. ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16586) ಜುಲೈ 16 ಮತ್ತು 17 ರಂದು ಹಾಗೂ ಎಸ್‌ಎಂವಿಟಿಬಿ ಬೆಂಗಳೂರು-ಮುರಡೇಶ್ವರ ಎಕ್ಸ್‌ಪ್ರೆಸ್ ಜುಲೈ 17 ರಿಂದ ಜುಲೈ 19 ರವರೆಗೆ ಯಶವಂತಪುರ-ಹೆಬ್ಬಾಳ-ಬಾಣಸವಾಡಿ ಮೂಲಕ ಚಲಿಸುತ್ತದೆ. ಈ ರೈಲುಗಳು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಲಾಗಿದೆ.

55
ರೈಲು ಸಂಚಾರ 60 ನಿಮಿಷ ವಿಳಂಬ
Image Credit : Asianet News

ರೈಲು ಸಂಚಾರ 60 ನಿಮಿಷ ವಿಳಂಬ

ಇನ್ನೂ ಆಗಸ್ಟ್ 3 ರಂದು ಮುರಡೇಶ್ವರದಿಂದ ಹೊರಡುವ ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್‌ನ ರೈಲು (16586) ಪ್ರಯಾಣದ ಸಮಯವನ್ನು ಒಂದು ಗಂಟೆ ನಿಯಂತ್ರಿಸಲಾಗುತ್ತದೆ. ಅಂದರೆ ಈ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರೈಲು
ಪ್ರವಾಸ
ಭಾರತ ಸುದ್ದಿ

Latest Videos
Recommended Stories
Recommended image1
ಆತ್ಮಗಳು ಸುತ್ತಾಡುವ ಕೇರಳದ ಭಯಾನಕ ಬಂಗಲೆ, ಇನ್ನೂ ಕೇಳಿಸುತ್ತಂತೆ ಮಗುವಿನ ಕಿರುಚಾಟ
Recommended image2
ಕಪಾಳಮೋಕ್ಷ ಮಾಡಿದ ದೆವ್ವ… ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು!
Recommended image3
ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ
Related Stories
Recommended image1
Viral Video: ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್​
Recommended image2
Video: ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ: ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved